ಒಂದೂವರೆ ದಿನಕ್ಕೆ ಟೆಸ್ಟ್ ಮ್ಯಾಚ್ ರಿಸಲ್ಟ್ – ಹೀಗೆ ಆದರೆ ಟೆಸ್ಟ್ ಪಂದ್ಯದ ಭವಿಷ್ಯವೇನು?

ಒಂದೂವರೆ ದಿನಕ್ಕೆ ಟೆಸ್ಟ್ ಮ್ಯಾಚ್ ರಿಸಲ್ಟ್  – ಹೀಗೆ ಆದರೆ ಟೆಸ್ಟ್ ಪಂದ್ಯದ ಭವಿಷ್ಯವೇನು?

1877 ರಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಆಡಲಾಯಿತು. ಅಲ್ಲಿಂದ 2024ರ ವರೆಗೆ ಟೆಸ್ಟ್ ಪಂದ್ಯವೊಂದು ಕೇವಲ 642 ಎಸೆತಗಳಲ್ಲಿ ಅಂತ್ಯಗೊಂಡಿದ್ದು ಇದೇ ಮೊದಲು. ಈ ಪಂದ್ಯದಲ್ಲಿ ಕೇವಲ 107 ಓವರ್‌ಗಳನ್ನು ಮಾತ್ರ ಬೌಲ್ ಮಾಡಲಾಯಿತು. ವಾಸ್ತವವಾಗಿ ಏಕದಿನ ಪಂದ್ಯದಲ್ಲಿ ಉಭಯ ತಂಡಗಳಿಂದ 100 ಓವರ್‌ಗಳನ್ನು ಬೌಲ್ ಮಾಡಲಾಗುತ್ತದೆ. ಇದರರ್ಥ ಈ ಪಂದ್ಯ ಕೂಡ ಬಹುತೇಕ ಏಕದಿನ ಪಂದ್ಯದಂತೆ ಇತ್ತು.

ಇದನ್ನೂ ಓದಿ: 31 ವರ್ಷಗಳ ನಂತರ ಗೆಲುವು ಸಾಧಿಸಿದ ಟೀಮ್ಇಂಡಿಯಾ – ಸೌತ್ಆಫ್ರಿಕಾ ನೆಲದಲ್ಲಿ ಇತಿಹಾಸ ಸೃಷ್ಟಿಸಿದ ರೋಹಿತ್ ಶರ್ಮಾ ಪಡೆ

ಟೀಂ ಇಂಡಿಯಾದ ಒಬ್ಬ ಬೆಸ್ಟ್​ ಟೆಸ್ಟ್​ ಬ್ಯಾಟ್ಸ್​​ಮನ್​ ಅಂತಾ ಯಾರಾದ್ರೂ ಇದ್ರೆ ಅದು ವಿರಾಟ್ ಕೊಹ್ಲಿ ಮಾತ್ರ. ಸೆಕೆಂಡ್​ ಪೊಸೀಶನ್​ನಲ್ಲಿ ರೋಹಿತ್​ ಶರ್ಮಾ. ಆದ್ರೂ ರೋಹಿತ್​​ ಒಬ್ಬ ಟೆಸ್ಟ್ ಕ್ರಿಕೆಟರ್​ ಅಂತಾ ಐಡೆಂಟಿಟಿಯನ್ನ ಪಡೆದೇ ಇಲ್ಲ. ಕೆಲ ಸಮಯದ ಹಿಂದೆ ಚೇತೇಶ್ವರ್ ಪೂಜಾರಾ ಇದ್ರು.. ಅಜಿಂಕ್ಯ ರಹಾಣೆ ಇದ್ರು.. ಇವರಿಬ್ಬರು ಟೆಸ್ಟ್​ಗೆ ಹೇಳಿ ಮಾಡಿಸಿದಂಥಾ ಪ್ಲೇಯರ್ಸ್​. ಆದ್ರೀಗ ಟೀಮ್​ನಿಂದ ಔಟಾಗಿದ್ದಾರೆ. ಆ್ಯಕ್ಚುವಲಿ ರಹಾನೆಯನ್ನಂತೂ ಖಂಡಿತಾ ಆಡಿಸ್ಬಹುದು. ಸರಿ ಪೂಜಾರಾ ಔಟ್ ಆಫ್ ಫಾರ್ಮ್ ಅಂತಾ ಡ್ರಾಪ್​ ಮಾಡಿದ್ರು. ಆದ್ರೆ ಪೂಜಾರ ರೀತಿಯಲ್ಲಿ ಆಡೋ ಮತ್ತೊಬ್ಬ ಬ್ಯಾಟ್ಸ್​ಮನ್​​ನನ್ನ ಸೆಲೆಕ್ಟ್ ಮಾಡಿದ್ದಾರಾ? ಇನ್ನೂ ಇಲ್ಲ. ಈ 1990 – 2010ವರೆಗಿನ ಟೈಮ್​ನ್ನ ನೆನಪಿಸಿಕೊಳ್ಳಿ. ನಮ್ಮ ಟೆಸ್ಟ್ ಟೀಂ ಹೇಗಿತ್ತು. ಎಲ್ಲಾ ರೀತಿಯ ಪ್ಲೇಯರ್ಸ್​ಗಳು ಕೂಡ ತಂಡದಲ್ಲಿದ್ರು. ವಿರೇಂದ್ರ ಸೆಹ್ವಾಗ್ ಅಗ್ರೆಸ್ಸಿವ್ ಆಗಿ ಬ್ಯಾಟಿಂಗ್ ಮಾಡಿದ್ರು. ರಾಹುಲ್​ ದ್ರಾವಿಡ್ ಅಂತೂ ಕ್ರೀಸ್​​ನಲ್ಲಿ ಸೆಟ್ ಆದ್ರು ಅಂದ್ರೆ ಕದಲುತ್ತಲೇ ಇರಲಿಲ್ಲ. ಡಿಫೆನ್ಸ್..ಡಿಫೆನ್ಸ್..ಡಿಫೆನ್ಸ್.. ನ್ಯೂ ಬಾಲ್​​ನ್ನ ಓಲ್ಡ್ ಮಾಡೋದೆ ದ್ರಾವಿಡ್ ಕೆಲಸವಾಗಿತ್ತು. ಅದೊಂದು ಬಾರಿ  ಒಂದು ರನ್ ಮಾಡೋಕೆ ಸುಮಾರು 70 ಬಾಲ್​​ಗಳನ್ನ ತಗೊಂಡಿದ್ರು. 71ನೇ ಬಾಲ್​​ನಲ್ಲೇನೊ ಒಂದು ರನ್ ಮಾಡಿದ್ರು. ಇಡೀ ಸ್ಟೇಡಿಯಂ ಎದ್ದು ನಿಂತು ಚಪ್ಪಾಳೆ ತಟ್ಟಿದ್ರು. ದ್ರಾವಿಡ್ ಕೂಡ 50 ಹೊಡೆದಂತೆ ಪೋಸ್ ಕೊಟ್ಟಿದ್ರು. ನಂತರ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ವಿವಿಎಸ್​ ಲಕ್ಷ್ಮಣ್ ಎಲ್ಲರೂ ಪಕ್ಕಾ ಟೆಸ್ಟ್ ಪ್ಲೇಯರ್ಸ್​​ಗಳು. ಈವನ್​ ಗೌತಮ್​ ಗಂಭೀರ್​​ ಕೂಡ ವನ್​​ ಆಫ್ ದಿ ಬೆಸ್ಟ್ ಟೆಸ್ಟ್ ಕ್ರಿಕೆಟರ್ ಆಗಿದ್ರು. ಫಸ್ಟ್​ ಇನ್ನಿಂಗ್ಸ್​​ನಲ್ಲಿ ಮೊದಲು ಬ್ಯಾಟಿಂಗ್​ಗೆ ಇಳಿದ್ರೆ ಕನಿಷ್ಠ ಎರಡು ದಿನ ಅಂತೂ ಆಡ್ತಾ ಇದ್ರು. 400 ರನ್ ಕಾಮನ್​ ಆಗಿರ್ತಿತ್ತು. 500..600..ಈವನ್​ 700 ಮಾಡಿ ಡ್ರಾ ಮಾಡಿರೋ ಉದಾಹರಣೆಗಳು ಕೂಡ ಸಾಕಷ್ಟಿದೆ. ಕೇವಲ ಟೀಂ ಇಂಡಿಯಾ ಅಂತೇನಲ್ಲ.. ಒಪೋಸಿಟ್ ಟೀಂ ಕೂಡ ಅಷ್ಟೇ ಸ್ಟ್ರಾಂಗ್ ಆಗಿರ್ತಿತ್ತು. ಆಸ್ಟ್ರೇಲಿಯನ್ನರಂತೂ ಕೇಳೋದೇ ಬೇಡ. ಆಗೆಲ್ಲಾ ಕಂಪ್ಲೀಟ್ 5 ಡೇಸ್ ಫುಲ್​ ಫ್ಲೆಡ್ಜ್ ಟೆಸ್ಟ್ ಮ್ಯಾಚ್​ ನಡೀತಾ ಇತ್ತು. ಅದೆಷ್ಟೋ ಮ್ಯಾಚ್​​ಗಳು ಡ್ರಾ ಆಗ್ತಾ ಇತ್ತು. ಆಸ್ಟ್ರೇಲಿಯಾ ವಿರುದ್ಧ ಅಂತೂ ಡ್ರಾ ಮಾಡೋದೆ ದೊಡ್ಡ ಸಾಧನೆಯಾಗಿತ್ತು. ಲಾಸ್ಟ್ ಡೇ ಮ್ಯಾಚ್​.. 10 ಓವರ್​​ಗಳಷ್ಟೇ ಇರೋದು.. ಬ್ಯಾಟಿಂಗ್​ ಟೀಂ ಬಳಿ ಇರೋದು ಕೊನೆಯ ಒಂದು ವಿಕೆಟ್ ಮಾತ್ರ. ಬೌಲರ್​ ಬ್ಯಾಟಿಂಗ್ ಮಾಡ್ತಾ ಇರ್ತಾನೆ. ಹಂಗೋ ಹಿಂಗೋ ಒದ್ದಾಡಿ ಮ್ಯಾಚ್​​ ಡ್ರಾ ಮಾಡೋಕೆ ಕೊನೆಯ ಓವರ್​ತನಕವೂ ಆಡ್ತಾನೆ. ಇನ್ನೇನು ಎರಡು ಬಾಲ್​ಗಳಷ್ಟೇ ಇರೋದು ಅನ್ನೋವಾಗ ಔಟ್. ಬೌಲಿಂಗ್​ ಟೀಂ ವಿನ್.. ಆ್ಯಶಸ್​​ನಲ್ಲಿ ಇಂಥಾ ರಿಸಲ್ಟ್​ಗಳು ಬಂದಿವೆ. ಅದ್ರಲ್ಲೂ 2005ರಲ್ಲಿ ನಡೆದ ಆ್ಯಶಸ್ ಸೀರಿಸ್ ಅಂತೂ ದಿ ಬೆಸ್ಟ್.. ಎವರ್​​ಗ್ರೀನ್ ಟೆಸ್ಟ್​ ಸೀರಿಸ್. ಟೆಸ್ಟ್ ಮ್ಯಾಚ್​ ಗೆಲ್ಲೋದು ಅಂದ್ರೆ ಗ್ರೇಟ್ ಅಚೀವ್​ಮೆಂಟ್ ಆಗಿರ್ತಿತ್ತು. ಬ್ಯಾಟಿಂಗ್​, ಬೌಲಿಂಗ್, ಓವರ್​ಆಲ್​ ಟೀಂ ಎಲ್ಲವೂ ಸ್ಟ್ರಾಂಗ್.. ಭಾರತದಲ್ಲಿ ಕ್ರಿಕೆಟ್​ ಸ್ಟೇಡಿಯಂಗಳಂತೂ 5 ದಿನಗಳೂ ಫುಲ್​ ಪ್ಯಾಕ್ ಆಗಿರ್ತಿತ್ತು.. ಈಗ ಎಲ್ಲಿ? ಅಂಥಾ ಟೆಸ್ಟ್ ಮ್ಯಾಚ್​ಗಳನ್ನೆಲ್ಲಾ ನೋಡದೆ ಕಾಲವೇ ಆಯ್ತು. 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್​ – ಗವಾಸ್ಕರ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಆಡಿದ್ದೇ ಲಾಸ್ಟ್ ಬೆಸ್ಟ್ ಕ್ರಿಕೆಟ್ ಸೀರಿಸ್. ಗಬ್ಬಾದಲ್ಲಿ ಪಂತ್​ ಚೇಸ್ ಮಾಡಿ ಸೀರಿಸ್ ವಿನ್ ಮಾಡಿಸಿಕೊಟ್ಟಿದ್ದೇ ಮೆಮೋರೇಬಲ್. ಆದ್ರೆ ಇತ್ತೀಚೆಗೆ ಟೀಂ ಇಂಡಿಯಾ ಆಡ್ತಿರೋ ಟೆಸ್ಟ್ ಮ್ಯಾಚ್​ಗಳೆಲ್ಲವೂ ಬೋರಿಂಗ್ ಅನ್ನಿಸಿಬಿಟ್ಟಿದ್ರು. ಅದ್ರಲ್ಲೂ ಹೀಗೆ ಒಂದೂವರೆ ದಿನಕ್ಕೆಲ್ಲಾ ಟೆಸ್ಟ್ ಮ್ಯಾಚ್​ ರಿಸಲ್ಟ್ ಬಂದ್ರೆ, ಟೆಸ್ಟ್ ಫಾರ್ಮೆಟ್​ನ ಭವಿಷ್ಯ ಏನು ಅನ್ನೋ ಪ್ರಶ್ನೆ ಬಂದೇ ಬರುತ್ತೆ.

ಇಲ್ಲಿ ಪಿಚ್​ನ್ನ ದೂರಿ ಪ್ರಯೋಜನ ಇಲ್ಲ. ಈವನ್ ರೋಹಿತ್ ಶರ್ಮಾ ಕೂಡ ಈಗ ಅದೇ ಮಾತನ್ನ ಹೇಳಿದ್ದಾರೆ. ಎಲ್ಲರೂ ಇಂಡಿಯಾದ ಕ್ರಿಕೆಟ್ ಪಿಚ್​ಗಳನ್ನೇ ಬ್ಲೇಮ್ ಮಾಡ್ತಾರೆ. ಕ್ರಿಟಿಸೈಸ್ ಮಾಡ್ತಾರೆ. ಹಾಗಿದ್ರೆ ಕೇಪ್​​ಟೌನ್​ನಲ್ಲಿ ರೆಡಿ ಮಾಡಲಾಗಿದ್ದ ಪಿಚ್​ ಎಂಥಾದ್ದು? ಅದನ್ನ ಕೂಡ ಹೋಪ್ಲೆಸ್ ಪಿಚ್ ಅನ್ಬಹುದಲ್ಲಾ. ಪಿಚ್ ಹೇಗೆಯೇ ಇರಲಿ, ಯಾರಿಗೇ ಫೇವರ್ ಆಗಿರಲಿ..ಎಷ್ಟೇ ಚಾಲೆಂಜಿಂಗ್ ಆಗಿರಲಿ.. ಪಕ್ಕಾ ಸ್ಟ್ರ್ಯಾಟಜಿಯೊಂದಿಗೆ ನಿಂತು ಆಡೋದೆ ಇಂಪಾರ್ಟೆಂಟ್. ತಾಕತ್ತು ತೋರಿಸಬೇಕಿರೋದು ಇಂಥಾ ಪಿಚ್​ನಲ್ಲೇ. ಎಂಥದ್ದೇ ಬೌಲಿಂಗ್ ಪಿಚ್​ ಆದ್ರೂ ಬ್ಯಾಟ್ಸ್​ಮನ್​ಗಳು ನಿಂತು ಆಡ್ಬೇಕು. ಆದ್ರೆ ಸೌತ್​ ಆಫ್ರಿಕಾ ಮತ್ತು ಟೀಂ ಇಂಡಿಯಾ ಎರಡೂ ಟೀಂಗಳು ಬ್ಯಾಟ್ಸ್​​ಮನ್​ಗಳು ಒಂದೂವರೆ ದಿನ ಬರೀ ಪರೇಡ್ ಮಾಡಿದ್ದೇ ಆಯ್ತು. ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಕೂಡ ಈ ಬಗ್ಗೆ ಸ್ಟೇಟ್​ಮೆಂಟ್ ಕೊಟ್ಟಿದ್ದಾರೆ. ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾದಂಥಾ ಬೌನ್ಸಿ, ಸ್ವಿಂಗ್​ ಪಿಚ್​ಗಳಲ್ಲಿ ನಿಂತೂ ಆಡೋಕೆ ಆಗಿಲ್ಲ ಅಂದ್ರೆ ಅವರು ಬ್ಯಾಟ್ಸ್​ಮನ್​ಗಳೇ ಅಲ್ಲ. ಕ್ರಿಕೆಟರ್ಸ್​ಗೆ ಅಸಲಿ ಟೆಸ್ಟ್ ನಡೆಯೋದೆ ಇಂಥಾ ಪಿಚ್​ಗಳಲ್ಲಿ ಅಂತಾ ಗವಾಸ್ಕರ್ ಹೇಳಿದ್ದಾರೆ. ಟೆಸ್ಟ್​ ಕ್ರಿಕೆಟ್​​ನ್ನ ನಿಜವಾಗಿಯೂ ಇಷ್ಟ ಪಡೋರು ಗವಾಸ್ಕರ್ ಹೇಳಿದ ಮಾತನ್ನ ಒಪ್ಪಲೇಬೇಕಾಗುತ್ತೆ.

Sulekha