ಚಿನ್ನಾರಿಮುತ್ತನ ಬಾಳಸಂಗಾತಿ ಸ್ಪಂದನಾ ಇನ್ನಿಲ್ಲ – ಮುದ್ದಿನ ಮಡದಿಯ ಅಗಲಿಕೆಯ ನೋವಿನಲ್ಲಿ ವಿಜಯ್ರಾಘವೇಂದ್ರ

ಚಿನ್ನಾರಿಮುತ್ತನ ಬಾಳಸಂಗಾತಿ ಸ್ಪಂದನಾ ಇನ್ನಿಲ್ಲ – ಮುದ್ದಿನ ಮಡದಿಯ ಅಗಲಿಕೆಯ ನೋವಿನಲ್ಲಿ ವಿಜಯ್ರಾಘವೇಂದ್ರ

ಸ್ಯಾಂಡಲ್‌ವುಡ್ ನಟ ವಿಜಯ್ ರಾಘವೇಂದ್ರ ತಮ್ಮ ಮುದ್ದಿನ ಮಡದಿಯನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ. ಚಿನ್ನಾರಿಮುತ್ತನಿಗೆ ತನ್ನ ಪತ್ನಿ ಸ್ಪಂದನಾ ಅಂದರೆ ಅತೀವ ಪ್ರೀತಿ. ತನ್ನ ಜೀವನದ ಭಾಗವೇ ಸ್ಪಂದನಾ ಎಂದು ಯಾವಾಗಲೂ ವಿಜಯ್ ರಾಘವೇಂದ್ರ ಹೇಳುತ್ತಿದ್ದರು. ತನ್ನ ಜೀವವೇ ಸ್ಪಂದನಾ, ತನ್ನ ಉಸಿರೇ ತನ್ನ ಪತ್ನಿ ಎಂದು ಹೇಳಿಕೊಳ್ಳುವ ವಿಜಯ್ ರಾಘವೇಂದ್ರ ಅವರ ಬಾಳಲ್ಲಿ ವಿಧಿ ಈ ರೀತಿ ಮಾಡಬಾರದಾಗಿತ್ತು. ದಾಂಪತ್ಯ ಜೀವನದಲ್ಲಿ ವಿಜಯ್ ರಾಘವೇಂದ್ರ ಮತ್ತು ಸ್ಪಂದನಾ ದಂಪತಿಯ ಅನ್ಯೋನ್ಯತೆ ನೋಡಿ ಎಲ್ಲರೂ ಖುಷಿಪಡುತ್ತಿದ್ದರು. ಆದರೆ, ಈ ಸುಮಧುರ ದಾಂಪತ್ಯದಲ್ಲಿ ಇಂಥಾ ಬರಸಿಡಿಲು ಬಡಿಯುತ್ತದೆ ಎಂಬ ಕಲ್ಪನೆಯೂ ಇರಲಿಲ್ಲ. ತನ್ನ ಪ್ರೀತಿಯ ಪತ್ನಿಯನ್ನು ವಿಜಯ್ ರಾಘವೇಂದ್ರ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ: ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ವಿಧಿವಶ

2007ರ ಆಗಸ್ಟ್ 26 ರಂದು ವಿಜಯ್ ರಾಘವೇಂದ್ರ ಹಾಗೂ ಸ್ಪಂದನಾ ಮದುವೆಯಾಗಿದ್ದರು.. ಇವರ 16ನೇ ವಿವಾಹ ವಾರ್ಷಿಕೋತ್ಸವಕ್ಕೆ ಕೇವಲ 19 ದಿನಗಳಷ್ಟೇ ಬಾಕಿ ಇತ್ತು.. ಆದ್ರೆ ಅಷ್ಟರಲ್ಲೇ ಈ ಘೋರ ದುರಂತ ನಡೆದು ಹೋಗಿದೆ.. ವಿಜಯ್ ರಾಘವೇಂದ್ರ-ಸ್ಪಂದನಾ ಒಬ್ಬರಿಗೊಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಇವರಿಬ್ಬರ ಪ್ರೀತಿ ಶುರುವಾಗಿದ್ದು ಒಂದು ಕಾಫಿ ಡೇಯಲ್ಲಿ. ಮಲ್ಲೇಶ್ವರಂನ ಕಾಫಿ ಡೇ ಒಂದರಲ್ಲಿ 2004ರಲ್ಲಿ ಇಬ್ಬರ ಪರಿಚಯವಾಗಿತ್ತು. ಬಳಿಕ ಇಬ್ಬರ ನಡುವೆ ಗೆಳೆತನ ಶುರುವಾಗಿ ಅದು ಪ್ರೀತಿಗೆ ತಿರುಗಿತ್ತು.

2007ರಲ್ಲಿ ಶೇಷಾದ್ರಿಪುರಂನ ಕಾಫಿ ಡೇಯಲ್ಲಿ ವಿಜಯ್ ರಾಘವೇಂದ್ರ ಅವರು ಸ್ಪಂದನಾಗೇ ಪ್ರಪೋಸ್ ಮಾಡಿದ್ದರು.. ಸ್ಪಂದನಾ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ ಶಿವರಾಂ ಅವರ ಮಗಳು ಅನ್ನೋದು ವಿಜಯ್ ರಾಘವೇಂದ್ರಗೆ ಗೊತ್ತಾಗಿತ್ತು. ಪೊಲೀಸ್‌ ಅಧಿಕಾರಿಯಾಗಿ ಒಳ್ಳೆ ಹೆಸರನ್ನು ಮಾಡಿದ್ದ ಅಧಿಕಾರಿ ಬಿ.ಕೆ ಶಿವರಾಂ ಹಾಗೂ ಚಿನ್ನೇಗೌಡರ ನಡುವೆ ಉತ್ತಮ ಬಾಂಧವ್ಯವಿತ್ತು. ಇಬ್ಬರ ಮನೆಯಲ್ಲೂ ಇವರ ಮದುವೆಗಾಗಿ ಹುಡುಗ ಹುಡುಗಿಯನ್ನು ಹುಡುಕುತ್ತಿದ್ದರು. ಆ ಸಂದರ್ಭದಲ್ಲಿ ಇವರಿಬ್ಬರ ಪ್ರೀತಿ ಎರಡೂ ಮನೆಯವರಿಗೂ ತಿಳಿದು ಇವರಿಬ್ಬರ ಮದುವೆಗೆ ಒಪ್ಪಿಕೊಂಡಿದ್ರು. ಬಳಿಕ ಹಿರಿಯರು ನಿಶ್ಚಯಿಸಿದಂತೆ 2007ರ ಆಗಸ್ಟ್ 26ರಂದು ಮದುವೆಯಾಗಿದ್ರು. ದಂಪತಿಗೆ ಶೌರ್ಯ ಎಂಬ 14 ವರ್ಷದ ಮಗ ಇದ್ದಾನೆ.

suddiyaana