ಬಿಗ್‌ಬಾಸ್ ಮನೆಯಲ್ಲಿ ವರಸೆ ಬದಲಿಸಿದ ವಿನಯ್ ಗೌಡ – ಡ್ರೋನ್ ಪ್ರತಾಪ್ ಬಳಿ ಕ್ಷಮೆಯಾಚನೆ

ಬಿಗ್‌ಬಾಸ್ ಮನೆಯಲ್ಲಿ ವರಸೆ ಬದಲಿಸಿದ ವಿನಯ್ ಗೌಡ – ಡ್ರೋನ್ ಪ್ರತಾಪ್ ಬಳಿ ಕ್ಷಮೆಯಾಚನೆ

ಬಿಗ್‌ಬಾಸ್ ಫಿನಾಲೆಗೆ ಕೆಲವೇ ದಿನಗಳಷ್ಟೇ ಬಾಕಿಯಿದೆ. ಸ್ಪರ್ಧಿಗಳಲ್ಲಿ ಕೆಲವರು ಬದಲಾದರೆ, ಇನ್ನು ಕೆಲವರು ಒಳಗೊಂದು ಹೊರಗೊಂದು ಆಟದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆ ಕೆಲವು ವಾರ ಸೈಲೆಂಟ್ ಆಗಿದ್ದ ವಿನಯ್ ಗೌಡ ಅವರು ಈ ವಾರ ಕಿರುಚಾಡಿದ್ದಾರೆ. ಪ್ರತಾಪ್ ವಿರುದ್ಧ ಅವಾಚ್ಯ ಶಬ್ದ ಬಳಕೆ ಮಾಡಿದ್ದರು. ಇದಾದ ಕೆಲವೇ ಹೊತ್ತಲ್ಲಿ ವಿನಯ್ ಗೌಡ ಅವರು ಪ್ರತಾಪ್ ಬಳಿ ಕ್ಷಮೆ ಕೇಳಿದ್ದಾರೆ.

ಇದನ್ನೂ ಓದಿ: ಬಿಗ್‌ಬಾಸ್ ಮನೆಯಿಂದ ಮೈಕಲ್ ಔಟ್ – ವಿನಯ್ ಟೀಮ್‌ನ ಮತ್ತೊಂದು ವಿಕೆಟ್ ಪತನ

ಬಿಗ್ ಬಾಸ್ ಮನೆಯಲ್ಲಿ ವಿನಯ್ ಗೌಡ ಸಿಟ್ಟಲ್ಲಿ ಕಿರುಚಾಡುತ್ತಾರೆ. ಆ ಸಂದರ್ಭದಲ್ಲಿ ಅವರು ಸಾಕಷ್ಟು ಅವಾಚ್ಯ ಶಬ್ದ ಬಳಕೆ ಮಾಡುತ್ತಾರೆ. ಈ ರೀತಿ ಆಗಿ ಮನೆಯ ವಾತಾವರಣ ಸಾಕಷ್ಟು ಬಾರಿ ಹಾಳಾಗಿದ್ದೂ ಇದೆ. ಈ ವಾರ ಡ್ರೋನ್ ಪ್ರತಾಪ್ ಹಾಗೂ ವಿನಯ್ ಗೌಡ ಮಧ್ಯೆ ಜಗಳ ತಾರಕಕ್ಕೇರಿತ್ತು. ವಿನಯ್ ಗೌಡ ಗುಂಪಿನಲ್ಲಿ ಇದ್ದವರೇ ಎಲ್ಲರೂ ಎಲಿಮಿನೇಟ್ ಆಗಿದ್ದಾರೆ. ‘ವಿನಯ್ ಗೌಡ ಅವರು ಗೆಳೆಯರ ತಪ್ಪನ್ನು ತಿದ್ದಲಿಲ್ಲ’ ಎನ್ನುವ ಅಭಿಪ್ರಾಯವನ್ನು ಪ್ರತಾಪ್ ವ್ಯಕ್ತಪಡಿಸಿದರು. ಇದರಿಂದ ಸಿಟ್ಟಾದ ವಿನಯ್ ಅವರು ಪ್ರತಾಪ್‌ಗೆ ಬಾಯಿಗೆ ಬಂದಂತೆ ಬೈದಿದ್ದರು. ಈಗ ವಿನಯ್‌ಗೆ ತಪ್ಪಿನ ಅರಿವಾಗಿದೆ. ‘ಫಿನಾಲೆಗೆ ಹೋಗೋಕೆ ಯಾರು ಅರ್ಹರು’ ಎನ್ನುವ ಆಯ್ಕೆಯನ್ನು ಮಾಡಬೇಕಿತ್ತು. ವಿನಯ್ ಗೌಡ ಅವರು ಕಾರ್ತಿಕ್ ಹೆಸರನ್ನು ತೆಗೆದುಕೊಂಡರು. ಆ ಬಳಿಕ ಅವರು ಎಲ್ಲರ ಬಳಿ ಕ್ಷಮೆ ಕೇಳಿದರು. ‘ನನಗೆ ಕೋಪ ಬಂದಾಗ ಕೂಗಾಡುತ್ತೇನೆ. ಇದರಿಂದ ಯಾರಿಗಾದರೂ ಬೇಸರ ಆಗಿದ್ದರೆ ಕ್ಷಮೆ ಕೇಳುತ್ತೇನೆ’ ಎಂದರು ವಿನಯ್. ಆ ಬಳಿಕ ಪ್ರತಾಪ್ ಬಳಿ ತೆರಳಿ ಅವರಿಗೆ ಹಗ್ ಕೊಟ್ಟು, ‘ನನ್ನಿಂದ ಬೇಸರ ಆಗಿದ್ದರೆ ಕ್ಷಮೆ ಇರಲಿ. ನೀನು ಗೆದ್ದರೆ ನನಗೆ ಖುಷಿ ಆಗುತ್ತದೆ’ ಎಂದರು. ವಿನಯ್ ಕ್ಷಮೆ ಕೇಳಿದ್ದಕ್ಕೆ ಅನೇಕರು ಸಂತಸ ವ್ಯಕ್ತಪಡಿಸಿದರು. ವಿನಯ್ ಕ್ಷಮೆ ಕೇಳಿದ್ದು ಪ್ರತಾಪ್‌ಗೆ ಖುಷಿ ನೀಡಿತು. ‘ತಪ್ಪಿನ ಅರಿವಾಯಿತಲ್ಲ. ಅದು ಖುಷಿಯ ವಿಚಾರ. ನೀವು ಗೆದ್ದರೆ ನನಗೂ ಸಂತೋಷವೇ’ ಎಂದರು ಪ್ರತಾಪ್. ಜೊತೆಗೆ ನಾಲಿಗೆಗೆ ಲಗಾಮು ಹಾಕಿಕೊಳ್ಳಿ ಎಂದು ಪ್ರತಾಪ್ ಮನವಿ ಮಾಡಿಕೊಂಡರು. ಇದಕ್ಕೆ ವಿನಯ್ ಸಮ್ಮತಿ ಸೂಚಿಸಿದರು.

ವಿನಯ್ ಗೌಡ ಈ ವಾರ ನಾಮಿನೇಷನ್ ಲಿಸ್ಟ್ನಲ್ಲಿ ಇದ್ದಾರೆ. ಅವರ ವೋಟ್ ಮೇಲೆ ಇದು ಪ್ರಭಾವ ಬೀರುವ ಸಾಧ್ಯತೆ ಇದೆ. ಈ ವಾರ ಕ್ಯಾಪ್ಟನ್ ಆಗಿರೋ ಸಂಗೀತಾ ಅವರು ನಾಮಿನೇಷನ್ನಿಂದ ಬಚಾವ್ ಆಗಿದ್ದಾರೆ. ಜೊತೆಗೆ ಅಧಿಕಾರ ಬಳಸಿಕೊಂಡು ಪ್ರತಾಪ್‌ನ ಸೇವ್ ಮಾಡಿದ್ದಾರೆ. ಉಳಿದಂತೆ ವರ್ತೂರು ಸಂತೋಷ್, ತುಕಾಲಿ ಸಂತೋಷ್, ವಿನಯ್, ನಮ್ರತಾ, ತನಿಷಾ ಹಾಗೂ ಕಾರ್ತಿಕ್ ನಾಮಿನೇಟ್ ಆಗಿದ್ದಾರೆ.

Sulekha