ಪಾಂಡ್ಯ ಕಣ್ಣೀರಿಗೆ ಇದೇ ಕಾರಣ? – ನತಾಶಾಗೆ ಯಾಕಿಷ್ಟು ಧಿಮಾಕು?
ಗಂಡನ ಸಾಧನೆಗೆ ಬೆಲೆ ಇಲ್ವಾ?

ಪಾಂಡ್ಯ ಕಣ್ಣೀರಿಗೆ ಇದೇ ಕಾರಣ? – ನತಾಶಾಗೆ ಯಾಕಿಷ್ಟು ಧಿಮಾಕು?ಗಂಡನ ಸಾಧನೆಗೆ ಬೆಲೆ ಇಲ್ವಾ?

13 ವರ್ಷಗಳ ಕನಸು, ನಿರೀಕ್ಷೆ ಕೊನೆಗೂ ಈಡೇರಿದೆ. ಟಿ20 ವಿಶ್ವಕಪ್ನಲ್ಲಿ ಹರಿಣಗಳ ಬೇಟೆಯಾಡಿದ ಇಂಡಿಯನ್ ಟೈಗರ್ಸ್, ಚಾಂಪಿಯನ್ ಆಗಿದ್ದಾರೆ. ಕಪ್ ಗೆಲ್ಲುತ್ತಿದ್ದಂತೆ ಮೈದಾನದಲ್ಲಿ ಭಾವುಕತೆ ಉಕ್ಕಿ ಹರಿದಿತ್ತು. ಕ್ರಿಕೆಟರ್ಸ್ ಜೊತೆಗೆ ಅಭಿಮಾನಿಗಳ ಕಣ್ಣಲ್ಲೂ ಸಂತಸದ ಕಣ್ಣೀರು ಜಿನುಗುತ್ತಿತ್ತು. ಅದ್ರಲ್ಲೂ ಹಾರ್ದಿಕ್ ಪಾಂಡ್ಯ ಅವ್ರನ್ನು ಮರೆಯಲು ಸಾಧ್ಯವೇ ಇಲ್ಲ ಬಿಡಿ. ಹಾರ್ದಿಕ್ ಪಾಂಡ್ಯ ಬಿಕ್ಕಿ ಬಿಕ್ಕಿ ಅತ್ತಿದ್ರು.. ಐಪಿಎಲ್ ಸಮಯದಲ್ಲಿ ಭಾರತೀಯರಿಂದಲೇ ಸಾಕಷ್ಟು ಟೀಕೆ, ಆಕ್ರೋಶಕ್ಕೆ ಗುರಿಯಾಗಿ ವಿಲನ್ ಆಗಿದ್ದ ಹಾರ್ದಿಕ್ ಈಗ ಭಾರತೀಯರಿಗೆ ತಾನೊಬ್ಬ ಹೀರೋ ಅಂತಾ ತೋರಿಸಿಕೊಟ್ಟ ಖುಷಿಗೋ, ಇಲ್ಲ ತನ್ನ ಸಾಮರ್ಥ್ಯ ಎಲ್ಲರಿಗೂ ಈಗಲಾದ್ರೂ ಗೊತ್ತಾಯ್ತಲ್ಲ ಎಂಬ ಸಮಧಾನಕ್ಕೋ ಮನಸು ಬಿಚ್ಚಿ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ರು. ಇದೀಗ ಫ್ಯಾನ್ಸ್ ಪಾಂಡ್ಯ ಅವ್ರನ್ನ ಇವರೇ ರಿಯಲ್ ಗೇಮ್ ಚೇಂಜರ್ ಅಂತಾ ಹಾಡಿ ಹೊಗಳ್ತಿದ್ದಾರೆ.. ಇಡೀ ಜಗತ್ತೇ ಕೊಂಡಾಡುವಾಗ, ಇಡೀ ದೇಶವೇ ಪಾಂಡ್ಯಾ ಸಾಧನೆಗೆ ಹೆಮ್ಮೆ ಪಡುತ್ತಿರುವಾಗ ಮನೆಯವರಿಗೆ ಅದೆಷ್ಟೋ ಖುಷಿಯಾಗೋದಿಲ್ಲ ಹೇಳಿ. ಕುಟುಂಬದವರಿಗಾಗುವ ಹೆಮ್ಮೆ ಅಭಿಮಾನ ಬಣ್ಣಿಸಲು ಪದಗಳೇ ಸಾಕಾಗಲ್ಲ. ಆದ್ರೆ, ಹಾರ್ದಿಕ್‌ರನ್ನ ಎಲ್ಲರೂ ಹಾಡಿ ಹೊಗಳ್ತಿದ್ರೆ ಅತ್ತ ಪಾಂಡ್ಯ ಪತ್ನಿ ಮಾತ್ರ ತನಗೂ ಪಾಂಡ್ಯ ಗೆಲುವುಗೂ ಯಾವುದೇ ಸಂಬಂಧ ಇಲ್ಲ ಅನ್ನೋ ತರ ಇದ್ದಾರೆ.. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.. ಅಷ್ಟಕ್ಕೂ ನತಾಶ ಈ ನಿಗೂಢ ನಡೆ ಯಾಕೆ? ಪಾಂಡ್ಯ ಕಣ್ಣೀರು ಹಾಕಿದ್ದು ಯಾವ ಕಾರಣಕ್ಕಾಗಿ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂಓದಿ: RCBಗೆ ಕೋಚ್ & ಮೆಂಟರ್ DK – ಬ್ಯಾಟಿಂಗ್ ಬೂಸ್ಟ್ ಕೊಡ್ತಾರಾ ಸ್ಟಾರ್?

ಬೆಂಬಿಡದ ಅವಮಾನ.. ಸಾಲು ಸಾಲು ಟೀಕೆ.. ಅಭಿಮಾನಿಗಳಿಂದಲೇ ಟ್ರೋಲ್.. ಪತ್ನಿಯ ನಿಗೂಢ ನಡೆ.. ಪಾಂಡ್ಯ ಕಳೆದ ಕೆಲ ತಿಂಗಳಿನಿಂದ ಅಷ್ಟರಶಃ ಕುಗ್ಗಿ ಹೋಗಿದ್ರು.. ಅಳುವುದಕ್ಕೂ ಆಗದೇ ನಗುವುದಕ್ಕೂ ಆಗದೇ ಚಪ್ರಿ ಅಂತಾ ಕರೆಸಿಕೊಂಡು ಒಳಗೊಳಗೊಳಗೆ ನೋವು ಅನುಭವಿಸುತ್ತಿದ್ರು. ಮೈದಾನದಲ್ಲೇ ಅದೆಷ್ಟೇ ನೋವು ಮರೆಮಾಚಲು ಯತ್ನಿಸಿದ್ರೂ ಅವ್ರ ಪೇಲವ ನಗು ಎಲ್ಲವನ್ನೂ ಸಾರಿ ಸಾರಿ ಹೇಳುತ್ತಿತ್ತು. ಐಪಿಎಲ್‌ನಲ್ಲಿ ಇಂಥಾ ಅದೆಷ್ಟೋ ಕ್ಷಣಗಳಿಗೆ ಸಾಕ್ಷಿಯಾಗಿದ್ರು ಹಾರ್ದಿಕ್ ಪಾಂಡ್ಯ. ಅತ್ತ ಮುಂಬೈ ಇಂಡಿಯನ್ಸ್‌ಲ್ಲಾದ ಬೆಳವಣಿಗೆಗೆಳು, ರೋಹಿತ್ ಶರ್ಮಾ ನಾಯಕತ್ವ ಕಿತ್ತುಕೊಂಡ ಅನ್ನೋ ರೀತಿ ಕೇಳಿ ಬಂದ ಅವಮಾನ, ಟೀಕೆ, ಅದೇ ಸಮಯದಲ್ಲಿ ವೈಯಕ್ತಿಕ ಬದುಕಿನಲ್ಲಾದ ಗಾಸಿಪ್, ಇದೆಲ್ಲಾ ಸೇರಿ ಹಾರ್ದಿಕ್ ಪಾಂಡ್ಯ ಅವರನ್ನ ಯಾವ ರೀತಿ ಕುಗ್ಗಿಸಿತ್ತು ಅಂದ್ರೆ, ಬೇರೆ ಯಾರಾದರೂ ಫಾರ್ಮ್ ಕಳೆದುಕೊಂಡು ಫ್ಲೈಯಿಂಗ್ ಲೆವೆನ್‌ನಿಂದ ಹೊರಗೆ ಇರುತ್ತಿದ್ರು. ಆದ್ರೆ, ಹಾರ್ದಿಕ್ ಪಾಂಡ್ಯಾಗೆ ಹಾರ್ದಿಕ್ ಪಾಂಡ್ಯಾನೇ ಸಾಕ್ಷಿ. ಆ ವಿಲ್ ಪವರ್, ತನ್ನ ತೋಳ್ಬಲದಲ್ಲಿರೋ ಸ್ಟ್ರೆಂಥ್ ಮಾತ್ರ ನಂಬಿಕೊಂಡಿದ್ದರು ಪಾಂಡ್ಯ. ಹೀಗಾಗಿ ಟಿ20 ವಿಶ್ವಕಪ್‌ನಲ್ಲಿ ತಾನು ಯಾರೆಂದು ತನ್ನನ್ನು ಟೀಕಿಸಿದವರಿಗೆ ಪ್ರೂವ್ ಮಾಡಿ ತೋರಿಸಿದ್ರು. ತನ್ನನ್ನು ಝೀರೋ ಅಂದವರಿಗೆ ತಾನೊಬ್ಬ ಹೀರೋ ಅನ್ನೋದನ್ನು ತೋರಿಸಿಕೊಟ್ರು. ಇಷ್ಟೆಲ್ಲಾ ಮಾಡಿದ ಮೇಲೆ ಆ ಗಳಿಗೆಯೂ ಬಂದೇ ಬಿಟ್ಟಿತು. ಹಾರ್ದಿಕ್ ಪಾಂಡ್ಯರ ತಪಸ್ಸು ಚಾಂಪಿಯನ್ ಆಗೋ ಮೂಲಕ ಈಡೇರಿತ್ತು. ವಿಶ್ವಕಪ್ ಕೈಗೆ ಬರುತ್ತಿದ್ದಂತೆ, ಪಾಂಡ್ಯ ಬಿಕ್ಕಿ ಬಿಕ್ಕಿ ಅತ್ತಿದ್ರು.. ಕಣ್ಣಿಂದ ಹೊರಬೀಳುತ್ತಿದ್ದ ಪ್ರತಿ ಹನಿಯೂ ಹಾರ್ದಿಕ್​ ಎದೆಯಲ್ಲಿ ಹುದುಗಿದ್ದ ನೋವಿನ ಒಂದೊಂದೇ ಕಥೆಯನ್ನ ಬಿಡಿಸಿ ಹೇಳುತ್ತಿತ್ತು.  ಇದನ್ನ ನೋಡಿದ್ರೇನೆ ಗೊತ್ತಾಗುತ್ತೆ ಪಾಂಡ್ಯ ಮನಸ್ಸಿನಲ್ಲಿ ಅದೆಷ್ಟು ನೋವೆಷ್ಟಿತ್ತು ಅಂತಾ.. ಹಾರ್ದಿಕ್ ಆಟಕ್ಕೆ ಭಾರತೀಯರಿಂದ ಪ್ರಶಂಸೆಯ ಸುರಿಮಳೆಯೇ ಹರಿದು ಬರ್ತಾ ಇದೆ.. ಆದ್ರೆ ಯಾರು ಎಷ್ಟು ಹೊಗಳಿ ಅಟ್ಟಕ್ಕೆ ಏರಿಸಿದ್ರು ಏನು.. ಮನಸ್ಸಿಗೆ ಹತ್ತಿರ ಆದವರ ಒಂದು ವಿಶ್‌ಗಾಗಿ ಮನಸ್ಸು ಕಾಯ್ತಾ ಇರುತ್ತೆ ಅಲ್ವಾ?

ಪಂದ್ಯ ಗೆಲುವಿನ ಬಳಿಕ ಪ್ರತಿ ಆಟಗಾರರ ಮನೆಯವರು ಸಂಭ್ರಮಿಸಿದ್ರು.. ಎಲ್ಲರೂ ಖುಷಿಯಲ್ಲಿ ತೇಲಾಡಿದ್ರು.. ಆದ್ರೆ ಪಾಂಡ್ಯ ವಿಚಾರದಲ್ಲಿ ಮಾತ್ರ ಹೀಗಿಲ್ಲ.. ಪತ್ನಿ ನತಾಶ  ಈ ಸಾಧನೆಯ ಬಗ್ಗೆ ಒಂದೇ ಒಂದು ಮೆಚ್ಚುಗೆ ವ್ಯಕ್ತಪಡಿಸಿಲ್ಲ.. ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ರೂ ಒಂದೇ ಒಂದು ಪೋಸ್ಟ್ ಹಾಕಿಲ್ಲ.. ಇದು ಪಾಂಡ್ಯ ಮಾತ್ರವಲ್ಲ ಅವರ ಅಭಿಮಾನಿಗಳಿಗೂ ಬೇಜಾರು ತರಿಸಿದೆ.

ಹಾರ್ದಿಕ್ ಪಾಂಡ್ಯ ಅವರ ಡಿವೋರ್ಸ್ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದು ನಿಮಗೆಲ್ಲ ಗೊತ್ತೇ ಇದೆ.  ನತಾಶ ಹಾಗೂ ಪಾಂಡ್ಯ ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಮೂಡಿದ್ದು ಬೇರೆ ಬೇರೆಯಾಗುತ್ತಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಕೇಳಿಬಂದಿತ್ತು. ಸದ್ಯ ಈ ಸುದ್ದಿ ತಣ್ಣಗಾಗಿದ್ದರೂ ಇಬ್ಬರು ಡಿವೋರ್ಸ್ ವದಂತಿ ಬಗ್ಗೆ ಸ್ಪಷ್ಟನೆ ನೀಡದೇ ಇರುವುದರಿಂದ ವದಂತಿ ಜೀವಂತವಾಗಿಯೇ ಇದೆ. ಆದ್ರೆ,  ಟಿ20 ವಿಶ್ವಕಪ್ ಫೈನಲ್ ಪಂದ್ಯ ಆರಂಭಕ್ಕೂ ಮುನ್ನ ನತಾಶಾ ಇನ್ ಸ್ಟಾಗ್ರಾಂ ನಲ್ಲಿ ಸ್ಟೋರಿವೊಂದನ್ನ ಹಾಕಿದ್ರು.. ಇದು ಸಿಕ್ಕಾಪಟ್ಟೆ  ವೈರಲ್ ಆಗಿತ್ತು. ಪಂದ್ಯ ಆರಂಭಕ್ಕೂ ಮುನ್ನ ನತಾಶಾ ಜಿಮ್ನಲ್ಲಿ ಡಾನ್ಸ್ ಮಾಡುತ್ತಿರುವ ವಿಡಿಯೋವನ್ನು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದರು. ವಿಡಿಯೋ ಜತೆಗೆ ನನ್ನ ದಿಗಂತದಲ್ಲಿರುವ ಸೂರ್ಯ ನೀನು ಎಂಬ ಅಡಿಬರಹ ಬರೆದುಕೊಂಡಿದ್ದರು. ತಾವು ಡಾನ್ಸ್ ಮಾಡುತ್ತಿದ್ದ ಹಾಡಿನ ಸಾಲುಗಳನ್ನೇ ನತಾಶಾ ಬರೆದುಕೊಂಡಿದ್ದರು. ಇದನ್ನ ನೋಡಿದ ಅನೇಕರು ನತಾಶ ಪಾಂಡ್ಯ ಕುರಿತು ಬರೆದಿರುವ ಪೋಸ್ಟ್ ಅಂತಾ ಅಂದುಕೊಂಡಿದ್ರು.. ಆದ್ರೆ ಈ ಪೋಸ್ಟ್ ನಲ್ಲಿ ಯಾರನ್ನ ಕೂಡ ಟ್ಯಾಗ್ ಮಾಡಿರ್ಲಿಲ್ಲ.. ಇದು ಮತ್ತಷ್ಟು ಅನುಮಾನಗಳಿಗೆ ಕಾರಣ ಆಗಿದೆ.

ಆದ್ರೆ ಹಾರ್ದಿಕ್ ಪಾಂಡ್ಯ ಫೈನಲ್ ಪಂದ್ಯದ ಬಳಿಕ ಪಾಂಡ್ಯ ವಿಡಿಯೋ ಕಾಲ್ನಲ್ಲಿ ಮಾತನಾಡಿದ್ರು.. ಪಾಂಡ್ಯ ವಿಡಿಯೋ ಕಾಲ್ನಲ್ಲಿ  ಮಾತನಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದನ್ನ ಕಂಡ ಸಾಕಷ್ಟು ಮಂದಿ  ನತಾಶಾ ವಿಡಿಯೋ ಕಾಲ್ ಮೂಲಕ ಪಾಂಡ್ಯ ಜತೆ ಮಾತನಾಡಿ ಅಭಿನಂದನೆ ಸಲ್ಲಿಸಿದ್ದಾರೆ ಅಂತಾ ಹೇಳ್ತಾ ಇದ್ದಾರೆ.. ಆದ್ರೆ ನತಾಶ ನಡೆ ನೋಡಿದ್ರೆ ಕಾಲ್ ಮಾಡಿದ್ದು ಬೇರೆ ಯಾರೋ ಅನ್ನಿಸುತ್ತಿದೆ ಅಂತಾ ಅಭಿಮಾನಿಗಳು ಹೇಳ್ತಾ ಇದ್ದಾರೆ. ಅಷ್ಟೇ ಅಲ್ಲ ಆ ವಿಡಿಯೋ ಕಾಲ್ನಲ್ಲಿ ಪಾಂಡ್ಯ ಜತೆ ಮಾತನಾಡಿದ್ದು ಯಾರು ಎಂಬ ಪ್ರಶ್ನೆ ಮೂಡಿದೆ. ಆದರೆ, ನತಾಶಾ ಈವರೆಗೂ ಟೀಮ್ ಇಂಡಿಯಾ ವಿಶ್ವಕಪ್ ಜಯಿಸಿದ್ದರ ಬಗ್ಗೆ ಒಂದೇ ಒಂದು ಪೋಸ್ಟ್ ಮಾಡಿಲ್ಲ. ಪ್ರತಿಕ್ರಿಯೆ ಸಹ ನೀಡಿಲ್ಲ.

ಇವಾಗ ಯಾರೇ ಆಗಿರ್ಲಿ ಗಂಡನ ಸಾಧನೆ ಮಾಡಿದ್ದಾನೆ ಅಂದ್ರೆ ಆತನ ಮೇಲೆ ಸಿಟ್ಟಿದ್ರೂ ಮ್ಯಾಟರ್ ಆಗಲ್ಲ.. ಸಿಟ್ಟನ್ನೆಲ್ಲಾ ಬದಿಗಿಟ್ಟು ಖುಷಿ ಪಡ್ತಾರೆ.. ಒಂದು ವಿಶ್ ಮಾಡ್ತಾರೆ.. ಆದ್ರೆ ನತಾಶ ನಡೆ ಹಾಗಿಲ್ಲ.. ಜಿಮ್ ನಲ್ಲಿ ವರ್ಕೌಟ್ ಮಾಡ್ತಾರೆ.. ಸೋಶಿಯಲ್ ಮೀಡಿಯಾದಲ್ಲೂ ಆಕ್ಟಿವ್ ಆಗಿದ್ದಾರೆ.. ಫೈನಲ್ ನಲ್ಲಿ ಟೀಮ್ ಇಂಡಿಯಾ ಗೆಲುವಿಗೆ ತಮ್ಮ ಪತಿ ಪಾಂಡ್ಯ ಕೂಡ ಕಾರಣ. ಗಂಡನ ಸಾಧನೆಯ ಬಗ್ಗೆ ಒಂದೇ ಒಂದು ಮೆಚ್ಚುಗೆ ಮಾತುಗಳಿಲ್ಲ.. ಇದು ಈಗ ಪಾಂಡ್ಯ ಅಭಿಮಾನಿಗಳನ್ನ ಕೆರಳುವಂತೆ ಮಾಡಿದೆ. ಇದೆಲ್ಲಾ ನೋಡಿದರೆ ಪಾಂಡ್ಯ ಮತ್ತು ನತಾಶಾ ಬೇರೆಯಾಗಿರುವುದು ಖಚಿತವಾದಂತಿದೆ. ಡಿವೋರ್ಸ್ ಪಕ್ಕಾ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಪಾಂಡ್ಯ ಐಪಿಎಲ್ ವೇಳೆ ಅಷ್ಟೊಂದು ವೀಕ್ ಆಗಲು ದಾಂಪತ್ಯ ಬದುಕೇ ಕಾರಣ ಆಯ್ತಾ? ಪಾಂಡ್ಯ ಇಷ್ಟೊಂದು ಎಮೋಷನಲ್ ಆಗಲು ಇದೇ ವಿಚಾರ ಕಾರಣ ಆಯ್ತಾ ಅಂತಾ ಫ್ಯಾನ್ಸ್ ಚರ್ಚೆ ನಡೆಸ್ತಾ ಇದ್ದಾರೆ..

Shwetha M

Leave a Reply

Your email address will not be published. Required fields are marked *