ಮಡದಿಗೆ ಸೀರೆ ಇಷ್ಟ ಆಗಿಲ್ಲ ಅಂತಾ ಅಂಗಡಿ ಸಿಬ್ಬಂದಿಗೆ ಥಳಿಸಿದ ಭೂಪ!

ಮಡದಿಗೆ ಸೀರೆ ಇಷ್ಟ ಆಗಿಲ್ಲ ಅಂತಾ ಅಂಗಡಿ ಸಿಬ್ಬಂದಿಗೆ ಥಳಿಸಿದ ಭೂಪ!

ಬಟ್ಟೆ ಅಂಗಡಿಗಳಲ್ಲಿ ಅವರು ತೋರಿಸಿದ ಡ್ರೆಸ್‌ ಇಷ್ಟ ಆಗಿಲ್ಲ ಅಂದ್ರೆ ಬೇರೆ ಬಟ್ಟೆ ತೋರಿಸಲು ಹೇಳುತ್ತೇವೆ. ಇಲ್ಲಾ ಅಂದ್ರೆ ಬೇರೆ ಅಂಗಡಿಗಳಿಗೆ ತೆರಳಿ ವಾಪಸ್‌ ಬರುತ್ತೇವೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ಪತ್ನಿಗೆ ಸೀರೆ ಕೊಳ್ಳಲು ಹೋಗಿದ್ದು, ಸೀರೆ ಇಷ್ಟ ಆಗಿಲ್ಲ ಅಂತಾ ಬಟ್ಟೆ ಅಂಗಡಿ ಸಿಬ್ಬಂದಿಗೆ ಸರಿಯಾಗಿ ಥಳಿಸಿದ್ದಾನೆ.

ಈ ವಿಚಿತ್ರ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಸಿಪಿ ಬಜಾರದಲ್ಲಿ ನಡೆದಿದೆ. ಶಿರಸಿಯ ನೆಹರುನಗರ ನಿವಾಸಿಯಾಗಿರುವ ಮಹಮ್ಮದ್​ ಕುಟುಂಬದೊಂದಿಗೆ ಫೆ.24 ರಂದು ಸಿಪಿ ಬಜಾರ್​​ನಲ್ಲಿರುವ ಸಾಗರ ಬಟ್ಟೆ ಅಂಗಡಿಗೆ ಬಂದು ಬಟ್ಟೆ ಖರೀದಿ ಮಾಡಿಕೊಂಡು ಹೋಗಿದ್ದಾನೆ. ಮಹ್ಮಮ್ಮದ್​ ತೆಗೆದುಕೊಂಡು ಹೋದ ಸೀರೆ ಆತನ ಪತ್ನಿ ಇಷ್ಟವಾಗಿಲ್ಲ. ಹೀಗಾಗಿ ಮಹಮ್ಮದ್​ ರಾತ್ರಿ 9 ಗಂಟೆ ಸುಮಾರಿಗೆ ಮತ್ತೆ ಸೀರೆ ಅಂಗಡಿಗೆ ಬಂದಿದ್ದಾನೆ.

ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ ಎರಡನೇ ಬಲಿ – ಚಿಕ್ಕಮಗಳೂರಿನಲ್ಲೂ ದಿನೇ ದಿನೇ ಜಾಸ್ತಿಯಾಗುತ್ತಿದೆ ಕೆಎಫ್‌ಡಿ ಪ್ರಕರಣ

ಈ ಸೀರೆ ತನ್ನ ಮಡದಿಗೆ ಇಷ್ಟವಾಗಿಲ್ಲ. ಬೇರೆ ಸೀರೆ ಕೊಡಿ ಎಂದು ಹೇಳಿದ್ದಾನೆ. ಆಗ ಅಂಗಡಿಯಲ್ಲಿನ ಸಿಬ್ಬಂದಿ ಬೇರೆ ಬೇರೆ ಸೀರೆಗಳನ್ನು ತೋರಿಸಿದ್ದಾರೆ. ಆದರೆ ಮಹಮ್ಮದ್ ಸೀರೆಗಳು ಸರಿ ಇಲ್ಲ, ಬೇರೆ ಸೀರೆಗಳನ್ನು ತೋರಿಸಿ ಎಂದಿದ್ದಾನೆ. ಅದಕ್ಕೆ ಸಿಬ್ಬಂದಿ ನಮ್ಮಲ್ಲಿರುವುದು ಇಷ್ಟೆ ಸೀರೆ ಎಂದಿದ್ದಾರೆ. ತನ್ನ ಮಡದಿಗೆ ಇಷ್ಟವಾಗುವ ಸೀರೆ ಸಿಕ್ಕಿಲ್ಲ ಎಂಬ ಕಾರಣಕ್ಕೆ ಮಹ್ಮಮದ್ ಅಂಗಡಿ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ಬೈದು “ನೀನು ಒಳ್ಳೆ ಸೀರೆ ಇಡದೆ ಇದ್ದರೆ ಯಾಕೆ ಅಂಗಡಿ ಇಟ್ಟಿದ್ದೀಯಾ”? ಅಂತ ಬೈದಿದ್ದಾನೆ. ಅದಕ್ಕೆ ಸಿಬ್ಬಂದಿ ಬೈಯಬೇಡ, ನೀನು ಖರೀದಿಸಿದ ಸೀರೆಯ ಹಣ ಮರಳಿ ಕೊಡುತ್ತೇನೆ” ಎಂದು ಹೇಳಿದ್ದಾರೆ.

ಕೂಡಲೇ ಅಂಗಡಿಯಿಂದ ಹೊರಗೆ ಹೋದ ಮಹ್ಮಮದ್​ ತನ್ನ ಗೆಳೆಯ ಸರ್ಪರಾಜ್ ಎಂಬುವನನ್ನು ಕರೆದುಕೊಂಡು ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹೊರ ಊರಿನಿಂದ ಬಂದು ನಮಗೆ ದಾದಾಗಿರಿ ಮಾಡುತ್ತಾರೆ. ಈ ದಿವಸ ಇವರಿಗೆ ಒಂದು ಗತಿ ತೋರಿಸಿಯೇ ಬಿಡುವಾ ಅಂತ ಹೇಳಿ ಸಿಬ್ಬಂದಿಗೆ ಅಡ್ಡಗಟ್ಟಿ ತಡೆದು ನಿಲ್ಲಿಸಿದ್ದಾರೆ. ಬಳಿಕ ಮಹ್ಮಮದ ತಂದೆ ಅಬ್ದುಲ್​ ವಹಾಬ್​ ಖಾನ್​ ಸಿಬ್ಬಂದಿಗೆ ದೂಡಿದ್ದಾನೆ. ಇದರಿಂದ ಅಂಗಡಿ ಸಿಬ್ಬಂದಿ ಕೆಳಗೆ ಬಿದ್ದಿದ್ದಾನೆ.

ಇದನ್ನು ಕಂಡ ಅಂಗಡಿಯ ಪ್ರಕಾಶ್​ ಪಟೇಲ್​ ಎಂಬುವರು ಅಂಗಡಿ ಸಿಬ್ಬಂದಿಗೆ ಎಬ್ಬಿಸಲು ಹೋದಾಗ ಸರ್ಪರಾಜ್​ ತಂದೆ ಅಬ್ದುಲ್​ ಅಸ್ಲಾಂ ಪ್ರಕಾಶ ಪಟೇಲ್​ ಅವರ ಮುಖಕ್ಕೆ ಗುದ್ದಿದ್ದಾನೆ. ಬಳಿಕ ಈ ದಿವ ನೀವು ಉಳಿದುಕೊಂಟಿದ್ದೀರಿ ಇನ್ನೊಂದು ದಿನ ನೀವು ಇಲ್ಲಿ ಹೇಗೆ ಅಂಗಡಿ ನಡೆಸುತ್ತೀರಿ ನಿಮಗೆ ಜೀವ ಸಹಿತ ಬಿಡುವುದಿಲ್ಲ ಅಂತ ಬೆದರಿಕೆ ಹಾಕಿದ್ದಾರೆ ಎಂದು ಎಫ್​ಐಆರ್​ನಲ್ಲಿ ದಾಖಲಾಗಿದೆ. ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Shwetha M