ಬರ್ತಡೇ ಮುಗಿಸಿ ಬರುವಾಗಲೇ ಕಾಡಿದ ವಿಧಿ – ಮದುವೆಯಾಗಿ 24 ದಿನಗಳಲ್ಲೇ ನವಜೋಡಿ ದುರಂತ ಅಂತ್ಯ

ಬರ್ತಡೇ ಮುಗಿಸಿ ಬರುವಾಗಲೇ ಕಾಡಿದ ವಿಧಿ – ಮದುವೆಯಾಗಿ 24 ದಿನಗಳಲ್ಲೇ ನವಜೋಡಿ ದುರಂತ ಅಂತ್ಯ

ಕೆನ್ನೆಯಲ್ಲಿ ಹಚ್ಚಿದ್ದ ಅರಿಶಿನದ ರಂಗು ಆರಿರಲಿಲ್ಲ. ಮದರಂಗಿಯ ಚಿತ್ತಾರ ಇನ್ನೂ ಮಾಸಿರಲಿಲ್ಲ. ಮನೆ ಮುಂದಿನ ಚಪ್ಪರ ಕೂಡ ತೆಗೆದಿರಲಿಲ್ಲ. ಹಸೆಮಣೆ ಏರಿದ್ದ ನೆನಪು ಹಚ್ಚ ಹಸಿರಾಗಿಯೇ ಇತ್ತು. ನೂರಾರು ಕನಸು ಕಟ್ಟಿಕೊಂಡು ಹೊಸಬಾಳಿಗೆ ಕಾಲಿಟ್ಟಿದ್ದ ಜೋಡಿ ಅದು. ಈಗಷ್ಟೇ ಸಂಸಾರದ ನೊಗ ಹೊತ್ತು ಜೊತೆ ಜೊತೆಯಾಗಿ ಬಾಳ ಪಯಣ ಆರಂಭಿಸಿದ್ರು. ಆದರೆ ಈ ಜೋಡಿ ಮೇಲೆ ಅದ್ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ವಿವಾಹವಾಗಿ ಒಂದೇ ತಿಂಗಳಲ್ಲಿ ದುರಂತ ಅಂತ್ಯ ಕಂಡಿದ್ದಾರೆ.

ಇದನ್ನೂ ಓದಿ : ಗ್ಯಾಸ್ ಗೀಸರ್‌ನಿಂದ ವಿಷಾನಿಲ ಸೋರಿಕೆ – ಒಟ್ಟಿಗೆ ಸ್ನಾನಮಾಡುತ್ತಿದ್ದ ಯುವಜೋಡಿಯ ದುರಂತ ಸಾವು..!

ವಿಜಯಪುರ ನಗರದ ಹೊರವಲಯದ ಸೊಲ್ಲಾಪುರ ಬೈಪಾಸ್ ಬಳಿ ಘೋರ ದುರಂತವೊಂದು ನಡೆದು ಹೋಗಿದೆ. ಬೈಕ್ ಹಾಗೂ ಕ್ಯಾಂಟರ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ನವ ವಿವಾಹಿತರು ಸಾವನ್ನಪ್ಪಿದ್ದಾರೆ.  31 ವರ್ಷದ ಹೊನಮಲ್ಲ ತೆರದಾಳ ಹಾಗೂ ಅವರ ಪತ್ನಿ 24 ವರ್ಷದ ಗಾಯತ್ರಿ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ. ಸಂಬಂಧಿಕರ ಮಕ್ಕಳ ಹುಟ್ಟುಹಬ್ಬಕ್ಕೆ ಹೋಗಿ ವಾಪಸ್ ಬರುವಾಗ ಇಂಥಾದ್ದೊಂದು ದುರ್ಘಟನೆ ನಡೆದಿದೆ.

ಮೃತ ಹೊನಮಲ್ಲ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಕಳೆದ ತಿಂಗಳು ಮೇ 22 ರಂದು ಹೊನಮಲ್ಲ ಹಾಗೂ ಗಾಯತ್ರಿಯ ವಿವಾಹವಾಗಿದ್ದರು. ಮದುವೆಯಾಗಿ 24 ದಿನಗಳಲ್ಲೇ ನವ ಜೋಡಿ ಸಾವನ್ನಪ್ಪಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಕ್ಕಳಿಗೆ ಮದುವೆ ಮಾಡಿ ಇಬ್ಬರ ಜೀವನ ನೂರು ಕಾಲ ಚೆನ್ನಾಗಿರಲಿ ಅಂತಾ ಹರಸಿದವರೇ ಈಗ ಇಬ್ಬರ ಶವಗಳನ್ನ ನೋಡಿ ಗೋಳಾಡ್ತಿದ್ದಾರೆ. ವಿಜಯಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

suddiyaana