ಈ ಊರಿನ ವಿಳಾಸ ಮರೆತನಾ ಯಮರಾಜ! – 70 ವರ್ಷಗಳಿಂದ ಇದುವರೆಗೆ ಇಲ್ಲಿ ಯಾರೂ ಸತ್ತಿಲ್ಲ!

ಈ ಊರಿನ ವಿಳಾಸ ಮರೆತನಾ ಯಮರಾಜ! – 70 ವರ್ಷಗಳಿಂದ ಇದುವರೆಗೆ ಇಲ್ಲಿ ಯಾರೂ ಸತ್ತಿಲ್ಲ!

ಭೂಮಿಯಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಯೂ ಒಂದಲ್ಲ ಒಂದು ದಿನ ಸಾಯುತ್ತವೆ. ಕೆಲವು ಜೀವಿಗಳು ಬೇಗನೇ ಸಾವನ್ನಪ್ಪಿದ್ದರೆ, ಕೆಲವೊಂದು ಜೀವಿಗಳು ದೀರ್ಘ ಸಮಯ ಜೀವಂತವಾಗಿರುತ್ತದೆ. ಇದರಿಂದ ಮನುಷ್ಯರು ಕೂಡ ಹೊರತಾಗಿಲ್ಲ. ನಾವು ಹುಟ್ಟಿದ ಕ್ಷಣವೇ, ನಮಗೆ ಮುಂದೊಂದು ದಿನ ಸಾವು ಖಚಿತ ಎಂದು ನಮಗೆಲ್ಲರಿಗೂ ತಿಳಿದಿದೆ. ಸಮಯ ಬಂದಾಗ ಯಮರಾಜನು ನಮ್ಮನ್ನು ಕರೆದುಕೊಂಡು ಹೋಗುತ್ತಾನೆ. ಆ ಯಮ ಧರ್ಮರಾಯನನ್ನು ಯಾರಾದರೂ ನಿಲ್ಲಿಸ ಲು ಸಾಧ್ಯವಾ? ಇಲ್ಲವೇ ಇಲ್ಲ. ಯಾವ ಕ್ಷಣದಲ್ಲಿ ಯಾರು ಬೇಕಾದರೂ ಸಾವನ್ನಪ್ಪಬಹುದು. ಸಾವನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ಆದರೆ ಇಲ್ಲೊಂದು ನಗರದಲ್ಲಿ ಸಾಯುವುದು ಅಪರಾಧವಂತೆ. ಸುಮಾರು 70 ವರ್ಷಗಳಿಂದ ಯಾರು ಸತ್ತಿಲ್ಲವಂತೆ!

ಹೌದು, ಇದು ಅಕ್ಷರಶಃ ಸತ್ಯ.. ಆದರೆ, ನೀವು ಹೆಚ್ಚು ಕಾಲ ಬದುಕಲು ಬಯಸಿದರೆ ಈ ನಗರಕ್ಕೆ ಹೋಗಬಹುದು. ಇಲ್ಲಿ ಸಾಯುವುದು ಅಪರಾಧ. ಬಹುಶಃ ಈ ನಗರಕ್ಕೆ  ಯಮರಾಜನಿಗೂ ಕೂಡ ಇಲ್ಲಿಗೆ ಪ್ರವೇಶವಿಲ್ಲ ಅನ್ನಿಸುತ್ತದೆ. ಕಳೆದ 70 ವರ್ಷಗಳಿಂದ ಇಲ್ಲಿ ಯಾರೂ ಸಾವಿಗೀಡಾಗಿಲ್ಲ. ಈ ನಗರ ಇರುವುದು ನಾರ್ವೆಯಲ್ಲಿದೆ. ಇಲ್ಲಿನ ಉತ್ತರ ಧ್ರುವದಲ್ಲಿರುವ ಲಾಂಗ್ಇಯರ್ಬೈನ್ ನಗರದಲ್ಲಿ 7 ದಶಕಗಳಿಂದ ಯಾರು ಸತ್ತಿಲ್ಲ. ಇಲ್ಲಿನ ಸರ್ಕಾರವೇ ಸಾಯುವುದನ್ನು ಬ್ಯಾನ್‌ ಮಾಡಿದೆಯಂತೆ.

ಇದನ್ನೂ ಓದಿ: ಸಂಜೆಯಾಗುತ್ತಿದ್ದಂತೆ ಭಯಾನಕವಾಗುತ್ತೆ ಈ ಧಾರ್ಮಿಕ ಸ್ಥಳ.. – ರಾತ್ರಿ ವೇಳೆ ಕೇಳುತ್ತೆ ಜನರ ಕಿರುಚಾಟ!

ಸಾವನ್ನು ಬ್ಯಾನ್‌ ಮಾಡಿದ್ದೇಕೆ?

ಲಾಂಗ್ಇಯರ್ಬೈನ್ ನಗರವು ವರ್ಷವಿಡೀ ತುಂಬಾ ತಂಪಾಗಿರುತ್ತದೆ. ಇಲ್ಲಿನ ಜನರು ಸದಾ ಸ್ವೆಟರ್ ಧರಿಸುತ್ತಾರೆ. ಇದು ಡೀಪ್ ಫ್ರೀಜರ್ನಂತಹ ನಗರವಾಗಿದ್ದರೆ. ಮನುಷ್ಯನ ಸಾವಿನ ನಂತರ ಮೃತ ದೇಹಗಳು ಇಲ್ಲಿ ಕೊಳೆಯುವುದಿಲ್ಲವಂತೆ. ಈ ಕಾರಣಕ್ಕಾಗಿ ಇಲ್ಲಿನ ಸರ್ಕಾರ ಇಲ್ಲಿ ಮನುಷ್ಯರು ಸಾಯುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಅಥವಾ ಬೇರೊಂದು ಅರ್ಥದಲ್ಲಿ ಹೇಳಬೇಕು ಅಂದರೆ ಇಲ್ಲಿ ಸತ್ತವರನ್ನು ತಕ್ಷಣ ಇಲ್ಲಿಂದ ಬೇರೆಡೆಗೆ ಸಾಗಿಸುತ್ತಾರೆ ಅನ್ನಿಸುತ್ತದೆ. ಅಂದರೆ ಇಲ್ಲಿ ಮೃತದೇಹವನ್ನು ಇಟ್ಟುಕೊಳ್ಳುವುದನ್ನು ನಿಷೇಧಿಸಲಾಗಿದೆ.

ಈ ನಗರದಲ್ಲಿ 3 ತಿಂಗಳು ಸೂರ್ಯ ಮುಳುಗುವುದೇ ಇಲ್ಲ!

ಈ ನಗರದ ಇನ್ನೊಂದು ವಿಶೇಷತೆಯೆಂದರೆ ಮೇ ನಿಂದ ಜುಲೈವರೆಗೆ ಇಲ್ಲಿ ಸೂರ್ಯ ಮುಳುಗುವುದಿಲ್ಲ. ಸತತ 76 ದಿನಗಳ ಕಾಲ ಸೂರ್ಯ ಇಲ್ಲಿ ಬೆಳಗುತ್ತಲೇ ಇರುತ್ತಾನೆ. ಈ ಕಾರಣಕ್ಕಾಗಿ, ನಾರ್ವೆಯನ್ನು ಸೂರ್ಯ ಅಸ್ತಮಾನವಾಗದ ನಗರ ಎಂದೂ ಕರೆಯುತ್ತಾರೆ. ಕೆಲವು ತಿಂಗಳುಗಳಿಂದ ಇಲ್ಲಿ ಚಳಿ ಹೆಚ್ಚಾಗಿರುವುದರಿಂದ ಜನರ ರಕ್ತ ಗಡ್ಡೆ ಕಟ್ಟುತ್ತದೆ. ಆದಾಗ್ಯೂ, ಲಾಂಗ್ ಇಯರ್ ಬೈನ್ ನಗರದಲ್ಲಿ ಕೊನೆಯ ಸಾವು 1917 ರಲ್ಲಿ ಸಂಭವಿಸಿತು. ಅಂದಿನಿಂದ ಇಲ್ಲಿಯವರೆಗೆ ಇಲ್ಲಿ ಯಾವುದೇ ಸಾವು ಸಂಭವಿಸಿಲ್ಲ. ಯಮರಾಜ ಇಲ್ಲಿನ ವಿಳಾಸವನ್ನು ಮರೆತಿದ್ದಾರೆ ಎಂದು ಜನ ಭಾವಿಸಿದ್ದಾರೆ.

70 ವರ್ಷದ ಹಿಂದಿನ ಮೃತದೇಹ ಇನ್ನೂ ಕೊಳೆತಿಲ್ಲ!

1917 ರಲ್ಲಿ ಮೃತಪಟ್ಟವರ ಸಾವಿಗೆ ಕಾರಣವೆಂದರೆ ಇನ್ಫ್ಲುಯೆನ್ಜಾ. ಆಗ ಇಲ್ಲಿ ಒಂದು ಶವವನ್ನು ಹೂಳಲಾಗಿದೆ. ಆದರೆ ಆ ಮೃತದೇಹ ಇನ್ನೂ ಕೊಳೆತಿಲ್ಲವೆಂದು ಹೇಳಲಾಗಿದೆ. ಅದರಲ್ಲಿರುವ ಬ್ಯಾಕ್ಟೀರಿಯಾಗಳು ಇನ್ನೂ ಜೀವಂತವಾಗಿವೆ ಎಂದು ಹೇಳಲಾಗುತ್ತದೆ. ಇದರಿಂದ ಇತರರಿಗೆ ತೊಂದರೆಯಾಗುತ್ತದೆ. ಹೀಗಾಗಿ ಇಲ್ಲಿನ ಜನರು ಸಾವಿನ ಭಯದಲ್ಲಿದ್ದಾರೆ. ಆದರೆ, ಸಾವು ಪ್ರಕೃತಿಯ ನಿಯಮ. ಅದಕ್ಕೆ ಪರಿಹಾರವಿಲ್ಲ. ಆದರೆ ಇಲ್ಲಿ ಸರ್ಕಾರ ಸಾಯುತ್ತಿರುವವರಿಗಾಗಿ ನೀತಿಯನ್ನು ಜಾರಿಗೆ ತಂದಿದೆ. ಈ ನೀತಿಯ ಪ್ರಕಾರ, ಯಾರಾದರೂ ಸತ್ತರೆ ಅಥವಾ ಸಾಯುವ ಸ್ಥಿತಿಯಲ್ಲಿ ಕಂಡುಬಂದರೆ, ಅವರನ್ನು ಹೆಲಿಕಾಪ್ಟರ್ನಲ್ಲಿ ಮತ್ತೊಂದು ಸ್ಥಳಕ್ಕೆ ಕರೆದೊಯ್ದು ಅಲ್ಲಿ ಅಂತ್ಯಸಂಸ್ಕಾರ ಮಾಡಲಾಗುತ್ತದೆ. ಇದಲ್ಲದೆ, ಈ ನಗರವು ತುಂಬಾ ಚಿಕ್ಕದಾಗಿದೆ. ಇಲ್ಲಿನ ಒಟ್ಟು ಜನಸಂಖ್ಯೆ ಕೇವಲ 2,000. ಹಾಗಾಗಿ ಇದೆಲ್ಲ ಸಾಧ್ಯವಾಗಿದೆ. ಇದರಿಂದ ಇಲ್ಲಿಯವರೆಗೂ ಇಲ್ಲಿ ಯಾವುದೇ ಸಾವು ಸಂಭವಿಸಿಲ್ಲ ಎನ್ನಬಹುದು!

Shwetha M