ಕಾಂತಾರ ಸಿನಿಮಾದ ಕಥೆ ಇಂದು, ನಿನ್ನೆ ಹೊಳೆದದ್ದು ಅಲ್ಲ! – ಚಿತ್ರದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ನಟ ರಿಷಭ್‌ ಶೆಟ್ಟಿ

ಕಾಂತಾರ ಸಿನಿಮಾದ ಕಥೆ ಇಂದು, ನಿನ್ನೆ ಹೊಳೆದದ್ದು ಅಲ್ಲ! – ಚಿತ್ರದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ನಟ ರಿಷಭ್‌ ಶೆಟ್ಟಿ

ಕನ್ನಡ ಸಿನಿಮಾ ಇಂಡಸ್ಟ್ರಿಯತ್ತ ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಅಂದ್ರೆ ಅದು ಕಾಂತಾರ. ಇದೀಗ ಕಾಂತಾರ ಸಿನಿಮಾ ಬಗ್ಗೆ ರಿಷಬ್ ಶೆಟ್ಟಿ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ಕಾಂತಾರ ಸಿನಿಮಾದ ಕಥೆ ಇಂದು ನಿನ್ನೆ ಹೊಳೆದದ್ದು ಅಲ್ಲ. ಕಾಲೇಜು ದಿನಗಳಲ್ಲೇ ಎರಡೂ ಭಾಗದ ಕಥೆಯನ್ನು ನಾನು ಕಲ್ಪಿಸಿಕೊಂಡಿದ್ದೆ. ನನ್ನ ನೆಲದ ಕಥೆಯನ್ನು ಹೇಳಬೇಕು ಅಂತ ಅವತ್ತೆ ಅನಿಸಿತ್ತು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ ಸುಮಲತಾಗೋ.. ಸುಧಾಕರ್​ಗೋ? – ಕೈ-ಕಮಲ ಪಾಳಯದಲ್ಲಿ ಅದೆಷ್ಟು ಲೆಕ್ಕಾಚಾರ?

ಅಮೆಜಾನ್ ಪ್ರೈಂ ಇವೆಂಟ್ ಕಾರ್ಯಕ್ರಮದಲ್ಲಿ ಮಾತನಾಡಿರುವ ರಿಷಬ್, ಸಿನಿಮಾ ರಂಗಕ್ಕೆ ಬಂದ ನಂತರ ಕಾಂತಾರದ ಕಥೆಗೆ ಮತ್ತಷ್ಟು ಶಕ್ತಿ ಬಂದು, ಸಿನಿಮಾ ಮಾಡುವ ಹಾಗಾಯಿತು ಎಂದು ನೆನಪಿಸಿಕೊಂಡಿದ್ದಾರೆ. ಕಾಂತಾರ ಚಾಪ್ಟರ್ 1ಕ್ಕಾಗಿ ಅವರು ಊರ ಹತ್ತಿರವೇ ಸೆಟ್ ಹಾಕಿಸಿದ್ದಾರಂತೆ ರಿಷಬ್. ಮುಂದಿನ ತಿಂಗಳಿಂದ ಚಿತ್ರದ ಚಿತ್ರೀಕರಣ ಮಾಡುವುದಾಗಿ ರಿಷಭ್‌ ತಿಳಿಸಿದ್ದಾರೆ.

ಇನ್ನೊಂದು ವಿಚಾರ ಏನಂದ್ರೆ ಕಾಂತಾರ 1 ಚಿತ್ರದ ಶೂಟಿಂಗ್ ಇನ್ನೂ ಪ್ರಾರಂಭವೇ ಆಗಿಲ್ಲ. ಆದ್ರೆ ನಿರ್ಮಾಪಕ ವಿಜಯ ಕಿರಗಂದೂರು ಈಗಾಗಲೇ ಒಟಿಟಿಗೆ ಚಿತ್ರವನ್ನು ಮಾರಿಕೊಂಡಿದ್ದಾರೆ. ಕಾಂತಾರ ಚಿತ್ರದ ಒಟಿಟಿ ಹಕ್ಕನ್ನು ಪ್ರೈಮ್ ವಿಡಿಯೋ ಖರೀದಿಸಿದ್ದು, ಭಾರೀ ಮೊತ್ತಕ್ಕೆ ಸೇಲ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಅಂದಾಜಿನ ಪ್ರಕಾರ, ಸಿನಿಮಾದ ಬಜೆಟ್ ನ ಅರ್ಧದಷ್ಟು ದುಡ್ಡು ಒಟಿಟಿಯಿಂದಲೇ ಬಂದಿದೆ ಎಂದು ಹೇಳಲಾಗುತ್ತಿದೆ.

Shwetha M