ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಬರ.. ಶಾಂತಿ, ನೆಮ್ಮದಿಯ ಬೆಳೆ ಇಲ್ಲ – ಸರ್ಕಾರದ ವಿರುದ್ದ ಬಿಜೆಪಿ ಕಿಡಿ

ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಬರ.. ಶಾಂತಿ, ನೆಮ್ಮದಿಯ ಬೆಳೆ ಇಲ್ಲ – ಸರ್ಕಾರದ ವಿರುದ್ದ ಬಿಜೆಪಿ ಕಿಡಿ

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌, ಬಿಜೆಪಿ ನಡುವಿನ ಟ್ವೀಟ್‌ ವಾರ್‌ ಮುಂದುವರಿದೆ. ರಾಜ್ಯ ಸರ್ಕಾರದ ಆಡಳಿತ ವಿರುದ್ಧ ಬಿಜೆಪಿ ಟೀಕಿಸುತ್ತಲೇ ಇದೆ. ಇದೀಗ ಬಿಜೆಪಿ ʼಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಬರ ಬಂದಿದೆ. ಶಾಂತಿ, ನೆಮ್ಮದಿಯ ಬೆಳೆ ಇಲ್ಲʼ ಎಂದು ಕಾಂಗ್ರೆಸ್‌ ಸರ್ಕಾರವನ್ನು ಟೀಕಿಸಿದೆ.

ಇದನ್ನೂ ಓದಿ: ಪೀಕ್‌ ಹವರ್‌ನಲ್ಲೇ ಕೈ ಕೊಟ್ಟ ನಮ್ಮ ಮೆಟ್ರೋ – ನೇರಳೆ ಮಾರ್ಗದ ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ

ಈ ಬಗ್ಗೆ ಟ್ವೀಟ್‌ ಮಾಡಿರುವ ಬಿಜೆಪಿ, ʼರಾಜ್ಯದಲ್ಲಿ ಸಿದ್ದರಾಮಯ್ಯನವರ ಎಟಿಎಂ ಸರ್ಕಾರ ಒಂದು ತಿಂಗಳ ಅವಧಿಯಲ್ಲಿ ಮಾಡಿದ ಘನಾಂಧಾರಿ ಸಾಧನೆಗಳ ಪಟ್ಟಿʼ ಎಂದು ಕೆಲ ಘಟನೆಗಳನ್ನು ಪಟ್ಟಿ ಮಾಡಿದೆ.

  • ಸರ್ಕಾರಿ ಇಲಾಖೆಯ ಅಧಿಕಾರಿಗಳ ಜತೆ ಕಲೆಕ್ಷನ್ ಏಜೆಂಟ್ ಸುರ್ಜೇವಾಲಾ ಕಮಿಷನ್ ಸಭೆ..!
  • ಚುನಾವಣಾ ಪೂರ್ವ ಘೋಷಿಸಿದ ಗ್ಯಾರಂಟಿಗಳ ಮುಂದೂಡಿಕೆ ಜತೆಗೆ ನೀಡದ ಗ್ಯಾರಂಟಿಗೆ ಕಂಡೀಷನ್ ಅಪ್ಲೈ..!
  • ವಿದ್ಯುತ್, ಕುಡಿಯುವ ನೀರು, ತಿನ್ನುವ ಅಕ್ಕಿ ಸೇರಿ ಎಲ್ಲಾ ಬೆಲೆಯೂ ಏರಿಕೆ..!
  • ಮತಾಂತರ ನಿಷೇಧ, ಗೋ ಹತ್ಯೆ ನಿಷೇಧ ಕಾಯಿದೆ ವಾಪಸ್..!
  • ಪಠ್ಯ ಪುಸ್ತಕದಲ್ಲಿ ಎಡಬಿಡಂಗಿ ಸಿದ್ಧಾಂತದ ಹೇರಿಕೆ, ಕ್ರಾಂತಿಕಾರಿಗಳು, ರಾಜರ ಪಾಠಗಳಿಗೆ ಕೂಕ್..!
  • ಅಕ್ರಮ ಮರಳು ಮಾಫಿಯಾಗೆ ಚಾಲನೆ‌‌ ಕೊಟ್ಟು ಕರ್ತವ್ಯ  ನಿರತ ಪೊಲೀಸ್ ಪೇದೆಯ ಕೊಲೆ..!
  • ಬರಗಾಲದ ಕರಿಛಾಯಿ ಆವರಿಸಿದರೂ ಕ್ರಮಕೈಗೊಳ್ಳದೆ ಅನ್ನದಾತನ‌ ಮೊದಲ‌ ಬಲಿ ಪಡೆದ ಹೆಗ್ಗಳಿಕೆ..!
  • ಶುದ್ಧ‌ ಕುಡಿಯುವ ನೀರು ಪೂರೈಸಲಾಗದೆ ಅಮಾಯಕ ಜೀವಗಳ ಬಲಿ ಪಡೆದ ಕುಖ್ಯಾತಿ..!
  • ಅಬಕಾರಿ ಇಲಾಖೆಯ ಉನ್ನತ ಹುದ್ದೆಗಳು ಕೋಟಿ ಕೋಟಿಗೆ ಸೇಲ್, ವರ್ಗಾವಣೆ ದಂಧೆಗೆ ಇಳಿದ ಶ್ಯಾಡೋ ಸಿಎಂ ಯತೀಂದ್ರ‌..!
  • ಕುರ್ಚಿ ಬಿಡಲು ತಯಾರಲ್ಲಿದ ಸಿದ್ದರಾಮಯ್ಯ, ಪಟ್ಟು ಬಿಡದ ಡಿಕೆ ಶಿವಕುಮಾರ್ ಕಾದಾಟದಲ್ಲೇ ಕಾಲ ಹರಣ..!
  • ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಬರ ಬಂದಿದೆ. ಶಾಂತಿ, ನೆಮ್ಮದಿಯ ಬೆಳೆ ಇಲ್ಲ, ಜನರಿಗೆ ಬೆಲೆ ಏರಿಕೆಯ ಬರೆ‌ ಎಳೆದು, ಮೇಲೆ ಕಲರ್ ಕಲರ್ ಇಡುವುದು ಉಚಿತ, ಖಚಿತ, ನಿಶ್ಚಿತ.

suddiyaana