ನಟಿಗಾಗಿ ಪತ್ನಿಯಿಂದ ಯುವ ದೂರ – ಪತ್ನಿ ಹಿಂಸೆಯೋ.. ಅವಳ ಪ್ರೀತಿಗಾಗೋ?
ಅಣ್ಣಾವ್ರ ಮೊಮ್ಮಗನ ಬಾಳಲ್ಲಿ ಆಗಿದ್ದೇನು?

ನಟಿಗಾಗಿ ಪತ್ನಿಯಿಂದ ಯುವ ದೂರ – ಪತ್ನಿ ಹಿಂಸೆಯೋ.. ಅವಳ ಪ್ರೀತಿಗಾಗೋ?ಅಣ್ಣಾವ್ರ ಮೊಮ್ಮಗನ ಬಾಳಲ್ಲಿ ಆಗಿದ್ದೇನು?

ಸದ್ಯ ಸ್ಯಾಂಡಲ್​ವುಡ್​ನಲ್ಲಿ ಚಂದನ್ ಶೆಟ್ಟಿ ಹಾಗೇ ನಿವೇದಿತಾ ಗೌಡ ಡಿವೋರ್ಸ್ ಸುದ್ದಿಯೇ ಕಿಚ್ಚು ಹಚ್ಚಿದೆ. ಚೆನ್ನಾಗೇ ಇದ್ದ ಜೋಡಿ ನಡುವೆ ಏನಾಯ್ತು ಅಂತಾ ಫ್ಯಾನ್ಸ್ ಒಂದೊಂದು ರೀತಿ ಯೋಚನೆ ಮಾಡ್ತಿದ್ರು. ಬಟ್ ಇವತ್ತು ಮೀಡಿಯಾಗಳ ಮುಂದೆ ಬಂದ ಜೋಡಿ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಇದ್ರ ನಡುವೆ ಸ್ಯಾಂಡಲ್​ವುಡ್​ನ ದೊಡ್ಮನೆಯ ಕುಡಿ ಬದುಕಲ್ಲೂ ಬಿರುಗಾಳಿ ಎದ್ದಿದೆ. ಯುವ ರಾಜ್ ಕುಮಾರ್ ದಾಂಪತ್ಯದಲ್ಲೂ ಬಿರುಕು ಮೂಡಿದ್ದು, ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅಷ್ಟಕ್ಕೂ ಯುವ ದಾಂಪತ್ಯದಲ್ಲಿ ಆಗಿದ್ದೇನು? ಆ ನಟಿ ಜೊತೆಗಿನ ಆಪ್ತತೆಯಿಂದಲೇ ಇಷ್ಟೆಲ್ಲಾ ಆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಪಾಕ್ ಬೆಂಡೆತ್ತಿದ ಕನ್ನಡಿಗ – ಚಿಕ್ಕಮಗಳೂರು To ಅಮೆರಿಕ ಜರ್ನಿ ಹೇಗಿತ್ತು?

ಚಂದನವನದ ದೊಡ್ಮನೆ ಅಂತಾನೇ ಕರೆಸಿಕೊಳ್ಳೋ ಅಣ್ಣಾವ್ರ ಕುಟುಂಬದ ಬಗ್ಗೆ ಕನ್ನಡಿಗರಿಗೆ ಅಪಾರ ಗೌರವವಿದೆ. ದೊಡ್ಡನೆಯ ಸದಸ್ಯರೂ ಕೂಡ ಅಭಿಮಾನಗಳಂದ್ರೆ ದೇವರಂತೆ ನೋಡ್ತಾರೆ. ಡಾ.ರಾಜ್ ಕುಟುಂಬವನ್ನ ನೋಡಿ ಕಲೀಬೇಕು ಅನ್ನುವಷ್ಟರ ಮಟ್ಟಿಗೆ ಸ್ಯಾಂಡಲ್​ವುಡ್​ನಲ್ಲಿ ಈ ಮನೆಯನ್ನ ಮಾದರಿಯಾಗಿಟ್ಟುಕೊಂಡಿದ್ದಾರೆ. ಆ ಕುಟುಂಬದ ಬಗ್ಗೆ ಒಂದಷ್ಟು ಗಾಸಿಪ್​ಗಳು ಬಿಟ್ರೆ ಅವ್ರ ಕುಟುಂಬದಲ್ಲಿನ ಯಾವೊಂದು ಸಣ್ಣ ಮನಸ್ತಾಪ ಕೂಡ ಹೊರ ಜಗತ್ತಿಗೆ ಗೊತ್ತಾಗಿಲ್ಲ. ಬಟ್ ಈಗ ಅಣ್ಣಾವ್ರ ಮೊಮ್ಮಗ, ರಾಘವೇಂದ್ರ ರಾಜ್ ಕುಮಾರ್ ಅವ್ರ ಮಗ, ವಿನಯ್ ರಾಜ್ ಕುಮಾರ್ ಅವ್ರ ಸೋದರ ಯುವ ರಾಜ್ ಕುಮಾರ್ ದಾಂಪತ್ಯದಲ್ಲಿ ಬಿರುಗಾಳಿ ಎದ್ದಿದೆ. ತಮ್ಮ ಪತ್ನಿಯಿಂದ ವಿಚ್ಚೇದನಕ್ಕಾಗಿ ಫ್ಯಾಮಿಲಿ ಕೋರ್ಟ್​​ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಕಳೆದ ಜೂನ್ 6ರಂದು ದೊಡ್ಮನೆ ಮಗ ಯುವ ರಾಜ್​ಕುಮಾರ್ ಅವರು ಫ್ಯಾಮಿಲಿ ಕೋರ್ಟ್​​ನಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಇದೇ ಮೊದಲ ಬಾರಿಗೆ  ಸ್ಯಾಂಡಲ್​ವುಡ್ ದೊಡ್ಮನೆಯಲ್ಲಿ ಡಿವೋರ್ಸ್ ಕೇಸ್ ಬೆಳಕಿಗೆ ಬಂದಿದೆ. ಸ್ವತಃ ಯುವರಾಜ್ ಅವ್ರೇ ಅರ್ಜಿ ಸಲ್ಲಿಸಿದ್ದು, ಯುವ ಪತ್ನಿ ಶ್ರೀದೇವಿ ಭೈರಪ್ಪಗೆ ಕೋರ್ಟ್​ನಿಂದ ನೋಟಿಸ್ ಜಾರಿಯಾಗಿದೆ. ವಿಚ್ಛೇದನದ ಕೇಸ್‌ನಲ್ಲಿ ಫ್ಯಾಮಿಲಿ ಕೋರ್ಟ್ ಮುಂದಿನ ಜುಲೈ ತಿಂಗಳ 4ನೇ ತಾರೀಕಿಗೆ ವಿಚಾರಣೆ ನಿಗದಿ ಮಾಡಿದೆ. ಅಷ್ಟಕ್ಕೂ ಪ್ರೀತಿಸಿ ಮದುವೆಯಾಗಿದ್ದ ಜೋಡಿ ಬಾಳಲ್ಲಿ ಇದೇನಾಯ್ತು ಎಂಬ ಪ್ರಶ್ನೆ ಎದ್ದಿದೆ.

7 ವರ್ಷ ಪ್ರೀತಿಸಿ ಮದುವೆ!

ಮೂಲತಃ ಮೈಸೂರಿನ ಹುಡುಗಿ ಶ್ರೀದೇವಿ ಭೆರಪ್ಪ. ಅಲ್ಲೇ ಹುಟ್ಟಿ ಅಲ್ಲೇ ಬೆಳೆದು ಉನ್ನತ ಶಿಕ್ಷಣ ಮುಗಿಸಿದರು.  ಯುವ ಹಾಗೂ ಶ್ರೀದೇವಿ ಜೋಡಿ ಪರಸ್ಪರ 7 ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದರು. 2019ರಲ್ಲಿ ಯುವ ರಾಜ್​ಕುಮಾರ್​ ಮತ್ತು ಶ್ರೀದೇವಿ ಮದುವೆ ನಡೆದಿತ್ತು. ಮದುವೆಯಲ್ಲಿ ಪುನೀತ್ ರಾಜ್ ಕುಮಾರ್ ಸೇರಿದಂತೆ ಇಡೀ ಫ್ಯಾಮಿಲಿ ಸದಸ್ಯರು ಎಲ್ಲರೂ ಒಂದಾಗಿ ಸಂಭ್ರಮಿಸಿದ್ರು. ಬಳಿಕ ರಾಜ್​ ಫ್ಯಾಮಿಲಿ ಸೇರಿದ ಶ್ರೀದೇವಿ ‘ಡಾ.ರಾಜ್​​ ಕುಮಾರ್​ ಸಿವಿಲ್​ ಸರ್ವೀಸ್​ ಅಕಾಡೆಮಿ’ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು.  ಬಳಿಕ ಇಬ್ಬರ ನಡುವೆ ಮನಸ್ತಾಪ ಹೆಚ್ಚಿದ ಬಳಿಕ ಶ್ರೀದೇವಿ ಅವರು ವಿದೇಶಕ್ಕೆ ತೆರಳಿದರು. ಕಳೆದ ಕೆಲವು ತಿಂಗಳಿಂದ ಅವರು ಬೇರೆ ಬೇರೆಯಾಗಿ ವಾಸಿಸುತ್ತಿದ್ದಾರೆ. ಯುವ ರಾಜ್​ಕುಮಾರ್​ ನಟಿಸಿದ ‘ಯುವ’ ಸಿನಿಮಾ ಈ ವರ್ಷ ಬಿಡುಗಡೆ ಆಯಿತು. ಆ ಸಿನಿಮಾಗೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮಗಳಲ್ಲೂ ಪತ್ನಿ ಶ್ರೀದೇವಿ ಕಾಣಿಸಿಕೊಳ್ಳಲೇ ಇಲ್ಲ. ಆಗಲೂ ಕೂಡ ಬಹುತೇಕರಿಗೆ ಅನುಮಾನ ಮೂಡಿತ್ತು. ಆದ್ರೀಗ ಮದುವೆಯಾಗಿ ಐದೇ ವರ್ಷಕ್ಕೆ ಬೇರೆ ಬೇರೆಯಾಗ್ತಿರೋದು ಅಭಿಮಾನಿಗಳಿಗೂ ಶಾಕ್ ತಂದಿದೆ.

ಅಷ್ಟಕ್ಕೂ ಯುವರಾಜ್‌ಕುಮಾರ್ ಅವರು ತಮ್ಮ ವಿಚ್ಛೇದನದ ಅರ್ಜಿಯಲ್ಲಿ ಪತ್ನಿಯ ವಿರುದ್ಧ ಸಾಲು ಸಾಲು ಆರೋಪಗಳನ್ನ ಮಾಡಿದ್ದಾರೆ. ಕ್ರೌರ್ಯ ಹಾಗೂ ಅಗೌರವದಿಂದ ನೋಡಿಕೊಂಡ ಆರೋಪ ಮಾಡಿದ್ದಾರೆ. ಪತ್ನಿಯಿಂದ ಮಾನಸಿಕವಾಗಿ ಟಾರ್ಚರ್ ಅನುಭವಿಸುತ್ತಿದ್ದೇನೆ. ಹೀಗಾಗಿ ದಾಂಪತ್ಯದಿಂದ ಬಿಡುಗಡೆಗೊಳಿಸಿ ಅಂತಾ  ಯುವ ಕೇಸ್ ದಾಖಲಿಸಿದ್ದಾರೆ. ಕನ್ನಡ ಚಿತ್ರರಂಗದ ದೊಡ್ಮನೆ, ಡಾ. ರಾಜ್​ಕುಮಾರ್​ ಕುಟುಂಬದಲ್ಲಿ ಇದು ಮೊದಲ ವಿಚ್ಛೇದನ ಪ್ರಕರಣ. ಆ ಕಾರಣದಿಂದ ಅಭಿಮಾನಿಗಳಿಗೆ ಬೇಸರ ಆಗಿದೆ. ಯುವ ರಾಜ್​ಕುಮಾರ್​ ಮತ್ತು ಶ್ರೀದೇವಿ ಭೈರಪ್ಪ ವಿಚ್ಛೇದನ ಪಡೆಯಲು ಕೋರ್ಟ್​ ಮೆಟ್ಟಿಲು ಏರಿದ್ದಾರೆ. ಇಬ್ಬರ ಸಂಸಾರದಲ್ಲಿ ಬಿರುಕು ಮೂಡಲು ಖ್ಯಾತ ನಟಿಯೊಬ್ಬರು ಕಾರಣವಾದ್ರಾ ಎಂಬ ಬಗ್ಗೆ ಚರ್ಚೆಯಾಗ್ತಿದೆ. ಗಾಂಧಿನಗರದಲ್ಲಿ ಕೇಳಿಬರುತ್ತಿರುವ ಗಾಸಿಪ್​ ಪ್ರಕಾರ ಪ್ರಸಿದ್ಧ ನಟಿಯ ಜೊತೆ ಯುವ ರಾಜ್​ಕುಮಾರ್​ ಆಪ್ತತೆ ಹೆಚ್ಚಿಸಿಕೊಂಡಿದ್ದೇ ಇದಕ್ಕೆಲ್ಲ ಕಾರಣ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ, ಯುವ ರಾಜ್​ಕುಮಾರ್​ ಅವರು ಕನ್ನಡ ಚಿತ್ರರಂಗದ ಖ್ಯಾತ ನಟಿಯೊಬ್ಬರ ಜೊತೆ ಸ್ನೇಹ ಬೆಳೆಸಿಕೊಂಡಿದ್ದಾರೆ. ಆ ನಟಿಯ ಜೊತೆ ಯುವ ಆಪ್ತತೆ ಹೆಚ್ಚಾಯಿತು. ಆ ಕಾರಣದಿಂದಲೇ ಅವರ ಸಂಸಾರದಲ್ಲಿ ಸಮಸ್ಯೆ ಶುರುವಾಗಿರುವ ಬಗ್ಗೆ ಚರ್ಚೆ ನಡೀತಿದೆ. ಸ್ಯಾಂಡಲ್‌‌ವುಡ್‌‌ನಲ್ಲಿ ಈ ನಟಿ ಖ್ಯಾತಿಯನ್ನು ಗಳಿಸಿದ್ದಾರೆ. ಕೇವಲ ಬೆರಳಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿದ್ರು, ಎಲ್ಲ ಸಿನಿಮಾಗಳು ಸೂಪರ್ ಹಿಟ್‌ ಆಗಿವೆ ಎಂಬ ಗಾಸಿಪ್ ಹಬ್ಬಿದೆ. ಬಟ್ ಈ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ.  ಒಟ್ನಲ್ಲಿ ಯುವ ಹಾಗೇ ಶ್ರೀದೇವಿ ದಾಂಪತ್ಯದಲ್ಲಿ ಬಿರುಕು ಮೂಡಿ ತಿಂಗಳುಗಳೇ ಕಳೆದಿವೆ. ಇದೀಗ ಈ ಜಗಳ ವಿಚ್ಚೇದನದವರೆಗೂ ಬಂದು ನಿಂತಿದೆ. ಯುವ ದೂರಿನ ಪ್ರಕಾರ ಪತ್ನಿ ಟಾರ್ಚರ್ ಕೊಡ್ತಿದ್ರು ಎನ್ನಲಾಗಿದೆ. ಮತ್ತೊಂದೆಡೆ ನಟಿಯೇ ಕಾರಣ ಎಂಬ ಗುಲ್ಲೆದ್ದಿದೆ. ಆದ್ರೆ ಯಾವುದು ಸತ್ಯ ಅನ್ನೋ ಬಗ್ಗೆ ಈವರೆಗೂ ಸ್ಪಷ್ಟತೆ ಇಲ್ಲ.

Shwetha M

Leave a Reply

Your email address will not be published. Required fields are marked *