ಅಂಗಾಂಗ ದಾನ ಮಾಡಲು ತೆಲುಗು ನಟ ವಿಜಯ ದೇವರಕೊಂಡ ನಿರ್ಧಾರ
ದೇಹ ಮಣ್ಣಾಗುವ ಬದಲು ಉಪಯೋಗವಾಗಲಿ – ವಿಜಯ ದೇವರಕೊಂಡ

ಅಂಗಾಂಗ ದಾನ ಮಾಡಲು ತೆಲುಗು ನಟ ವಿಜಯ ದೇವರಕೊಂಡ ನಿರ್ಧಾರದೇಹ ಮಣ್ಣಾಗುವ ಬದಲು ಉಪಯೋಗವಾಗಲಿ – ವಿಜಯ ದೇವರಕೊಂಡ

ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಅದೆೆಷ್ಟೋ ಮಂದಿಗೆ ಅಂಗಾಂಗ ದಾನಕ್ಕೆ ಸ್ಪೂರ್ತಿಯಾಗಿದ್ದರು. ಅವರ ಅಭಿಮಾನಿಗಳು, ಕೆಲ ಸೆಲೆಬ್ರಿಟಿಗಳು ಕೂಡಾ ಅಪ್ಪು ಅವರಿಂದ ಸ್ಪೂರ್ತಿ ಪಡೆದು ಅಂಗಾಂಗ ದಾನ ಮಾಡಿದ್ದೂ ಇದೆ. ಈಗ ಟಾಲಿವುಡ್ ಸ್ಟಾರ್ ವಿಜಯದೇವರಕೊಂಡ ಕೂಡಾ ಅಂಗಾಂಗ ದಾನ ಮಾಡಲು ಮುಂದಾಗಿದ್ದಾರೆ.

ಇದನ್ನೂ ಓದಿ: ಬಾಲಿವುಡ್ ಅಂಗಳದಲ್ಲಿ ಮಂಕಾದ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ

ತೆಲುಗಿನ ಖ್ಯಾತ ನಟ ವಿಜಯ್ ದೇವರಕೊಂಡ ಮಾಧ್ಯಮಗಳ ಮುಂದೆ ತಾನು ಜೀವನದಲ್ಲಿ ಅತ್ಯುತ್ತಮ ನಿರ್ಧಾರ ಕೈಗೊಂಡಿದ್ದಾಗಿ ಹೇಳಿದ್ದಾರೆ. ಮನುಷ್ಯ ಸತ್ತ ಮೇಲೆ ಯಾವುದಕ್ಕೂ ಉಪಯೋಗಕ್ಕೆ ಬರುವುದಿಲ್ಲ. ಹಾಗಾಗಿ ಈ ಮಣ್ಣಿನಲ್ಲಿ ದೇಹ ಮಣ್ಣಾಗುವ ಬದಲು ಉಪಯೋಗವಾಗಲಿ ಎಂದು ನಟ ವಿಜಯದೇವರಕೊಂಡ ಹೇಳಿಕೊಂಡಿದ್ದಾರೆ. ಈ ಕಾರಣಕ್ಕಾಗಿಯೇ ಅಂಗಾಂಗ ದಾನ ಮಾಡಲು ಮುಂದಾಗಿದ್ದಾರೆ. ವೈದ್ಯ ವಿದ್ಯಾರ್ಥಿಗಳನ್ನ ನೋಡಿದ ಮೇಲೆ ಅಂಗಾಂಗ ದಾನ ಮಾಡುವ ಯೋಚನೆ ಬಂತು ಎಂದು ವಿಜಯದೇವರಕೊಂಡ ಹೇಳಿಕೊಂಡಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

suddiyaana