ಬಜೆಟ್ನಲ್ಲಿ ಕೃಷಿಗೆ ಬಂಪರ್ – ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿ ಹೆಚ್ಚಳ

ಸಾಕಷ್ಚು ನಿರೀಕ್ಷೆಗಳು ಮೂಡಿಸಿದ ಕೇಂದ್ರ ಬಜೆಟ್ ಮಂಡನೆಯಾಗಿದೆ.. ಬೆಟ್ಟದಷ್ಟು ನಿರೀಕ್ಷೆಗಳಿತ್ತು.. ಒಂದಷ್ಟು ಕ್ಷೇತ್ರಗಳಿಗೆ ಬಂಪರ್ ಸಿಕ್ಕಿದ್ರೆ, ಇನ್ನೂ ಕೆಲ ಕ್ಷೇತ್ರಗಳ ಕನಸು ನುಚ್ಚು ನೂರಾಗಿದೆ. ಕೇಂದ್ರ ಸಾಮಾನ್ಯಾ ಬಜೆಟ್ 2025ಕ್ಕೆ ರಾಷ್ಟ್ರಪತಿಗಳ ಅನುಮೋದನೆ ಪಡದೆ ನಿರ್ಮಲಾ ಸೀತಾರಾಮನ್ ಸಿಹಿ ಮೊಸರು ತಿಂದು ಬಜೆಟ್ ಮಂಡಿಸಿದ್ರು.. ಉತ್ತರಭಾರತದಲ್ಲಿ ಯಾವುದೇ ಶುಭಕಾರ್ಯ ಆರಂಭಿಸೋ ಮುನ್ನ ಮೊಸರು ತಿನ್ನುವ ಸಂಪ್ರದಾಯವಿದೆ. ಹೀಗಾಗಿ ಮುರ್ಮು ಅವರು ಸಿಹಿ ಮೋಸರು ತಿನ್ನಿಸಿದ್ರು. ಮಧ್ಯಮ ವರ್ಗದವರನ್ನ ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ರು. ಹಾಗಿದ್ರೆ ನಿರ್ಮಲಾ ಬಜೆಟ್ನಲ್ಲಿ ದೇಶದ ಜನರಿಗೆ ಏನ್ ಏನ್ ಸಿಕ್ಕಿದೆ ಅನ್ನೋದನ್ನ ನೋಡೋಣ ಬನ್ನಿ.
- ಕೃಷಿಗೆ ಬಜೆಟ್ನಲ್ಲಿ ಮೊದಲ ಆಧ್ಯತೆ
- ಗ್ರಾಮಿಣ ಭಾಗದ ರೈತರಿಗೆ ಆರ್ಥಿಕ ನೆರವು
- 100 ಜಿಲ್ಲೆಗಳ, 1.7 ಕೋಟಿ ರೈತರಿಗೆ ಅನುಕೂಲ
- 6 ವರ್ಷ ಆತ್ಮನಿರ್ಭರತಾ ಪಲ್ಸಸ್ ಯೋಜನೆ
- ಯುವಕರನ್ನ ಕೃಷಿಯತ್ತ ಸೆಳೆಯಲು ಉತ್ತೇಜನೆ
- ಮೀನುಗಾರಿಕೆಯಲ್ಲಿ ಭಾರತ 2ನೇ ದೊಡ್ಡ ರಾಷ್ಟ್ರವಾಗಿದೆ
- ಲಕ್ಷದ್ವೀಪ, ಅಂಡಮಾನ್ ನಲ್ಲಿ ಮೀನುಗಾರಿಕೆ ಉತ್ತೇಜನಕ್ಕೆ ಕ್ರಮ
- 5 ವರ್ಷಗಳಲ್ಲಿ ಹತ್ತಿ ಕೃಷಿಗೆ ವಿಶೇಷ ಉತ್ತೇಜನ
- ಮೀನುಗಾರಿಕೆ ವಲಯಕ್ಕೆ 60 ಸಾವಿರ ಕೋಟಿ ಅನುದಾನ
- ರೈತರು, ಮೀನುಗಾರರಿಗೆ ಸುಲಭ ಕಂತುಗಳ ಸಾಲ
- ಮಕಾನ ಬೆಳೆಗಾರರಿಗೆ ಸರ್ಕಾರದ ಯೋಜನೆ ಪ್ರಯೋಜನ
- ಹತ್ತಿ ಉತ್ಪನ್ನಗಳ ಉತ್ಪಾದನೆಗೆ ಮಿಷನ್ , ತಂತ್ರಜ್ಞಾನ
- ಸರ್ಕಾರದಿಂದ ರೈತರಿಗೆ ತಂತ್ರಜ್ಞಾನ ಪೂರೈಕೆ
- ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿ ಹೆಚ್ಚಳ
- 3 ರಿಂದ 5 ಲಕ್ಷದ ತನಕ ಕಿಸಾನ್ ಕ್ರೆಡಿಟ್ ಮೂಲಕ ಸಾಲ
- ಕಿಸಾನ್ ಕ್ರೆಡಿಟ್ ಮೂಲಕ 7,7 ಕೋಟಿ ರೈತರಿಗೆ ಸಾಲ
- ಗ್ರಾಮಿಣ ಭಾಗದಲ್ಲಿ ಅಚೆ ಕಚೇರಿಗಳ ಹೆಚ್ಚಳ
- ಇಳುವರಿ ಬೀಜಗಳಿಗೆ ವಿಶೇಷ ಯೋಜನೆ
- 100ಕ್ಕೂ ಬಗೆಯ ಬೀಜಗಳ ಲಭ್ಯತೆ
- ಪ್ರಧಾನಮಂತ್ರಿ ಧನ ಧಾನ್ಯ ಕೃಷಿ ಯೋಜನೆಯನ್ನು ಘೋಷಣೆ
- 100 ಜಿಲ್ಲೆಗಳಲ್ಲಿ ಕಡಿಮೆ ಉತ್ಪಾದಕತೆ ಕೇಂದ್ರೀಕರಿಸಿ ಸುಧಾರಣೆ
- ಶೇಖರಣೆ ಹೆಚ್ಚಿಸಿ ನೀರಾವರಿ ಸೌಲಭ್ಯ ಹೆಚ್ಚಿಸುವ ಗುರಿ
- ಪ್ರಧಾನಮಂತ್ರಿ ಧನ ಧಾನ್ಯ ಯೋಜನೆಯಡಿ 1 ಕೋಟಿಗೂ ಹೆಚ್ಚು ರೈತರಿಗೆ ಪ್ರಯೋಜನ