ಮದುವೆಗೆ ಕರೆದಿಲ್ಲ ಅಂತಾ ವರನ ಮನೆಗೆ ಕಲ್ಲೆಸೆದ ಸ್ನೇಹಿತ! – ಆಮೇಲೆ ನಡೆದಿದ್ದು ಘೋರ ದುರಂತ..

ಮದುವೆಗೆ ಕರೆದಿಲ್ಲ ಅಂತಾ ವರನ ಮನೆಗೆ ಕಲ್ಲೆಸೆದ ಸ್ನೇಹಿತ! – ಆಮೇಲೆ ನಡೆದಿದ್ದು ಘೋರ ದುರಂತ..

ಸ್ನೇಹಿತರ ಮದುವೆ ಅಂದಾಗ ಎಲ್ಲರೂ ಆ ಮದುವೆಯಲ್ಲಿ ಮನೆಯವರಂತೆ ಓಡಾಡಬೇಕು. ಮಜಾ ಮಾಡಬೇಕು ಅಂತಾ ಕನಸು ಕಾಣುತ್ತಾರೆ. ಇಲ್ಲೂ ಒಬ್ಬ ತನ್ನ ಸ್ನೇಹಿತನ ಮದುವೆಗೆ ಹೋಗಬೇಕು ಅಂತಾ ಕಾತುರದಿಂದ ಕಾಯುತ್ತಿದ್ದ. ಆದರೆ ಆ ಸ್ನೇಹಿತ ಈತನನ್ನು ವಿವಾಹಕ್ಕೆ ಕರೆಯಲು ಮರೆತಿದ್ದಾನೆ. ಇದೀಗ ಈ ವಿಚಾರ ದೊಡ್ಡ ಅವಾಂತರವನ್ನೇ ಸೃಷ್ಟಿಸಿದೆ.

ಹೌದು, ಇಲ್ಲೊಬ್ಬ ತನ್ನ ಗೆಳೆಯ ಮದುವೆಗೆ ಕರೆದಿಲ್ಲಅಂತಾ ಕುಪಿತಗೊಂಡಿದ್ದಾನೆ. ಹೀಗಾಗಿ ಆತ ತನ್ನ ಸೇಡು ತೀರಿಸಿಕೊಳ್ಳಲು ವರನ ಮನೆಗೆ ಕಲ್ಲು ಎಸೆದಿದ್ದಾನೆ. ಇದರಿಂದಾಗಿ ಸಿಟ್ಟಿಗೆದ್ದ ವರ ಆ ವ್ಯಕ್ತಿಯ ಮೇಲೆ ಪ್ರತೀಕಾರ ತೀರಿಸಿಕೊಂಡಿದ್ದಾನೆ.

ಇದನ್ನೂ ಓದಿ: ಚಾಲಕನಿಲ್ಲದೆ  ಶೋ ರೂಮ್ ಒಳಗೆ ನುಗ್ಗಿದ ಟ್ರ್ಯಾಕ್ಟರ್  – ಆಮೇಲೆನಾಯ್ತು ಗೊತ್ತಾ?  

ಏನಿದು ಘಟನೆ: ಈ ಘಟನೆ ನಡೆದಿದ್ದು ಕೇರಳದ ಕೊಟ್ಟಾಯಂ ಜಿಲ್ಲೆಯ ಕುರುಚಕಲ್ ನಲ್ಲಿ. ಸೆಬಾಸ್ಟಿಯನ್ ಮತ್ತು ಬಿನು ಇಬ್ಬರೂ ಸ್ನೇಹಿತರು. ಇತ್ತೀಚೆಗೆ ಸೆಬಾಸ್ಟಿಯನ್‌ಗೆ ವಿವಾಹವಾಗಿತ್ತು. ಆದರೆ ಆತ ತನ್ನ ಸ್ನೇಹಿತ ಬಿನು ವನ್ನು ಮದುವೆಗೆ ಕರೆದಿಲ್ಲ. ಇದರಿಂದ ಅವಮಾನಿತನಾದ ಬಿನು ಕೋಪದಿಂದ ಸೆಬಾಸ್ಟಿಯನ್‌ ಮನೆಗೆ ಕಲ್ಲು ಎಸೆದಿದ್ದಾನೆ.

ಈ ಘಟನೆಯಿಂದ ಸಿಟ್ಟಿಗೆದ್ದ ಸೆಬಾಸ್ಟಿಯನ್ ಇದಕ್ಕೆ ಪ್ರತಿಕಾರ ತೀರಿಸಿಕೊಳ್ಳಲು ಬಿನುವಿನ ವೈರಿ ವಿಷ್ಣುವಿನ ಸಹಾಯ ಪಡೆದಿದ್ದಾನೆ. ಬಳಿಕ ನಡೆದ ವಿಚಾರವನ್ನು ವಿಷ್ಣುವಿಗೆ ತಿಳಿಸಿ, ಹೇಗಾದರೂ ಆತನನ್ನು ಸದೆಬಡಿಯಬೇಕೆಂದು ಹೇಳಿದ್ದಾನೆ. ವಿಷ್ಣುವಿಗೆ ಬಿನು ಮೇಲೆ ಮೊದಲೇ ಕೋಪ ಇರೋದ್ರಿಂದ ಈತನ ಎಲ್ಲಾ ಪ್ಲಾನ್ ಗೆ ಸಮ್ಮತಿ ಸೂಚಿಸಿದ್ದಾನೆ.

ಮಾತನಾಡಿಕೊಂಡಂತೆ ಕಳೆದ ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಬಿನುವನ್ನು ಅಡ್ಡಗಟ್ಟಿದ ಸೆಬಾಸ್ಟಿಯನ್ ಮತ್ತು ವಿಷ್ಣು ಮಾರಕಾಸ್ತ್ರಗಳಿಂದ  ಆತನ ಮೇಲೆ ದಾಳಿ ನಡೆಸಿದ್ದಾರೆ. ಇದರಿಂದ ತೀವ್ರ ಗಾಯಗೊಂಡಿದ್ದ ಬಿನುವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಆತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಇದೀಗ ಈ ಘಟನೆ ಬೆಳಕಿಗೆ ಬಂದಿದೆ.

ವಿಷ್ಣು ಹಾಗೂ ಸೆಬಾಸ್ಟಿಯನ್ ಇಬ್ಬರೂ ಕೊಲೆಗೆ ಬಳಸಿದ ಆಯುಧಗಳ ಜೊತೆಗೆ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾರೆ. ಘಟನೆ ಸಂಬಂಧ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಲೆಗೈದ ನಂತರ ಏನು ಮಾಡಬೇಕು ಎಂದು ತೋಚದೆ ಭಯದಿಂದ ಆರೋಪಿಗಳು ಠಾಣೆಗೆ ಬಂದು ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

suddiyaana