ಸಾಲ ಮಾಡಿ ಪತ್ನಿಯನ್ನ ನರ್ಸಿಂಗ್ ಓದಿಸಿದ್ದ ಪತಿ – ಕೋರ್ಸ್ ಮುಗಿಯುತ್ತಿದ್ದಂತೆ ಪ್ರಿಯಕರನ ಜೊತೆ ಎಸ್ಕೇಪ್ ಆದಳು ಕಿರಾತಕಿ

ಸಾಲ ಮಾಡಿ ಪತ್ನಿಯನ್ನ ನರ್ಸಿಂಗ್ ಓದಿಸಿದ್ದ ಪತಿ – ಕೋರ್ಸ್ ಮುಗಿಯುತ್ತಿದ್ದಂತೆ ಪ್ರಿಯಕರನ ಜೊತೆ ಎಸ್ಕೇಪ್ ಆದಳು ಕಿರಾತಕಿ

ಅವರಿಬ್ಬರು ಕುಟುಂಬಸ್ಥರ ಒಪ್ಪಿಗೆಯೊಂದಿಗೆ ಮದುವೆಯಾಗಿದ್ದರು. ಮದುವೆ ಬಳಿಕ ಪತ್ನಿ ಮುಂದೆ ಓದಬೇಕೆಂಬ ಆಸೆ ತಿಳಿಸಿದ್ದಳು. ಪತ್ನಿ ಮತ್ತಷ್ಟು ಓದುತ್ತೇನೆ ಎಂದಾಗ ಪತಿ ಖುಷಿಯಿಂದಲೇ ಒಪ್ಪಿಕೊಂಡಿದ್ದ. ಆದರೆ ಕಾಲೇಜು ಮೆಟ್ಟಿಲು ಹತ್ತಿದ ಪತ್ನಿ ಗಂಡನಿಗೇ ಕೈ ಕೊಟ್ಟು ಎಸ್ಕೇಪ್ ಆಗಿದ್ದಾಳೆ. ಹೆಂಡ್ತಿಯನ್ನ ಓದಲು ಕಳಿಸಿದ್ದ ತಪ್ಪಿಗೆ ಪಾಪ ಈಗ ಪತಿ ಪೊಲೀಸ್ ಠಾಣೆ ಮೆಟ್ಟಿಲೇರುವಂತಾಗಿದೆ.

ಇದನ್ನೂ ಓದಿ : ಅಪ್ಪ ಮಾರಾಟಕ್ಕಿದ್ದಾರೆ..! – 2 ಲಕ್ಷ ರೂಪಾಯಿಗೆ ತಂದೆಯನ್ನೇ ಮಾರಾಟ ಮಾಡಲು ಮುಂದಾದ ಮಗಳು!

ಜಾರ್ಖಂಡ್‌ನಲ್ಲಿ ಇಂಥಾದ್ದೊಂದು ಘಟನೆ ನಡೆದಿದ್ದು ಪೊಲೀಸರಿಗೂ ಕೂಡ ತಲೆ ಬಿಸಿಯಾಗಿದೆ. ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಟಿಂಕು ಯಾದವ್ ಎಂಬಾತನೇ ಇಲ್ಲಿ ಮೋಸ ಹೋಗಿರುವ ಪತಿ. ಗೊಡ್ಡಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕ್ಯಾಥೌನ್ ಗ್ರಾಮದ ನಿವಾಸಿ ಟಿಂಕು ಯಾದವ್ ಅವರು ನಗರದ ಬಧೌನಾ ಪ್ರದೇಶದ ನಿವಾಸಿ ಪ್ರಿಯಾ ಕುಮಾರಿ ಎಂಬಾಕೆಯನ್ನ ವಿವಾಹವಾಗಿದ್ದರು. ಮದುವೆಯ ನಂತರ, ಹೆಂಡತಿ ಮುಂದೆ ಓದಬೇಕೆಂದು ಆಸೆ ಪಟ್ಟಿದ್ದಳು. ಆಕೆ ಉತ್ತಮ ವಿದ್ಯಾರ್ಥಿನಿಯಾಗಿದ್ದರಿಂದ, ಆರ್ಥಿಕ ಸಂಕಷ್ಟದ ನಡುವೆಯೂ, ಟಿಂಕು ತಮ್ಮ ಭವಿಷ್ಯವು ಸುಧಾರಿಸುತ್ತದೆ ಎಂದು ಯೋಚಿಸಿ ಆಕೆಯ ಪ್ರಸ್ತಾಪವನ್ನುಒಪ್ಪಿಕೊಂಡಿದ್ದ. ಹೀಗಾಗಿ ಟಿಂಕು ತನ್ನ ಪತ್ನಿಯನ್ನು ಶಕುಂತಲಾ ನರ್ಸಿಂಗ್ ಶಾಲೆಯಲ್ಲಿ ನರ್ಸಿಂಗ್ ಕೋರ್ಸ್‌ಗೆ ಸೇರಿಸಿದ್ದ. ಸುಮಾರು 2.5 ಲಕ್ಷ ಸಾಲ ಮಾಡಿ ಓದಿಸಿದ್ದ. ಮದುವೆಯಾಗಿ ಒಂದೂವರೆ ವರ್ಷಗಳ ನಂತರ ಟಿಂಕುವಿನ ಪತ್ನಿ ನೆರೆಮನೆಯ ದಿಲ್ಖುಷ್ ರಾವುತ್​ ಎಂಬಾತನ ಪ್ರೀತಿಯಲ್ಲಿ ಬಿದ್ದಿದ್ದಾಳೆ. ಪ್ರೀತಿ ಚಿಗುರೊಡೆದು ಕೋರ್ಸ್ ಮುಗಿದ ಕೂಡಲೇ ಟಿಂಕುವಿಗೆ ಕೈ ಕೊಟ್ಟು ಪ್ರಿಯಕರನೊಂದಿಗೆ ಓಡಿ ಹೋಗಿದ್ದಾಳೆ.

ಪತ್ನಿ ನರ್ಸ್ ಆಗುತ್ತಾಳೆ ಆರ್ಥಿಕವಾಗಿ ಸಮಸ್ಯೆ ಕಡಿಮೆಯಾಗುತ್ತೆ ಎಂದುಕೊಂಡಿದ್ದ ಪತಿಗೆ ಈಗ ದಿಕ್ಕೇ ತೋಚದಾಗಿದೆ. ಸಾಲ ಮಾಡಿ ಪತ್ನಿಯನ್ನು ನರ್ಸಿಂಗ್ ಕಾಲೇಜಿಗೆ ಸೇರಿಸಿ ಎಎನ್‌ಎಂ ಪದವಿ ಪಡೆಯಲು ನೆರವಾಗಿದ್ದೆ. ಹಗಲಿರುಳು ಕಷ್ಟಪಟ್ಟು ಕಾಲೇಜ್ ಫೀಸ್ ಕಟ್ಟುತ್ತಿದ್ದೆ. ಆದರೆ ಒಂದು ದಿನ ಪತ್ನಿ ನೆರಮನೆಯ ಯುವಕನೊಂದಿಗೆ ದೆಹಲಿಗೆ ಓಡಿ ಹೋಗಿದ್ದಾಳೆ. ಸೆಪ್ಟೆಂಬರ್ 17ರಂದು ಕಾಲೇಜು ರಜೆ ಇದ್ದಾಗ ಪತ್ನಿ ಪ್ರಿಯಾಕುಮಾರಿ ತನ್ನ ಪ್ರಿಯಕರನೊಂದಿಗೆ ದೆಹಲಿಗೆ ಓಡಿ ಹೋಗಿ ಅಲ್ಲಿ ಕೋರ್ಟ್‌ನಲ್ಲಿ ಮದುವೆ ಮಾಡಿಕೊಂಡು, ಮದುವೆಯ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾಳೆ.

ಸೆಪ್ಟೆಂಬರ್ 24ರಂದು ಪತ್ನಿ ಮರು ಮದುವೆಯ ವಿಚಾರ ಪತಿಗೆ ತಿಳಿದಿದ್ದು, ಆತ ಆಘಾತಕ್ಕೊಳಗಾಗಿದ್ದಾನೆ. ಈ ವಿಷಯದ ನಂತರ ಎರಡು ಕುಟುಂಬಗಳ ನಡುವೆ ಉದ್ವಿಗ್ನತೆ ಉಂಟಾಗಿದೆ. ಪತ್ನಿಯ ದಾಂಪತ್ಯ ದ್ರೋಹದಿಂದ ಮನನೊಂದ ಟಿಂಕು ನಗರ ಪೊಲೀಸ್ ಠಾಣೆಗೆ ತೆರಳಿ ಪತ್ನಿ ಹಾಗೂ ಆಕೆಯ ಪ್ರಿಯಕರನ ವಿರುದ್ಧ ನ್ಯಾಯಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಸುದ್ದಿ ಹರಡಿದ ತಕ್ಷಣ ಎರಡು ಕುಟುಂಬಗಳ ನಡುವೆ ಜಗಳ ಶುರುವಾಗಿದೆ. ಈ ವಿಚಾರದಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Shantha Kumari