ಬಾಂಗ್ಲಾದೇಶ ವಿರುದ್ಧ ವಿರಾಟ್ ಶತಕದ ಅಬ್ಬರ – ಅಭಿಮಾನಿಗಳ ಮನಗೆದ್ದಿದ್ದು ಕೊಹ್ಲಿಗೆ ಸಾಥ್ ಕೊಟ್ಟ ಹೆಮ್ಮೆಯ ಕನ್ನಡಿಗ ಕೆ.ಎಲ್ ರಾಹುಲ್

ಬಾಂಗ್ಲಾದೇಶ ವಿರುದ್ಧ ವಿರಾಟ್ ಶತಕದ ಅಬ್ಬರ – ಅಭಿಮಾನಿಗಳ ಮನಗೆದ್ದಿದ್ದು ಕೊಹ್ಲಿಗೆ ಸಾಥ್ ಕೊಟ್ಟ ಹೆಮ್ಮೆಯ ಕನ್ನಡಿಗ ಕೆ.ಎಲ್ ರಾಹುಲ್

ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮತ್ತೆ ಮಿಂಚಿದ್ದಾರೆ. ಇವರ ಜೊತೆಗೆ ಕನ್ನಡಿಗ ಕೆ.ಎಲ್ ರಾಹುಲ್ ಕೂಡಾ ಅಭಿಮಾನಿಗಳ ಮನಗೆದ್ದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಜೊತೆಯಾಟ ನಡೆಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದ ವಿರಾಟ್ ಕೊಹ್ಲಿ ಮತ್ತು ಕನ್ನಡಿಗ ಕೆಎಲ್‌ ರಾಹುಲ್ ಜೋಡಿಯು ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲೂ ಜೊತೆಯಾಗಿಯೇ ಗೆಲುವು ತಂದುಕೊಟ್ಟಿದ್ದಾರೆ. ಇದರ ಜೊತೆಗೆ ಶತಕದಂಚಿನಲ್ಲಿದ್ದ ವಿರಾಟ್ ಕೊಹ್ಲಿ ಅಂತಿಮ 3-4 ಓವರ್ ಗಳಲ್ಲಿ ಸಿಂಗಲ್ಸ್ ಕದಿಯದೆ ಕೆಎಲ್ ರಾಹುಲ್, ಕೊಹ್ಲಿ ಶತಕ ಮಾಡಲು ನೆರವಾಗಿದ್ದಾರೆ.

ಇದನ್ನೂ ಓದಿ: ಲ್ಯಾಂಬೋರ್ಗಿನಿ ಕಾರ್‌ನಲ್ಲಿ ಹಿಟ್‌ಮ್ಯಾನ್ ವೇಗದ ಡ್ರೈವಿಂಗ್ – ರೋಹಿತ್ ಶರ್ಮಾಗೆ ಫೈನ್, ಮೂರು ನೋಟೀಸ್

ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಭಾರತದ ಬ್ಯಾಟರ್ ವಿರಾಟ್ ಕೊಹ್ಲಿ ಶತಕ ತಲುಪಲು ಸುಲಭವಾದ ಸಿಂಗಲ್ಸ್ ಕೂಡ ಕೈಬಿಟ್ಟರು. ಈ ಸಂದರ್ಭ ಕೊಹ್ಲಿ ವಿರುದ್ಧ, ಈತ ಶತಕಕ್ಕಾಗಿ ಆಡುತ್ತಿದ್ದಾನೆ. ತನ್ನ ವೈಯಕ್ತಿಕ ದಾಖಲೆ ಮಾಡುತ್ತಿದ್ದಾರೆ ಎಂಬ ಮಾತುಗಳು ಬಂದವು. ಇದೀಗ ಈ ಎಲ್ಲ ಟೀಕೆಗಳಿಗೆ ಕೆಎಲ್ ರಾಹುಲ್ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಕನ್ನಡಿಗ ಕೆ.ಎಲ್.ರಾಹುಲ್ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ನಾನು ಪಂದ್ಯದಲ್ಲಿ ಉತ್ತಮ ಆಟ ಆಡಿರುವುದು ತುಂಬಾ ಕುತೂಹಲಕಾರಿ ಸಂಗತಿ ಆಗಿದೆ. ನಾನು ಕ್ರೀಸ್ ಗೆ ಬಂದಾಗ ಪಂದ್ಯ ಗೆಲ್ಲಲು ಇನ್ನೂ ಸಾಕಷ್ಟು ರನ್ ಗಳ ಅವಶ್ಯಕತೆ ಇತ್ತು. ನಾನು ಕೆಲವು ಸ್ಫೋಟಕ ಹೊಡೆತಗಳ ಮೂಲಕ ಬೌಂಡರಿ ಗಳಿಸಲು ಬಯಸಿದ್ದೆ. ಅದೇ ಆಟವನ್ನು ಪಂದ್ಯದಲ್ಲಿ ಹೊರತಂದಿದ್ದೆ,” ಎಂದು ಟೀಮ್ ಇಂಡಿಯಾ ಆಟಗಾರ ಹೇಳಿದ್ದಾರೆ. ವೈಯಕ್ತಿಕವಾಗಿ ಇದೊಂದು ಉತ್ತಮ ಪಂದ್ಯ ಆಗಿದೆ. ಆದರೆ ವಿರಾಟ್ ಕೊಹ್ಲಿ ಶತಕದ ಅಂಚಿನಲ್ಲಿದ್ದರು. ಪಂದ್ಯ ಗೆಲ್ಲಲು 30 ರನ್ ಗಳ ಅವಶ್ಯಕತೆ ಇದ್ದಾಗ , ನೀವು ಚೆಂಡುಗಳ ಮೇಲೆ ನಿಯಂತ್ರಣ ಇಟ್ಟುಕೊಳ್ಳಿ, ಸಿಂಗಲ್ಸ್ ತೆಗೆದುಕೊಂಡು ಹೆಚ್ಚು ಸ್ಟ್ರೆಕ್ ತೆಗೆದುಕೊಳ್ಳಿ ಎಂದು ವಿರಾಟ್ ಕೊಹ್ಲಿಗೆ ತಿಳಿಸಿದ್ದೆ,” ಎಂದು ರಾಹುಲ್ ಹೇಳಿದ್ದಾರೆ.

ಬಾಂಗ್ಲಾದೇಶ ವಿರುದ್ಧ 7 ವಿಕೆಟ್ ಗೆಲುವು ಸಾಧಿಸಿರುವ ಟೀಮ್ ಇಂಡಿಯಾ ಒಟ್ಟಾರೆ ಸತತವಾಗಿ 4 ಗೆಲುವು ಸಾಧಿಸಿದೆ. ಪಂದ್ಯದಲ್ಲಿ ಸಿಕ್ಸರ್ ಮೂಲಕ ತಮ್ಮ 48ನೇ ಶತಕ ಪೂರೈಸಿದ್ದ ಕ್ಲಾಸ್ ಆಟಗಾರ ವಿರಾಟ್ ಕೊಹ್ಲಿ ಪಂದ್ಯದ ಅಂತಿಮ 3 ಓವರ್ ಗಳಲ್ಲಿ ಒಂಟಿ ರನ್ ತೆಗೆದುಕೊಳ್ಳಲು ನಿರಾಕರಿಸಿದ್ದರು. ವಿರಾಟ್ ಕೊಹ್ಲಿ, ಕನ್ನಡಿಗ ಕೆ.ಎಲ್.ರಾಹುಲ್ ಗೆ ಆಡಲು ಅವಕಾಶ ನೀಡದೆ ಓವರ್ ನ ಕೊನೆಯ ಎಸೆತದಲ್ಲಿ ಸಿಂಗಲ್ಸ್ ಕದ್ದು ಸ್ಟ್ರೆಕ್ ನಲ್ಲಿ ನಿಲ್ಲುವ ರಣತಂತ್ರ ರೂಪಿಸಿದ್ದರು. ವಿರಾಟ್ ಕೊಹ್ಲಿ 97 ರನ್ ಗಳಿಸಿದ್ದಾಗ 42ನೇ ಓವರ್ ನಲ್ಲಿ ತಮ್ಮ ಶತಕದ ಪೂರೈಕೆಗೆ 3 ರನ್ ಗಳ ಹಿಂದಿದ್ದರು. ಆಗ ಪಂದ್ಯ ಗೆಲುವಿಗೆ 2 ರನ್ ಬೇಕಾಗಿತ್ತು. ಈ ವೇಳೆ ಸ್ಪಿನ್ನರ್ ನಸುಮ್ ಅಹಮದ್ ಬೌಲಿಂಗ್ ನಲ್ಲಿ ಸಿಕ್ಸರ್ ಸಿಡಿಸಿ 48ನೇ ಒಡಿಐ ಶತಕ ಪೂರೈಸಿದ ಕೊಹ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.

Sulekha