ಅವಳಿಲ್ಲದ ಪ್ರಪಂಚದಲ್ಲಿ ನಾನಿರಲಾರೆ.. ಪತ್ನಿ ಅಗಲಿಕೆಯ ನೋವಲ್ಲೇ ಪ್ರಾಣ ಬಿಟ್ಟ ಪ್ರಾಧ್ಯಾಪಕ!

ಅವಳಿಲ್ಲದ ಪ್ರಪಂಚದಲ್ಲಿ ನಾನಿರಲಾರೆ.. ಪತ್ನಿ ಅಗಲಿಕೆಯ ನೋವಲ್ಲೇ ಪ್ರಾಣ ಬಿಟ್ಟ ಪ್ರಾಧ್ಯಾಪಕ!

ಪತ್ನಿಯ ಸಾವಿನಿಂದ ಖಿನ್ನತೆಗೆ ಒಳಗಾಗಿದ್ದ ಪ್ರಾಧ್ಯಾಪಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಹೈದರಾಬಾದ್‌ನ ಚಂದಾನಗರದಲ್ಲಿ ನಡೆದಿದೆ.

ಓಲ್ಡ್ ಎಂಐಜಿ ಕಾಲೋನಿಯ ತಲ್ಲೂರಿ ರಾಧಾ ಫಣಿ ಮುಖರ್ಜಿ(47) ಮೃತ ದುರ್ದೈವಿಯಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಸ್ಥಳೀಯ ಎಂಜಿನಿಯರಿಂಗ್ ಕಾಲೇಜೊಂದರಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ಒಂದು ವರ್ಷದ ಹಿಂದೆ ಇವರ ಪತ್ನಿ ತೀರಿಕೊಂಡಿದ್ದರು. ಪತ್ನಿಯ ಸಾವಿನಿಂದ ನೊಂದಿದ್ದ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು.

ಇದನ್ನೂ ಓದಿ: ಚಿನ್ನ.. ಇಣುಕು ನೋಟ ಬೀರಿ ಹೋದೆ ಬದುಕಿನ ಅಂಗಳದಲಿ.. –  ಸ್ಪಂದನಾ ನೆನಪಲ್ಲಿ ಮನದಾಳ ಬಿಚ್ಚಿಟ್ಟ ರಾಘು

ಅಂದಿನಿಂದ ತನ್ನ ಹೆಂಡತಿಯ ನೆನಪುಗಳನ್ನು ಮೆಲುಕು ಹಾಕುತ್ತಿದ್ದ ಅಧ್ಯಾಪಕ, ಗುರುವಾರದಂದು ತಾನು ಇನ್ನು ಮುಂದೆ ಕಾಲೇಜಿಗೆ ಬರುವುದಿಲ್ಲ ಎಂದು ಆಡಳಿತ ಮಂಡಳಿಗೆ ತಿಳಿಸಿದ್ದರು. ಅದೇ ದಿನ ಸಂಜೆಯಿಂದ ಮನೆಯೊಳಗೆ ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದು, ಹೊರ ಬಂದಿರಲೇ ಇಲ್ಲ. ಬಳಿಕ ಸಹೋದರಿ ಹಾಗೂ ಇಬ್ಬರು ಸಹೋದರರ ದೂರವಾಣಿ ಕರೆಗಳಿಗೂ ಆತ ಸ್ಪಂದಿಸಿರಲಿಲ್ಲ. ಕೊನೆಗೆ ಅವರ ಸಹೋದರಿ ಮತ್ತು ಸಹೋದರ ಶುಕ್ರವಾರ ಬಾಗಿಲು ತೆರೆದು ನೋಡಿದಾಗ, ಮನೆಯಲ್ಲಿ ಫ್ಯಾನ್‌ಗೆ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಯಹತ್ಯೆ ಮಾಡಿಕೊಂಡಿದ್ದರು.

ಇನ್ನು, ಮನೆಯಲ್ಲಿ  ಪ್ರಾಧ್ಯಾಪಕ ಬರೆದಿರುವ ಡೆತ್‌ನೋಟ್‌ ಸಿಕ್ಕಿದೆ. ಈ ಡೆತ್‌ನೋಟ್‌ನಲ್ಲಿ ತನ್ನ ಸಾವಿಗೆ ಯಾರೂ ಕಾರಣರಲ್ಲ.. ಅವಳಿಲ್ಲದ ಪ್ರಪಂಚದಲ್ಲಿ ನಾನಿರಲಾರೆ.. ಪುತ್ರ ರೇವಂತ್‌ಗೆ ಆಸ್ತಿ ನೀಡುವಂತೆ ಕೋರಿದ್ದಾರೆ.

suddiyaana