ಟಿ-20 ಸೀರಿಸ್‌ನಲ್ಲಿ ಬೌಲಿಂಗ್ ವಿಭಾಗದಲ್ಲಿ ವೈಫಲ್ಯ – ಟೀಮ್ ಇಂಡಿಯಾದ ಬೌಲರ್‌ಗಳು ಎಡವುತ್ತಿರುವುದು ಎಲ್ಲಿ?

ಟಿ-20 ಸೀರಿಸ್‌ನಲ್ಲಿ ಬೌಲಿಂಗ್ ವಿಭಾಗದಲ್ಲಿ ವೈಫಲ್ಯ – ಟೀಮ್ ಇಂಡಿಯಾದ ಬೌಲರ್‌ಗಳು ಎಡವುತ್ತಿರುವುದು ಎಲ್ಲಿ?

ಮೊದಲೆರೆಡು ಪಂದ್ಯಗಳನ್ನು ಗೆದ್ದ ಟೀಮ್ ಇಂಡಿಯಾ ಮೂರನೇ ಪಂದ್ಯ ಗೆದ್ದಿದ್ದರೆ ಆರಾಮಾಗಿ ಸೀರಿಸ್ ವಿನ್ ಆಗಬಹುದಿತ್ತು, ಆದ್ರೆ ಗ್ಲೇನ್​ ಮ್ಯಾಕ್ಸ್​​ವೆಲ್ ಅದಕ್ಕೆ ಅವಕಾಶವೇ ಕೊಡಲಿಲ್ಲ. ನಮ್ಮ ಬೌಲರ್ಸ್​ಗಳು ಆಸ್ಟ್ರೇಲಿಯಾವನ್ನ ಗೆಲ್ಲಿಸಿಕೋಡೋಕೆ ಮ್ಯಾಕ್ಸ್​ವೆಲ್​​ಗೆ ಹೆಲ್ಪ್ ಮಾಡಿದರು ಅಂತಾನೂ ಹೇಳಬಹುದು. ಯಾಕೆಂದರೆ, ವರ್ಲ್ಡ್​​ಕಪ್​ನಲ್ಲಿ ಟೀಂ ಇಂಡಿಯಾಗೆ ಬೌಲಿಂಗೇ ದೊಡ್ಡ ಸ್ಟ್ರೆಂತ್​ ಆಗಿತ್ತು. ಬೌಲರ್ಸ್​ಗಳೇ ಹೀರೋಗಳಾಗಿದ್ರು. ಆದ್ರೀಗ ಟಿ-20 ಸೀರಿಸ್​​ನಲ್ಲಿ ಎಲ್ಲವೂ ಉಲ್ಟಾ. ಬೌಲರ್ಸ್​​ಗಳು ವಿಲನ್​ಗಳಾಗುತ್ತಿದ್ದಾರೆ.

ಇದನ್ನೂ ಓದಿ: ಗುಜರಾತ್ ಟೈಟಾನ್ಸ್ ಕ್ಯಾಪ್ಟನ್ ಆಗಿ ಶುಬ್ಮನ್ ಗಿಲ್ – ನಾಯಕತ್ವದ ಹೊಣೆ ನೀಡಿದ ಫ್ರಾಂಚೈಸಿಗೆ ಧನ್ಯವಾದ ತಿಳಿಸಿದ ಗಿಲ್

ಟಿ-20 ಸೀರಿಸ್​​ನಲ್ಲಿ ಟೀಂ ಇಂಡಿಯಾದ ಬೌಲಿಂಗ್​ ನೋಡೋವಾಗ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಮತ್ತು ಜಸ್ಪ್ರಿತ್ ಬುಮ್ರಾ ತುಂಬಾ ನೆನಪಾಗುತ್ತಾರೆ. ಅವರ ವ್ಯಾಲ್ಯೂ ಏನು ಅನ್ನೋದು ಇನ್ನಷ್ಟು ಅರ್ಥವಾಗುತ್ತೆ. ಮುಂದಿನ ವರ್ಷ ಟಿ-20 ವರ್ಲ್ಡ್​​ಕಪ್​ ನಡೆಯಲಿದೆ. ಅಲ್ಲಿ ಶಮಿ, ಬಮ್ರಾ ಮತ್ತು ಸಿರಾಜ್ ಇಲ್ಲದೇ ಇದ್ರೆ ನಮ್ಮ ಕಥೆ ಏನಾಗಬಹುದು ಅನ್ನೋದನ್ನ ಈಗಲೇ ಊಹಿಸ್ಕೊಳ್ಳಬಹುದು. ಎಕ್ಸ್​​ಪೀರಿಯನ್ಸ್ ಮ್ಯಾಟರ್ಸ್.. ಆಸ್ಟ್ರೇಲಿಯಾ ಬ್ಯಾಟ್ಸ್​​ಮನ್​ಗಳಿಗಿಂತ ಸರಿಯಾಗಿ ಹೊಡೆತ ತಿಂತಿರೋ ಪ್ರಸಿಧ್ ಕೃಷ್ಣ, ಅರ್ಶ್​​ದೀಪ್​​ ಸಿಂಗ್ ತುಂಬಾ ಟ್ಯಾಲೆಂಟೆಡ್ ಬೌಲರ್ಸ್​ಗಳೇ. ಅವರ ಸಾಮರ್ಥ್ಯದ ಬಗ್ಗೆ ಎರಡು ಮಾತಿಲ್ಲ. ಆದ್ರೆ ಇಬ್ಬರೂ ಬೌಲರ್ಸ್​ಗಳು ಪ್ರೆಷರ್ ಟೈಮ್​ನಲ್ಲಿ ಎಕ್ಸಿಕ್ಯೂಟ್ ಮಾಡುವಲ್ಲಿ ಫೇಲ್ ಆಗಿದ್ದಾರೆ. ಸ್ಮಾರ್ಟ್​ ಆಗಿ ಬೌಲಿಂಗ್​​ ಮಾಡುವಲ್ಲಿ ಫೇಲ್ ಆಗಿದ್ದಾರೆ. ಕೊನೆಯ ಓವರ್​ನಲ್ಲಿ 21 ಆಸ್ಟ್ರೇಲಿಯಾಗೆ ಗೆಲ್ಲೋಕೆ 21 ರನ್​​ಗಳು ಬೇಕಾಗಿತ್ತು. ಪ್ರಸಿಧ್ ಕೃಷ್ಣ ಕೈಯಲ್ಲಿ ಬಾಲ್ ಇತ್ತು. ಆದ್ರೂ ಕೂಡ ಆ ಆರು ಬಾಲ್​ಗಳಲ್ಲಿ ಗ್ಲೇನ್​ ಮ್ಯಾಕ್ಸ್​ವೆಲ್​ ತಡೆಯೋಕೆ ಸಾಧ್ಯವೇ ಆಗಿಲ್ಲ. ಕೊನೆಯ ಮೂಮೆಂಟ್​​ನಲ್ಲಿ ಕೂಡ ಶಾಟ್​​ ಪಿಚ್​​ ಬಾಲ್​ಗಳನ್ನೇ ಹಾಕಿದ್ರು. ಆ್ಯಕ್ಚುವಲಿ ಅರ್ಶ್​​ದೀಪ್ ಸಿಂಗ್ ಮತ್ತು ಪ್ರಸಿಧ್ ಕೃಷ್ಣ ಇಬ್ಬರೂ ಅತ್ಯುತ್ತಮವಾಗಿ ಯಾರ್ಕರ್​ ಎಸೀತಾರೆ. ಅದ್ರಲ್ಲಿ ಅರ್ಶ್​​ದೀಪ್ ಸಿಂಗ್ ಅಂತೂ ಎಂಥಾ ಬ್ಯಾಟ್ಸ್​​ಮನ್​ಗೂ ಸಾಧ್ಯವಾಗದಂತಾ ಯಾರ್ಕರ್​​ಗಳನ್ನ ಎಸೀತಾರೆ. 3ನೇ ಟಿ-20 ಮ್ಯಾಚ್​ನಲ್ಲಿ ಅರ್ಶ್​​ದೀಪ್ ಆಗಲಿ, ಪ್ರಸಿಧ್ ಕೃಷ್ಣ ಆಗಲಿ ಎಫೆಕ್ಟಿವ್​ ಆಗಿ ಒಂದೇ ಒಂದು ಯಾರ್ಕರ್​​ಗಳನ್ನ ಎಸೆಯೋಕೆ ಸಾಧ್ಯವಾಗಿಲ್ಲ. ಅದಕ್ಕೆ ಮತ್ತೊಂದು ಕಾರಣ ಗ್ಲೇನ್ ಮ್ಯಾಕ್ಸ್​​ವೆಲ್ ಅಂತಾನೆ ಹೇಳಬಹುದು. ಯಾವ ರೀತಿ ಬಾಲ್ ಹಾಕಿದ್ರೂ ಮ್ಯಾಕ್ಸ್​​ವೆಲ್​ ಅದನ್ನ ಬೌಂಡರಿಯಾಚೆಗೆ ಕಳುಹಿಸ್ತಿದ್ರು. ಇದ್ರಿಂದಾಗಿ ಪ್ರಸಿಧ್ ಕೃಷ್ಣ ಮತ್ತು ಅರ್ಶ್​​ದೀಪ್ ಸಿಂಗ್​​ ಯಾರ್ಕರ್​ ಹಾಕೋಕೂ ಹಿಂದೆ ಮುಂದೆ ನೋಡಿದಂತೆ ಕಾಣ್ತಿತ್ತು. ಅದ್ರಲ್ಲೂ ಪ್ರಸಿಧ್ ಕೃಷ್ಣ ಈ ರೀತಿ ಬೌಲ್​ ಮಾಡ್ತಾರೆ ಅಂತಾ ಯಾರು ಕೂಡ ಅಂದುಕೊಂಡಿರಲಿಲ್ಲ. ನಿಮಗೆ ಗೊತ್ತಿರುತ್ತೆ, ವರ್ಲ್ಡ್​​ಕಪ್​ ವೇಳೆ ಹಾರ್ದಿಕ್ ಪಾಂಡ್ಯಾ ಇಂಜ್ಯೂರಿಗೊಳಗಾದಾಗ ಇದೇ ಪ್ರಸಿಧ್ ಕೃಷ್ಣ ಪಾಂಡ್ಯಾ ಸ್ಥಾನವನ್ನ ರಿಪ್ಲೇಸ್ ಮಾಡಿದ್ರು. ವರ್ಲ್ಡ್​​ಕಪ್​ನಲ್ಲಿ ಯಾವುದೇ ಮ್ಯಾಚ್​ನಲ್ಲಿ ಆಡೋಕೆ ಚಾನ್ಸ್​ ಸಿಕ್ಕಿರಲಿಲ್ಲ ಅನ್ನೋದು ಬೇರೆ ಪ್ರಶ್ನೆ. ಆದ್ರೆ, ಒಬ್ಬ ಟಾಪ್ ಕ್ಲಾಸ್ ಕ್ವಾಲಿಟಿ ಬೌಲರ್​ ಅನ್ನೋ ಕಾರಣಕ್ಕೆ ಪ್ರಸಿಧ್​ರನ್ನ ಸೆಲೆಕ್ಟ್ ಮಾಡಲಾಗಿತ್ತು. ಆದ್ರೀಗ ಟಿ-20 ಸೀರಿಸ್​​ನಲ್ಲಿ ಆಸ್ಟ್ರೇಲಿಯಾ ಬ್ಯಾಟ್ಸ್​​ಮನ್​ಗಳು ಪ್ರಸಿಧ್ ಬಾಲ್​​ಗೆ ಹಬ್ಬ ಮಾಡ್ತಾ ಇದ್ದಾರೆ. 3ನೇ ಟಿ-20 ಮ್ಯಾಚ್​ನಲ್ಲಂತೂ ಪ್ರಸಿಧ್ ಕೃಷ್ಣ ಎಸೆದ 4 ಓವರ್​ಗಳಲ್ಲಿ ಬರೋಬ್ಬರಿ 68 ರನ್ ಕೊಟ್ಟಿದ್ದಾರೆ. ಒಂದೇ ಒಂದು ವಿಕೆಟ್ ಕೂಡ ಪಡೆದಿಲ್ಲ. ಪ್ರಸಿಧ್ ಕೃಷ್ಣ ಕೂಟ ಟಿ-20ಯಲ್ಲಿ ಹೈಯೆಸ್ಟ್ ಸ್ಕೋರಿಂಗ್​ ಭಾರತೀಯರಾಗಿದ್ದಾರೆ. ಆದ್ರೆ ಬ್ಯಾಟಿಂಗ್​​ನಿಂದ ಅಲ್ಲ.. ಬೌಲಿಂಗ್​ನಿಂದ. ಟಿ-20 ಇತಿಹಾಸದಲ್ಲಿ ಟೀಂ ಇಂಡಿಯಾದ ಪರ ಅತೀ ಹೆಚ್ಚು ರನ್​ ಕೊಟ್ಟ ಬೌಲರ್​ ಅನ್ನೋ ಬ್ಲ್ಯಾಕ್​ ಮಾರ್ಕ್​ ಈಗ ಪ್ರಸಿಧ್​​ ಕೃಷ್ಣಗೆ ಅಂಟಿಕೊಂಡಿದೆ. ಟೀಂ ಇಂಡಿಯಾದ ಇನ್ಯಾವುದೇ ಬೌಲರ್​​ ಟಿ-20ಯಲ್ಲಿ ನಾಲ್ಕು ಓವರ್​​ಗಳಲ್ಲಿ 68 ರನ್ ಕೊಟ್ಟಿಲ್ಲ. ಪ್ರಸಿಧ್ ಕೃಷ್ಣರಂಥಾ ಒಬ್ಬ ಕ್ವಾಲಿಟಿ ಬೌಲರ್​ ಈ ರೀತಿ ರನ್​ ಬಿಟ್ಟುಕೊಟ್ರೆ ಇನ್ನು ಉಳಿದವರ ಕಥೆ ಏನು. ಆಯ್ತು ರನ್ ಹೋಗ್ಲಿ..ಅಟ್​ಲೀಸ್ಟ್​ ವಿಕೆಟ್ ಆದ್ರೂ ತೆಗೆದ್ರಾ..ಅದೂ ಇಲ್ಲ.. ಅವರ ಬೌಲಿಂಗ್​ ಎಷ್ಟು ಪೂವರ್ ಆಗಿತ್ತು ಅನ್ನೋದಕ್ಕೆ ಇದೇ ಸಾಕ್ಷಿ.

ಇನ್ನು ಆಸ್ಟ್ರೇಲಿಯಾ ವಿರುದ್ಧದ 3ನೇ ಟಿ-20 ಮ್ಯಾಚ್​ನಲ್ಲಿ ನಮ್ಮ ಬೌಲರ್ಸ್​ಗಳು ಒಟ್ಟು 15 ರನ್​ ಎಕ್ಸ್​ಟ್ರಾ ಕೊಟ್ಟಿದ್ದಾರೆ. ವೈಡ್​, ನೋಬಾಲ್​ ಸೇರಿದಂತೆ 15 ರನ್​ಗಳು ಹಾಗೆ ಸುಮ್ನೆ ಆಸ್ಟ್ರೇಲಿಯಾಗೆ ದಾನ ಮಾಡಿದ್ದಾರೆ. ಟಿ-20 ಮ್ಯಾಚ್​ ಅಂದ್ಮೇಲೆ ಒಂದೊಂದು ರನ್ ಕೂಡ ಇಂಪಾರ್ಟೆಂಟ್ ಆಗುತ್ತೆ. ಹೀಗಿರೋವಾಗ 15 ರನ್​​ ಎಕ್ಸ್​​ಟ್ರಾ ಕೊಟ್ಟಿರೋದು ಕೂಡ ಸೋಲಿಗೆ ಪ್ರಮುಖ ಕಾರಣ ಅನ್ನೋದ್ರಲ್ಲಿ ಡೌಟೇ ಇಲ್ಲ. ಓವರ್​​ಆಲ್ ಆಗಿ ನಮ್ಮ ಬೌಲಿಂಗ್ ಎಷ್ಟು ವೀಕ್ ಆಗಿತ್ತು ಅನ್ನೋದು ಬೌಲರ್ಸ್​​​ಗಳು ನೀಡಿರೋ ಎಕ್ಸ್​​ಟ್ರಾ ರನ್​ಗಳಲ್ಲೇ ಗೊತ್ತಾಗುತ್ತೆ.

ಇನ್ನು ಆಸ್ಟ್ರೇಲಿಯಾದ ದೈತ್ಯ ಗ್ಲೇನ್ ಮ್ಯಾಕ್ಸ್​ವೆಲ್ ಬಗ್ಗೆಯಂತೂ ಹೇಳಲೇಬೇಕು. ಒಂದಂತೂ ನಿಜ.. ಆಸ್ಟ್ರೇಲಿಯಾದ ಎಷ್ಟೇ ವಿಕೆಟ್​​ಗಳು ಹೋಗಿರಲಿ, ಗ್ಲೇನ್ ಮ್ಯಾಕ್ಸ್​ವೆಲ್​ ಕ್ರೀಸ್​​ನಲ್ಲಿರೋವರೆಗೂ ರಿಸಲ್ಟ್ ಬಗ್ಗೆ ಏನನ್ನೂ ಹೇಳೋಕೆ ಸಾಧ್ಯವಿಲ್ಲ. ಮ್ಯಾಕ್ಸ್​ವೆಲ್​​ರನ್ನ ಔಟ್ ಮಾಡೋವರೆಗೂ ಬೌಲಿಂಗ್ ಟೀಂ ರಿಲ್ಯಾಕ್ಸ್ ಆಗೋಕೆ ಸಾಧ್ಯವೇ ಇಲ್ಲ. ಎಂಥಾ ಮ್ಯಾಚ್​​ನ್ನ ಬೇಕಾದ್ರೂ ಮ್ಯಾಕ್ಸ್​ವೆಲ್​ ಟರ್ನ್ ಮಾಡಿ ಬಿಡ್ತಾರೆ. ಮ್ಯಾಚ್​​ ವಿನ್​ ಮಾಡಿಸಿಕೊಡುವಂಥಾ ಸ್ಪೆಷಲ್ ಎಬಿಲಿಟಿ ಮ್ಯಾಕ್ಸ್​​ವೆಲ್​ಗೆ ಇದೆ. ವರ್ಲ್ಡ್​​ ಕ್ರಿಕೆಟ್​ ಇಂಥಾ ಸಾಮರ್ಥ್ಯವಿರೋ ಕೆಲವೇ ಕೆಲ ಆಟಗಾರರನ್ನ ಕಂಡಿದೆಯಷ್ಟೇ. ಅದ್ರಲ್ಲೂ ಮ್ಯಾಕ್ಸ್​ವೆಲ್​ರಂಥಾ ಬ್ಯಾಟ್ಸ್​​ಮನ್​ ಈಗ ಯಾರೂ ಕೂಡ ಇಲ್ಲ. ಕೇವಲ 48 ಬಾಲ್​ಗಳಲ್ಲಿ 104 ರನ್ ಚಚ್ಚಿದ್ರು. 8 ಬೌಂಡರಿ, 8 ಸಿಕ್ಸರ್​ಗಳನ್ನ ಹೊಡೆದಿದ್ದಾರೆ. ಎಷ್ಟೇ ಪ್ರೆಷರ್ ಇದ್ರೂ ಗ್ಲೇನ್ ಮ್ಯಾಕ್ಸ್​ವೆಲ್​ ಕೂಲ್ ಆಗಿಯೇ ತಮ್ಮ ನ್ಯಾಚ್ಯುರಲ್ ಸ್ಟೈಲ್​ನಲ್ಲಿ ಬ್ಯಾಟಿಂಗ್ ಮಾಡ್ತಾರೆ. ಕೊನೆಯ ಓವರ್​ನಲ್ಲಿ 21 ರನ್​ಗಳು ಬೇಕಿದ್ರು ಕೂಡ ಮ್ಯಾಕ್ಸ್​ವೆಲ್​ ಮುಖದಲ್ಲಿ ಸ್ವಲ್ಪವೂ ಟೆನ್ಷನ್​ ಇರಲಿಲ್ಲ. ಲಾಸ್ಟ್ 2 ಬಾಲ್​ಗಳಲ್ಲಿ 6 ರನ್​ಗಳು ಬೇಕಾಗಿತ್ತು. ಈ ವೇಳೆ, ಕ್ಯಾಪ್ಟನ್​​ ಸೂರ್ಯಕುಮಾರ್ ಯಾದವ್ ಭಾರಿ ಪ್ಲ್ಯಾನಿಂಗ್ ಮಾಡ್ತಾ ಇದ್ರು. ಇದನ್ನ ನೋಡಿ ಗ್ಲೇನ್​​ ಮ್ಯಾಕ್ಸ್​ವೆಲ್ ಅಕ್ಷರಶ: ನಗ್ತಾ ಇದ್ರು. ನಾವು ವರ್ಲ್ಡ್​ಕಪ್​ನಲ್ಲಿ ಆಡಿ, ಗೆದ್ದು ಬಂದವರು ಇವರೆಲ್ಲಾ ಯಾವ ಲೆಕ್ಕ ಅನ್ನೋ ರೀತಿಯಲ್ಲೇ ನಮ್ಮ ಬೌಲರ್ಸ್​ಗಳು ಮ್ಯಾಕ್ಸ್​ವೆಲ್ ಟ್ರೀಟ್ ಮಾಡಿದ್ರು. ಮ್ಯಾಕ್ಸ್​​ವೆಲ್​ ಪಾಲಿಗೆ ಇದು ಇನ್ನೊಂದು ನಾರ್ಮಲ್ ಮ್ಯಾಚ್​ ಆಗಿತ್ತಷ್ಟೇ. ಜಸ್ಟ್ ಎನಾದರ್ ಗೇಮ್​..ಈ ಮೆಂಟಾಲಿಟಿಯಿಂದಾಗಿಯೇ ಮ್ಯಾಕ್ಸ್​ವೆಲ್​ಗೆ ಇಂಥಾ ಇನ್ನಿಂಗ್ಸ್​​ಗಳನ್ನ ಆಡೋಕೆ ಸಾಧ್ಯವಾಗ್ತಾ ಇರೋದು. ಇಂಪಾಸಿಬಲ್ ಅನ್ನೋ ವರ್ಡೇ ಮ್ಯಾಕ್ಸ್​ವೆಲ್​ ಡಿಕ್ಷನರಿಯಲ್ಲೇ ಇಲ್ಲ. ಇನ್ನು ಮ್ಯಾಚ್​ ಸೋತ ಬಳಿಕ ಮ್ಯಾಕ್ಸ್​ವೆಲ್​ ಕುರಿತಾಗಿ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಕೂಡ ಒಂದು ವಿಚಾರವನ್ನ ಬಹಿರಂಗ ಪಡಿಸಿದ್ದಾರೆ. ಬೌಲಿಂಗ್​ಗೆ ಇಳಿಯೋ ಮುನ್ನ ಕೊನೆಯ ಕ್ಷಣದ ಟೀಂ ಮೀಟಿಂಗ್​​ನಲ್ಲಿ ಗ್ಲೇನ್ ಮ್ಯಾಕ್ಸ್​​ವೆಲ್​​ ಔಟ್​ ಮಾಡೋದನ್ನೇ ಮೇನ್ ಟಾರ್ಗೆಟ್ ಆಗಿ ಇಟ್ಟುಕೊಂಡಿದ್ರಂತೆ. ಮ್ಯಾಕ್ಸ್​ವೆಲ್​​ರನ್ನ ಆದಷ್ಟು ಬೇಗ ಔಟ್ ಮಾಡಬೇಕು ಅಂತಾ ಎಲ್ಲಾ ಬೌಲರ್ಸ್​ಗಳಿಗೂ ಹೇಳಿದ್ರಂತೆ. ಆದ್ರೆ ಇಷ್ಟೆಲ್ಲಾ ಪ್ಲ್ಯಾನ್ ಮಾಡಿದ್ರೂ ಮ್ಯಾಕ್ಸ್​​ವೆಲ್ಲ ಎಲ್ಲಾ ಅಡಿಮೇಲು ಮಾಡಿದ್ದಾರೆ ಅಂದ್ರೆ ಊಹಿಸ್ಕೊಳ್ಳಿ. ಕೆಲವೊಮ್ಮೆ ಹಾಗೆಯೇ ಮ್ಯಾಕ್ಸ್​ವೆಲ್​ರಂಥಾ ಬ್ಯಾಟ್ಸ್​​ಮನ್​ಗಳಿಗೆ ಏನೇ ಪ್ಲ್ಯಾನ್​ ಮಾಡಿದ್ರೂ ಅದು ವರ್ಕೌಟ್ ಆಗೋದಿಲ್ಲ. ಇಲ್ಲೂ ಆಗಿರೋದಿಷ್ಟೇ..ಅದಕ್ಕೆ ಸರಿಯಾಗಿ ನಮ್ಮ ಬೌಲರ್ಸ್​ಗಳು ಮಾಡಿರೋ ಪ್ಲ್ಯಾನ್​ನನ್ನ ಸರಿಯಾಗಿ ಎಕ್ಸಿಕ್ಯೂಟ್ ಕೂಡ ಮಾಡಿಲ್ಲ. ಟೋಟಲ್ಲಿ ಇದು ನಮ್ಮ ಬೌಲರ್ಸ್​​ಗಳ ಫೇಲ್ಯೂರ್​ ಅಷ್ಟೇ. ಬೌಲಿಂಗ್​​ ಇಂಪ್ರೂವ್​​ಮೆಂಟ್ ಆಗಿಲ್ಲ ಅಂದ್ರೆ, ಈ ಸೀರಿಸ್ ಸೋತ್ರೂ ಆಶ್ಚರ್ಯ ಇಲ್ಲ.

Sulekha