ಹುಲಿ ದಾಳಿಗೆ ಇಬ್ಬರು ಬಲಿ – ಸಂಜೆ ಮೊಮ್ಮಗ, ಬೆಳಗ್ಗೆ ಅಜ್ಜನ ಕೊಂದ ಕ್ರೂರ ವ್ಯಾಘ್ರ!

ಹುಲಿ ದಾಳಿಗೆ ಇಬ್ಬರು ಬಲಿ – ಸಂಜೆ ಮೊಮ್ಮಗ, ಬೆಳಗ್ಗೆ ಅಜ್ಜನ ಕೊಂದ ಕ್ರೂರ ವ್ಯಾಘ್ರ!

ಕ್ರೂರ ವ್ಯಾಘ್ರನ ದಾಳಿಗೆ ಮಡಿಕೇರಿ ಜನತೆ ಜೀವಭಯದಲ್ಲಿದ್ದಾರೆ. ಭಾನುವಾರ ಸಂಜೆ 18 ವರ್ಷದ ಯುವಕನನ್ನು ಬಲಿ ಪಡೆದ ಹುಲಿ ಬೆಳಗ್ಗೆ ಆಗೋದರಲ್ಲಿ ಮತ್ತೊಬ್ಬರನ್ನು ಕೊಂದು ಹಾಕಿದೆ. ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ನಾಲ್ಕೇರಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಕಳೆದ 12 ಗಂಟೆಯಲ್ಲಿ ಹುಲಿ ದಾಳಿಗೆ ಒಂದೇ ಗ್ರಾಮಕ್ಕೆ ಸೇರಿದ ಇಬ್ಬರು ಬಲಿಯಾಗಿದ್ದಾರೆ.

ಇದನ್ನೂ ಓದಿ:  ಸಂಸತ್ತಿನಲ್ಲಿ ಮೋದಿ ಟೀಕಿಸಿದ್ದ ರಾಹುಲ್ ಗಾಂಧಿಗೆ ನೋಟಿಸ್ – ಬುಧವಾರದ ಡೆಡ್ ಲೈನ್ ನೀಡಿದ್ದೇಕೆ..!?

ಮೈಸೂರು ಜಿಲ್ಲೆಯ ಕೊಳವಿಗೆ ಹಾಡಿ ನಿವಾಸಿ 18 ವರ್ಷದ ಚೇತನ್ ಎಂಬವರ ಮೇಲೆ ಕಾಫಿ ತೋಟದ ಬಳಿ ಹುಲಿ ದಾಳಿ ಮಾಡಿ ಕೊಂದು ಹಾಕಿದೆ. ಚೇತನ್ ಮೇಲೆ ದಾಳಿ ಮಾಡಿದ ಹುಲಿ ಕಾಫಿ ತೋಟದಲ್ಲೇ ಅಡಗಿಕೊಂಡಿತ್ತು. ಈ ಸಾವಿನಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಲ್ಲದೇ, ಯುವಕನ ಸಾವಿಗೆ ನ್ಯಾಯಕೇಳಿ ಗ್ರಾಮಸ್ಥರು ಹೋರಾಟ ಮಾಡುತ್ತಿದ್ದರು. ಹೀಗಿರುವಾಗಲೇ ಅದೇ ಕಾಫಿ ತೋಟದಲ್ಲಿ ಅದೇ ಗ್ರಾಮದ ನಿವಾಸಿ ರಾಜು ಮೇಲೆ ಹುಲಿ ಮತ್ತೆ ದಾಳಿ ಮಾಡಿದೆ. ರಾಜು ಅವರ ಕುತ್ತಿಗೆಗೆ ಬಾಯಿ ಹಾಕಿದ ಹುಲಿ ಸ್ಥಳದಲ್ಲೇ ಕೊಂದು ಹಾಕಿದೆ. ಒಂದೇ ಗ್ರಾಮದ ಅದರಲ್ಲೂ ಒಂದೇ ಮನೆಯ ಇಬ್ಬರು 24 ಗಂಟೆಯೊಳಗೆ ಬಲಿಯಾಗಿದ್ದು ನೋಡಿ ಜನ ಬೆಚ್ಚಿಬಿದ್ದಿದ್ದಾರೆ. ಇನ್ನು ರಾಜು ಮೇಲೆ ನಡೆದ ಹುಲಿ ದಾಳಿ ತಡೆಯಲು ಯತ್ನಿಸಿದ ರಾಜು ಪುತ್ರ ಹಾಗೂ ಮೃತ ಚೇತನ್ ತಂದೆ ಮಧು ಅವರಿಗೂ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನರಭಕ್ಷಕ ಹುಲಿಯನ್ನು ಕೂಡಲೇ ಸೆರೆಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.

suddiyaana