ವೈಷ್ಣವ್ ‘ಕೈ’ ಹಿಡಿಯುವುದು ಕೀರ್ತಿನಾ, ಲಡ್ಡುನಾ ? – ಸತ್ಯ ಗೊತ್ತಾದ ಭಾಗ್ಯ ಮದುವೆ ನಿಲ್ಲಿಸುತ್ತಾಳಾ?

ವೈಷ್ಣವ್ ‘ಕೈ’ ಹಿಡಿಯುವುದು ಕೀರ್ತಿನಾ, ಲಡ್ಡುನಾ ? – ಸತ್ಯ ಗೊತ್ತಾದ ಭಾಗ್ಯ ಮದುವೆ ನಿಲ್ಲಿಸುತ್ತಾಳಾ?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮಿ ಧಾರಾವಾಹಿ ಬಗ್ಗೆ ವೀಕ್ಷಕರು ಸಾಕಷ್ಟು ತಲೆಕೆಡಿಸಿಕೊಂಡಿದ್ದಾರೆ. ವೈಷ್ಣವ್ ಯಾರ ಜೊತೆ ಮದುವೆಯಾಗುತ್ತಾನೆ. ಲಡ್ಡುಗೆ ಯಾವ ರೀತಿ ಅನ್ಯಾಯವೂ ಆಗಬಾರದು. ವೈಷ್ಣವ್ ಲಡ್ಡುನೇ ಮದುವೆಯಾಗಬೇಕು. ಕೀರ್ತಿ ಬೇಡವೇ ಬೇಡ ಅಂತಿದ್ದಾರೆ ಅನೇಕರು. ಇನ್ನು ಕೆಲವರು ಪಾಪ.. ವೈಷ್ಣವ್ ಇಷ್ಟಪಟ್ಟಿದ್ದೇ ಕೀರ್ತಿಯನ್ನ. ಅವಳನ್ನೇ ಮದುವೆಯಾದರೆ ತಪ್ಪೇನು ಅಂತಿದ್ದಾರೆ. ಆದರೆ, ಲಕ್ಷ್ಮೀ ಯಾವತ್ತಿದ್ದರೂ ವೈಷ್ಣವ್ ಹೆಂಡತಿಯೇ ಅನ್ನೋದು ವೀಕ್ಷಕರ ನಂಬಿಕೆ. ಈ ನಡುವೆ ಭಾಗ್ಯಲಕ್ಷ್ಮಿ ಧಾರವಾಹಿಯ ಮದುವೆ ಸಂಚಿಕೆ ಸಾಕಷ್ಟು ಕುತೂಹಲಕ್ಕೂ ಕಾರಣವಾಗಿದೆ.

ಇದನ್ನೂ ಓದಿ:  ಶೂಟಿಂಗ್ ವೇಳೆ ನಟಿ ಸಮಂತಾ ಕೈಗೆ ತೀವ್ರ ಗಾಯ – ಫೋಟೋಗಳೇ ಹೇಳ್ತಿವೆ ಅನಾಹುತದ ಭೀಕರತೆ!

ಸ್ಟಾರ್ ಸಿಂಗರ್ ವೈಷ್ಣವ್, ಕೀರ್ತಿಯನ್ನು ಮೊದಲಿನಿಂದಲೂ ತುಂಬಾ ಪ್ರೀತಿ ಮಾಡ್ತಾ ಇದ್ದ. ಇಬ್ಬರಿಗೂ ಮದುವೆ ಮಾಡಬೇಕು ಎಂದು ಮನೆಯಲ್ಲಿ ನಿಶ್ಚಿತಾರ್ಥ ಇಟ್ಟುಕೊಂಡಿದ್ರು. ಇನ್ನೇನು ಎಂಗೇಜ್‌ಮೆಂಟ್ ರಿಂಗ್ ತೊಡಿಸಲೇಬೇಕು ಅಂತಾ ಕಾದಿದ್ದ ವೈಷ್ಣವ್‌ಗೆ ಕೀರ್ತಿ ಫುಲ್ ಶಾಕ್ ಕೊಟ್ಟಿದ್ದಳು. ನೀನು ಬೇಡ ಅಂತಾ ರಿಜೆಕ್ಟ್ ಮಾಡಿ ಹೋಗಿದ್ದಳು. ಅದರಿಂದ ವೈಷ್ಣವ್ ತೀವ್ರ ನೊಂದಿದ್ದ. ಅದಕ್ಕೆ ಕಾವೇರಿ ಲಕ್ಷ್ಮಿ ಜೊತೆ ಮದುವೆ ಮಾಡಿಸಲು ಮುಂದಾಗಿದ್ದಾಳೆ. ಆದ್ರೆ ಈಗ ಕೀರ್ತಿ ಬೇಕು ಆಕೆಯನ್ನು ಮದುವೆ ಆಗ್ತೇನೆ ಎಂದು ಹಠ ಹಿಡಿದಿದ್ದಾನೆ. ಅದಕ್ಕಾಗಿ ತಾಯಿ ಕಾವೇರಿ ನಾನಿಟ್ಟ ಮುಹೂರ್ತದಲ್ಲೇ ಬೇಕಾದರೆ ಕೀರ್ತಿಯನ್ನು ಮದುವೆಯಾಗು. ನಿನಗೆ ಸಾಧ್ಯವಾಗದಿದ್ದರೆ ನಾ ಇಷ್ಟಪಟ್ಟ ಲಕ್ಷ್ಮಿಯೇ ನಿನ್ನ ಹೆಂಡತಿ ಎಂದಿದ್ದಾಳೆ.

ಇದರ ನಡುವೆ ಲಡ್ಡುವನ್ನು ಅತಿಯಾಗಿ ಪ್ರೀತಿಸುವ ಅಕ್ಕ ಭಾಗ್ಯಗೆ ಏನೋ ಅನುಮಾನ ಶುರುವಾಗಿದೆ. ಅದಕ್ಕೆ ಕುಸುಮಾ ಮತ್ತು ಕಾವೇರಿಯನ್ನು ಪ್ರಶ್ನೆ ಮಾಡ್ತಾ ಇದ್ದಾಳೆ. ನನ್ನ ತಂಗಿ, ವೈಷ್ಣವ್ ಮೆಚ್ಚಿದ ಹುಡುಗಿನಾ? ಅಥವಾ ಅತ್ತೆ ಮೆಚ್ಚಿದ ಸೊಸೆನಾ ಎಂದು ಪ್ರಶ್ನೆ ಮಾಡ್ತಾ ಇದ್ದಾಳೆ. ಅದಕ್ಕೆ ಉತ್ತರ ನೀಡಲಾಗದೇ ಕುಸುಮಾ ಮತ್ತು ಕಾವೇರಿ ಪರದಾಡ್ತಾ ಇದ್ದಾರೆ. ಆದರೆ, ವೈಷ್ಣವ್‌ಗೆ ಈ ಮದುವೆ ಇಷ್ಟ ಇಲ್ಲ ಅನ್ನೋದನ್ನ ಸ್ವತಃ ಆತನ ತಂಗಿಯೇ ಭಾಗ್ಯಳ ಕಿವಿಗೆ ಹಾಕಿಯಾಗಿದೆ. ಇದರಿಂದ ಭಾಗ್ಯ ಕಂಗಾಲಾಗಿ ಹೋಗಿದ್ದಾಳೆ.

ಕೊನೆ ಕ್ಷಣದವರೆಗೂ ಕೀರ್ತಿಯನ್ನು ಮದುವೆಗೆ ಒಪ್ಪಿಸಬೇಕು ಎಂದು ವೈಷ್ಣವ್ ಕಾಯ್ತಾ ಇದ್ದಾನೆ. ಕೀರ್ತಿ ಮತ್ತು ವೈಷ್ಣವ್ ಪದೇ ಪದೇ ಜೊತೆಗೆ ಇರುತ್ತಿದ್ದಾರೆ. ಆಗಾಗ ಭೇಟಿಯಾಗಿ ಮಾತನಾಡುತ್ತಿದ್ದಾರೆ. ಇದರಿಂದ ಲಕ್ಷ್ಮಿಗೆ ಅನುಮಾನ ಶುರುವಾಗಿದೆ. ಮೂರು ಮನಸುಗಳ ನಡುವೆ ಈಗ ದೊಡ್ಡ ಸಂಘರ್ಷವೇ ನಡೀತಿದೆ. ವೈಷ್ಣವ್ ಕೈ ಹಿಡಿಯುವುದು ಕೀರ್ತೀನಾ, ಲಕ್ಷ್ಮೀನಾ ಅನ್ನೋ ಕುತೂಹಲವೂ ಗರಿಗೆದರಿದೆ. ಆದರೆ, ಸತ್ಯ ಗೊತ್ತಾದ ಮೇಲೆ ಲಕ್ಷ್ಮೀ ಅಕ್ಕ ಭಾಗ್ಯ ಯಾವುದಾದರೂ ದೊಡ್ಡ ನಿರ್ಧಾರ ತೆಗೆದುಕೊಳ್ತಾಳಾ ಅನ್ನೋ ಆತಂಕವೂ ವೀಕ್ಷಕರನ್ನು ಕಾಡುತ್ತಿದೆ.

suddiyaana