ಹಣದ ಸಮಸ್ಯೆ ಇದ್ಯಾ – ಗುರುವಾರ ಶಂಖದಿಂದ ಹೀಗೆ ಮಾಡಿ

ಹಣದ ಸಮಸ್ಯೆ ಇದ್ಯಾ – ಗುರುವಾರ ಶಂಖದಿಂದ ಹೀಗೆ ಮಾಡಿ

ಗುರುವಾರವು ಶ್ರೀಹರಿಯ ಆರಾಧನೆಗೆ ಸೂಕ್ತವಾದ ದಿನ. ಈ ದಿನ ಶ್ರೀಹರಿಯ ಒಂದು ಅವತಾರವಾದ ವಿಷ್ಣು ದೇವನನ್ನು ವಿಧಿ – ವಿಧಾನಗಳ ಪ್ರಕಾರ ಪೂಜಿಸಲಾಗುತ್ತದೆ.  ಗುರುವಾರದಂದು ಭಗವಾನ್ ವಿಷ್ಣುವನ್ನು ಪೂಜಿಸುವುದರೊಂದಿಗೆ ದೇವಸ್ಥಾನದಲ್ಲಿ ಇರಿಸಲಾಗಿರುವ ಶಂಖವೂ ಗುರುವಾರದಂದು ಅತ್ಯಂತ ಫಲಪ್ರದವಾಗಿದೆ. ಗುರುವಾರದಂದು ಶಂಖದಿಂದ ಈ ಕೆಲಸವನ್ನು ಮಾಡುವುದರಿಂದ ಜೀವನದಲ್ಲಿನ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಅಲ್ಲದೆ, ಹಣ ಗಳಿಸುವ ಮಾರ್ಗಗಳು ರೂಪುಗೊಳ್ಳುತ್ತವೆ.

ಹೆಚ್ಚಿನ ಮನೆಯ ದೇವರ ಕೋಣೆಯಲ್ಲಿ ನಾವು ಶಂಖವನ್ನು ನೋಡಬಹುದು. ಶಾಸ್ತ್ರದಲ್ಲಿ, ಶಂಖವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ ಮತ್ತು ಶಂಖವಿಲ್ಲದೆ ವಿಷ್ಣುವಿನ ಆರಾಧನೆಯು ಅಪೂರ್ಣ ಎಂದು ಹೇಳಲಾಗುತ್ತದೆ. ಹೀಗಾಗಿ ಶಂಖವನ್ನು ಪೂಜೆಯ ಸಮಯದಲ್ಲಿ ಬಳಸಲಾಗುತ್ತದೆ. ಗುರುವಾರದಂದು ಶಂಖಕ್ಕೆ ಕೇಸರಿ ತಿಲಕವನ್ನು ಹಚ್ಚಿ ಆ ಶಂಖವನ್ನು ಪೂಜೆಯಲ್ಲಿ ಬಳಸಬೇಕು ಮತ್ತು ದೇವರ ಕೋಣೆಯಲ್ಲಿ ಇಡಬೇಕು. ಇದನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: ದೇವರಿಗೆ ಇಟ್ಟ ಹೂವುಗಳನ್ನ ಕಸದ ಬುಟ್ಟಿಗೆ ಹಾಕ್ತೀರಾ? – ದೈವಕ ಶಕ್ತಿ ಇರೋ ಹೂವು ಒಣಗಿದ ನಂತ್ರ ಹೀಗೆ ಮಾಡಿ

ಶಾಸ್ತ್ರದ ಪ್ರಕಾರ, ಪೂಜೆಯಲ್ಲಿ ಶಂಖವನ್ನು ಬಳಸುವುದರಿಂದ, ಭಗವಾನ್ ವಿಷ್ಣು ಮತ್ತು ಲಕ್ಷ್ಮಿ ದೇವಿಯು ಸಂತುಷ್ಟರಾಗುತ್ತಾರೆ ಮತ್ತು ಅವರು ನಿಮ್ಮ ಮೇಲೆ ಅವರ ಆಶೀರ್ವಾದವನ್ನು ನೀಡುತ್ತಾರೆ. ಇದಲ್ಲದೆ, ವಿಷ್ಣುವಿನ ಆರತಿಯ ಸಮಯದಲ್ಲಿ ಶಂಖವನ್ನು ಊದಿದರೆ, ಅದು ಮಂಗಳಕರವೆಂದು ಪರಿಗಣಿಸಲಾಗುತ್ತದೆ ಮತ್ತು ಇದು ಜಾತಕದಲ್ಲಿ ಇರುವ ಗುರುವಿನ ಸ್ಥಾನವನ್ನು ಬಲಪಡಿಸುತ್ತದೆ.

ನೀವು ವಿಷ್ಣುವಿನ ಆಶೀರ್ವಾದವನ್ನು ಪಡೆಯಲು ಬಯಸಿದರೆ, ಗುರುವಾರ ವಿಷ್ಣು ದೇವನನ್ನು ಪೂಜಿಸುವ ಸಮಯದಲ್ಲಿ ಒಂದು ಶಂಖವನ್ನು ತೆಗೆದುಕೊಂಡು ಅದರಲ್ಲಿ ಒಂದಿಷ್ಟು ನೀರು ಮತ್ತು ತುಳಸಿ ದಳಗಳನ್ನು ಹಾಕಿಡಿ. ಶಾಸ್ತ್ರದ ಪ್ರಕಾರ, ಈ ರೀತಿ ಮಾಡುವುದರಿಂದ ಜಾತಕದಲ್ಲಿ ಗ್ರಹಗಳ ಸ್ಥಾನವನ್ನು ಬಲಪಡಿಸುತ್ತದೆ. ಈ ಶಂಖದ ಪರಿಹಾರವನ್ನು ಗುರುವಾರದಂದು ಅಳವಡಿಸಿಕೊಂಡರೆ, ವ್ಯಕ್ತಿಯು ವಿಷ್ಣುವಿನ ಆಶೀರ್ವಾದವನ್ನು ಪಡೆಯುತ್ತಾನೆ ಏಕೆಂದರೆ ವಿಷ್ಣು ದೇವನಿಗೆ ತುಳಸಿ ಮತ್ತು ಶಂಖ ಈ ಎರಡೂ ವಸ್ತುಗಳು ಅತ್ಯಂತ ಪ್ರಿಯವಾದ ವಸ್ತುವಾಗಿದೆ.

Kishor KV

Leave a Reply

Your email address will not be published. Required fields are marked *