ಹಾವು ಕಚ್ಚಿತೆಂದು ಆಸ್ಪತ್ರೆಗೆ ಓಡೋಡಿ ಬಂದ.. – ಆತನ ಕೈಯಲ್ಲಿದ್ದ ಚೀಲ ನೋಡಿ ವೈದ್ಯರೇ ಶಾಕ್!‌

ಹಾವು ಕಚ್ಚಿತೆಂದು ಆಸ್ಪತ್ರೆಗೆ ಓಡೋಡಿ ಬಂದ.. – ಆತನ ಕೈಯಲ್ಲಿದ್ದ ಚೀಲ ನೋಡಿ ವೈದ್ಯರೇ ಶಾಕ್!‌

ಹಾವು ಅನ್ನೋ ಶಬ್ದ ಕೇಳಿದಾಗಲೇ ಎಲ್ಲರೂ ಭಯಗೊಳ್ಳುತ್ತಾರೆ. ಇನ್ನು ಹಾವು ಕಚ್ಚಿದರೆ ಬೇಗ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಾರೆ. ಆದ್ರೆ ಇಲ್ಲೊಬ್ಬ ಭೂಪ ಹಾವು ಕಚ್ಚಿತೆಂದು ಜೀವಂತ ಹಾವನ್ನೇ ಆಸ್ಪತ್ರೆಗೆ ಚೀಲದಲ್ಲಿ ತುಂಬಿಕೊಂಡು ಬಂದಿರುವ ಘಡನೆ ನಡೆದಿದೆ.

ಉತ್ತರ ಪ್ರದೇಶದಲ್ಲಿ ಪಟುಲ್​​​ಖಿ ಎಂಬ ಗ್ರಾಮದಲ್ಲಿ ವ್ಯಕ್ತಿಯೊಬ್ಬನಿಗೆ ನಾಗರ ಹಾವು ಕಚ್ಚಿದೆ. ಕೂಡಲೇ ಆತ ಜೀವಂತ ಹಾವನ್ನು ಚೀಲದಲ್ಲಿ ತುಂಬಿಕೊಂಡು ಆಸ್ಪತ್ರೆಗೆ ಬಂದಿದ್ದಾನೆ. ಇದೀಗ ಆತನ ವಿಡಿಯೋ ಭಾರಿ ವೈರಲ್‌ ಆಗಿದೆ.

ಇದನ್ನೂ ಓದಿ: 50 ಒತ್ತೆಯಾಳುಗಳ ಬಿಡುಗಡೆಗೆ ಹಮಾಸ್ ಒಪ್ಪಿಗೆ‌ – 4 ದಿನ ಕದನ ವಿರಾಮ ಘೋಷಿಸಿದ ಇಸ್ರೇಲ್!

ಸೂರಜ್ ಎಂಬಾತ ಹಾವಿನಿಂದ ಕಚ್ಚಿಸಿಕೊಂಡ ಯುವಕ. ಮನೆಯಲ್ಲಿರುವಾಗ ಆತನಿಗೆ ಹಾವು ಕಚ್ಚಿದೆ. ಬಳಿಕ ಆತ ಮಿರ್ಜಾಪುರ  ವಿಭಾಗೀಯ ಆಸ್ಪತ್ರೆಗೆ ತೆರಳಿ ವೈದ್ಯಕೀಯ ನೆರವು ಕೋರಿದ್ದಾನೆ. ತುರ್ತು ಚಿಕಿತ್ಸಾ ವಿಭಾಗಕ್ಕೆ ಸೂಟು-ಬೂಟು ಧರಿಸಿ ಬಂದ ಆತನನ್ನು ನೋಡಿ ವೈದ್ಯರು ಒಂದು ಕ್ಷಣ ಶಾಕ್‌ ಆಗಿದ್ದಾರೆ. ಏಕೆಂದರೆ ಸೂರಜ್ ತನಗೆ ಹಾವು ಕಚ್ಚಿದೆ ಎಂದು ಚೀರಾಡುತ್ತಾ ಆಸ್ಪತ್ರೆಗೆ ಬಂದಿದ್ದಾನೆ.  ಜೊತೆಗೆ, ತನಗೆ ಕಚ್ಚಿರುವ ಹಾವನ್ನು ಜೀವಂತವಾಗಿ ತಂದು ಪ್ರದರ್ಶಿಸಿದ್ದಾನೆ. ಆಸ್ಪತ್ರೆ ಮತ್ತು ಸಿಬ್ಬಂದಿಯಲ್ಲಿ ಇದು ಭೀತಿಯನ್ನು ಸೃಷ್ಟಿಸಿತು ಎಂದು ಅಲ್ಲಿನ ವೈದ್ಯಾಧಿಕಾರಿ ಹೇಳಿದ್ದಾರೆ. ಹಾವನ್ನು ಕಂಡ ವೈದ್ಯರು ತಕ್ಷಣವೇ ವಿಷ ವಿರೋಧಿ ಚುಚ್ಚುಮದ್ದನ್ನು ಆ ಯುವಕನಿಗೆ ಚುಚ್ಚಿದ್ದಾರೆ. ಸೂರಜ್ ಅದರಿಂದ ಚೇತರಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.

ಆಸ್ಪತ್ರೆಯ ಎಸ್‌ಐಸಿ ಪ್ರಭಾರಿ ಡಾ. ತರುಣ್ ಸಿಂಗ್ ಅವರು ಘಟನೆಯನ್ನು ದೃಢಪಡಿಸಿದರು. ಚಿಕಿತ್ಸೆಯ ನಂತರ ಸೂರಜ್ ಅವರ ಸ್ಥಿತಿ ಸುಧಾರಿಸಿದೆ. ತುರ್ತು ಚಿಕಿತ್ಸಾ ವಿಭಾಗದ ಹಾಸಿಗೆಯ ಮೇಲೆ ಹಾವನ್ನು ಪ್ರದರ್ಶಿಸಿ ಆತಂಕದ ವಾತಾವರಣ ನಿರ್ಮಿಸಿಬಿಟ್ಟಿದ್ದರು. ಇದೀಗ ಎಲ್ಲವೂ ಶಾಂತ ಸ್ಥಿತಿಗೆ ಮರಳಿದೆ. ಘಟನೆಯ ಸಂಪೂರ್ಣ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Shwetha M