ಕಪ್ ತಂದ ಕೊಹ್ಲಿಗೆ ಸಾವಿನ ಸ್ವಾಗತ.. ಚಿನ್ನಸ್ವಾಮಿಯಲ್ಲಿ ಕಿಂಗ್ ಕನಸು ಭಗ್ನ – ಫ್ಯಾನ್ಸ್ ಗಾಗಿ ನಿವೃತ್ತಿ ಘೋಷಿಸ್ತಾರಾ?

ಪಂದ್ಯ ಮುಗಿಯೋ ಮುನ್ನವೇ ಭಾವುಕ.. ಮೈದಾನದಲ್ಲೇ ಮಂಡಿಯೂರಿ ಕಣ್ಣೀರು.. ಜಗತ್ತನ್ನೇ ಗೆದ್ದ ವಿರಾಟ್ ಕೊಹ್ಲಿ ಐಪಿಎಲ್ ಕಪ್ ಗೆದ್ದ ಸಾರ್ಥಕತೆಯಲ್ಲಿ ಪುಟ್ಟ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತಿದ್ರು. ವಿರಾಟ್ ಕಂಗಳಲ್ಲಿ ಬರೀ ಆವೇಶ, ರೋಷವನ್ನೇ ಕಂಡಿದ್ದವರು ಅವ್ರೊಳಗಿದ್ದ ಪುಟ್ಟ ಮಗುವನ್ನೂ ನೋಡಿ ಕಂಬನಿ ಮಿಡಿದಿದ್ರು. ಅದೇ ಟ್ರೋಫಿಯನ್ನ ಅಭಿಮಾನಿಗಳಿಗೆ ಅರ್ಪಣೆ ಮಾಡ್ಬೇಕು ಅಂತಾ ಬೆಂಗಳೂರಿಗೆ ಬಂದಿದ್ದ ವಿರಾಟ್ಗೆ ಸಿಕ್ಕಿದ್ದು ಸಾವಿನ ಸ್ವಾಗತ. ಆರ್ಸಿಬಿಗಾಗಿ ಯೌವ್ವನವನ್ನೇ ಕಳೆದಿದ್ದೇನೆ. ನನ್ನನ್ನೇ ಅರ್ಪಿಸಿಕೊಂಡಿದ್ದೇನೆ ಎಂದಿದ್ದ ವಿರಾಟ್ ಈಗ ಅಭಿಮಾನಿಗಳ ಸಾವಿನಿಂದ ಅಕ್ಷರಶಃ ಆಘಾತಗೊಂಡಿದ್ದಾರೆ. ಅಭಿಮಾನಿಗಳ ಅಭಿಮಾನಕ್ಕೆ ಸದಾ ತಲೆ ಬಾಗುವೆ ಎಂದಿದ್ದ ವಿರಾಟ್ ಶಾಕ್ನಲ್ಲಿದ್ದಾರೆ.
ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಪ್ರಕರಣ – RCB ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆ ಸೇರಿ ನಾಲ್ವರ ಬಂಧನ
ಈ ಕಣ್ಣೀರೇ ಹೇಳುತ್ತೆ.. ವಿರಾಟ್ ಕೊಹ್ಲಿಗೆ ಈ ಕಪ್ ಅನ್ನೋದು ಎಷ್ಟು ಇಂಪಾರ್ಟೆಂಟ್ ಆಗಿದೆ ಅನ್ನೋದನ್ನ ಹೇಳೋಕೆ. ಬಹುಶಃ ಐಪಿಎಲ್ ಕಪ್ ಗೆಲ್ಲದೇ ವಿರಾಟ್ ನಿವೃತ್ತರಾಗಿದ್ರೆ ಖಂಡಿತವಾಗಿಯೂ ಅವ್ರ ಕ್ರಿಕೆಟ್ ಕರಿಯರ್ ಇನ್ ಕಂಪ್ಲೀಟ್ ಆಗಿ ಬಿಡ್ತಿತ್ತು. ಅದೆಲ್ಲಕ್ಕಿಂತ ಹೆಚ್ಚಾಗಿ ತಾನು ಡೇ ಒನ್ನಿಂದ ಆಡಿದ ತಂಡಕ್ಕಾಗಿ ಸೋತರೂ ನಿಷ್ಠೆ ಬಿಟ್ಟುಕೊಡದ ಫ್ಯಾನ್ಸ್ಗಾಗಿ ಕಪ್ ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದವರು ಈಗ ಅದನ್ನ ಸಾಧಿಸಿ ತೋರಿಸಿದ್ರು. ಅದೇ ಕಪ್ ಹಿಡಿದು ಬೆಂಗಳೂರಿಗೂ ಬಂದಿದ್ರು. ಆ ಟ್ರೋಫಿಯ ಮಹತ್ವ ಏನು ಅನ್ನೋದು ಇದೊಂದು ವಿಡಿಯೋ ನೋಡಿದ್ರೇನೇ ಗೊತ್ತಾಗುತ್ತೆ.
ಕಪ್ ಹಿಡಿದುಕೊಂಡೇ ವಿಧಾನಸೌಧಕ್ಕೆ ಬಂದಿದ್ದ ವಿರಾಟ್!
ಜೂನ್ 3ರಂದು ಅಹಮದಾಬಾದ್ನಲ್ಲಿ ಐಪಿಎಲ್ ಫೈನಲ್ ಪಂದ್ಯ ಗೆದ್ದ ಬೆಂಗಳೂರು ಆಟಗಾರರು ವಿಶೇಷ ವಿಮಾನದಲ್ಲಿ ಬುಧವಾರ ಬೆಂಗಳೂರಿಗೆ ಬಂದಿಳಿದಿದ್ರು. ಅಲ್ಲಿಂದ ವಿಧಾನಸೌಧಕ್ಕೆ ಸನ್ಮಾನ ಕಾರ್ಯಕ್ರಮಕ್ಕೆಂದು ಫ್ರಾಂಚೈಸಿಯ ವಿಶೇಷ ಬಸ್ನಲ್ಲಿ ಕರೆತರಲಾಗಿತ್ತು. ಈ ವೇಳೆ ವಿರಾಟ್ ಕೊಹ್ಲಿ ಕಪ್ ಹಿಡಿದು ಮುಂಭಾಗದಲ್ಲೇ ಕುಳಿತಿದ್ರು. ತನ್ನ ನೆಚ್ಚಿನ ಅಭಿಮಾನಿಗಳಿಗೆ ಟ್ರೋಫಿ ಎತ್ತಿ ತೋರಿಸ್ತಿದ್ರು. ಹಾಗೇ ವಿಧಾನಸೌಧದ ಮುಂಭಾಗ ಸಮಾರಂಭದ ವೇಳೆಯೂ ಫ್ಯಾನ್ಸ್ ನೋಡಿ ಸಂಭ್ರಮಿಸ್ತಿದ್ರು. ಆಟಗಾರರನ್ನ ನೋಡೋಕೆ ಮರಗಳ ಮೇಲೆಲ್ಲಾ ಕುಳಿತಿದ್ದ ಅಭಿಮಾನಿಗಳನ್ನ ತನ್ನ ಸಹ ಆಟಗಾರರಿಗೆ ತೋರಿಸಿ ನೋಡು ಹೇಗಿದೆ ಕ್ರೇಜ್ ಅಂತಾ ಹೇಳ್ತಿದ್ರು. ಇದೆಲ್ಲಾ ಮುಗಿಸಿ ಇನ್ನೇನು ಚಿನ್ನಸ್ವಾಮಿ ಮೈದಾನಕ್ಕೆ ಹೋಗ್ಬೇಕು. ಅದೆಷ್ಟೋ ಚರಿತ್ರೆಗಳಿಗೆ ಸಾಕ್ಷಿಯಾಗಿರೋ ಅದೇ ಮೈದಾದನಲ್ಲಿ ನಿಮಗಾಗಿ ಕಪ್ ಗೆದ್ದು ಬಂದಿದ್ದೇವೆ ಅಂತಾ ಅಭಿಮಾನಿಗಳಿಗೆ ಎದೆಯುಬ್ಬಿಸಿ ಹೇಳ್ಬೇಕು ಅಂತಾ ಕಾಯ್ತಿದ್ರು. ಆದ್ರೆ ಮುಂದೆ ನಡೆದಿದ್ದೆಲ್ಲಾ ಘೋರ!
ವಿರಾಟ್ ಕೊಹ್ಲಿಗೆ ಗೊತ್ತೇ ಇರಲಿಲ್ವಾ ಸಾವಿನ ಸುದ್ದಿ?
ನಿನ್ನೆ ಚಿನ್ನಸ್ವಾಮಿ ಮೈದಾನದ ಹೊರಗೆ ಸುಮಾರು 4 ಗಂಟೆ ಟೈಮಲ್ಲಿ ಕಾಲ್ತುಳಿತ ಸಂಭವಿಸಿ ಅಭಿಮಾನಿಗಳು ಸಾವನ್ನಪ್ಪಿದ್ರು. ಆದ್ರೂ ಕೂಡ ಆಟಗಾರರ ವಿಜಯೋತ್ಸವಕ್ಕೆ ಮೈದಾನದಲ್ಲಿ 15 ನಿಮಿಷಗಳ ಕಾಲಾವಕಾಶ ನೀಡಲಾಗಿತ್ತು. ಬಟ್ ಮೂಲಗಳ ಪ್ರಕಾರ ಈ ಕಾರ್ಯಕ್ರಮದ ವೇಳೆಯಲ್ಲೂ ಆರ್ಸಿಬಿ ಆಟಗಾರರಿಗೆ ಸಾವು ನೋವಿನ ಬಗ್ಗೆ ಮಾಹಿತಿ ನೀಡಿಲ್ಲ ಎನ್ನಲಾಗಿದೆ. ಸಣ್ಣ ಪ್ರಮಾಣದಲ್ಲಿ ಕಾಲ್ತುಳಿತ ಆಗಿದೆ ಎಂದಷ್ಟೇ ಹೇಳಿದ್ದಾರೆ. ಬಹುಶಃ ಅಭಿಮಾನಿಗಳ ಈ ದುರಂತ ಅಂತ್ಯ ಗೊತ್ತಿದ್ರೆ ಪ್ಲೇಯರ್ಸ್ ಕೂಡ ಸೆಲೆಬ್ರೇಷನ್ ಮಾಡ್ತಿರ್ಲಿಲ್ವೋ ಏನೋ.. ಭದ್ರತೆ ಕಾರಣದಿಂದ 15 ನಿಮಿಷಗಳಲ್ಲೇ ಫಂಕ್ಷನ್ ಮುಗಿಸಿ ಅಲ್ಲಿಂದ ವಾಪಸ್ ತಾಜ್ ವೆಸ್ಟ್ ಎಂಡ್ ಹೋಟೆಲ್ಗೆ ವಾಪಸ್ ಆಗಿದ್ರು.
ಅಭಿಮಾನಿಗಳ ಸಾವು.. ನಿವೃತ್ತಿಯ ಆಘಾತ ಕೊಡ್ತಾರಾ ವಿರಾಟ್?
ಹೌದು. ಚಿನ್ನಸ್ವಾಮಿಯ ದುರಂತ ಇಡೀ ಕ್ರೀಡಾ ಜಗತ್ತನ್ನೇ ತಲ್ಲಣಗೊಳಿಸಿದೆ. ಅದ್ರಲ್ಲೂ ಆರ್ಸಿಬಿ ಆಟಗಾರರು ಇನ್ನೂ ಅದೇ ಆಘಾತದಲ್ಲಿದ್ದಾರೆ. ಆದ್ರೆ ಇದೆಲ್ಲದ್ರ ನಡುವೆ ವಿರಾಟ್ ಕೊಹ್ಲಿ ಐಪಿಎಲ್ಗೂ ನಿವೃತ್ತಿಯ ಶಾಕ್ ಕೊಡ್ತಾರಾ ಅನ್ನೋ ಚರ್ಚೆಯಾಗ್ತಿದೆ. ಯಾಕಂದ್ರೆ ಕರ್ನಾಟಕದಲ್ಲಿ ವಿರಾಟ್ ಕೊಹ್ಲಿ ಫ್ಯಾನ್ಸ್ ಯಾವ ಲೆವೆಲ್ನಲ್ಲಿ ಇದ್ದಾರೆ ಅನ್ನೋದು ಇಡೀ ಜಗತ್ತಿಗೇ ಗೊತ್ತಿದೆ. ಆರ್ಸಿಬಿ ವಿಕ್ಟರಿ ಪರೇಡ್ನಲ್ಲಿ ಭಾಗಿಯಾಗಿದ್ದ 90 ಪರ್ಸೆಂಟ್ ಜನ ಕೊಹ್ಲಿ ಅಭಿಮಾನಿಗಳೇ ಆಗಿದ್ದಾರೆ. ಆದ್ರೀಗ ಅದೇ ಅಭಿಮಾನಿಗಳ ಸೇಫ್ಟಿಗಾಗಿ ವಿರಾಟ್ ಕೊಹ್ಲಿ ಎಲ್ಲಿ ನಿವೃತ್ತಿಯ ನಿರ್ಧಾರ ತೆಗೆದುಕೊಳ್ತಾರೋ ಅಂತಾ ಕ್ರಿಕೆಟ್ ವಿಶ್ಲೇಷಕರು ಹೇಳಿದ್ದಾರೆ. ಇಷ್ಟು ವರ್ಷ ಆರ್ಸಿಬಿಗೆ ಕಪ್ ಕೊಡಿಸೋಕೆ ವಿರಾಟ್ ಆಡ್ತಾ ಇದ್ರು. ಆದ್ರೀಗ ಅದೂ ಕೂಡ ಫುಲ್ ಫಿಲ್ ಆಗಿದೆ. ಇಂಥಾ ಟೈಮಲ್ಲೇ ದೃಢ ನಿರ್ಧಾರ ತಗೊಂಡ್ರೂ ಅಚ್ಚರಿ ಇಲ್ಲ ಎಂದಿದ್ದಾರೆ.
ಇನ್ನು ಫ್ಯಾನ್ಸ್ ಜೊತೆ ಸೆಲೆಬ್ರೇಷನ್ನಲ್ಲಿ ಭಾಗಿಯಾಗೋಕೆ ಪತ್ನಿ ಅನುಷ್ಕಾ ಶರ್ಮಾ ಜೊತೆ ಬೆಂಗಳೂರಿಗೆ ಬಂದಿದ್ದ ವಿರಾಟ್ ಕೊಹ್ಲಿ ಇದೀಗ ನೋವಿನಲ್ಲೇ ವಾಪಸ್ ಆಗಿದ್ದಾರೆ. ಅಭಿಮಾನಿಗಳ ಸಾವಿನ ಆಘಾತದಲ್ಲೇ ಬೆಂಗಳೂರು ತೊರೆದಿದ್ದಾರೆ. ನೋವಿನಲ್ಲೇ ಏರ್ಪೋರ್ಟ್ನಲ್ಲಿ ಹೋಗುವ ದೃಶ್ಯ ಸೆರೆಯಾಗಿದೆ. ಒಟ್ನಲ್ಲಿ ಆರ್ಸಿಬಿಗಾಗಿ ಎಲ್ಲವನ್ನೂ ಅರ್ಪಿಸಿದ್ದೇನೆ ಎಂದಿದ್ದ ವಿರಾಟ್ ಅದೇ ಅಭಿಮಾನಿಗಳ ಸಾವಿನಿಂದ ಆಘಾತಗೊಂಡಿರೋದಂತೂ ಸುಳ್ಳಲ್ಲ.