ಶುರುವಾಯ್ತು ಸಿದ್ದರಾಮಯ್ಯ ಬಯೋಪಿಕ್​ ಕೆಲಸ – ಸಿಎಂ ಪಾತ್ರ ನಿರ್ವಹಿಸಲಿದ್ದಾರೆ ತಮಿಳಿನ ಖ್ಯಾತ ನಟ

ಶುರುವಾಯ್ತು ಸಿದ್ದರಾಮಯ್ಯ ಬಯೋಪಿಕ್​ ಕೆಲಸ – ಸಿಎಂ ಪಾತ್ರ ನಿರ್ವಹಿಸಲಿದ್ದಾರೆ ತಮಿಳಿನ ಖ್ಯಾತ ನಟ

 ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಅವರ ಜೀವನಾಧಾರಿತ ಸಿನಿಮಾ ತೆರೆಗೆ ಬರಲಿದೆ ಎಂಬ ಸುದ್ದಿ ಆಗಾಗ ಕೇಳಿಬರುತ್ತಿದೆ. ತೆರೆಮರೆಯಲ್ಲಿ ಈ ಚಿತ್ರದ ಕೆಲಸಗಳು ಕೂಡ ಶುರುವಾಗಿದೆ ಎಂದು ಹೇಳಲಾಗುತ್ತಿತ್ತು. ಸಿಎಂ ಸಿದ್ದರಾಮಯ್ಯ ಅವರ ಜೀವನಾಧಾರಿತ ಚಿತ್ರ ನಿರ್ಮಾವಾಗುತ್ತಿರುವುದು ನಿಜ ಎಂದು ಹೇಳಲಾಗುತ್ತಿದೆ.

ಕರ್ನಾಟಕದ 24ನೇ ಮುಖ್ಯಮಂತ್ರಿ ಸಿದ್ಧರಾಯಮ್ಯನವರ ಜೀವನಾಧಾರಿತ ಸಿನಿಮಾಕ್ಕೆ ತೆರೆ ಮರೆಯಲ್ಲೆ ಕೆಲಸ ಶುರುವಾಗಿದೆ. ಗಂಗಾವತಿ ಮೂಲದ ಹಯಾದ್ ಪಿರ್ ಎಂಬವರು ಸಿದ್ದರಾಯಮ್ಯ ಬಯೋಪಿಕ್ ಅನ್ನು ನಿರ್ಮಾಣ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಈಕೆ ಹಾಡಿದ್ದಕ್ಕೆ ಭೂಮಿಯೇ ಕಂಪಿಸಿತು! ಅಬ್ಬಾಬ್ಬಾ.. ಇವೆಳೆಂತಾ ಹಾಡುಗಾರ್ತಿ?

ಇನ್ನು ಅಚ್ಚರಿಯ ವಿಚಾರ ಎಂದರೆ ಈ ಚಿತ್ರದಲ್ಲಿ ತಮಿಳು ನಟ ವಿಜಯ ಸೇತುಪತಿ ಅವರು ಸಿಎಂ ಸಿದ್ಧರಾಮಯ್ಯನವರ ಪಾತ್ರವನ್ನು ಮಾಡುತ್ತಿದ್ದಾರೆ. ಈಗಾಗಲೇ ಈ ಚಿತ್ರದಲ್ಲಿ ಆ್ಯಕ್ಟ್ ಮಾಡಲು ಒಪ್ಪಿಕೊಂಡಿದ್ದಾರಂತೆ. ಇನ್ನು ಸಿದ್ದು ಅವರ ಬಾಲ್ಯ ಮತ್ತು ಪ್ರೌಢಾವ್ಯವಸ್ಥೆಯ  ಪಾತ್ರವನ್ನ ಹೊಸ ಕಲಾವಿದರೊಬ್ಬರ ಬಳಿ ಮಾಡಿಸಲು ಚಿತ್ರತಂಡ ಯೋಚನೆ ಹಾಕಿಕೊಂಡಿದೆ. ಆದರೆ ಆ ಕಲಾವಿದನ್ಯಾರು ಅನ್ನೋದು ಇನ್ನೂ ಫೈನಲ್‌ ಆಗಿಲ್ಲ.

ಸಿದ್ದರಾಮಯ್ಯ ಅವರು ಲಾಯರ್ ಆಗಿ ಪ್ರಾಕ್ಟಿಸ್ ಶುರು ಮಾಡೋ ಸಮಯವನ್ನು ತಮಿಳು ನಟ ವಿಜಯ್ ಸೇತುಪತಿ ಅವರು ಮಾಡಲಿದ್ದಾರೆ. ಚಿತ್ರದ ಕೊನೆಯ 20 ರಿಂದ 30 ನಿಮಿಷಕ್ಕೆ ವಿಜಯ ಸೇತುಪತಿ ಎಂಟ್ರಿಯಾಗಲಿದೆ ಎಂದು ಹೇಳಲಾಗುತ್ತಿದೆ.

ಗೌರಿಬಿದನೂರು ಮೂಲದ ಸತ್ಯ ರತ್ನಂ ಎಂಬುವವರು ಸಿದ್ದರಾಮಯ್ಯನವರ ಬಯೋಪಿಕ್​ನ ಸಾರಥಿ. ಇವರ ನಿರ್ದೇಶನದಲ್ಲಿ ಸಿನಿಮಾ ಮೂಡಿಬರಲಿದೆ. ಕಥೆಯ ಫೈನಲ್‌ವರ್ಕ್ ನಡೆಯುತ್ತಿದ್ದು ಪ್ರೀ ಪ್ರೋಡಕ್ಷನ್ ಕಾರ್ಯ ಸಾಗುತ್ತಿದೆ ಎಂದು ಹೇಳಲಾಗುತ್ತಿದೆ. ಶಶಾಂಕ್ ಶೇಷಗಿರಿಯ ಸಂಗೀತ ಈಗಾಗಲೇ ಒಂದು ಹಾಡಿನ ಕಂಪೋಸ್ ಆಗಿದ್ದು, ಮ್ಯೂಸಿಕ್ ಕೆಲಸಗಳು ಪ್ರಗತಿಯಲ್ಲಿದೆ. ಸಿಂಗರ್ ಕಮ್‌ ಮ್ಯೂಸಿಕ್ ಡೈರೆಕ್ಟರ್ ಆಗಿ ಶಶಾಂಕ್ ಶೇಷಗಿರಿ ಸಂಗೀತ ಸಂಯೋಜನೆಯ ಜವಾಬ್ದಾರಿಯನ್ನ ಹೊತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

suddiyaana