ಬ್ಯಾಂಕ್‌ ದರೋಡೆಗೆ ಹೋದವನಿಗೆ ಕಾದಿತ್ತು ದೊಡ್ಡ ಶಾಕ್‌ – ಕಳ್ಳ ಬರೆದ ಪತ್ರದಲಿ ಏನಿದೆ?

ಬ್ಯಾಂಕ್‌ ದರೋಡೆಗೆ ಹೋದವನಿಗೆ ಕಾದಿತ್ತು ದೊಡ್ಡ ಶಾಕ್‌ – ಕಳ್ಳ ಬರೆದ ಪತ್ರದಲಿ ಏನಿದೆ?

ಖದೀಮರು ಬ್ಯಾಂಕ್‌, ಅಂಗಡಿ, ಮನೆಗಳಿಗೆ ನುಗ್ಗಿದ್ರೆ ಬೆಲೆಬಾಳುವ ವಸ್ತುಗಳನ್ನೆಲ್ಲಾ ಹೊತ್ತೊಯ್ಯುತ್ತಾರೆ. ಕಳ್ಳತನ ಮಾಡಲು ಏನು ಸಿಗದೇ ಇದ್ದಾಗ ಸಿಟ್ಟಿನಲ್ಲಿ ಕೈಗೆ ಸಿಕ್ಕವುಗಳನ್ನು ಚೆಲ್ಲಾಪಿಲ್ಲಿ ಮಾಡಿ ಹೋಗುತ್ತಾರೆ. ಆದರೆ ಇಲ್ಲೊಬ್ಬ ಕಳ್ಳ ದರೋಡೆಗೆಂದು ಬ್ಯಾಂಕ್‌ವೊಂದಕ್ಕೆ ನುಗ್ಗಿದ್ದಾನೆ. ಈ ವೇಳೆ ಆತನಿಗೆ ವಿಚಿತ್ರ ಅನುಭವವಾಗಿದ್ದು, ಆತ ಪತ್ರವೊಂದನ್ನು ಬರೆದಿಟ್ಟು ಹೋಗಿದ್ದಾನೆ!

ಈ ಘಟನೆ ತೆಲಂಗಾಣದ ಮಂಚೇರಿಯಲ್​ ಜಿಲ್ಲೆಯ ನೆನ್ನಾಲ್​ಮಂಡಲದಲ್ಲಿ ನಡೆದಿದೆ. ನೆನ್ನಾಲ್​ಮಂಡಲದ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಗುರುವಾರದಂದು ಮಧ್ಯರಾತ್ರಿ ಕಳ್ಳನೊಬ್ಬ ದರೋಡೆಗೆ ಯತ್ನಿಸಿದ್ದಾನೆ. ಸೆಕ್ಯುರಿಟಿಯಿಂದ ತಪ್ಪಿಸಿಕೊಂಡು ಬ್ಯಾಂಕ್​ನ ಬೀಗ ಒಡೆದು ಒಳಗೆ ಹೋಗಿರುವ ಆತ ಲಾಕರ್ ಕೋಣೆಗೆ ನುಸುಳಲು ಪ್ರಯತ್ನಿಸಿದ್ದು, ಆತನ ಪ್ರಯತ್ನ ವಿಫಲವಾಗಿದೆ.

ಇದನ್ನೂ ಓದಿ: ಕೇವಲ 6 ಸಾವಿರ ರೂ.ಗೆ ಹೆತ್ತ ಮಗುವನ್ನೇ ಮಾರಾಟ ಮಾಡಲು ಮುಂದಾದ ತಾಯಿ! – ಅಸಲಿ ಕಥೆ ಬಿಚ್ಚಿಟ್ಟ ಮಹಿಳೆ!  

ಕೊನೆಗೆ ಬ್ಯಾಂಕ್​ನಲ್ಲಿ ಹುಡುಕಾಡಿದರೂ ಆತನಿಗೆ ಒಂದು ರೂಪಾಯಿಯೂ ಸಿಕ್ಕಿಲ್ಲ. ಈ ಕಳ್ಳತನ ಯಶಸ್ವಿಯಾದರೆ ತನ್ನ ಜೀವನ ಸೆಟಲ್​ ಆಗುತ್ತದೆ. ರಾತ್ರೋರಾತ್ರಿ ಕೋಟ್ಯಾಧಿಪತಿಯಾಗುತ್ತೇನೆ ಎಂದು ಕನಸು ಕಂಡಿದ್ದ ಆತನಿಗೆ ಬ್ಯಾಂಕಿನಲ್ಲಿ ಏನೂ ಸಿಗದ ಕಾರಣ ‘ಒಳ್ಳೆಯ ಬ್ಯಾಂಕ್, ಒಂದು ರೂಪಾಯಿಯೂ ಸಿಕ್ಕಿಲ್ಲ, ನನ್ನನ್ನು ಹಿಡಿಯಬೇಡಿ ನನ್ನ ಬೆರಳಚ್ಚು ಕೂಡ ಇಲ್ಲ’ ಎಂದು ಪತ್ರ ಬರೆದು ಅಲ್ಲಿಂದ ಹೊರಟು ಹೋಗಿದ್ದಾನೆ.

ಮರುದಿನ ಬೆಳಿಗ್ಗೆ ಬ್ಯಾಂಕ್‌ಗೆ ಬಂದ ಅಧಿಕಾರಿಗಳು ಬೀಗ ಮುರಿದಿರುವುದು ಗಮನಿಸಿದ್ದಾರೆ. ಆ ಬಳಿಕ ಬ್ಯಾಂಕಿನಲ್ಲಿ ಸಿಕ್ಕ ಪತ್ರದ ಆಧಾರದ ಮೇಲೆ ಪೊಲೀಸರಿಗೆ ದೂರು ನೀಡಲಾಗಿದ್ದು ಪ್ರಕರಣ ದಾಖಲಿಸಿಕೊಂಡ ಪೋಲಿಸರು ತನಿಖೆ ಆರಂಭಿಸಿದ್ದಾರೆ.

suddiyaana