ಅಭಿಮಾನಿಯ ಮೊಬೈಲ್ ಕಿತ್ತುಕೊಂಡು ಎಸೆದ ಸಿಂಗರ್ – ದುರಂಹಕಾರದ ಗಾಯಕನ ಮೇಲೆ ಸಿಟ್ಟಾದ ಫ್ಯಾನ್ಸ್

ಅಭಿಮಾನಿಯ ಮೊಬೈಲ್ ಕಿತ್ತುಕೊಂಡು ಎಸೆದ ಸಿಂಗರ್ – ದುರಂಹಕಾರದ ಗಾಯಕನ ಮೇಲೆ ಸಿಟ್ಟಾದ ಫ್ಯಾನ್ಸ್

ಕಾಲೇಜಿನಲ್ಲಿ ಖ್ಯಾತ ಗಾಯಕನಿಂದ ಸಂಗೀತ ಕಾರ್ಯಕ್ರಮ ನಡೆಯುತ್ತಿತ್ತು. ಅಭಿಮಾನಿಗಳ ಬಗ್ಗೆ ಹೇಳೋದೇ ಬೇಡ. ಎಲ್ಲರ ಕೈಯಲ್ಲೂ ಮೊಬೈಲ್ ಇರುತ್ತದೆ. ಫೋನ್‌ನಲ್ಲಿ ನೆಚ್ಚಿನ ಗಾಯಕನ ಸಾಂಗ್ ರೆಕಾರ್ಡ್ ಮಾಡಿ ಖುಷಿ ಪಡುತ್ತಿರುತ್ತಾರೆ. ಎಲ್ಲಾ ಕಡೆ ಇದೇ ಅಲ್ವಾ ನಡೆಯೋದು. ಆದರೆ, ಆ ಗಾಯಕನ ವರ್ತನೆಯೇ ಯಾವಾಗಲೂ ವಿಚಿತ್ರ. ತನ್ನ ಹಾಡನ್ನು ಮೊಬೈಲ್‌ನಲ್ಲಿ ಸೆರೆಹಿಡಿಯುತ್ತಿರುವ ಸಿಟ್ಟೋ, ಇಲ್ಲ ದುರಂಹಕಾರ ನೆತ್ತಿಗೇರಿತ್ತೋ.. ಗಾಯಕನ ವರ್ತನೆ ಕಂಡು ಫ್ಯಾನ್ಸ್ ಅಂತೂ ಸಿಕ್ಕಾಪಟ್ಟೆ ಛೀಮಾರಿ ಹಾಕುತ್ತಿದ್ದಾರೆ.

ಇದನ್ನೂ ಓದಿ:ವರ್ತೂರು ಸಂತೋಷ್ ಹೋದಲ್ಲೆಲ್ಲಾ ಹೂಮಳೆ – ಹಳ್ಳಿಕಾರ್ ಹವಾಗೆ ಸ್ಟಾರ್ ಗಳೇ ಶೇಕ್ ಶೇಕ್

ಗಾಯಕ ಆದಿತ್ಯ ನಾರಾಯಣ್ ಚತ್ತೀಸಗಢದ ಕಾಲೇಜೊಂದರಲ್ಲಿ ಪ್ರೋಗ್ರಾಂ ಆಯೋಜನೆ ಮಾಡಿದ್ದರು. ಈ ವೇಳೆ ಸಂಗೀತ ಪ್ರೇಮಿಗಳು ನೆರೆದಿದ್ದರು. ಆದಿತ್ಯ ಅವರ ಧ್ವನಿಯಲ್ಲಿ ಸಾಂಗ್ ಕೇಳುತ್ತಾ ಫ್ಯಾನ್ಸ್ ಖುಷಿಯ ಅಲೆಯಲ್ಲಿ ತೇಲುತ್ತಿದ್ದರು. ಈ ವೇಳೆ ಅಭಿಮಾನಿಗಳು ಆದಿತ್ಯ ನಾರಾಯಣ್ ಹಾಡುತ್ತಿರುವುದನ್ನು ಮೊಬೈಲ್‌ನಲ್ಲಿ ಸೆರೆಹಿಡಿಯುತ್ತಾ ಎಂಜಾಯ್ ಮಾಡುತ್ತಿದ್ದರು. ಇದು ಗಾಯಕ ಆದಿತ್ಯ ನಾರಾಯಣ್ ಕೋಪಕ್ಕೆ ಕಾರಣ ಆಗಿದೆ. ಸಂಗೀತ ಕಾರ್ಯಕ್ರಮದ ವೇಳೆಯೇ ಆದಿತ್ಯ ಅವರು ಅಭಿಮಾನಿಯ ಫೋನ್‌ನ್ನು ಕಸಿದುಕೊಂಡಿದ್ದಾರೆ. ನಂತರ ಅಭಿಮಾನಿಗಳ ಗುಂಪಿನ ನಡುವೆ ಎಸೆದಿದ್ದಾರೆ. ಅವರು ಈ ರೀತಿ ವರ್ತನೆ ತೋರಿಸಿರುವುದಕ್ಕೆ ಅನೇಕರು ಆದಿತ್ಯ ಅವರಿಗೆ ಛೀಮಾರಿ ಹಾಕುತ್ತಿದ್ದಾರೆ.

ಈ ರೀತಿ ಅವರು ನಡೆದುಕೊಳ್ಳಬಾರದಿತ್ತು ಎಂದು ಅನೇಕರು ಹೇಳಿದ್ದಾರೆ. ಸದ್ಯ ಈ ವಿಡಿಯೋ ಸೆನ್ಸೇಷನ್ ಸೃಷ್ಟಿ ಮಾಡಿದೆ. ‘ಆದಿತ್ಯ ಅವರೇ ಅಷ್ಟೊಂದು ಸಿಟ್ಟು ಏಕೆ? ಈ ರೀತಿ ಅಗೌರಯುತವಾಗಿ ನಡೆದುಕೊಳ್ಳೋದು ಎಷ್ಟು ಸರಿ? ಅವರು ನಿಮ್ಮ ಅಭಿಮಾನಿ. ಅವರಿಗೆ ಗೌರವ ನೀಡಿ’ ಎಂದು ಕೆಲವರು ಬರೆದುಕೊಂಡಿದ್ದಾರೆ. ‘ಅಭಿಮಾನಿಗಳು ಬರದೇ ಇದ್ದರೆ ನೀವು ವೇದಿಕೆ ಕಾರ್ಯಕ್ರಮ ಹೇಗೆ ನೀಡುತ್ತೀರಿ? ಎಂದು ಕೆಲವರು ಹೇಳಿದ್ದಾರೆ.

Sulekha