ಪ್ರಜಾಪ್ರಭುತ್ವದಲ್ಲಿ ಭಾರತಕ್ಕೆ ಏನು ಮಾಡಬೇಕೆಂದು ಹೇಳಿಕೊಡುವ ಅಗತ್ಯವಿಲ್ಲ – ರುಚಿರಾ ಕಂಬೋಜ್

ಪ್ರಜಾಪ್ರಭುತ್ವದಲ್ಲಿ ಭಾರತಕ್ಕೆ ಏನು ಮಾಡಬೇಕೆಂದು ಹೇಳಿಕೊಡುವ ಅಗತ್ಯವಿಲ್ಲ – ರುಚಿರಾ ಕಂಬೋಜ್

ವಿಶ್ವಸಂಸ್ಥೆ:ಪ್ರಜಾಪ್ರಭುತ್ವದಲ್ಲಿ ಏನು ಮಾಡಬೇಕು ಎಂಬುದನ್ನು ಭಾರತಕ್ಕೆ ಹೇಳಿಕೊಡುವ ಅಗತ್ಯವಿಲ್ಲ ಎಂದು ಭದ್ರತಾ ಮಂಡಳಿಯಲ್ಲಿನ ಡಿಸೆಂಬರ್ ತಿಂಗಳ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ವಿಶ್ವಸಂಸ್ಥೆಯ ಭಾರತ ಕಾಯಂ ರಾಯಭಾರಿ ರುಚಿರಾ ಕಂಬೋಜ್ ತೀಕ್ಷ್ಣವಾಗಿ ಹೇಳಿದ್ದಾರೆ.

ವಿಶ್ವಸಂಸ್ಥೆಯಲ್ಲಿನ ಭಾರತದ ಮೊದಲ ಮಹಿಳಾ ಕಾಯಂ ಪ್ರತಿನಿಧಿಯಾಗಿರುವ ರುಚಿರಾ, ತಮ್ಮ ಅಧ್ಯಕ್ಷತೆಯ ಮೊದಲ ದಿನದಂದು ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಭಾರತದಲ್ಲಿನ ಪ್ರಜಾಪ್ರಭುತ್ವ ಮತ್ತು ಪತ್ರಿಕಾ ಸ್ವಾತಂತ್ರ್ಯದ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, “ಅದಕ್ಕೆ ನಾನು ನಿಮಗೆ ಹೇಳಲು ಬಯಸುವುದು ಎಂದರೆ, ಪ್ರಜಾಪ್ರಭುತ್ವದಲ್ಲಿ ನಾವು ಏನು ಮಾಡಬೇಕು ಎಂದು ನಮಗೆ ಹೇಳಿಕೊಡುವ ಅಗತ್ಯವಿಲ್ಲ” ಎಂದು ಖಡಕ್ ಉತ್ತರ ಕೊಟ್ಟಿದ್ದಾರೆ.

ಇದನ್ನೂ ಓದಿ:ಮಾನವನ ಮೆದುಳಿಗೆ ಚಿಪ್! – ಅಂಧರ ಪಾಲಿಗೆ ಆಶಾಕಿರಣವಾಗಲಿದ್ಯಾ ಎಲಾನ್ ಮಸ್ಕ್ ಹೊಸ ಪ್ರಾಜೆಕ್ಟ್

” ಭಾರತ ಬಹುಶಃ ಜಗತ್ತಿನ ಅತ್ಯಂತ ಪುರಾತನ ನಾಗರಿಕತೆ. ಭಾರತದಲ್ಲಿ ಪ್ರಜಾಪ್ರಭುತ್ವದ ಬೇರುಗಳು 2,500 ವರ್ಷಗಳಷ್ಟು ಹಿಂದಿನಿಂದ ಇವೆ. ನಮ್ಮಲ್ಲಿ ಯಾವಾಗಲೂ ಪ್ರಜಾಪ್ರಭುತ್ವವಿದೆ. ತೀರಾ ಇತ್ತೀಚಿನ ಸಮಯದ ಬಗ್ಗೆ ಹೇಳಬೇಕೆಂದರೆ, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ನಾಲ್ಕನೇ ಅಂಗವಾದ ಪತ್ರಿಕೆಗಳು- ಪ್ರಜಾಪ್ರಭುತ್ವದ ಎಲ್ಲ ಅಗತ್ಯ ಸ್ತಂಭಗಳನ್ನೂ ಹೊಂದಿದ್ದೇವೆ. ಜೊತೆಗೆ ಬಹಳ ಚಲನಶೀಲ ಸಾಮಾಜಿಕ ಮಾಧ್ಯಮವಿದೆ. ಹೀಗಾಗಿ ಭಾರತ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವವಾಗಿದೆ” ಎಂದಿದ್ದಾರೆ.

“ಪ್ರತಿ ಐದು ವರ್ಷಕ್ಕೊಮ್ಮೆ ನಾವು ಜಗತ್ತಿನ ಅತಿ ದೊಡ್ಡ ಪ್ರಜಾಸತ್ತಾತ್ಮಕ ಚುನಾವಣೆ ನಡೆಸುತ್ತೇವೆ. ಪ್ರತಿಯೊಬ್ಬರೂ ತಮ್ಮ ಬಯಕೆಯನ್ನು ಹೇಳಲು, ಬೇಡಿಕೆ ಇರಿಸಲು ಸ್ವತಂತ್ರರಾಗಿದ್ದಾರೆ. ನಮ್ಮ ದೇಶ ಕಾರ್ಯನಿರ್ವಹಿಸುವುದು ಹೀಗೆ. ಇದು ವೇಗವಾಗಿ ಸುಧಾರಣೆ, ಪರಿವರ್ತನೆ ಮತ್ತು ಬದಲಾವಣೆಯಾಗುತ್ತಲೇ ಇದೆ. ಅದರ ಪಥ ಬಹಳ ಪ್ರಭಾವಶಾಲಿಯಾಗಿದೆ. ನಾನು ಇದನ್ನು ಹೇಳುವ ಅಗತ್ಯವಿಲ್ಲ ಮತ್ತು ನೀವು ನನ್ನ ಮಾತನ್ನು ಕೇಳುವ ಅಗತ್ಯವಿಲ್ಲ. ಬೇರೆಯವರು ಇದನ್ನು ಹೇಳುತ್ತಿದ್ದಾರೆ” ಎಂದು ಹೇಳಿದ್ದಾರೆ.

suddiyaana