ದೊಡ್ಮನೆ ಕುಟುಂಬದಲ್ಲಿ ಬಿರುಗಾಳಿ – ಯುವ ರಾಜ್‌ಕುಮಾರ್ ಡಿವೋರ್ಸ್‌
ರಾಜ್ ಕುಡಿ ದಂಪತಿ ಮಧ್ಯೆ ಆಗಿದ್ದೇನು?

ದೊಡ್ಮನೆ ಕುಟುಂಬದಲ್ಲಿ ಬಿರುಗಾಳಿ – ಯುವ ರಾಜ್‌ಕುಮಾರ್ ಡಿವೋರ್ಸ್‌ರಾಜ್ ಕುಡಿ ದಂಪತಿ ಮಧ್ಯೆ ಆಗಿದ್ದೇನು?

ಸ್ಯಾಂಡಲ್‌ವುಡ್‌ನ ಮತ್ತೊಂದು ಸ್ಟಾರ್ ಜೋಡಿ ಡಿವೋರ್ಸ್ ಹಂತಕ್ಕೆ ಬಂದಿದ್ದಾರೆ. ಆದ್ರೆ, ಈ ಡಿವೋರ್ಸ್ ಕೇಸ್ ಸ್ಯಾಂಡಲ್‌ವುಡ್ ಅಂಗಳದಲ್ಲಿ ತಲ್ಲಣ ಸೃಷ್ಟಿಸಿದೆ. ಯಾಕೆಂದ್ರೆ, ಈಗ ಡಿವೋರ್ಸ್ ಆಗ್ತಿರೋದು ದೊಡ್ಮನೆ ಕುಟುಂಬದಲ್ಲಿ. ದೊಡ್ಮನೆ ಕುಟುಂಬದಲ್ಲಿ ಡಿವೋರ್ಸ್ ಬಿರುಗಾಳಿ ಎದ್ದಿದ್ದೇಕೆ?, ಡಾ.ರಾಜ್ ಕುಮಾರ್ ಕುಡಿಯ ದಾಂಪತ್ಯದಲ್ಲಿ ಅಂಥಾದ್ದೇನಾಗಿತ್ತು  ಅನ್ನೋ ಮಾಹಿತಿ ಇಲ್ಲಿದೆ.

ಈಗಾಗಲೇ ಸ್ಯಾಂಡಲ್‌ವುಡ್‌ನ ಸೆಲೆಬ್ರಿಟಿ ಜೋಡಿ ಚಂದನ್ ಶೆಟ್ಟಿ, ನಿವೇದಿತಾ ಗೌಡ ಡಿವೋರ್ಸ್ ಸುದ್ದಿಯೇ ಅಭಿಮಾನಿಗಳಿಗೆ ಶಾಕ್ ನೀಡಿತ್ತು. ಲವ್ ಮಾಡಿ ಮದುವೆಯಾದವ್ರ ಬಾಳಲ್ಲಿ ಆಗಿದ್ದೇನು ಎಂಬ ಬಿಸಿ ಬಿಸಿ ಚರ್ಚೆ ಶುರುವಾಗಿತ್ತು. ಇದರ ಬೆನ್ನಲ್ಲೇ ಮತ್ತೊಂದು ಶಾಕಿಂಗ್ ಡೈವೋರ್ಸ್ ಸೌಂಡ್ ಮಾಡ್ತಿದೆ. ದೊಡ್ಮನೆ ಮಗ ಯುವ ರಾಜ್ಕುಮಾರ್ ಅವರು ಫ್ಯಾಮಿಲಿ ಕೋರ್ಟ್ನಲ್ಲಿ ಡಿವೋರ್ಸ್ಗಾಗಿ ಅರ್ಜಿ ಸಲ್ಲಿಸಿದ್ದಾರೆ.

ರಾಘವೇಂದ್ರ ರಾಜ್  ಕುಮಾರ್ ಅವರ ಮಗ ಯುವ ರಾಜ್ ಕುಮಾರ್ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಕಳೆದ ಜೂನ್ 6ರಂದು ದೊಡ್ಮನೆ ಮಗ ಯುವ ರಾಜ್ಕುಮಾರ್ ಫ್ಯಾಮಿಲಿ ಕೋರ್ಟ್ನಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಯುವರಾಜ್ ಕುಮಾರ್ ಅರ್ಜಿಯ ಹಿನ್ನೆಲೆಯಲ್ಲಿ ಪತ್ನಿ ಶ್ರೀದೇವಿ ಭೈರಪ್ಪಗೆ ಕೋರ್ಟ್ನಿಂದ ನೋಟಿಸ್ ಜಾರಿಯಾಗಿದೆ.

ಯುವ ರಾಜ್‌ಕುಮಾರ್ ಮತ್ತು ಶ್ರೀದೇವಿ ಪ್ರೀತಿಸಿ ಮದುವೆಯಾಗಿದ್ರು. ಯುವರಾಜ್ ಕುಮರ್ ಪತ್ನಿ ಶ್ರೀದೇವಿ ಮೈಸೂರು ಮೂಲದವರು. ಡಾ. ರಾಜ್‌ಕುಮಾರ್ ಅಕಾಡೆಮಿಯಲ್ಲಿ ಶ್ರೀದೇವಿ ಕೆಲಸ ಮಾಡುತ್ತಿದ್ದರು. ಈ ವೇಳೆ ಯುವರಾಜ್ ಕುಮಾರ್ ಶ್ರೀದೇವಿಯವರನ್ನು ಪ್ರೀತಿ ಮಾಡಲು ಶುರು ಮಾಡಿದ್ರು. ನಂತರ ಹಿರಿಯರ ಒಪ್ಪಿಗೆ ಮೇಲೆ ಮದುವೆ ವಿಜೃಂಭಣೆಯಿಂದ ನಡೆದಿತ್ತು. ಮಗನ ಮದುವೆಯಲ್ಲಿ ಕರುನಾಡ ಕಣ್ಮಣಿ ಪುನೀತ್ ರಾಜ್‌ಕುಮಾರ್ ಕೂಡಾ ಖುಷಿ ಖುಷಿಯಲ್ಲಿ ಓಡಾಡಿದ್ರು. 2019ರಲ್ಲಿ ಇಬ್ಬರ ಮದುವೆಯಾಗಿತ್ತು. ಮದುವೆ ಬಳಿಕ ರಾಜ್​ಕುಮಾರ್ ಅಕಾಡೆಮಿಯನ್ನು ಶ್ರೀದೇವಿ ನಡೆಸಿಕೊಂಡು ಹೋಗುತ್ತಿದ್ದರು. ಆದ್ರೆ, ಇದೀಗ ಯುವರಾಜ್ ಕುಮಾರ್ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದೆ. ದೊಡ್ಮನೆ ಕುಡಿಯ ಸಂಸಾರದಲ್ಲಿ ಬಿರುಗಾಳಿ ಬೀಸಿದೆ. ಕಳೆದ 6 ತಿಂಗಳಿನಿಂದ ಯುವ ರಾಜ್ ಕುಮಾರ್ ಮತ್ತು ಶ್ರೀದೇವಿ ಬೇರೆ ಬೇರೆ ಆಗಿದ್ದಾರೆ. ಇಬ್ಬರ ಮಧ್ಯೆ ಮನಸ್ತಾಪ ವಿಚ್ಚೇಧನದವರೆಗೂ ಬಂದು ನಿಂತಿದೆ. ಸದ್ಯ ಶ್ರೀದೇವಿ ಈಗ ಅಮೆರಿಕಾದಲ್ಲಿ ಇದ್ದಾರೆ ಎನ್ನಲಾಗಿದೆ.  ಪತ್ನಿಯಿಂದ ಅಗೌರವ ಹಾಗೂ ಮಾನಸಿಕ ಕ್ರೌರ್ಯ ಉಂಟಾಗಿದೆ ಎಂದು ಯುವ ವಿಚ್ಛೇದನ ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದಾರೆ. ವಿಚ್ಛೇದನದ ಕೇಸ್ನಲ್ಲಿ ಫ್ಯಾಮಿಲಿ ಕೋರ್ಟ್ ಮುಂದಿನ ಜುಲೈ ತಿಂಗಳ 4ನೇ ತಾರೀಕಿಗೆ ವಿಚಾರಣೆ ನಿಗದಿ ಮಾಡಿದೆ. ಯುವ ರಾಜ್‌ಕುಮಾರ್ ಈಗತಾನೇ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅವರ ನಟನೆಯ ಯುವ ಸಿನಿಮಾ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಇದ್ರ ಬೆನ್ನಲ್ಲೇ ಡಿವೋರ್ಸ್ ವಿಚಾರ ಹೊಸ ಹೊಸ ಚರ್ಚೆಗೆ ಕಾರಣವಾಗಿದೆ. ಇದೀಗ ಈ ಜೋಡಿ ಬೇರೆಯಾಗ್ತಿದ್ದಾರೆ ಅನ್ನೋ ಸುದ್ದಿ ಕೇಳಿ ಅಭಿಮಾನಿಗಳು ಬೇಜಾರು ಮಾಡ್ಕೊಂಡಿದ್ದಾರೆ.  ದೊಡ್ಮನೆಯಲ್ಲಿ ಇದೇ ಮೊದಲ ಬಾರಿಗೆ ಡಿವೋರ್ಸ್‌ ವಿಚಾರ ಮುನ್ನೆಲೆಗೆ ಬಂದಿದ್ದು, ಶಿವಣ್ಣನೇ ಮುಂದೆ ನಿಂತು ಈ ಜೋಡಿಯನ್ನು ಒಂದು ಮಾಡ್ಬೇಕು ಅಂತಾ ಅಭಿಮಾನಿಗಳ ಆಶಯವಾಗಿದೆ.

Shwetha M