ಕುಟುಂಬಕ್ಕಾಗಿ ಮದುವೆಯಾದ ಗೌತಮ್ ಭೂಮಿ ನಡುವೆ ಮೂಡುತ್ತಾ ಪ್ರೀತಿ? – ಅಮೃತಧಾರೆಯಲ್ಲಿ ಅಸಲಿ ಕಥೆ ಈಗ ಶುರು

ಕುಟುಂಬಕ್ಕಾಗಿ ಮದುವೆಯಾದ ಗೌತಮ್ ಭೂಮಿ ನಡುವೆ ಮೂಡುತ್ತಾ ಪ್ರೀತಿ? – ಅಮೃತಧಾರೆಯಲ್ಲಿ ಅಸಲಿ ಕಥೆ ಈಗ ಶುರು

ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಅಮೃತಧಾರೆ (Amruthadhaare) ಧಾರಾವಾಹಿ ಈಗಾಗಲೇ ವೀಕ್ಷಕರ ಮನಗೆದ್ದಿದೆ. ಛಾಯಾಸಿಂಗ್ (Chaya Sing) ಹಾಗೂ ರಾಜೇಶ್ ನಟರಂಗ (Rajesh Natarang) ಅಭಿನಯವನ್ನ ಜನ ಮೆಚ್ಚಿಕೊಂಡಿದ್ದಾರೆ. ಇದೀಗ ಗೌತಮ್ ಅಲಿಯಾಸ್ ರಾಜೇಶ್, ಭೂಮಿಕಾ ಅಲಿಯಾಸ್ ಛಾಯಾ ಸಿಂಗ್ ಮದುವೆ ನಡೆದಿದೆ.

ಅಮೃತಧಾರೆ ಸದ್ಯ ಕಿರುತೆರೆಯ ಸೀರಿಯಲ್ ಗಳ ಪಟ್ಟಿಯಲ್ಲಿ ನಂ 1 ಸ್ಥಾನದಲ್ಲಿದೆ. ಭೂಮಿಕಾ, ಗೌತಮ್ ನಟನೆಯನ್ನ ಪ್ರೇಕ್ಷಕರು ಕಾದು ಕುಳಿತು ನೋಡೋ ಹಾಗಾಗಿದೆ., 40 ಪ್ಲಸ್ ನಾಯಕ 35 ವಯಸ್ಸಿನ ನಾಯಕಿಯ ಗಟ್ಟಿಮೇಳ ನಡೆದಿದೆ. ತನ್ನ ಪ್ರೀತಿಯ ತಂಗಿಗಾಗಿ ಮದುವೆಯಾಗೋದಕ್ಕೆ ನಿರ್ಧಾರ ಮಾಡಿದ ಗೌತಮ್, ತನ್ನ ತಂಗಿಯ ಗಂಡನ ಅಕ್ಕ ಭೂಮಿಕಾ ಜೊತೆಗೆ ಮದುವೆಯಾಗೋಕೆ ಒಪ್ಪಿ ಇದೀಗ ಹಸೆಮಣೆ ಏರಿ ಮದುವೆಯಾಗಿದ್ದಾನೆ.

ಇದನ್ನೂ ಓದಿ :ಹಿಟ್ & ರನ್ ಕೇಸ್ ಪ್ರಕರಣಕ್ಕೆ ಸಿಕ್ತು ಟ್ವಿಸ್ಟ್ – ತಪ್ಪು ಮಾಡಿದ್ದು ನಾನೇ ಎಂದ ಗಿಚ್ಚಿ ಗಿಲಿಗಿಲಿ ನಟ ಚಂದ್ರಪ್ರಭ

ಒಬ್ಬರನ್ನೊಬ್ಬರು ಕಂಡರೆ ಹಾವು ಮುಂಗುಸಿಯಂತಿದ್ದ ಭೂಮಿಕಾ, ಗೌತಮ್ ಕುಟುಂಬದವರ ಸಂತೋಷಕ್ಕಾಗಿ ಮದುವೆಯಾಗಿದ್ದಾರೆ. ಇವರಿಬ್ಬರ ಮದುವೆಗೆ ಕಿರುತೆರೆಯ ವೀಕ್ಷಕರು ಕಾದು ಕುಳಿತಿದ್ದರು. ಒಂದು ವಾರಗಳ ಸ್ಪೆಷಲ್ ಸಂಚಿಕೆಗಳೊಂದಿಗೆ ಅದ್ಧೂರಿ ಸೆಟ್ ಮೂಲಕ ಗೌತಮ್, ಭೂಮಿಕ ಮದುವೆಯ ಎಪಿಸೋಡ್ ಗಳು ನೋಡುಗರಿಗೆ ಮಸ್ತ್ ಮನರಂಜನೆ ನೀಡಿದ್ದವು. ಆದರೆ ಮುಂದಿನ ಸಂಚಿಕೆಗಳಲ್ಲಿ ಭೂಮಿಕಾಗೆ ಇರುವ ಸವಾಲುಗಳನ್ನ ಹೇಗೆ ಎದುರಿಸುತ್ತಾಳೆ ಅನ್ನೋ ಕುತೂಹಲವೂ ಮೂಡಿದೆ. ಯಾಕೆಂದರೆ ಗೌತಮ್ ತಾಯಿಯೇ ಮಗನ ಪಾಲಿಗೆ ವಿಲನ್ ಆಗಿದ್ದಾಳೆ. ಇದನ್ನೆಲ್ಲಾ ಹೇಗೆ ನಿಭಾಯಿಸುತ್ತಾಳೆ ಅನ್ನೋ ಕುತೂಹಲ ಇದೆ.

ಮತ್ತೊಂದೆಡೆ ಮದುವೆಯಾದ ಖುಷಿಯಲ್ಲಿ ಜೀವನ್ ಜೊತೆ ಹನಿಮೂನ್ ಗೆ ತೆರಳಿರುವ ಮಹಿಮಾ ಬಂದ ನಂತರ ಅತ್ತೆ ಮನೆಗೆ ಹೋಗುತ್ತಾಳಾ, ಅಥವಾ ಅಮ್ಮನ ಮನೆಯಲ್ಲೇ ಉಳಿಯುತ್ತಾಳಾ ಅನ್ನೋ ಅನುಮಾನ ಕೂಡ ಶುರುವಾಗಿದೆ. ಯಾಕೆಂದರೆ ಮದುವೆಯಾದ ದಿನವೇ ನಾನು ಯಾವ ಮನೆಗೂ ಬರಲ್ಲ. ಇದೇ ಮನೆಯಲ್ಲಿ ಇರುತ್ತೇನೆ ಎಂದಿದ್ದಳು. ಹೀಗಾಗಿ ವಿದೇಶದಿಂದ ಬಂದ ಬಳಿಕ ಯಾವ ರಾದ್ಧಾಂತ ಮಾಡುತ್ತಾಳೋ ಅನ್ನೋ ಪ್ರಶ್ನೆ ಕೂಡ ಶುರುವಾಗಿದೆ.

suddiyaana