ಮಹಿಳಾ ಸಂಘಟನೆಯಲ್ಲಿದ್ದ ಪತ್ನಿ ಮನೆಯನ್ನೇ ಸೇರುತ್ತಿರಲಿಲ್ಲ – ರೊಚ್ಚಿಗೆದ್ದ ಪತಿಯಿಂದ ಇಬ್ಬರ ಪ್ರಾಣವೇ ಹೋಯ್ತು

ಮಹಿಳಾ ಸಂಘಟನೆಯಲ್ಲಿದ್ದ ಪತ್ನಿ ಮನೆಯನ್ನೇ ಸೇರುತ್ತಿರಲಿಲ್ಲ – ರೊಚ್ಚಿಗೆದ್ದ ಪತಿಯಿಂದ ಇಬ್ಬರ ಪ್ರಾಣವೇ ಹೋಯ್ತು

ಗಂಡ ಹೆಂಡತಿ ಜಗಳ ಅಂದ್ರೆ ಉಂಡು ಮಲಗುವ ತನಕ ಅನ್ನೋ ಮಾತಿದೆ. ಆದರೆ ಅದೇ ಜಗಳ, ಮುನಿಸು ಹೆಚ್ಚುತ್ತಾ ಹೋದರೆ ಕೊನೆಗೆ ಆಗುವುದು ದುರಂತ. ಸದ್ಯ ವಿಜಯಪುರ ಜಿಲ್ಲೆಯಲ್ಲೂ ಅಂತಹದ್ದೇ ಘಟನೆ ನಡೆದಿದೆ. ಮಹಿಳಾ ಸಂಘಟನೆಯಲ್ಲಿ ತೊಡಗಿಕೊಂಡಿದ್ದ ಪತ್ನಿ ಕೆಲಸ ಕೆಲಸ ಅಂತಾ ಸದಾ ಹೊರಗೇ ಇರುತ್ತಿದ್ದಳು. ಇದರಿಂದ ರೊಚ್ಚಿಗೆದ್ದ ಪತಿ ಇಬ್ಬರ ಜೀವವನ್ನೇ ತೆಗೆದಿದ್ದಾನೆ.

ಇದನ್ನೂ ಓದಿ : ಬೇರೊಬ್ಬನನ್ನ ಮದುವೆಯಾಗಲು ವಿಷ ಹಾಕಿ ಪ್ರಿಯಕರನನ್ನ ಕೊಂದ ಪ್ರೇಯಸಿ – ಜೈಲಿನಲ್ಲೂ ಸಹಕೈದಿಗಳ ಪಾಲಿಗೆ ಇವಳೇ ವಿಲನ್

ಮಹಿಳಾ ಸಂಘಟನೆಯಲ್ಲಿ ತೊಡಗಿಕೊಂಡಿದ್ದ ಪತ್ನಿ ಕೆಲಸದಲ್ಲಿ ನಿರತಳಾಗಿ ಮನೆ ಹಾಗೂ ಮಕ್ಕಳನ್ನು ನಿರ್ಲಕ್ಷಿಸಿದ್ದಳು. ಇದಿರಂದ ಸಿಟ್ಟಾದ ಪತಿ ತನ್ನ ಪತ್ನಿ ಹಾಗೂ ಅತ್ತೆಯನ್ನು ಕೊಲೆಗೈದ (Murder) ಪ್ರಕರಣ  ನಡೆದಿದೆ. ವಿಜಯಪುರ ಜಿಲ್ಲೆ ನಗರದ (Vijayapura) ನವಭಾಗ್ ಪ್ರದೇಶದಲ್ಲಿ ರೂಪಾ ಮೇತ್ರಿ (32) ಹಾಗೂ ಆಕೆಯ ತಾಯಿ ಕಲ್ಲವ್ವ (55) ಕೊಲೆಯಾದ ಮಹಿಳೆಯರು. ಕೊಲೆಗೈದ ಆರೋಪಿಯನ್ನು ಮಲ್ಲಿಕಾರ್ಜುನ ಮೇತ್ರಿ ಎಂದು ಗುರುತಿಸಲಾಗಿದೆ. ಆರೋಪಿ ಪತ್ನಿ, ಮೂವರು ಮಕ್ಕಳು ಹಾಗೂ ಅತ್ತೆಯೊಂದಿಗೆ ನವಭಾಗ್‍ನ ಭಗವಾನ್ ಎಂಬುವವರಿಗೆ ಸೇರಿದ ಮನೆಯಲ್ಲಿ ಆರು ತಿಂಗಳಿಂದ ಬಾಡಿಗೆಗೆ ಇದ್ದರು. ಹತ್ಯೆಯಾದ ರೂಪಾ ಹೆಚ್ಚಿನ ಸಮಯ ಮಹಿಳಾ ಸಂಘಟನೆ ಒಂದರ ಕೆಲಸದ ಮೇಲೆ ಮನೆಯಿಂದ ಹೊರಗೆ ಇರುತ್ತಿದ್ದಳು. ಇದೇ ಕಾರಣಕ್ಕೆ ಅವರಿಬ್ಬರ ನಡುವೆ ಆಗಾಗ ಜಗಳ ಸಹ ನಡೆಯುತ್ತಿತ್ತು ಎನ್ನಲಾಗಿದೆ.

ಅಲ್ಲದೇ ಪತ್ನಿ, ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ, ಮನೆಯಲ್ಲಿ ಕೆಲಸ ಮಾಡುತ್ತಿರಲಿಲ್ಲ ಎಂದು ಆರೋಪಿ ಮಲ್ಲಿಕಾರ್ಜುನ ಹೇಳಿಕೊಂಡಿದ್ದಾನೆ. ಇದೇ ವಿಚಾರಕ್ಕೆ ಇಬ್ಬರು ಮಲಗಿದ್ದ ವೇಳೆ ಕಟ್ಟಿಗೆಯಿಂದ ತಲೆಗೆ ಹೊಡೆದು ಕೊಲೆಗೈದಿದ್ದಾನೆ. ಬಳಿಕ ಗಾಂಧಿಚೌಕ್ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಈ ಸಂಬಂಧ ಗಾಂಧಿಚೌಕ್ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Shantha Kumari