ವಿಜಯಪುರದ ಗೊಡ್ಡೆಮ್ಮೆ ಯತ್ನಾಳ್‌.. ಒದರಿ..ಒದರಿ ಸಾಯೋ ಪರಿಸ್ಥಿತಿ ಬರುತ್ತದೆ – ವಿಜಯಾನಂದ ಕಾಶಪ್ಪನವರ್ ಹೀಗೆ ಹೇಳಿದ್ಯಾಕೆ?

ವಿಜಯಪುರದ ಗೊಡ್ಡೆಮ್ಮೆ ಯತ್ನಾಳ್‌.. ಒದರಿ..ಒದರಿ ಸಾಯೋ ಪರಿಸ್ಥಿತಿ ಬರುತ್ತದೆ – ವಿಜಯಾನಂದ ಕಾಶಪ್ಪನವರ್ ಹೀಗೆ ಹೇಳಿದ್ಯಾಕೆ?

ಲೋಕಸಭೆ ಚುನಾವಣೆಯ ಎರಡನೇ ಹಂತ ಮತದಾನಕ್ಕೆ ಕೇವಲ 2 ದಿನ ಮಾತ್ರ ಬಾಕಿ ಉಳಿದಿದೆ. ಅತ್ತ ಪ್ರಚಾರದ ಕಾವು ಹೆಚ್ಚಾಗುತ್ತಿದ್ದರೆ, ಇತ್ತ ನಾಯಕರ ಮಾತಿನ ಭರಾಟೆ ಕೂಡ ಜೋರಾಗೇ ಇದೆ.  ವೀಣಾ ಕಾಶಪ್ಪನವರ್ ಪತಿ, ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಅವರು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಈ ವೇಳೆ ಯತ್ನಾಳ್‌ ಅವರನ್ನು ವಿಜಯಪುರದ ಗೊಡ್ಡೆಮ್ಮೆ ಅಂತಾ ಕರೆದಿದ್ದಾರೆ.

ಇದನ್ನೂ ಓದಿ:  ಭದ್ರಕೋಟೆಯಲ್ಲಿ ಗೆಲ್ತಾರಾ ಶೋಭಾ..? – ಪ್ರೊಫೆಸರ್ ಗೆ ಸಿಗುತ್ತಾ ಉತ್ತರ?

ಬಾಗಲಕೋಟೆ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ  ಸಂಯುಕ್ತಾ ಪಾಟೀಲ್ ಪರ  ಪ್ರಚಾರದ ಸಭೆಯಲ್ಲಿ ವಿಜಯಾನಂದ ಕಾಶಪ್ಪನವರ್ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಶಾಸಕ ಯತ್ನಾಳ್ ಅಖಂಡ ವಿಜಯಪುರ ಜಿಲ್ಲೆಯ ಗೊಡ್ಡೆಮ್ಮೆ. ಅದು ಹಿಂಡುವುದೇ ಇಲ್ಲ. ಅವಾ ಎಲ್ಲಾ ಜಾತಿಗೂ ಬೈತಾನ, ಯಾರಿಗೂ ಬಿಟ್ಟಿಲ್ಲ. ಬಹಳ ದಿನದಿಂದ ಎಮ್ಮಿಕರ ಒದರಾಕ ಹತೈತಿ, ಪಂಚಮಸಾಲಿಗೆ ನೀ ಒಬ್ಬನಾ ಹುಟ್ಟಿಲ್ಲ ಎಂಬುದು ಗಮನದಲ್ಲಿರಲಿ. ನಿನ್ನ ಬಾಯಿ ಮುಚ್ಚಿಕೊಂಡು ಇದ್ದರೆ, ಒಳಿತು. ಇಲ್ಲದಿದ್ದರೆ ಈಶ್ವರಪ್ಪಗೆ ಬಂದ ಗತಿಯೇ ನಿನಗೂ ಬರ್ತೈತಿ ಎಂದು ಎಚ್ಚರಿಕೆ ಕೊಟ್ಟರು.

ಈ ದೇಶ, ಜಾತಿ ಇವರಪ್ಪನ ಮನೆಯದಾ? ಹೋದಲ್ಲೆಲ್ಲ ಅಲ್ಪಸಂಖ್ಯಾತರನ್ನ ಬೈಯೋಕೆ? ಇವನು ಈ ಹಿಂದೆ ಎಲ್ಲಿದ್ದ ಅಂತ ಈ ಎರಡು ಜಿಲ್ಲೆಗೆ ಗೊತ್ತಿಲ್ಲವೇನು, ಬಾಯಿಗೆ ಲಗಾಮ್ ಹಾಕಿಕೊಂಡರೆ ಒಳಿತು. ಇಲ್ಲ ಎಂದರೆ ಎಮ್ಮಿಕರದಂಗ ಒದರಿ..ಒದರಿ ಸಾಯೋ ಪರಿಸ್ಥಿತಿ ಬರುತ್ತದೆ  ಅಂತಾ ಹೇಳಿದ್ದಾರೆ.

Shwetha M

Leave a Reply

Your email address will not be published. Required fields are marked *