11 ಮಕ್ಕಳಾಗಿದ್ದಕ್ಕೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಪತ್ನಿ – ಸಿಟ್ಟಿಗೆದ್ದ ಪತಿರಾಯ ಮಾಡಿದ್ದೇನು ?

11 ಮಕ್ಕಳಾಗಿದ್ದಕ್ಕೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಪತ್ನಿ – ಸಿಟ್ಟಿಗೆದ್ದ ಪತಿರಾಯ ಮಾಡಿದ್ದೇನು ?

ಮದುವೆಯಾಗಿ 11 ವರ್ಷಗಳು. ಒಂದೊಂದು ವರ್ಷಕ್ಕೂ ಒಂದು ಮಗು ಅನ್ನೋ ಹಾಗೆ 11 ಮಕ್ಕಳು. ಮಕ್ಕಳು ದೊಡ್ಡವರಾಗುತ್ತಿದ್ದಂತೆ ಪದೇ ಪದೇ ಗರ್ಭಿಣಿಯಾಗುವುದು ಕಷ್ಟವಾಗುತ್ತಿತ್ತು. ಆದರೆ ಗಂಡ ಮಾತ್ರ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಲು ಒಪ್ಪುತ್ತಿಲ್ಲ. ಕೊನೆಗೂ ಹೆಂಡತಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡೇ ಬಿಟ್ಟಳು. ವಿಚಾರ ಗೊತ್ತಾಗುತ್ತಿದ್ದಂತೆ ಗಂಡ ಕೆಂಡಾಮಂಡಲನಾಗಿ ಒಂದು ತೀರ್ಮಾನಕ್ಕೆ ಬಂದೇ ಬಿಟ್ಟಿದ್ದ. ಒಡಿಶಾದ ಕಿಯೋಂಜರ್ ಅನ್ನೋ ಜಿಲ್ಲೆಯಲ್ಲಿ ಇಂಥಾ ಒಂದು ವಿಚಿತ್ರ ಪ್ರಕರಣ ಕಂಡು ಬಂದಿದೆ.

ಇದನ್ನೂ ಓದಿ:  ಶನಿಮಹಾತ್ಮ ದೇಗುಲಕ್ಕೆ ಮಾಂಸದ ಹಾರ ತಂದು ಕೊಟ್ಟ ದುಷ್ಟರು – ಮಾಲೆ ಹಾಕುವ ಮುನ್ನವೇ ನಡೆಯಿತು ಚಕಿತ!

ಜಾನಕಿ ಎಂಬಾಕೆ ರಬಿ ಎಂಬಾತನ ಜೊತೆ 11 ವರ್ಷಗಳ ಹಿಂದೆ ಮದುವೆಯಾಗಿದ್ದಳು. ಈಗಾಗಲೆ 11 ಮಕ್ಕಳಿಗೆ ಜಾನಕಿ ಜನ್ಮ ನೀಡಿದ್ದಾಳೆ. 11ರಲ್ಲಿ ಒಂದು ಮಗು ಸಾವನ್ನಪ್ಪಿದೆ. ಮನೆಯಲ್ಲಿ ಮಕ್ಕಳು ಬೆಳೆಯುತ್ತಿರುವಾಗ ಪ್ರತಿ ವರ್ಷ ಗರ್ಭಿಣಿಯಾಗಲು ನನಗೆ ತುಂಬಾ ಮುಜುಗರವಾಗುತ್ತಿತ್ತು. ನಮ್ಮ ಗ್ರಾಮದ ಅನೇಕ ಮಹಿಳೆಯರು ಆಪರೇಷನ್ ಮಾಡಿಸಿಕೊಂಡಿದ್ದಾರೆ. ಆದರೆ ನನ್ನ ಪತಿಗೆ ಆಪರೇಷನ್ ಮಾಡಿಸಿಕೊಳ್ಳುವುದು ಇಷ್ಟ ಇಲ್ಲ ಎಂದು ಜಾನಕಿ ಕೊರಗುತ್ತಿದ್ದಳು. ದುರ್ಬಲಳಾಗಿದ್ದ ಜಾನಕಿಯನ್ನು ಕಂಡು ಆಶಾಕಾರ್ಯಕರ್ತೆಯೊಬ್ಬರು ಸಂತಾನಹರಣ ಶಸ್ತ್ರಚಿಕಿತ್ಸೆ ಬಗ್ಗೆ ತಿಳಿಸಿದ್ದಾರೆ. ಜೊತೆಗೆ ತುಂಬಾ ದುರ್ಬಲಳಾಗಿದ್ದ ಜಾನಕಿಗೆ 10 ಮಕ್ಕಳನ್ನು ಬೆಳೆಸುವುದು ಕೂಡಾ ಕಷ್ಟವಾಗಿತ್ತು. ಇದನ್ನು ಕಂಡು ಆಶಾಕಾರ್ಯಕರ್ತೆ ಜಾನಕಿ ಮತ್ತು ಆಕೆಯ ಗಂಡ ರಬಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಬಗ್ಗೆ ಮನವರಿಕೆ ಮಾಡಿದ್ದಾರೆ. ಆಗ ರಬಿ ಸಿಟ್ಟಿಗೆದ್ದಿದ್ದ. ಆಶಾಕಾರ್ಯಕರ್ತೆಯನ್ನು ಕೊಲ್ಲುವುದಾಗಿಯೂ ಬೆದರಿಸಿದ್ದ. ಈ ಬೆದರಿಕೆ ನಡುವೆಯೂ ಜಾನಕಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಲಾಗಿತ್ತು. ಇದರಿಂದ ಪತ್ನಿ ವಿರುದ್ಧ ಆಕ್ರೋಶಗೊಂಡ ರಬಿ, ಆಕೆ ಅಪರಾಧ ಮಾಡಿದ್ದಾಳೆ. ನಾವು ಭೂಯಾನ್ ಸಮುದಾಯಕ್ಕೆ ಸೇರಿದವರು. ಸಮುದಾಯದ ನಂಬಿಕೆಯಂತೆ ನಮ್ಮ ಪೂರ್ವಜರಿಗೆ ಆಪರೇಷನ್ ಮಾಡಿಸಿಕೊಂಡರೆ ನೀರು ಸಿಗುವುದಿಲ್ಲ. ಇಂತಹ ಕಾರ್ಯಾಚರಣೆಯನ್ನು ನಾನು ಬಲವಾಗಿ ವಿರೋಧಿಸುತ್ತೇನೆ ಎಂದು ಹೇಳಿದ್ದಲ್ಲದೆ, ಪತ್ನಿಯನ್ನು ಮನೆಯಿಂದ ಹೊರಗೆ ದಬ್ಬಿದ್ದಾನೆ. ಈ ವಿಚಾರ ತಿಳಿಯುತ್ತಿದ್ದಂತೆ ಪಂಚಾಯತ್ ವಿಸ್ತರಣಾಧಿಕಾರಿ ದಾಮೋದರ್, ರಬಿ ಅವರ ನಿವಾಸಕ್ಕೆ ಹೋಗಿ ಆತನ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಇದೆಲ್ಲಾ ಮೂಢನಂಬಿಕೆ, ಇದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಹೇಳಿದ್ದಾರೆ. ಜಾನಕಿಗೆ ಶಸ್ತ್ರಚಿಕಿತ್ಸೆ ಕಾನೂನು ಪ್ರಕಾರ ನಡೆಸಲಾಗಿದೆ ಎಂದು ಆತನಿಗೆ ಮನವರಿಕೆ ಮಾಡಿದ್ದಾರೆ. ಗ್ರಾಮಸ್ಥರು ಮತ್ತು ಅಧಿಕಾರಿಗಳು ಮನವರಿಕೆ ಮಾಡಿಕೊಟ್ಟ ನಂತರ ರಬಿ ಕ್ಷಮೆಯಾಚಿಸಿ ಪತ್ನಿ ಜಾನಕಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ.

suddiyaana