ಧಿಮಾಕು ತೋರಿಸಿದ್ದಕ್ಕೆ ರಶ್ಮಿಕಾ ಮಂದಣ್ಣ ಸ್ಯಾಂಡಲ್‌ವುಡ್‌ನಲ್ಲಿ ಬ್ಯಾನ್ ಆಗ್ತಾರಾ?
‘ಕನ್ನಡ ಚಿತ್ರರಂಗದ ಬಗ್ಗೆ ಕೃತಜ್ಞತೆ ಇಲ್ಲದ ನಟಿಯನ್ನ ಬ್ಯಾನ್ ಮಾಡಿ’ - ವೈರಲ್ ಆಗ್ತಿದೆ ನಟಿಯ ವಿರುದ್ಧದ ಪೋಸ್ಟ್

ಧಿಮಾಕು ತೋರಿಸಿದ್ದಕ್ಕೆ ರಶ್ಮಿಕಾ ಮಂದಣ್ಣ ಸ್ಯಾಂಡಲ್‌ವುಡ್‌ನಲ್ಲಿ ಬ್ಯಾನ್ ಆಗ್ತಾರಾ?‘ಕನ್ನಡ ಚಿತ್ರರಂಗದ ಬಗ್ಗೆ ಕೃತಜ್ಞತೆ ಇಲ್ಲದ ನಟಿಯನ್ನ ಬ್ಯಾನ್ ಮಾಡಿ’ - ವೈರಲ್ ಆಗ್ತಿದೆ ನಟಿಯ ವಿರುದ್ಧದ ಪೋಸ್ಟ್

ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಕನ್ನಡ ಚಿತ್ರರಂಗದ ಬಗ್ಗೆ ತೋರಿಸಿದ ಧಿಮಾಕು ಈಗ ತಿರುಗುಬಾಣವಾಗುವ ಎಲ್ಲಾ ಸೂಚನೆಗಳು ಕಂಡು ಬರ್ತಿದೆ. ಬೇರೆ ಬೇರೆ ಭಾಷೆಗಳ ಸಿನಿಮಾದಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ, ರಿಷಬ್ ಶೆಟ್ಟಿ ನಿರ್ದೇಶನದ, ರಕ್ಷಿತ್ ಶೆಟ್ಟಿ ನಟನೆಯ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಸಕ್ಸಸ್ ಕಂಡಿದ್ದರು. ಆ ಯಶಸ್ಸಿನಿಂದಲೇ ಪರಭಾಷಾ ಚಿತ್ರರಂಗಕ್ಕೂ ಎಂಟ್ರಿಕೊಟ್ಟಿದ್ದರು. ನಂತರ ಕನ್ನಡದಲ್ಲಿ ಅಷ್ಟೇನು ನೆಲೆ ನಿಲ್ಲದ ಕಾರಣ ಸಾಕಷ್ಟು ಟೀಕೆಗೂ ಗುರಿಯಾಗಿದ್ದರು. ಅದರಲ್ಲೂ ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಕಿರಿಕ್ ಪಾರ್ಟಿ ಸಿನಿಮಾದ ಪ್ರೊಡಕ್ಷನ್ ಹೌಸ್ ಹೆಸರು ಹೇಳದೆ ವ್ಯಂಗ್ಯ ಮಾಡಿ ಕೈಯಲ್ಲೇ ಆಕ್ಷನ್ ಮಾಡಿ ತೊರಿಸಿದ್ದರು. ಇದು ಕನ್ನಡದ ಸಿನಿಮಾ ಅಭಿಮಾನಿಗಳನ್ನ ಕೆರಳಿಸಿದೆ. ಬೆಳೆಸಿದ ಸಂಸ್ಥೆಯ ಹೆಸರು ಹೇಳಲು ಕೂಡಾ ಇಷ್ಟಪಡದ ರಶ್ಮಿಕಾ ಮಂದಣ್ಣ ಅವರನ್ನ ಕನ್ನಡ ಚಿತ್ರರಂಗದಿಂದ ಹೊರಗಿಡಬೇಕು ಅನ್ನೋ ಕೂಗು ಜೋರಾಗಿಯೇ ಕೇಳಿಬರ್ತಿದೆ.

ಇದನ್ನೂ ಓದಿ :  ರಶ್ಮಿಕಾ ಮಂದಣ್ಣ ‘ಕೈ’ ಸನ್ನೆಗೆ ರಿಷಬ್ ಶೆಟ್ಟಿ ‘ಕೈ’ ಸನ್ನೆಯಿಂದಲೇ ಟಾಂಗ್..!

ರಶ್ಮಿಕಾ ಮಾಡಿರೋ ಕೈ ಸನ್ನೆಯ ವಿಡೀಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ಇದಕ್ಕೆ ಸರಿಯಾಗಿ ರಿಷಬ್ ಶೆಟ್ಟಿ ಕೂಡಾ ರಶ್ಮಿಕಾ ಮಂದಣ್ಣಗೆ ಅವರದೇ ರೀತಿಯಲ್ಲಿ ಟಾಂಗ್ ಕೊಟ್ಟಿದ್ದರು. ಸಂದರ್ಶನವೊಂದರಲ್ಲಿ ಮಾತನಾಡಿದ ರಿಷಬ್ ಶೆಟ್ಟಿ, ಕೈಯಲ್ಲಿ ಆಕ್ಷನ್ ಮಾಡಿ ತೋರಿಸುವಂತಾ ನಟಿ ಜೊತೆ ಕೆಲಸ ಮಾಡಲ್ಲ ಎಂದು ಹೇಳಿದ್ದರು.

ಇದೆಲ್ಲಾ ಬೆಳವಣಿಗೆಯ ನಂತರ ಇದೀಗ ರಶ್ಮಿಕಾ ಸಿನಿಮಾ ನೋಡಬಾರದು, ಕರ್ನಾಟಕದಲ್ಲಿ ರಶ್ಮಿಕಾ ಸಿನಿಮಾ ಬ್ಯಾನ್ ಮಾಡಬೇಕು, ಬಾಯ್ಕಟ್ ರಶ್ಮಿಕಾ ಎಂಬ ಪೋಸ್ಟರ್ ಗಳು ಹರಿದಾಡುತ್ತಿವೆ.

ರಶ್ಮಿಕಾ ಮಂದಣ್ಣ ಬಗ್ಗೆ ಹಿಗ್ಗಾಮುಗ್ಗಾ ಟ್ರೋಲ್ ಆಗ್ತಿದ್ದಂತೆ, ಜೊತೆಗೆ ಸ್ಯಾಂಡಲ್‌ವುಡ್‌ನಲ್ಲಿ ರಶ್ಮಿಕಾ ಮಂದಣ್ಣ ಅವರನ್ನ ಬ್ಯಾನ್ ಮಾಡ್ಬೇಕು ಅನ್ನೋ ಅಭಿಮಾನಿಗಳ ಒತ್ತಾಯ ಕೇಳಿಬರುತ್ತಿದ್ದಂತೆ

‘ಪುಷ್ಪ-2’ ಮತ್ತು ದಳಪತಿ ವಿಜಯ್ ನಟನೆಯ ‘ವರಿಸು’ ಸಿನಿಮಾತಂಡಕ್ಕೆ ತಲೆನೋವು ಶುರುವಾಗಿದೆ ಅನ್ನೋ ಮಾತು ಕೂಡಾ ಕೇಳಿಬರ್ತಿದೆ. ತಮಿಳು ಮತ್ತು ತೆಲುಗು ಸಿನಿಮಾಗಳಿಗೆ ಕರ್ನಾಟಕ ದೊಡ್ಡ ಮಾರುಕಟ್ಟೆಯಾಗಿದೆ. ಹಾಗಾಗಿ ರಶ್ಮಿಕಾ ಕಾರಣಕ್ಕೆ ಸಿನಿಮಾಗೆ ತೊಂದರೆ ಆದರೆ ಭಾರಿ ನಷ್ಟ ಅನುಭವಿಸಬೇಕಾಗುತ್ತದೆ ಅನ್ನೋ ಆತಂಕ ಎದುರಾಗಿದೆ ಅನ್ನೋ ಮಾತು ಕೂಡಾ ಕೇಳಿಬರ್ತಿದೆ.

suddiyaana