ರಾಮನವಮಿ ದಿನವೇ ರಾಮಾಯಣ ಸಿನಿಮಾಕ್ಕೆ ಮುಹೂರ್ತ –ಬಾಲಿವುಡ್‌ನಲ್ಲಿ ಸೆಟ್ಟೇರಲಿದೆ ಮೆಗಾ ಸಿನಿಮಾ

ರಾಮನವಮಿ ದಿನವೇ ರಾಮಾಯಣ ಸಿನಿಮಾಕ್ಕೆ ಮುಹೂರ್ತ –ಬಾಲಿವುಡ್‌ನಲ್ಲಿ ಸೆಟ್ಟೇರಲಿದೆ ಮೆಗಾ ಸಿನಿಮಾ

ಬಾಲಿವುಡ್‌ನಲ್ಲಿ ಮತ್ತೊಮ್ಮೆ ರಾಮಾಯಣ ಸಿನಿಮಾ ತಯಾರಾಗುತ್ತಿದೆ. ದೊಡ್ಡ ದೊಡ್ಡ ತಾರಾಬಳಗವೇ ರಾಮಾಯಣ ಸಿನಿಮಾದಲ್ಲಿದೆ. ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಯಶ್ ಕೂಡಾ ಬಾಲಿವುಡ್‌ನ ರಾಮಾಯಣ ಸಿನಿಮಾದಲ್ಲಿ ನಟಿಸಲಿದ್ದಾರೆ. ಇದೀಗ ಈ ಸಿನಿಮಾದ ಘೋಷಣೆಗೆ ದಿನಾಂಕ ನಿಗದಿಯಾಗಿದೆ.

ಇದನ್ನೂ ಓದಿ: ಬಾಲಿವುಡ್ ಸಿನಿಮಾದಲ್ಲಿ ರಾವಣನಾಗಿ ರಾಕಿಭಾಯ್ – 15 ದಿನ ಕಾಲ್ ಶೀಟ್.. ಹೇಗಿರಲಿದೆ ಯಶ್ ಲುಕ್?

ರಾಮಾಯಣ ಕತೆ ಆಧರಿಸಿ ಬಾಲಿವುಡ್‌ನಲ್ಲಿ ತೆರೆಕಂಡಿದ್ದ ಆದಿಪುರುಷ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿತ್ತು. ಸ್ಟಾರ್ ನಟ ಪ್ರಭಾಸ್ ರಾಮನ ಪಾತ್ರದಲ್ಲಿ ನಟಿಸಿದ್ದರೂ ಸಹ ಆದಿಪುರುಷ್ ಸಿನಿಮಾ ಗೆಲ್ಲಲಿಲ್ಲ. ಇದೀಗ ಬಾಲಿವುಡ್‌ನಲ್ಲಿ ಮತ್ತೊಮ್ಮೆ ರಾಮಾಯಣ ಸಿನಿಮಾಕ್ಕೆ ಭರ್ಜರಿ ತಯಾರಿ ನಡೆದಿದೆ. ಸಿನಿಮಾದಲ್ಲಿ ಅದ್ಧೂರಿ ತಾರಾಬಳಗವೇ ಇದೆ. ರಾಮನಾಗಿ ರಣಬೀರ್‌ಕಪೂರ್, ಸೀತೆಯಾಗಿ ಸಾಯಿಪಲ್ಲವಿ, ಜೊತೆಗೆ ಕನ್ನಡದ ನಟ ಯಶ್ ಸಹ ರಾಮಾಯಣ ಸಿನಿಮಾದಲ್ಲಿ ನಟಿಸಲಿದ್ದಾರೆ. ಜನಪ್ರಿಯ ನಿರ್ದೇಶಕ ನಿತೀಶ್ ತಿವಾರಿ ಈ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಈಗಾಗಲೇ ಎಲ್ಲ ನಟ-ನಟಿಯರ ಲುಕ್ ಟೆಸ್ಟ್, ಧ್ವನಿ ಪರೀಕ್ಷೆ ಇನ್ನಿತರೆಗಳು ಮುಗಿದಿದೆ ಎನ್ನಲಾಗಿದೆ. ಇದೀಗ ಸಿನಿಮಾದ ಮುಹೂರ್ತಕ್ಕೆ ದಿನಾಂಕವನ್ನು ಚಿತ್ರತಂಡ ನಿಗದಿ ಮಾಡಿದೆ.

ಏಪ್ರಿಲ್ 17ರಂದು ಸಿನಿಮಾದ ಮುಹೂರ್ತವನ್ನು ಚಿತ್ರತಂಡ ಅದ್ಧೂರಿಯಾಗಿ ಮಾಡಲಿದೆ. ಸಿನಿಮಾದ ಬಗ್ಗೆ ಹಲವು ಮಾಹಿತಿಗಳನ್ನು ನಿರ್ದೇಶಕ ನಿತೀಶ್ ತಿವಾರಿ ಅದೇ ದಿನ ಹಂಚಿಕೊಳ್ಳಲಿದ್ದಾರೆ. ಸಿನಿಮಾ ಘೋಷಣೆಗೆ ಏಪ್ರಿಲ್ 17ನ್ನೇ ಆಯ್ದುಕೊಳ್ಳಲು ಕಾರಣವೂ ಇದೆ. ಅಂದು ರಾಮನವಮಿ. ಹಾಗಾಗಿ ಅದೇ ದಿನದಂದು ಚಿತ್ರತಂಡ ಸಿನಿಮಾದ ಮುಹೂರ್ತ ಮಾಡಲಿದೆ. ಸಿನಿಮಾದ ಹೆಸರು ಸಹ ಅದೇ ದಿನ ಘೋಷಣೆ ಆಗಲಿದೆ. ಸಿನಿಮಾದಲ್ಲಿ ರಣ್ಬೀರ್ ಕಪೂರ್ ರಾಮನ ಪಾತ್ರದಲ್ಲಿ ನಟಿಸಲಿದ್ದಾರೆ. ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿ. ಕನ್ನಡದ ನಟ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟ ಸನ್ನಿ ಡಿಯೋಲ್ ಹನುಮಂತನ ಪಾತ್ರದಲ್ಲಿ ನಟಿಸಲಿದ್ದಾರೆ. ರಕುಲ್ ಪ್ರೀತ್ ಸಿಂಗ್, ಲಾರಾ ದತ್ತ ಅವರುಗಳು ಕೈಕೆ, ಊರ್ಮಿಳೆಯ ಪಾತ್ರದಲ್ಲಿ ನಟಿಸಲಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿ ಸಿನಿಮಾದ ಚಿತ್ರೀಕರಣವನ್ನು ನಿತೀಶ್ ತಿವಾರಿ ಮಾಡಲಿದ್ದಾರೆ.

Sulekha