ಪತ್ನಿಯ ಅಂತ್ಯಕ್ರಿಯೆ ಮುಗಿಸಿ ಮಗಳ ಶವ ಹುಡುಕಲು ಹೊರಟ ನತದೃಷ್ಟ – ರೈಲು ದುರಂತದಿಂದ ಕಣ್ಣೀರಿಗಿಲ್ಲ ಕೊನೆ..!

ಪತ್ನಿಯ ಅಂತ್ಯಕ್ರಿಯೆ ಮುಗಿಸಿ ಮಗಳ ಶವ ಹುಡುಕಲು ಹೊರಟ ನತದೃಷ್ಟ – ರೈಲು ದುರಂತದಿಂದ ಕಣ್ಣೀರಿಗಿಲ್ಲ ಕೊನೆ..!

ಒಡಿಶಾ ರೈಲು ದುರಂತದ ನಂತರ ಒಂದೊಂದೇ ಘಟನೆಗಳು ನೋವು ಕೊಡುತ್ತಿದೆ. ದುರಂತದಲ್ಲಿ ಸಾವನ್ನಪ್ಪಿದ ಪತ್ನಿಯ ಅಂತ್ಯಕ್ರಿಯೆ ನಡೆಸಿದ ಪತಿಯೊಬ್ಬರಿಗೆ ದುಃಖಿಸುತ್ತಾ ಮನೆಯಲ್ಲಿ ಕೂರಲು ಕೂಡಾ ಸಮಯವಿರಲಿಲ್ಲ. ಹೆಂಡತಿಯ ಅಂತ್ಯಕ್ರಿಯೆ ಮಾಡಿದ ಅವರು, ಈಗ ಶವಾಗಾರದಲ್ಲಿ ಮಗಳ ಮೃತದೇಹ ಹುಡುಕುತ್ತಿದ್ದಾರೆ.

ಇದನ್ನೂ ಓದಿ:  ಶವಗಳ ನಡುವೆ ಮಿಡಿಯುತ್ತಿತ್ತು ಹೃದಯ.. ತಂದೆಯ ನಂಬಿಕೆ ಹುಸಿಯಾಗಲಿಲ್ಲ – ಪುತ್ರನನ್ನ ಕಾಪಾಡಿದ ಅಪ್ಪ  

ಒಡಿಶಾದಲ್ಲಿ ನಡೆದ ರೈಲು ಅಪಘಾತದಲ್ಲಿ 278 ಜನ ಸಾವನ್ನಪ್ಪಿದ್ದು 1,100ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಈಗಾಗಲೇ ಅನೇಕರು ಆಸ್ಪತ್ರೆಯಿಂದ ಮನೆ ಹೋಗಿದ್ದಾರೆ. ಇದೀಗ ಅಲ್ಲಿ ರೈಲು ಹಳಿಗಳ ಮರುಸ್ಥಾಪನೆಗೊಂಡು ರೈಲು ಸಂಚಾರ ಕೂಡ ಆರಂಭವಾಗಿದೆ. ಆದರೆ ದುರಂತದಲ್ಲಿ ಸಾವನ್ನಪ್ಪಿರುವವರ ಮೃತದೇಹಕ್ಕಾಗಿ ಅವರ ಕುಟುಂಬದವರು ಮಾತ್ರ ಹುಡುಕಾಟ ನಡೆಸುತ್ತಿದ್ದಾರೆ. ಇದೀಗ ಶವಗಳ ಪತ್ತೆ ಕಾರ್ಯ ನಡೆಯುತ್ತಿದೆ. ಅದರ ಮಧ್ಯೆ ಒಂದು ಮನಕಲಕುವ ಘಟನೆಯೊಂದು ನಡೆದಿದೆ. ಮೊಹಮ್ಮದ್ ಸರ್ಫರಾಜ್ ಎಂಬುವವರ ಪತ್ನಿ ಮತ್ತು ಮಗಳು ರೈಲು ಅಪಘಾತದಲ್ಲಿ ಸಾವನ್ನಪ್ಪಿದ್ದು, ಇದೀಗ ಪತ್ನಿ ದೇಹ ಸಿಕ್ಕಿದ್ದು ಅಂತ್ಯಕ್ರಿಯೆಯನ್ನು ನೆರವೇರಿಸಿದ್ದಾರೆ. ಆದರೆ ಇದೀಗ ಮತ್ತೆ ಮಗಳ ಮೃತ ದೇಹದ ಹುಡುಕಲು ಶವಾಗಾರಕ್ಕೆ ಹೋಗಿದ್ದಾರೆ. ಶವಾಗಾರದಲ್ಲಿ 150ಕ್ಕೂ ಹೆಚ್ಚು ಶವಗಳಲ್ಲಿ ತನ್ನ ಪತ್ನಿಯ ದೇಹವನ್ನು ಗುರುತಿಸಿದ್ದಾರೆ, ಆದರೆ ರೈಲಿನಲ್ಲಿದ್ದ ತನ್ನ ಮಗಳನ್ನು ಇನ್ನೂ ಕಂಡುಹಿಡಿಯಲಾಗಿಲ್ಲ ಎಂದು ಹೇಳಿದ್ದಾರೆ. ಪ್ರತಿದಿನ ಜಿಲ್ಲಾಧಿಕಾರಿಯೊಂದಿಗೆ ಸಂಪರ್ಕದಲ್ಲಿದ್ದು, ಬಾಲಸೋರ್‌ನ ನಿವಾಸಿಗಳು ಸಹ ಸಹಾಯ ಮಾಡಲು ಮುಂದಾಗಿದ್ದರಿಂದ ಮಗಳ ಮೃತದೇಹವನ್ನು ಪತ್ತೆ ಮಾಡುವ ಕಾರ್ಯ ನಡೆಸುತ್ತಿದ್ದಾರೆ.

suddiyaana