ಇಶಾನ್ ಕಿಶನ್‌ಗೆ ಹೊಟ್ಟೆಕಿಚ್ಚು ಯಾಕೆ? – ಕೋಚ್ ರಾಹುಲ್ ದ್ರಾವಿಡ್ ವಾರ್ನಿಂಗ್ ಮಾಡಿದ್ಯಾಕೆ?

ಇಶಾನ್ ಕಿಶನ್‌ಗೆ ಹೊಟ್ಟೆಕಿಚ್ಚು ಯಾಕೆ? – ಕೋಚ್ ರಾಹುಲ್ ದ್ರಾವಿಡ್ ವಾರ್ನಿಂಗ್ ಮಾಡಿದ್ಯಾಕೆ?

ಇಶಾನ್ ಕಿಶನ್ ಈಗಾಗ್ಲೇ ಟೀಂನಿಂದ ಔಟಾಗಿದ್ದಾರೆ. ಯಾವ ಸೀರಿಸ್​​ಗೂ ಕೂಡ ಇಶಾನ್​ರನ್ನ ಪಿಕ್ ಮಾಡ್ತಾ ಇಲ್ಲ. ಇಶಾನ್ ಕಿಶನ್ ಅರ್ಧದಲ್ಲೇ ಟೀಮ್ ಇಂಡಿಯಾವನ್ನು ತೊರೆಯಲು ಮತ್ತೋರ್ವ ಆಟಗಾರನ ಆಯ್ಕೆ ಕಾರಣ. ಇದನ್ನು ಸಹಿಸಲಾಗದೆ ಹೊಟ್ಟೆಕಿಚ್ಚಿನಿಂದ ಹೊರ ಹೋಗಿದ್ದಾರೆ ಎನ್ನಲಾಗಿದೆ. ಈ ಹಿಂದೆಯೇ ಕೋಚ್ ರಾಹುಲ್ ದ್ರಾವಿಡ್ ಡೊಮೆಸ್ಟಿಕ್ ಕ್ರಿಕೆಟ್ ಆಡಿ ಬರುವಂತೆ ಇಶಾನ್ ಕಿಶನ್​ಗೆ ಸೂಚನೆ ಬೇರೆ ಕೊಟ್ಟಿದ್ರು. ಬಟ್ ಇಶಾನ್ ಮಾತ್ರ ಡೋಂಟ್ ಕೇರ್ ಅಂತಿದ್ದಾರೆ. ರಣಜಿಯಾಗಲಿ ಯಾವುದೇ ಫಸ್ಟ್ ಕ್ಲಾಸ್​​ ಮ್ಯಾಚ್​​ಗಳನ್ನ ಆಡ್ತಾ ಇಲ್ಲ. ಅಷ್ಟೇ ಯಾಕೆ, ಇಶಾನ್ ಕಿಶನ್ ಎಲ್ಲಿದ್ದಾರೆ? ಏನ್ಮಾಡ್ತಾ ಇದ್ದಾರೆ ಅನ್ನೋದೆ ಯಾರಿಗೂ ಗೊತ್ತಿಲ್ಲ. ಆದ್ರೆ ಕೋಚ್​ ರಾಹುಲ್ ದ್ರಾವಿಡ್​ ಮತ್ತೊಮ್ಮೆ ಇಶಾನ್​ ಕಿಶನ್​ಗೆ ವಾರ್ನಿಂಗ್ ಮಾಡಿದ್ದಾರೆ.

ಇದನ್ನೂ ಓದಿ: ದ್ರಾವಿಡ್ ಸೂಚನೆಗೂ ಅಹಂಕಾರಿ ಇಶಾನ್ ಕಿಶನ್ ಡೋಂಟ್‌ಕೇರ್‌- ಟೀಂ ಇಂಡಿಯಾ ಬಾಗಿಲು ಬಂದ್?

ಇಶಾನ್ ಕಿಶನ್ ಒಬ್ಬ ಗ್ರೇಟ್ ಟ್ಯಾಲೆಂಟ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಬಟ್ ಇಶಾನ್​​ ಕಿಶನ್ ಅದೇನೋ ಟ್ರಬಲ್​​​ನಲ್ಲಿ ಸಿಕ್ಕಿ ಹಾಕಿಕೊಂಡಿರುವಂತೆ ಕಾಣ್ತಿದೆ. ಇಂಡಿಯನ್​​ ಟೀಮ್​ನಲ್ಲಂತೂ ಆಡ್ತಿಲ್ಲ. ಆದ್ರೆ ಫಸ್ಟ್​ ಕ್ಲಾಸ್ ಕ್ರಿಕೆಟ್​​ ಸೇರಿದಂತೆ ಇತರೆ ಯಾವುದೇ ಟೂರ್ನಿಯಲ್ಲೂ ಇಶಾನ್ ಕಿಶನ್​ ಆಡ್ತಿಲ್ಲ. ಈ ಹಿಂದೆ ಕೋಚ್ ದ್ರಾವಿಡ್ ಒಂದಷ್ಟು ಡೊಮೆಸ್ಟಿಕ್ ಮ್ಯಾಚ್​​ಗಳನ್ನ ಅಡಿ ಬರುವಂತೆ ಇಶಾನ್​ ಕಿಶನ್​​ಗೆ ಸಲಹೆ ಕೊಟ್ಟಿದ್ರು. ಆದ್ರೆ ಇಶಾನ್ ಮಾತ್ರ ಇದುವರೆಗೂ ಡೊಮೆಸ್ಟಿಕ್​ ಮ್ಯಾಚ್​​ಗಳಲ್ಲಿ ಆಡೋಕೆ ಮುಂದಾಗಿಲ್ಲ. ಇಂಗ್ಲೆಂಡ್ ವಿರುದ್ಧದ ಸೆಕೆಂಡ್ ಟೆಸ್ಟ್​ ಬಳಿಕ ಇಶಾನ್​​ ಕಿಶನ್ ವಿಚಾರವಾಗಿ ಕೋಚ್​ ರಾಹುಲ್​ ದ್ರಾವಿಡ್​​ರನ್ನ ಮತ್ತೆ ಪ್ರಶ್ನೆ ಮಾಡಲಾಗಿದ್ದು, ಈ ವೇಳೆ ದ್ರಾವಿಡ್ ನೀಡಿರೋ ಸ್ಟೇಟ್​ಮೆಂಟ್ ಈಗ ಟಾಕಿಂಗ್​ ಪಾಯಿಂಟ್ ಆಗಿದೆ. ದ್ರಾವಿಡ್ ಹೇಳಿರೋ ಪ್ರಕಾರ ಇಶಾನ್ ಕಿಶನ್ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ಬ್ರೇಕ್ ಬೇಕು ಅಂತಾ ಕೇಳಿದ್ರಂತೆ. ಹೀಗಾಗಿ ಇಶಾನ್​ಗೆ ಬ್ರೇಕ್ ನೀಡಲಾಗಿದೆ. ಆದ್ರೆ ಮತ್ತೆ ಟೀಂ ಇಂಡಿಯಾ ಪರ ಆಡೋಕೆ ರೆಡಿ ಇದ್ದಾರೆ ಅನ್ನೋದಾದ್ರೆ ಒಂದಷ್ಟು ಕ್ರಿಕೆಟ್​​ ಮ್ಯಾಚ್​ಗಳನ್ನ ಆಡಲೇಬೇಕು. ಹಾಗಂತಾ ಡೊಮೆಸ್ಟಿಕ್​ ಮ್ಯಾಚ್​​ಗಳನ್ನೇ ಆಡ್ಬೇಕು ಅಂತಾ ಹೇಳ್ತಿಲ್ಲ. ಸಮ್​ ಫಾರ್ಮ್ ಆಫ್ ಕ್ರಿಕೆಟ್ ಆಡಲೇಬೇಕು ಅನ್ನೋದಾಗಿ ದ್ರಾವಿಡ್ ಹೇಳಿದ್ದಾರೆ.

ಮತ್ತೊಂದೆಡೆ ಟೀಮ್ ಇಂಡಿಯಾಕ್ಕೆ ಮತ್ತೊಬ್ಬ ವಿಕೆಟ್ ಕೀಪರ್ ನ ಎಂಟ್ರಿಯಾಗಿದೆ. ಜಿತೇಶ್ ಶರ್ಮಾ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್​ಮನ್. ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್ ಆಗಿದ್ದ ಕಾರಣ ಅವರನ್ನು ಸೌತ್ ಆಫ್ರಿಕಾ ವಿರುದ್ಧ ಟಿ20 ಸರಣಿಯಲ್ಲಿ ಕಣಕ್ಕಿಳಿಸಲಾಗಿತ್ತು. ಇದರಿಂದ ಇಶಾನ್ ಕಿಶನ್ ಅವಕಾಶ ವಂಚಿತರಾಗಿದ್ದರು. ಈ ಬಗ್ಗೆ ಟೀಮ್ ಮ್ಯಾನೇಜ್ಮೆಂಟ್​ ಜೊತೆ ಇಶಾನ್ ಅಸಮಾಧಾನ ವ್ಯಕ್ತಪಡಿಸಿದ್ದರು. ಇದಾದ ನಂತರ ಇಶಾನ್ ಕಿಶನ್ ರಣಜಿ ಟ್ರೋಫಿಯಲ್ಲಿ ಜಾರ್ಖಂಡ್‌ ಪರವಾಗಿ ಕಣಕ್ಕಿಳಿದಿಲ್ಲ. ಇದೀಗ ಯುವ ವಿಕೆಟ್ ಕೀಪರ್​ನ ನಡೆಯ ಬಗ್ಗೆ ಚರ್ಚೆಗಳು ಶುರುವಾಗಿದ್ದು, ಜಿತೇಶ್ ಶರ್ಮಾಗೆ ತಂಡದಲ್ಲಿ ಸ್ಥಾನ ನೀಡಿದಕ್ಕೆ ಇಶಾನ್ ಕಿಶನ್ ಹೊಟ್ಟೆಕಿಚ್ಚು ಪಟ್ಟಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

 

Sulekha