ಆಚೆ ಹೋಗೋ ದಿನ ಬಂತು ಅಂದ್ರೆ ಒಬ್ಬನಿಗೆ ಹೊಡೆದ್ಬುಟ್ಟೇ ಹೋಗೋದು – ಬಿಗ್‌ಬಾಸ್ ಸ್ಪರ್ಧಿ ವಿನಯ್ ಮಾತಿನ ಅರ್ಥವೇನು?

ಆಚೆ ಹೋಗೋ ದಿನ ಬಂತು ಅಂದ್ರೆ ಒಬ್ಬನಿಗೆ ಹೊಡೆದ್ಬುಟ್ಟೇ ಹೋಗೋದು – ಬಿಗ್‌ಬಾಸ್ ಸ್ಪರ್ಧಿ ವಿನಯ್ ಮಾತಿನ ಅರ್ಥವೇನು?

ಬಿಗ್‌ಬಾಸ್ ಮನೆಯಲ್ಲಿ ವಿನಯ್ ಗೌಡ ಕಾಲಿಟ್ಟಲೆಲ್ಲಾ ಬರೀ ಜಗಳವೇ. ತಾನೊಬ್ಬನೇ ಸ್ಟ್ರಾಂಗ್ ಮತ್ತೆಲ್ಲರೂ ವೀಕ್ ಅನ್ನೋದೇ ವಿನಯ್ ಗೌಡ ವಾದ. ಅದಕ್ಕಾಗಿ ಯಾರೇ ಎದುರು ಬಂದರೂ ಸಿಟ್ಟು, ದ್ವೇಷದ ಕಿಡಿ ಕಾರುತ್ತಿದ್ದಾರೆ. ಇದೀಗ ವಿನಯ್ ಗೌಡ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ.

ಇದನ್ನೂ ಓದಿ: “ಮೆಗಾ ಫ್ಯಾಮಿಲಿ”ಯಲ್ಲಿ ಮದುವೆ ಸಂಭ್ರಮ – ವರುಣ್ ತೇಜ್ – ಲಾವಣ್ಯ ತ್ರಿಪಾಠಿ ಅದ್ದೂರಿ ಮದುವೆ

ಬಿಗ್‌ಬಾಸ್ ಮನೆಯಲ್ಲಿ ವಿನಯ್ ಗೌಡ ಆಡುತ್ತಿರುವ ಮಾತು ವೀಕ್ಷಕರಿಗೆ ಇಷ್ಟವಾಗುತ್ತಿಲ್ಲ. ಆಚೆ ಹೋಗೋ ದಿನ ಬಂತು ಅಂದ್ರೆ ಒಬ್ಬನಿಗೆ ಹೊಡೆದೇ ಹೋಗೋದು ಎಂದು ವಿನಯ್ ಗೌಡ ಹೇಳಿದ್ದಾರೆ. ಮನೆಯೊಳಗೆ ಹೊಡೆದರೆ ಆಚೆ ಹೋಗುತ್ತೇವೆ ಅಂತ ಅಗ್ರಿಮೆಂಟ್‌ಗೆ ಸೈನ್ ಹಾಕಿದ್ದೇವೆ. ಆದರೆ ಆಚೆ ಹೋಗೋ ದಿನ ಬಂತು ಅಂದ್ರೆ ಒಬ್ಬನಿಗೆ ಹೊಡೆದ್ಬುಟ್ಟೆ ಹೋಗೋದು… ಎಂಥ ಏಟು ಅಂದ್ರೆ ಲೈಫ್ನಲ್ಲಿ ಮರೀಬಾರದು. ಅಂಥ ಏಟು ಬೀಳತ್ತೆ..’ ಎಂದು ವಿನಯ್ ಹೇಳುತ್ತಿದ್ದಾರೆ. ಅದರಲ್ಲೂ ನಮ್ರತಾ ನಾನು ಕೂಡಾ ಸ್ನೇಹಿತನ ಟ್ರಿಗರ್ ಮಾಡಿಸಿ ಒಬ್ಬರಿಗೆ ಹೊಡೆಸಬೇಕು ಅಂತಾ ಹೇಳುತ್ತಾರೆ.  ಮತ್ತೊಂದೆಡೆ ವಿನಯ್ ಗೌಡ ದುರಂಹಕಾರದ ಬಗ್ಗೆಯೂ ಚರ್ಚೆ ಶುರುವಾಗಿದೆ. ಅನ್ನ ಕೊಟ್ಟ ಸೀರಿಯಲ್ ಕಲೆಗೆ ಗೌರವ ಕೊಟ್ಟಿಲ್ಲ ಅನ್ನೋ ಮಾತು ಕೇಳಿಬಂದಿದೆ. ಈ ಹಿಂದೆ ಸ್ನೇಹಿತ್ ಅವರನ್ನು ಭಾಗ್ಯಶ್ರೀ ನಾಮಿನೇಟ್ ಮಾಡಿದ್ದರು. ಇದೇ ವಿಚಾರ ಮುಂದಿಟ್ಟುಕೊಂಡು ವಿನಯ್‌ಗೌಡ ಭಾಗ್ಯಶ್ರೀ ಜೊತೆ ಕಿರಿಕ್ ಮಾಡಿಕೊಂಡ್ರು. ಭಾಗ್ಯಶ್ರೀ ಬೇಸರ ಮಾಡಿಕೊಂಡು ಕಣ್ಣೀರಿಟ್ಟರು. ನೀವು ಕಣ್ಣೀರಿಟ್ಟು ನಾಟಕ ಮಾಡಬೇಡಿ ನಿಮ್ಮ ಸೀರಿಯಲ್ ಡ್ರಾಮಾ ಇಲ್ಲಿ ನಡೆಯುವುದಿಲ್ಲ ಎನ್ನುತ್ತಾರೆ ವಿನ್ಯ್. ಸೀರಿಯಲ್‌ ನಾಟಕ ಡ್ರಾಮಾ ಎಂದು ಹೇಳಬೇಡಿ, ನಾನು ಸೀರಿಯಲ್‌ನಿಂದಲೇ ಅನ್ನ ತಿಂದಿರುವುದು ನೀವು ಅದರಿಂದಲೇ ಅನ್ನ ತಿಂದಿರುವುದು ಎಂದು ಹೇಳುತ್ತಾರೆ ಭಾಗ್ಯ. ಆಗ ಸೀರಿಯಲ್ ಒಂದೇ ನನಗೆ ಅನ್ನ ಹಾಕಿಲ್ಲ ಎಂದು ಹೇಳುವ ಮಾತು ವೀಕ್ಷಕರಿಗೆ ದುರಹಂಕಾರ ಅಂತಾ ಅನಿಸದೇ ಇರಲಿಲ್ಲ. ಸೀರಿಯಲ್‌ನಲ್ಲಿ ಜನಪ್ರಿಯತೆ ಪಡೆದುಕೊಂಡ ಕಾರಣಕ್ಕೆ ವಿನಯ್ ಗೌಡ ಬಿಗ್ ಬಾಸ್‌ ಗೆ ಬಂದಿದ್ದು ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ. ಯಾವತ್ತೂ ಕಲೆಗೆ, ನಮಗೆ ಹೆಸರು ತಂದುಕೊಟ್ಟ ಕೆಲಸಕ್ಕೆ ಗೌರವ ಕೊಡಬೇಕು. ಅಂಥಾ ಯಾವ ಗುಣವೂ ವಿನಯ್ ಬಳಿ ಕಾಣುತ್ತಿಲ್ಲ. ಇದನ್ನೆಲ್ಲಾ ನೋಡಿದ ವೀಕ್ಷಕರು ಬಿಗ್‌ಬಾಸ್ ಅಂತಾ ಅತಿದೊಡ್ಡ ರಿಯಾಲಿಟಿ ಶೋನಲ್ಲಿ ಇಂಥಾ ಮಾತುಗಳು, ಇಂಥಾ ವರ್ತನೆಗಳು ನಿಜಕ್ಕೂ ಶೋಭೆ ತರುವುದಿಲ್ಲ ಅಂತಿದ್ದಾರೆ.

 

Sulekha