ಉಕ್ರೇನ್ ನಿಂದ ಬಂದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ – ಭಾರತದಿಂದಲೇ ಪರೀಕ್ಷೆ ಬರೆಯಲು ಅವಕಾಶ

ಉಕ್ರೇನ್ ನಿಂದ ಬಂದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ – ಭಾರತದಿಂದಲೇ ಪರೀಕ್ಷೆ ಬರೆಯಲು ಅವಕಾಶ

ನವದೆಹಲಿ: ಕಳೆದ ವರ್ಷ ಫೆಬ್ರವರಿಯಲ್ಲಿ ರಷ್ಯಾ – ಉಕ್ರೇನ್ ನಡುವಿನ ಕದನದ ಹಿನ್ನೆಲೆ ಉಕ್ರೇನ್ ನಲ್ಲಿ ಅಧ್ಯಯನ ಮಾಡುತ್ತಿದ್ದ ಸಾವಿರಾರು ವಿದ್ಯಾರ್ಥಿಗಳು ಭಾರತಕ್ಕೆ ವಾಪಸ್ ಆಗಿದ್ದರು. ಆದ್ರೆ ಭಾರತಕ್ಕೆ ಬಂದ ನಂತರ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮುಂದಿನ ದಾರಿ ಏನು ಅನ್ನೋ ಪ್ರಶ್ನೆ ಉದ್ಭವಾಗಿತ್ತು. ಇದೀಗ ಈ ವಿದ್ಯಾರ್ಥಿಗಳಿಗೆ ಖುಷಿ ಸುದ್ದಿಯಿದೆ.

ಇದನ್ನೂ ಓದಿ: ದೇಶದಲ್ಲಿ ಹೆಚ್ಚಾಯ್ತು ಕೊರೊನಾ ಭೀತಿ – ಒಂದೇ ದಿನ 10 ಸಾವಿರ ಗಡಿದಾಟಿದ ಕೊವಿಡ್ ಕೇಸ್

ಉಕ್ರೇನ್ ಉಪ ವಿದೇಶಾಂಗ ಸಚಿವ ಎಮಿನೆ ಝಪರೋವಾ ಅವರು ದೆಹಲಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ  20,000 ಅಧಿಕ ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳಿಗೆ ಭಾರತದಿಂದಲೇ ಏಕೀಕೃತ ಅರ್ಹತಾ ಪರೀಕ್ಷೆ ತೆಗೆದುಕೊಳ್ಳಲು ಅನುಮತಿಸಲಾಗಿದೆ. ಭಾರತದಿಂದಲೇ ಏಕೀಕೃತ ಅರ್ಹತಾ ಪರೀಕ್ಷೆ ಬರೆಯಬಹುದು  ಅಂತಾ ಹೇಳಿದ್ದಾರೆ.

“ಉಕ್ರೇನ್‌ನ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಓದುತ್ತಿದ್ದ ನನ್ನಂತಹ ಅನೇಕ ವಿದ್ಯಾರ್ಥಿಗಳು ತಮ್ಮ ಪದವಿಯನ್ನು ಹೇಗೆ ಪೂರ್ಣಗೊಳಿಸಬೇಕು ಎಂಬ ಚಿಂತೆಯಲ್ಲಿದ್ದವರಿಗೆ ಇದು ಉತ್ತಮ ಸುದ್ದಿಯಾಗಿದೆ” ಎಂದು ಖಾರ್ಖಿವ್‌ನಲ್ಲಿ ಓದುತ್ತಿದ್ದ ಮೂರನೇ ವರ್ಷದ ವೈದ್ಯಕೀಯ ವಿದ್ಯಾರ್ಥಿ ಅರ್ಮಾನ್ ಅವರು ಹೇಳಿದ್ದಾರೆ.

ಇನ್ನು ಉಕ್ರೇನ್, ಭಾರತದಿಂದ ಮಾನವೀಯ ನೆರವು ಕೋರಿದೆ. ಅಷ್ಟೇ ಅಲ್ಲದೇ  ವಿದೇಶಾಂಗ ಕಾರ್ಯದರ್ಶಿ(ಎಂಇಎ) ಅವರೊಂದಿಗೆ ನಡೆಸಿದ ಸಂವಾದದ ಸಮಯದಲ್ಲಿ, ಇತರ ವಿಷಯಗಳ ಜೊತೆಗೆ ಹೆಚ್ಚಿನ ಮಾನವೀಯ ನೆರವು ವಿಸ್ತರಿಸುವ ಕುರಿತು ಝಪರೋವಾ ಅವರು ಚರ್ಚೆ ನಡೆಸಿದ್ದಾರೆ ಅಂತಾ ಎಂಇಎ ತಿಳಿಸಿದೆ.

ಭಾರತ ಈಗಾಗಲೇ ಔಷಧಿ ಮತ್ತು ವೈದ್ಯಕೀಯ ಉಪಕರಣಗಳ ರೂಪದಲ್ಲಿ ಉಕ್ರೇನ್ ಗೆ ಮಾನವೀಯ ನೆರವು ನೀಡಿದೆ ಮತ್ತು ಶಾಲಾ ಬಸ್ಸುಗಳನ್ನು ಒದಗಿಸುವ ಬಗ್ಗೆಯೂ ಮಾತನಾಡಿದೆ. ಮೂಲಸೌಕರ್ಯ ಮರುನಿರ್ಮಾಣದಲ್ಲಿ ಉಕ್ರೇನ್ ಭಾರತದ ಸಹಾಯ ಬಯಸುತ್ತಿದೆ.

suddiyaana