ಅಪ್ಪ HERO ಅಲ್ಲ ವಿಲನ್.. ಹೇಗಿರ್ತಾನೆ ಮಗ? -ಪವಿತ್ರಾಗಾಗಿ ವಿಕೃತಿ.. ವಿಜಯಲಕ್ಷ್ಮೀ ಮೌನ
ದರ್ಶನ್ ಸಹವಾಸವನ್ನೇ ಬಿಟ್ರಾ ಪತ್ನಿ?

ಅಪ್ಪ HERO ಅಲ್ಲ ವಿಲನ್.. ಹೇಗಿರ್ತಾನೆ ಮಗ? -ಪವಿತ್ರಾಗಾಗಿ ವಿಕೃತಿ.. ವಿಜಯಲಕ್ಷ್ಮೀ ಮೌನದರ್ಶನ್ ಸಹವಾಸವನ್ನೇ ಬಿಟ್ರಾ ಪತ್ನಿ?

ಒಡೆದ ಕನ್ನಡಿ ಮುರಿದ ಮನಸು ಒಂದಾಗಲು ಸಾಧ್ಯವೇ. ಅದೆಷ್ಟೇ ಪ್ಯಾಚಪ್ ಮಾಡಲು ಹೋದರೂ ಮತ್ತದೇ ನೋವು, ಮತ್ತದೇ ನೆನಪು.. ಮತ್ತದೇ ನಿರಾಸೆ. ಬಹುಶಃ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮೀ ಪಾಡು ಹೀಗೆ ಆಗಿರಬಹುದು. ಫ್ಯಾನ್ಸ್ ಮುಂದೆ ನಾವಿಬ್ಬರೂ ಒಂದೇ ಎಂದು ತೋರಿಸಿಕೊಳ್ಳುವ ಪ್ರಯತ್ನ, ಪವಿತ್ರಾಗೌಡ ಮುಂದೆ ನಾನೇ ದರ್ಶನ್ ಅವರ ಅಧಿಕೃತ ಪತ್ನಿ ಎಂದು ತೋರಿಸಿಕೊಳ್ಳಬೇಕಾದ ಅನಿವಾರ್ಯತೆ, ಮಗನಿಗಾಗಿ ಗಂಡನ ಜೊತೆ ಒಲ್ಲದ ಮನಸ್ಸಿನಿಂದ ಬದುಕು ಸಾಗಿಸುವ ಪ್ರಯತ್ನ. ಹಾಗೋ ಹೀಗೋ ವಿಜಯಲಕ್ಮ್ಮೀ ದರ್ಶನ್ ಅಭಿಮಾನಿಗಳ ಮುಂದೆ ಒಂದಾಗಿದ್ದೇವೆ ಎಂದು ತೋರಿಸಿಕೊಳ್ಳುತ್ತಿದ್ದಾಗಲೇ ಮತ್ತೊಂದು ಬರಸಿಡಿಲು ಬಡಿದಾಗಿದೆ. ಡಿಬಾಸ್ ಬಾಳಲ್ಲಿ ಮತ್ತೊಂದು ಬಿರುಗಾಳಿ ಬೀಸಿಯಾಗಿದೆ. ಅತ್ತ ಗಂಡನ ನಂಬಿಕೆದ್ರೋಹ ಇತ್ತ ಎದೆಯೆತ್ತರ ಬೆಳೆದು ನಿಂತಿರೋ ಮಗ, ಈಗ ವಿಜಯಲಕ್ಷ್ಮೀ ಬಾಳು ಒಂಥರಾ ನೋವಿನ ಕಥೆಯಷ್ಟೇ. ಗಂಡ ಪೋಲೀಸ್ ಕಸ್ಟಡಿ ಸೇರಿದ ಮೇಲೆ ಪತ್ನಿ ವಿಜಯಲಕ್ಷ್ಮೀ ಹೇಗಿದ್ದಾರೆ ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ; ಭಾಗ್ಯಳಿಗಾಗಿ ಬಸ್ ಚೇಸ್ – ಟ್ರೋಲ್ ಆಗೋ ಸೀನ್ ಬೇಕಿತ್ತಾ?

ಕಾಟೇರ ಸಿನಿಮಾ ಸಕ್ಸಸ್ ಆದ್ಮೇಲೆ ದರ್ಶನ್ ಹೆಚ್ಚಾಗಿ ಕಾಣಿಸಿಕೊಂಡಿದ್ದೇ ಪತ್ನಿ ವಿಜಯಲಕ್ಷ್ಮೀ ಜೊತೆ. ಲೋಕಸಭೆಯ ವೋಟಿಂಗ್ ದಿನ ಪತ್ನಿ ಜೊತೆ ಡಿಬಾಸ್ ಕಾಣಿಸಿಕೊಂಡಿದ್ದರು. ಈ ವಿಡಿಯೋವನ್ನು ದಚ್ಚು ಅಭಿಮಾನಿಗಳು ನಮ್ಮಣ್ಣ ನಮ್ಮತ್ತಿಗೆ ಜೊತೆಯಲ್ಲಿ ಚೆನ್ನಾಗವ್ರೇ ಅಂತಾ ಖುಷಿಯಲ್ಲೇ ಶೇರ್ ಮಾಡಿಕೊಂಡಿದ್ರು. ನಂತರ ದುಬೈನಲ್ಲಿ ಪತ್ನಿ ವಿಜಯಲಕ್ಷ್ಮೀ ಜೊತೆ ದರ್ಶನ್ ವೆಡ್ಡಿಂಗ್ ಆನಿವರ್ಸರಿ ಸೆಲೆಬ್ರೇಷನ್ ಮಾಡ್ಕೊಂಡಿದ್ದರು. ಇನ್ನು ಪವಿತ್ರಾಗೌಡ ಕಾಟ ಇಲ್ಲ, ನಮ್ಮಣ್ಣ ಅತ್ತಿಗೆ ಹೀಗೆ ಇರಲಿ ಅಂತಾ ಫ್ಯಾನ್ಸ್ ಹರಸಿ ಹಾರೈಸಿದ್ದರು. ಇದೆಲ್ಲಾ ಮೊನ್ನೆ ಮೊನ್ನೆ ನಡೆದು ಕಣ್ಮುಂದೆ ಹಾಗೇ ಇದೆ. ಆದ್ರೆ ಇದಾಗಿ ಕೆಲವೇ ದಿನಗಳಲ್ಲಿ ಸೀನೇ ಚೇಂಜ್. ಹೌದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಬದಲಾಗಲಿಲ್ಲ. ಪವಿತ್ರಾ ಗೌಡ ಸಹವಾಸದಿಂದ ದೂರಾಗಲಿಲ್ಲ, ಇಲ್ಲಿ ದೂರಾಗಿದ್ದೇ ವಿಜಯಲಕ್ಷ್ಮೀ. ನೋಡೋರ ಕಣ್ಣಿಗಷ್ಟೇ ಅಣ್ಣನ ಜೊತೆ ಅತ್ತಿಗೆ ಕಾಣಿಸಿಕೊಂಡಿದ್ದರಷ್ಟೇ. ಅದೇ ಪವಿತ್ರಾಗೌಡನಿಗಾಗಿ ತನ್ನ ಗಂಡ, ಅದ್ರಲ್ಲೂ ಸ್ಯಾಂಡಲ್‌ವುಡ್ ಸೆಲೆಬ್ರಿಟಿ ಸ್ಟಾರ್, ದರ್ಶನ್ ಒಬ್ಬ ಅಭಿಮಾನಿಯನ್ನೇ ಕೊಂದಿದ್ದಾರೆ ಅಂದ್ರೆ ಪತ್ನಿಯ ಸ್ಥಿತಿ ಹೇಗಿರಬೇಡ. ಈಗ ವಿಜಯಲಕ್ಷ್ಮೀ ಪಾಡು ಹಾಗೇ ಆಗಿದೆ. ಪವಿತ್ರಾಗಾಗಿ ದರ್ಶನ್ ಅವರು ಕೊಲೆ ಮಾಡಿದರು ಎನ್ನುವ ಆರೋಪ ಹೊತ್ತಿರೋದು ಪತ್ನಿ ವಿಜಯಲಕ್ಷ್ಮಿ ಅವರಿಗೆ ಹೃದಯವೇ ಒಡೆದಂತಾಗಿದೆ. ಜೊತೆಗೆ ಬೇಸರ ಕೂಡ ಮೂಡಿಸಿದೆ. ಹೀಗಾಗಿ, ಅವರು ಇನ್​ಸ್ಟಾಗ್ರಾಮ್​ನಲ್ಲಿ ದರ್ಶನ್​ನ ಅನ್​ಫಾಲೋ ಮಾಡಿದ್ದಾರೆ.

ವಿಜಯಲಕ್ಷ್ಮೀ ಈಗ ಸೋಷಿಯಲ್ ಮೀಡಿಯಾ ಸಹವಾಸವೇ ಬೇಡ ಅಂತ ಸೋಷಿಯಲ್ ಮೀಡಿಯಾಕ್ಕೆ ಗುಡ್‌ ಬೈ ಹೇಳಿದ್ದಾರೆ. ಇನ್‌ಸ್ಟಾಗ್ರಾಂ ಅಲ್ಲಿ ತನ್ನ ಪ್ರೊಫೈಲ್ ಫೋಟೋವನ್ನ ಡಿಲೀಟ್ ಮಾಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ದರ್ಶನ್‌ ಸೇರಿದಂತೆ ಇತರರನ್ನು ಅನ್‌ಫಾಲೋ ಮಾಡಿದ್ದು, ಈಗ ಝೀರೋ ಫಾಲೋವಿಂಗ್‌ ಹೊಂದಿದ್ದಾರೆ. ಉಳಿದಂತೆ ಹಳೆಯ ಇನ್‌ಸ್ಟಾಗ್ರಾಂ ಸ್ಟೋರಿಗಳು ಹಾಗೆಯೇ ಇವೆ. ಆದರೆ, ಇನ್‌ಸ್ಟಾಗ್ರಾಂ ಹೈಲೈಟ್‌ ವಿಭಾಗವನ್ನು ಡಿಲೀಟ್‌ ಮಾಡಿದ್ದಾರೆ. ಈ ಪ್ರಕರಣದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮೌನವಾಗಿದ್ದಾರೆ. ಈ ಘಟನೆ ಬಳಿಕ ಎಲ್ಲಿಯೂ ಕಾಣಿಸಿಕೊಂಡಿಲ್ಲ.

ಕೆಲ ತಿಂಗಳ ಹಿಂದಷ್ಟೇ ಪವಿತ್ರಾಗೌಡ ಅವರು ದರ್ಶನ್ ಜೊತೆ ಇರೋ ಫೋಟೋ ಹಂಚಿಕೊಂಡಿದ್ದರು. ‘10 ವರ್ಷಗಳ ಸಂಬಂಧ’ ಎಂದು ಟ್ಯಾಗ್​ಲೈನ್ ನೀಡಿದ್ದರು. ಇದನ್ನು ವಿಜಯಲಕ್ಷ್ಮಿ ಖಂಡಿಸಿದ್ದರು. ಇಬ್ಬರ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ವಾರ್ ಕೂಡ ನಡೆದಿತ್ತು. ಆ ಬಳಿಕ ಎಲ್ಲವೂ ಸೈಲೆಂಟ್ ಆಗಿತ್ತು. ಈಗ ದರ್ಶನ್ ಅವರು ಪವಿತ್ರಾಗಾಗಿ ಕೊಲೆ ಮಾಡಿದರು ಎನ್ನುವ ಆರೋಪ ಹೊತ್ತಿರೋದು ಸಹಜವಾಗಿಯೇ ವಿಜಯಲಕ್ಷ್ಮಿ ಅವರಿಗೆ ಸಾಕಷ್ಟು ನೋವು ನೀಡಿದೆ. ಹಾಗೆ ನೋಡಿದರೆ ವಿಜಯಲಕ್ಷ್ಮೀ ತನ್ನ ವೈವಾಹಿಕ ಜೀವನದಲ್ಲಿ ಬಲಿಪಶು ಎಂದೇ ಹೇಳಬಹುದು. ದರ್ಶನ್ ಹಾಗೂ ವಿಜಯಲಕ್ಷ್ಮೀ ಅವರದು ಲವ್‌ ಮ್ಯಾರೇಜ್. ಆಪ್ತರು ಹೇಳುವ ಪ್ರಕಾರ ಇವರಿಬ್ಬರ ಮದುವೆ ಆಗೋ ಹೊತ್ತಿಗೆ ದರ್ಶನ್‌ ಕೆಲಸ, ಸಂಪಾದನೆಯಿಲ್ಲದೇ ಕೂತಿದ್ದರು. ವಿಜಯಲಕ್ಷ್ಮೀ ಕೆಲಸಕ್ಕೆ ಹೋಗಿ ಕಷ್ಟಪಟ್ಟು ದುಡಿದು ಗಂಡನನ್ನು, ಸಂಸಾರವನ್ನು ಸಾಕುತ್ತಿದ್ದರು. ಗಂಡ ಆತನ ಇಷ್ಟದ ನಟನಾ ವೃತ್ತಿಯಲ್ಲಿ ಬಹಳ ಎತ್ತರಕ್ಕೆ ಏರಬೇಕು ಎಂದು ತಾನು ದುಡಿಯುತ್ತಿದ್ದರು. ಗಂಡನ ಆಸಕ್ತಿಗೆ ತನ್ನಿಂದಾದ ಸಹಕಾರ ನೀಡುತ್ತ ಬಂದಿದ್ದರು. ದರ್ಶನ್ ಲೈಫು, ವೈವಾಹಿಕ ಬದುಕು ಒಂದು ಹಂತದವರೆಗೆ ಚೆನ್ನಾಗಿಯೇ ಇತ್ತು. ಆದರೆ ಯಾವಾಗ ಹಣ, ಕೀರ್ತಿ ಎಲ್ಲ ಎತ್ತರೆತ್ತರಕ್ಕೆ ಕೊಂಡೊಯ್ಯಿತೋ ಆಗ ಬೇರೆ ಅಭ್ಯಾಸಗಳೂ ಸೇರಿಸಿಕೊಂಡವು. ಒಂದು ಹಂತದಲ್ಲಿ ಬೇರೋಬ್ಬ ನಟಿ ಕೂಡಾ ದರ್ಶನ್ ಬದುಕಲ್ಲಿ ಬಂದಿದ್ದರು. ಇದು ಕೂಡಾ ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಶಾಕಿಂಗ್ ವಿಚಾರವಾಗಿತ್ತು. ನಂತರ ದರ್ಶನ್ ಜೀವನಕ್ಕೆ ಬಂದವರೇ ಪವಿತ್ರಾ ಗೌಡ. ಆಕೆಗೂ ಮದುವೆಯಾಗಿತ್ತು. ದರ್ಶನ್‌ಗೂ ಮದುವೆಯಾಗಿತ್ತು. ಆದರೂ ಇಬ್ಬರ ನಡುವೆ ಸಂಬಂಧ ಏರ್ಪಟ್ಟಿತು. ಇದರ ಮಧ್ಯೆ ವಿಜಯಲಕ್ಷ್ಮೀ ಮೇಲೆ ದರ್ಶನ್ ನಡೆಸಿರುವ ಹಲ್ಲೆ ಕೂಡಾ ಜನ ಮರೆತಿಲ್ಲ. ಈ ಕಷ್ಟದ ದಿನಗಳೆಲ್ಲಾ ಕಳೆದು ದರ್ಶನ್ ಪತ್ನಿ ಜೊತೆ ಕೊಂಚ ಉತ್ತಮ ಬಾಂಧವ್ಯ ಹೊಂದಿದ್ದಾರೆ ಅಂತಾನೇ ಭಾವಿಸಲಾಗಿತ್ತು. ಆದ್ರೆ ಕೊನೆಗೂ ದರ್ಶನ್ ಬದಲಾಗಲೇ ಇಲ್ಲ. ತನ್ನ ಹೆಂಡತಿ ಅಂತಾನೇ ಹೇಳಿಕೊಂಡು ಪವಿತ್ರಾಗೌಡಳಿಗಾಗಿ ಕೊಲೆ ಮಾಡುವ ಮಟ್ಟಕ್ಕೂ ಇಳಿದುಬಿಟ್ರು. ಎದೆಯೆತ್ತರ ಬೆಳೆದ ಮಗ, ಅಪ್ಪನನ್ನು ಹೀರೋ ಎಂದು ಆರಾಧಿಸುವ ಮಗ ಈಗ ಇಂಥದ್ದನ್ನೆಲ್ಲಾ ಅದ್ಹೇಗೆ ಎದುರಿಸುತ್ತಾನೋ. ಅಪ್ಪನೆಂದರೆ ಜೀವ ಬಿಡುವ ಮಗ, ತನ್ನಪ್ಪನೇ ಅಭಿಮಾನಿಯ ಜೀವ ತೆಗೆಯಲು ಕಾರಣವಾಗಿದ್ದಾರೆ ಎಂಬ ಸತ್ಯ ತಿಳಿದು ಹೇಗಿದ್ದಾನೋ. ಇತ್ತ ಚಾಲೆಂಜಿಂಗ್ ಸ್ಟಾರ್ ಆಗಿ ಮರೆದ ಗಂಡ ಬಂಧನದಲ್ಲಿರುವುದು ನೋಡಿ ವಿಜಯಲಕ್ಷ್ಮೀ ಪಾಡು ಹೇಗಿದೆಯೋ.. ಅಂತೂ ಫ್ಯಾನ್ಸ್ ಎದುರು ಪ್ಯಾಚ್ ಅಪ್ ಪ್ರಯತ್ನದಲ್ಲೇ ಸಾಗಿದ್ದ ಸಂಬಂಧ ಇನ್ನು ಎಲ್ಲಿಯವರೆಗೆ ಬಂದು ನಿಲ್ಲುತ್ತೋ ಆ ದೇವರೇ ಬಲ್ಲ.

Shwetha M

Leave a Reply

Your email address will not be published. Required fields are marked *