ಭಯೋತ್ಪಾದನಾ ಘಟನೆಗಳು ಶೇ. 71 ರಷ್ಟು ಕಡಿಮೆ – ಮೋದಿ ಸರ್ಕಾರದ ಸಾಧನೆ : ನಿತ್ಯಾನಂದ ರೈ

ಮೋದಿ ಸರ್ಕಾರದಡಿ ದೇಶದಲ್ಲಿ ಭಯೋತ್ಪಾದನಾ ಘಟನೆಗಳು ಶೇ. 71 ರಷ್ಟು ಕಡಿಮೆಯಾಗಿವೆ. ಉಗ್ರರನ್ನು ಜೈಲು ಅಥವಾ ನರಕಕ್ಕೆ ಕಳುಹಿಸಲಾಗುತ್ತಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ರಾಜ್ಯಸಭೆಯಲ್ಲಿ ಬುಧವಾರ ಹೇಳಿದರು.
ಪ್ರಶ್ತೋತ್ತರ ಕಲಾಪದಲ್ಲಿ ಮಾತನಾಡಿದ ಸಚಿವರು, ಹಿಂದೆ ಉಗ್ರರನ್ನು ವೈಭವೀಕರಿಸಿ, ಒಳ್ಳೆಯ ಊಟ ನೀಡುವುದಕ್ಕಿಂತ ಭಿನ್ನವಾಗಿ ಮೋದಿ ಸರ್ಕಾರ ಭಯೋತ್ಪಾದನೆಯ ಬಗ್ಗೆ “ಶೂನ್ಯ ಸಹಿಷ್ಣುತೆ” ನೀತಿ ಹೊಂದಿದ್ದು, ದೇಶದಲ್ಲಿ ಭಯೋತ್ಪಾದನೆ ಪ್ರಕರಣಗಳನ್ನು ಶೂನ್ಯಕ್ಕೆ ಇಳಿಸುವಲ್ಲಿ ನೆರವಾಗಿದೆ ಎಂದರು.
ಭಯೋತ್ಪಾದನೆ ಪ್ರಕರಣ ಎದುರಿಸಲು ತೆಗೆದುಕೊಳ್ಳಲಾಗುತ್ತಿರುವ ಹಲವಾರು ಕ್ರಮಗಳನ್ನು ವಿವರಿಸಿದ ಅವರು, ರಾಷ್ಟ್ರೀಯ ತನಿಖಾ ಸಂಸ್ಥೆಯನ್ನು ನಿಯಂತ್ರಿಸುವ ಕಾಯ್ದೆಯಲ್ಲಿ ತಿದ್ದುಪಡಿ ಮಾಡಿದ ನಂತರ, ಲಂಡನ್ ಮತ್ತು ಒಟ್ಟಾವಾದಲ್ಲಿನ ಭಾರತೀಯ ಹೈಕಮಿಷನ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋದ ಕಾನ್ಸುಲೇಟ್ ಮೇಲಿನ ದಾಳಿ ಸೇರಿದಂತೆ ವಿದೇಶಿ ನೆಲದ ಮೇಲಿನ ಪ್ರಕರಣಗಳನ್ನು ತನಿಖೆ ನಡೆಸಲಾಗುತ್ತಿದೆ.
ಹಿಂದೆ ಉಗ್ರರನ್ನು ವೈಭವೀಕರಿಸಿ ಅವರಿಗೆ ಉತ್ತಮ ಆಹಾರ ನೀಡಲಾಗುತ್ತಿತ್ತು.ಇಂದು ಮೋದಿ ಸರ್ಕಾರ ಭಯೋತ್ಪಾದನೆಯ ಬಗ್ಗೆ ಶೂನ್ಯ ಸಹಿಷ್ಣುತೆಯ ನೀತಿಯೊಂದಿಗೆ ಕೆಲಸ ಮಾಡುತ್ತಿದೆ. ಇದರಿಂದಾಗಿ ದೇಶದಲ್ಲಿ ಯಾವುದೇ ಭಯೋತ್ಪಾದಕ ಘಟನೆಗಳು ನಡೆದಿಲ್ಲ. ಭಯೋತ್ಪಾದನಾ ಚಟುವಟಿಕೆಗಳಲ್ಲಿ ಶೇ.71 ರಷ್ಟು ಇಳಿಕೆಯಾಗಿದೆ. ಮೋದಿ ಸರ್ಕಾರ ಭಯೋತ್ಪಾದನೆಯನ್ನು ಕೊನೆಗಾಣಿಸಲು ದೃಢ ಸಂಕಲ್ಪದೊಂದಿಗೆ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಎನ್ಐಎ ವಿರುದ್ಧದ ದೂರುಗಳನ್ನು ತಳ್ಳಿಹಾಕಿದ ಸಚಿವರು ಅವುಗಳನ್ನು ಆಧಾರರಹಿತ ಎಂದು ಹೇಳಿದ್ರು. ಅಮೆರಿಕದಿಂದ ಗಡೀಪಾರು ಮಾಡಿರುವ ಕೆಲವು ಅಕ್ರಮ ವಲಸಿಗರೊಂದಿಗೂ ಎನ್ಐಎ ಮಾತನಾಡಿದ್ದು, ಮಾನವ ಕಳ್ಳಸಾಗಣೆ ಪ್ರಕರಣಗಳೂ ಹೊರಬಿದ್ದಿದ್ದು, ಎಫ್ಐಆರ್ ದಾಖಲಾದ ನಂತರ ಅಂತಹ ಪ್ರಕರಣಗಳಲ್ಲಿ ಗಂಭೀರ ತನಿಖೆ ನಡೆಸಲಾಗುತ್ತಿದೆ. ಭಯೋತ್ಪಾದನೆ ಸಂಬಂಧಿತ ಪ್ರಕರಣಗಳಿಗೆ ಸಂಬಂಧಿಸಿದಂತೆ, ಜಮ್ಮು ಮತ್ತು ರಾಂಚಿಯಲ್ಲಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ ಮತ್ತು ಅಂತಹ 23 ನ್ಯಾಯಾಲಯಗಳು ದೇಶದ ಬೇರೆಡೆ ಇವೆ ಎಂದು ಅವರು ಹೇಳಿದರು.