ಬಕ್ರೀದ್ ಹಬ್ಬಕ್ಕೆ ಕುರಿಯನ್ನು ಬಲಿ ಕೊಡುವುದು ಯಾಕೆ ? – ಬಕ್ರೀದ್ ಹಬ್ಬದ ಮಹತ್ವವೇನು? ಇಲ್ಲಿದೆ ಸಂಪೂರ್ಣ ಮಾಹಿತಿ

ಬಕ್ರೀದ್ ಹಬ್ಬಕ್ಕೆ ಕುರಿಯನ್ನು ಬಲಿ ಕೊಡುವುದು ಯಾಕೆ ? – ಬಕ್ರೀದ್ ಹಬ್ಬದ ಮಹತ್ವವೇನು? ಇಲ್ಲಿದೆ ಸಂಪೂರ್ಣ ಮಾಹಿತಿ

ಬಕ್ರೀದ್ ಅಥವಾ ಈದ್ ಉಲ್ ಅಧಾ, ಇಸ್ಲಾಂ ಧರ್ಮದ ಪವಿತ್ರ ಹಬ್ಬ. ಈದ್-ಉಲ್-ಫಿತರ್ ಹಬ್ಬ ಆಚರಿಸಿದ ಸುಮಾರು ಎರಡು ತಿಂಗಳುಗಳ ನಂತರ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನದಂದು ಉಳ್ಳವರು ಬಡವರಿಗೆ ದಾನ ಮಾಡುತ್ತಾರೆ. ಹಾಗೂ ಈ ದಿನ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಿದ ನಂತರ ಒಂದು ಮೇಕೆಯನ್ನು ಬಲಿ ನೀಡಲಾಗುತ್ತದೆ. ಮುಸ್ಲಿಮರಿಗೆ ಮಾರ್ಗದರ್ಶನ ನೀಡಲು ಅಲ್ಲಾಹನು ಕಳುಹಿಸಿದ ಪ್ರವಾದಿಗಳಲ್ಲಿ ಒಬ್ಬರಾದ ಹಜರತ್ ಇಬ್ರಾಹಿಂ ಅವರ ತ್ಯಾಗವನ್ನು ಸ್ಮರಿಸವ ಹಬ್ಬ ಇದಾಗಿದೆ. ತ್ಯಾಗದ ಸಂಕೇತವಾಗಿ ಆಚರಿಸುವ ಈ ಹಬ್ಬದಲ್ಲಿ ಕುರಿಗಳನ್ನು ಏಕೆ ಬಲಿ ಕೊಡುತ್ತಾರೆ. ಹಾಗೂ ಈ ಹಬ್ಬವನ್ನು ಭಾರತದಲ್ಲಿ ಬಕ್ರೀದ್ ಎಂಬ ಹೆಸರಿನಿಂದ ಯಾಕೆ ಕರೆಯುತ್ತಾರೆ ಎಂಬ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಟೆಲಿಗ್ರಾಮ್‌ ನಲ್ಲಿ ಹೊಸ ಫೀಚರ್‌! – ಜುಲೈನಿಂದ ʼಸ್ಟೋರಿಸ್‌ʼ ವೈಶಿಷ್ಟ್ಯ ಆರಂಭ

ಇಸ್ಲಾಂ ಧರ್ಮದಲ್ಲಿ ಬಕ್ರೀದ್ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಇಸ್ಲಾಮಿಕ್ ಕ್ಯಾಲೆಂಡರ್‌ನ 12ನೇ ತಿಂಗಳಾದ ಜುಲ್-ಹಜ್ಜಾದ 10ನೇ ದಿನದಂದು ಈದ್-ಉಲ್-ಅಧಾ ಹಬ್ಬವನ್ನು ಆಚರಿಸಲಾಗುತ್ತದೆ. ಮುಸ್ಲಿಮರಿಗೆ ಮಾರ್ಗದರ್ಶನ ನೀಡಲು ಅಲ್ಲಾಹನು ಕಳುಹಿಸಿದ ಪ್ರವಾದಿಗಳಲ್ಲಿ ಒಬ್ಬರಾದ ಹಜರತ್ ಇಬ್ರಾಹಿಂ ಅವರ ತ್ಯಾಗವನ್ನು ಸ್ಮರಿಸುವ ಹಬ್ಬ ಇದಾಗಿದೆ. ಇಸ್ಲಾಮಿಕ್ ನಂಬಿಕೆಯ ಪ್ರಕಾರ, ಹಜರತ್ ಇಬ್ರಾಹಿಂ ಅವರು ಅಲ್ಲಾಹನ ಪ್ರವಾದಿ. ಒಮ್ಮೆ ಅಲ್ಲಾಹನು ಹಜರತ್ ಇಬ್ರಾಹಿಂ ಅವರನ್ನು ಪರೀಕ್ಷಿಸುವ ಸಲುವಾಗಿ, ಅವರ ಕನಸಿನಲ್ಲಿ ನಿನ್ನ ಅತ್ಯಂತ ಪ್ರೀತಿಯ ವಸ್ತುವನ್ನು ತ್ಯಾಗ ಮಾಡುವಂತೆ ಕೇಳಿದರು. ಈ ಕನಸನ್ನು ಅಲ್ಲಾಹನ ಸಂದೇಶವೆಂದು ಪರಿಗಣಿಸಿ, ಅವರು ತಮ್ಮ ಏಕೈಕ ಪ್ರೀತಿಯ ಪುತ್ರನಾದ 10 ವರ್ಷದ ಇಸ್ಲಾಯಿಲ್‌ನನ್ನು ಬಲಿಕೊಡಲು ನಿರ್ಧರಿಸಿದರು. ಇವರ ತ್ಯಾಗ ಮತ್ತು ಭಕ್ತಿಗೆ ಮೆಚ್ಚಿದ ಅಲ್ಲಾಹನು ಮಗನ ಬದಲು ಪ್ರಾಣಿಯನ್ನು ಬಲಿಕೊಡುವಂತೆ ಸಂದೇಶ ನೀಡಿದರು. ನಂತರ ಮಗನ ಬದಲಿಗೆ ತಾನು ಸಾಕಿದ ಅತ್ಯಂತ ಪ್ರೀತಿಯ ಕುರಿ ಮರಿಯನ್ನು ಬಲಿ ಕೊಟ್ಟರು. ನಂಬಿಕೆಗಳ ಪ್ರಕಾರ ಈದ್-ಉಲ್-ಅದಾ ದಲ್ಲಿ ಬಲಿ ನೀಡುವ ಸಂಪ್ರದಾಯ ಅಂದಿನಿಂದ ಪ್ರಾರಂಭವಾಯಿತು. ಹಜರತ್ ಇಬ್ರಾಹಿಂ ಅವರ ತ್ಯಾಗದ ನೆನಪಿಗಾಗಿ ಪ್ರತಿವರ್ಷ ಈದ್ ಉಲ್ ಅಧಾ ಹಬ್ಬದ ದಿನದಂದು ಮನೆಯಲ್ಲಿ ಪ್ರೀತಿಯಿಂದ ಸಾಕಿದ ಗಂಡು ಕುರಿ, ಮೇಕೆಯನು ಬಲಿ ನೀಡಲಾಗುತ್ತದೆ. ಅದರ ಮಾಂಸವನ್ನು ಮೂರು ಭಾಗಗಳನ್ನಾಗಿ ಮಾಡಿ ಒಂದನೇ ಭಾಗವನ್ನು ನಿರ್ಗತಿಕರಿಗೆ ಅಥವಾ ಬಡವರಿಗೆ, ಎರಡನೇ ಭಾಗವನ್ನು ಕುಟುಂಬ ಹಾಗೂ ಮೂರನೇ ಭಾಗವನ್ನು ಸಂಬಂಧಿಕರು ಮತ್ತು ಸ್ನೇಹಿತರಿಗೆ ಹಂಚಲಾಗುತ್ತದೆ. ಜತೆಗೆ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂತೋಷ ಹಾಗೂ ಉಡುಗೊರೆಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ಮೂಲಕ ಈ ಹಬ್ಬವನ್ನು ಆಚರಿಸಲಾಗುತ್ತದೆ.

ಭಾರತದಲ್ಲಿ ಹೆಚ್ಚಾಗಿ ಈ ಪವಿತ್ರ ಹಬ್ಬವನ್ನು ಬಕ್ರೀದ್ ಅಥವಾ ಬಕ್ರ್-ಇದ್ ಎಂಬ ಹೆಸರಿನಿಂದ ಆಚರಿಸಲಾಗುತ್ತದೆ. ಬಕ್ರ್ ಅಥವಾ ಬಕ್ರಿ ಎಂಬುದು ಮೇಕೆಯ ಉರ್ದ ಪದವಾಗಿದ್ದು, ಈ ಹಬ್ಬದಂದು ತ್ಯಾಗದ ಸಂಕೇತವಾಗಿ ಅಲ್ಲಾಹನಿಗೆ ಮೇಕೆ ಮತ್ತು ಕುರಿಗಳನ್ನು ಬಲಿ ನೀಡುವುದರಿಂದ ಬಕ್ರೀದ್ ಅಥವಾ ಬಕ್ರ-ಈದ್ ಎಂಬ ಹೆಸರು ಬಂದಿದೆ.

suddiyaana