ಕ್ಯಾಪ್ಟನ್ಸಿ ಟಾಸ್ಕ್‌ನಿಂದ ವಿನಯ್, ನಮ್ರತಾರನ್ನು ಹೊರಗಿಟ್ಟ ಸ್ನೇಹಿತ್ – ‘ಅವನು ಯಾವ ಪುಟಗೋಸಿ ಫ್ರೆಂಡ್’ಎಂದು ಪ್ರಶ್ನಿಸಿದ ನಮ್ರತಾ

ಕ್ಯಾಪ್ಟನ್ಸಿ ಟಾಸ್ಕ್‌ನಿಂದ ವಿನಯ್, ನಮ್ರತಾರನ್ನು ಹೊರಗಿಟ್ಟ ಸ್ನೇಹಿತ್ – ‘ಅವನು ಯಾವ ಪುಟಗೋಸಿ ಫ್ರೆಂಡ್’ಎಂದು ಪ್ರಶ್ನಿಸಿದ ನಮ್ರತಾ

ಬಿಗ್‌ಬಾಸ್ ಮನೆಯಲ್ಲಿ ಈ ವಾರ ಕ್ಯಾಪ್ಟನ್ ಆಗಿರುವ ಸ್ನೇಹಿತ್ ಗೌಡ ಕೊನೆಗೂ ಸ್ವಲ್ಪಮಟ್ಟಿಗೆ ಬುದ್ದಿಕಲಿತುಕೊಂಡಿದ್ದಾರೆ ಅನ್ನೋದನ್ನು ಸಾಬೀತುಪಡಿಸಿದ್ದಾರೆ. ಯಾವಾಗಲೂ ವಿನಯ್ ಗೌಡ ಮತ್ತು ನಮ್ರತಾ ಬಾಲದಂತೆ ಅವರು ಹೇಳಿದನ್ನು ಮಾತ್ರ ಕೇಳುತ್ತಿದ್ದ ಸ್ನೇಹಿತ್ ಗೆ ಕೊನೆಗೂ ತಪ್ಪು , ಸರಿಗಳ ಲೆಕ್ಕಾಚಾರ ಅರ್ಥವಾಗಿದೆ. ಹೀಗಾಗಿಯೇ ಈ ವಾರದ ಕ್ಯಾಪ್ಟನ್ಸಿ ಟಾಸ್ಕ್‌ನಿಂದ ವಿನಯ್ ಮತ್ತು ನಮ್ರತಾರನ್ನು ಹೊರಗಿಟ್ಟಿದ್ದಾರೆ.

ಇದನ್ನು ಓದಿ: ವಿನಯ್ ಸೇಡಿಗೆ ಆಸ್ಪತ್ರೆ ಸೇರಿದರಾ ಸಂಗೀತಾ, ಡ್ರೋನ್ ಪ್ರತಾಪ್ – ಬಿಗ್‌ಬಾಸ್ ಮನೆಯಲ್ಲಿ ಏನಾಗುತ್ತಿದೆ?

ಬಿಗ್‌ಬಾಸ್ ಮನೆಯಲ್ಲಿ ವಿನಯ್ ಗೌಡ ಮತ್ತು ನಮ್ರತಾ ಹೇಳಿದ್ದನ್ನು ಕೇಳಿಕೊಂಡು ಇರುತ್ತಿದ್ದರು ಸ್ನೇಹಿತ್ ಗೌಡ. ಅದರಲ್ಲೂ ಕ್ಯಾಪ್ಟನ್ ಆದ ಮೇಲೂ ಸ್ನೇಹಿತ್, ವಿನಯ್ ಟೀಮ್ ಕಡೆಗೆ ಜಾಸ್ತಿ ವಾಲಿಕೊಂಡೇ ಇದ್ದರು. ಅದರಲ್ಲೂ ನಮ್ರತಾ ಮತ್ತು ವಿನಯ್ ಹೇಳಿದ ಗೆರೆ ದಾಟುತ್ತಲೇ ಇರಲಿಲ್ಲ. ಆದರೆ, ಯಾವಾಗ ವಿನಯ್ ಆರ್ಭಟ ಜಾಸ್ತಿಯಾಯ್ತೋ, ನಮ್ರತಾ ಹಾರಾಟ ಅತಿರೇಕಕ್ಕೆ ಹೋಯ್ತೋ ಸ್ವಲ್ಪ ಯಾಕೋ ಸರಿಯಾಗುತ್ತಿಲ್ಲ ಎಂಬ ವಿಚಾರ ಸ್ನೇಹಿತ್ ಅರಿವಿಗೆ ಬರಲು ಶುರುವಾಗಿದೆ. ಹೀಗಾಗಿ ವಾರದ ಕೊನೆ ಸಮೀಪಿಸುತ್ತಿದ್ದಂತೆಯೇ ನಮ್ರತಾ ಮತ್ತು ವಿನಯ್ ಲೆಕ್ಕಾಚಾರ ಉಲ್ಟಾ ಆಗಿದೆ.

ಈ ವಾರ ಮನೆಯ ಕ್ಯಾಪ್ಟನ್ ಆಗಿರುವ ಸ್ನೇಹಿತ್ ವಿಶೇಷ ಅಧಿಕಾರವನ್ನು ಪಡೆದಿದ್ದರು. ಆ ಅಧಿಕಾರದ ಪ್ರಕಾರ ಮನೆಯೊಳಗಿನ ಹಲವು ಸಂಗತಿಗಳ ಬಗ್ಗೆ ಅವರ ನಿರ್ಧಾರವೇ ಅಂತಿಮವಾಗಿತ್ತು. ಇದೇ ಅಧಿಕಾರ ಬಳಸಿಕೊಂಡು ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ ಸ್ನೇಹಿತ್. ‘ಮನೆಯ ಸದಸ್ಯರ ಪೈಕಿ ಕ್ಯಾಪ್ಟನ್ ಪಟ್ಟಕ್ಕೆ ಸ್ಪರ್ಧಿಸಲು ಅನರ್ಹರಾದ ಸದಸ್ಯರನ್ನು ಸೂಚಿಸಿ’ ಎಂದು ಬಿಗ್‌ಬಾಸ್ ಕೇಳಿದ್ದಾರೆ. ಇದಕ್ಕೆ ಎಲ್ಲರೂ ಅಚ್ಚರಿ ಪಡುವಂತೆ ಸ್ನೇಹಿತ್ ನಾಮಿನೇಟ್ ಮಾಡಿದ್ದಾರೆ. ಅವರು ನಾಮಿನೇಟ್ ಮಾಡಿದ ಇಬ್ಬರು ಮುಖ್ಯ ಸದಸ್ಯರೆಂದರೆ, ನಮ್ರತಾ ಮತ್ತು ವಿನಯ್. ಇದಕ್ಕೆ ಅವರು ಕೊಟ್ಟ ಕಾರಣ, ‘ವಿನಯ್ ಮತ್ತು ನಮ್ರತಾ ಇಬ್ಬರೂ ಉಸ್ತುವಾರಿಯಾದ ನನ್ನ ಮಾತುಗಳನ್ನು ಮೀರಿದ್ದಾರೆ’ ಎಂಬುದು. ತಮ್ಮನ್ನು ಖಂಡಿತ ಕ್ಯಾಪ್ಟನ್ಸಿ ಟಾಸ್ಕ್ನಿಂದ ಹೊರಗಿಡುವುದಿಲ್ಲ ಎಂದೇ ನಂಬಿದ್ದ ವಿನಯ್ ಮತ್ತು ನಮ್ರತಾ ಇಬ್ಬರಿಗೂ ಸ್ನೇಹಿತ್ ಮಾತು ಕೇಳಿ ಆಘಾತವಾಗಿದೆ. ಇದಕ್ಕೆ ವಿನಯ್ ಹಾಗೂ ನಮ್ರತಾ ಸಿಟ್ಟಾಗಿದ್ದಾರೆ. ‘ಅವನು ಯಾವ ಪುಟಗೋಸಿ ಫ್ರೆಂಡ್’ ಎಂದು ನಮ್ರತಾ ಕಣ್ಣೀರು ಹಾಕಿದ್ದಾರೆ. ಇವರ ಫ್ರೆಂಡ್​ಶಿಪ್​ನಲ್ಲಿ ಬಿರುಕು ಮೂಡುವ ಸೂಚನೆ ಸಿಕ್ಕಿದೆ.

Sulekha