ಕಾಮಿಡಿ ಕಿಲಾಡಿಗಳು ಸೀಸನ್-4ರ ಪಟ್ಟಕ್ಕೇರಿದ ಹಿರಿಯೂರು ಹರೀಶ್ – ಗೆದ್ದ ಹಣವನ್ನ ಏನು ಮಾಡಿದ್ರು ಗೊತ್ತಾ..!?

ಕಾಮಿಡಿ ಕಿಲಾಡಿಗಳು ಸೀಸನ್-4ರ ಪಟ್ಟಕ್ಕೇರಿದ ಹಿರಿಯೂರು ಹರೀಶ್ – ಗೆದ್ದ ಹಣವನ್ನ ಏನು ಮಾಡಿದ್ರು ಗೊತ್ತಾ..!?

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ರಿಯಾಲಿಟಿ ಶೋ ಕಾಮಿಡಿ ಕಿಲಾಡಿಗಳ ಸೀಸನ್-4ರ ಗ್ರ್ಯಾಂಡ್ ಫಿನಾಲೆ ಭಾನುವಾರ ಮಂಡ್ಯದ ಕೆ.ಆರ್ ಪೇಟೆಯಲ್ಲಿ ಅದ್ಧೂರಿಯಾಗಿ ನಡೆದಿದೆ. ನಗುವಿನ ಚಟಾಕಿ ಹಾರಿಸುತ್ತಾ ಜನಮನ ಗೆದ್ದಿದ್ದ ಶೋಗೆ ತೆರೆ ಬಿದ್ದಿದೆ. ‘ನೆನಪಿರಲಿ’ ಪ್ರೇಮ್, ‘ನವರಸನಾಯಕ’ ಜಗ್ಗೇಶ್, ರಕ್ಷಿತಾ ಪ್ರೇಮ್ ಜಡ್ಜ್ ಆಗಿದ್ರು. ಹರೀಶ್ ಹಿರಿಯೂರು ಅವರು  ಕಾಮಿಡಿ ಕಿಲಾಡಿಗಳು ಸೀಸನ್ 4ರ ವಿಜೇತರಾಗಿ ಹೊರಹೊಮ್ಮಿದ್ದಾರೆ.

ಇದನ್ನೂ ಓದಿ : ಪೋಷಕರಿಗೆ 150 ಕೋಟಿ ರೂಪಾಯಿ ಮನೆ ಉಡುಗೊರೆ ನೀಡಿದ ನಟ ಧನುಷ್

ಕಾಮಿಡಿ ಕಿಲಾಡಿಗಳು -4ರ ಪಟ್ಟಕ್ಕೇರಿದ ಹರೀಶ್ ಹಿರಿಯೂರು ಸಂಭ್ರಮ ಹಂಚಿಕೊಂಡ್ರು. ಕಾಮಿಡಿ ಕಿಲಾಡಿಗಳು ಸೀಸನ್ 4 ಗೆದ್ದಿದ್ದು ತುಂಬ ಖುಷಿಯಾಗಿದೆ. ಸ್ಪರ್ಧಿಗಳು ಚೆನ್ನಾಗಿದ್ದರು, ಶೋ ಕಷ್ಟ ಇತ್ತು. ನಾನು ಗೆದ್ದಿದ್ದೀನಿ ಅನ್ನೋದಕ್ಕಿಂತ 16 ಸ್ಪರ್ಧಿಗಳು ಗೆದ್ದಿದ್ದಾರೆ. ನಾನು ಈ ಶೋ ವೇದಿಕೆ ಮೇಲೆ ನಿಲ್ಲಲು ರಂಗಭೂಮಿಯೇ ಕಾರಣ ಎಂದರು. ಈ ಟ್ರೋಫಿ ಜೊತೆಗೆ 5 ಲಕ್ಷ ರೂಪಾಯಿ ಹಣ ಸಿಕ್ಕಿದೆ. ಈ ಹಣವನ್ನು ಉಳಿದ 12 ಸ್ಪರ್ಧಿಗಳ ಜೊತೆಗೆ ಹಂಚಿಕೊಳ್ತೀನಿ ಎಂದ್ರು.

ಮಂಡ್ಯದ ಗಿಲ್ಲಿ ನಟ ಕಾಮಿಡಿ ಕಿಲಾಡಿಗಳು-4ರ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ‘ಎಲ್ಲರ ಜೊತೆ ಹೊಡೆದಾಡಿ, ಬಡಿದಾಡಿ ಇಲ್ಲಿಯತನಕ ಬಂದಿದ್ದೇನೆ. ಮೊದಲ ರನ್ನರ್ ಅಪ್ ಆಗಿರೋದು ಖುಷಿ ಕೊಟ್ಟಿದೆ. ನಾನೇ ವಿಜೇತನಾಗಿದ್ರೆ ಇನ್ನೂ ಖುಷಿ ಆಗ್ತಿತ್ತು. ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳು’ ಎಂದಿದ್ದಾರೆ.

ಇನ್ನು ಯಲ್ಲಾಪುರದ ಶುಭಾ ಅವರು ಚಿನಕುರುಳಿ ತಮ್ಮ ಚಟಪಟ ಮಾತಿನಿಂದಲೇ ಮೋಡಿ ಮಾಡಿ ಕಾಮಿಡಿ ಕಿಲಾಡಿಗಳು-4ರ ಎರಡನೇ ರನ್ನರ್ ಅಪ್ ಆಗಿದ್ದಾರೆ. ‘ನನಗೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳು. ರಕ್ಷಿತಾ ಮೇಡಂ ಅವರು ಯಾರು ವಿಜೇತರಾದರೂ ಖುಷಿಯಾಗತ್ತೆ, ಅದರಲ್ಲಿ ಶುಭಾ ಗೆದ್ದರೆ ತುಂಬ ಖುಷಿಯಾಗತ್ತೆ ಅಂತ ಹೇಳಿದ್ರು. ಅವತ್ತೇ ನಾನು ಗೆದ್ದೆ’ ಎಂದು ಶುಭಾ ಹೇಳಿದ್ದಾರೆ.

ಕರ್ನಾಟಕದ ಎಲ್ಲಾ ಭಾಗಗಳಲ್ಲೂ ಆಡಿಷನ್ ನಡೆಸಿ ಒಟ್ಟು 12 ಜನ ಟಾಪ್ ಫೈನಲಿಸ್ಟ್​ಗಳನ್ನ ಆಯ್ಕೆ ಮಾಡಲಾಗಿತ್ತು. ಕಿಲಾಡಿಗಳ ವಿಭಿನ್ನ ಹಾಸ್ಯ ನಾಟಕಗಳು, ಬೇರೆ ಬೇರೆ ಮನರಂಜನೆ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯಿತು. ಕರ್ನಾಟಕದ 31 ಜಿಲ್ಲೆಗಳಲ್ಲಿ 60 ಸಾವಿರಕ್ಕೂ ಹೆಚ್ಚು ಜನರನ್ನು ಆಡಿಷನ್‌ ಮಾಡಿ, ಅವರಲ್ಲಿ 16 ಅತಿ ಉತ್ತಮ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿತ್ತು. ಈ ಸ್ಕಿಟ್‌ಗಳಿಗೆ ರಂಗಭೂಮಿಯ ನಿರ್ದೇಶಕರು ಮೆಂಟರ್ ಆಗಿ ಕಾರ್ಯ ನಿರ್ವಹಿಸಿದ್ದರು.

22 ವಾರಗಳ ಕಾಲ ಭಿನ್ನ, ವಿಭಿನ್ನ ಗೆಟಪ್‌ಗಳ ಮೂಲಕ, ಹಾಸ್ಯದ ಜೊತೆಗೆ ಸಾಮಾಜಿಕ ಸಂದೇಶಗಳಿರುವ 150ಕ್ಕೂ ಹೆಚ್ಚು ಸ್ಕಿಟ್‌ ಮಾಡಲಾಗಿತ್ತು. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ ಶೋನಲ್ಲಿ ಆರಂಭದಲ್ಲಿ ಯೋಗರಾಜ್ ಭಟ್ ಕೂಡ ಜಡ್ಜ್ ಆಗಿ ಕೆಲಸ ಮಾಡಿದ್ದರು. ಅದಾದ ನಂತರದಲ್ಲಿ ಅವರು ಈ ಶೋನಿಂದ ಹೊರಬಂದಿದ್ದು, ಆ ಜಾಗಕ್ಕೆ ‘ನೆನಪಿರಲಿ’ ಪ್ರೇಮ್ ಬಂದರು. ಮಾಸ್ಟರ್ ಆನಂದ್ ಅವರು ಈ ಶೋ ನಿರೂಪಣೆ ಜವಾಬ್ದಾರಿ ವಹಿಸಿಕೊಂಡಿದ್ದರು.

suddiyaana