ಕರೆಂಟ್ ಶಾಕ್ ರೂಪದಲ್ಲಿ ಹೊಂಚಾಕಿತ್ತು ವಿಧಿ – ಮೊಮ್ಮಗಳ ರಕ್ಷಣೆಗೆ ಹೋದ ಅಜ್ಜಿ, ತಾತನೂ ಬಲಿ

ಕರೆಂಟ್ ಶಾಕ್ ರೂಪದಲ್ಲಿ ಹೊಂಚಾಕಿತ್ತು ವಿಧಿ – ಮೊಮ್ಮಗಳ ರಕ್ಷಣೆಗೆ ಹೋದ ಅಜ್ಜಿ, ತಾತನೂ ಬಲಿ

ಅದೊಂದು ಮಧ್ಯಮವರ್ಗದ ಕುಟುಂಬ. ಇದ್ದಿದ್ದರಲ್ಲೇ ನೆಮ್ಮದಿಯ ಜೀವನ ಸಾಗಿಸುತ್ತಿದ್ರು. ಆದರೆ ಹೊಂಚು ಹಾಕಿ ಕುಳಿತಿದ್ದ ವಿಧಿ ಮೂವರ ಜೀವವನ್ನ ತೆಗೆದಿದೆ. ಕರೆಂಟ್ ಶಾಕ್ ರೂಪದಲ್ಲಿ ಎದುರಾದ ಜವರಾಯ ಅಜ್ಜಿ, ತಾತಾ ಹಾಗೂ ಮೊಮ್ಮಗಳ ಉಸಿರನ್ನೇ ಕಸಿದಿದ್ದಾನೆ.

ಇದನ್ನೂ ಓದಿ : 11 ವರ್ಷದ ಬಾಲಕನ ಕುತ್ತಿಗೆ ಹಿಸುಕಿ ಬೆಡ್ ಕೆಳಗಿನ ಬಾಕ್ಸ್ ನಲ್ಲಿ ಅಡಗಿಸಿಟ್ಟ ಮಹಿಳೆ – ಪರಿಚಯಸ್ಥಳೇ ಕೃತ್ಯ ಎಸಗಿದ್ದೇಕೆ..?

ವಿದ್ಯುತ್ ಸ್ಪರ್ಶಿಸಿ (Electrocuted) ಒಂದೇ ಕುಟುಂಬದ ಮೂವರು ದಾರುಣವಾಗಿ ಸಾವನ್ನಪ್ಪಿದ ಘಟನೆ ಬೆಳಗಾವಿ (Belagavi) ಜಿಲ್ಲೆಯ ಶಾಹುನಗರದಲ್ಲಿ (Shahunagar) ಶನಿವಾರ ಮುಂಜಾನೆ ನಡೆದಿದೆ. ಮೃತರು ಮೂತಃ ರಾಮದುರ್ಗ (Ramadurga) ತಾಲೂಕಿನ ಅರಬೆಂಚಿ ತಾಂಡಾದವರಾಗಿದ್ದು, ಅಜ್ಜ ಈರಪ್ಪಾ ಗಂಗಪ್ಪಾ ಲಮಾಣಿ (50), ಅಜ್ಜಿ ಶಾಂತವ್ವ ಈರಪ್ಪಾ ಲಮಾಣಿ (45) ಹಾಗೂ ಮೊಮ್ಮಗಳು ಅನ್ನಪೂರ್ಣ ಹುನ್ನಪ್ಪ ಲಮಾಣಿ (8) ವಿದ್ಯುತ್ ಸ್ಪರ್ಶದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮನೆಯಲ್ಲಿ ನೀರು ಕಾಯಿಸಲು ಕಾಯಿಲ್ ಹಾಕಿದ ವೇಳೆ ಮೊಮ್ಮಗಳಿಗೆ (Grand Daughter) ವಿದ್ಯುತ್ ತಗುಲಿದ್ದು, ಮೊಮ್ಮಗಳನ್ನು ಕಾಪಾಡುವ ಸಲುವಾಗಿ ಅಜ್ಜ (Grandfather), ಅಜ್ಜಿ (Grandmother) ಹೋಗಿದ್ದಾರೆ. ಈ ವೇಳೆ ಅವರಿಗೂ ವಿದ್ಯುತ್ ಸ್ಪರ್ಶವಾಗಿದ್ದು, ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಬೆಳಗಾವಿಯ ಶಾಹುನಗರದ 7ನೇ ಕ್ರಾಸ್‌ನ ನಿರ್ಮಾಣ ಹಂತದಲ್ಲಿದ್ದ ಮನೆಯಲ್ಲಿ ಘಟನೆ ನಡೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದು, ಘಟನಾ ಸ್ಥಳಕ್ಕೆ ಎಪಿಎಂಸಿ ಪೊಲೀಸರು ಮತ್ತು ಹೆಸ್ಕಾಂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

suddiyaana