ಲಗ್ನ ಪತ್ರಿಕೆ ಹಂಚಲು ಹೋದ ವರ ನಾಪತ್ತೆ – ಮದುವೆ ದಿನದಂದೇ ಯುವಕನ ಶವ ಪತ್ತೆ!

ಲಗ್ನ ಪತ್ರಿಕೆ ಹಂಚಲು ಹೋದ ವರ ನಾಪತ್ತೆ – ಮದುವೆ ದಿನದಂದೇ ಯುವಕನ ಶವ ಪತ್ತೆ!

ಕೆಲವೇ ದಿನಗಳಲ್ಲಿ ತನ್ನ ಮದುವೆ ಇದೆ ಅಂತಾ ಆ ಯುವಕ ತುಂಬಾ ಖುಷಿಯಿಂದ ಓಡಾಡುತ್ತಿದ್ದ. ತನ್ನ ಮದುವೆಗೆ ಬಂಧು – ಮಿತ್ರರೆಲ್ಲರನ್ನು ಕರೆಯಬೇಕು ಅಂತಾ ಲಗ್ನಪತ್ರಿಕೆ ಹಂಚಲು ಓಡಾಡುತ್ತಿದ್ದ. ಅವತ್ತು ಕೂಡ ತನ್ನ ಮದುವೆಗೆ ಸಂಬಂಧಿಕರನ್ನು ಕರೆಯಲೆಂದು ಹೋಗಿದ್ದವನು ಮತ್ತೆ ಮನೆಗೆ ಬರಲೇ ಇಲ್ಲ. ಲಗ್ನ ಪತ್ರಿಕೆ ಹಂಚಲು ಹೋದವನು ಮಸಣ ಸೇರಿದ್ದಾನೆ.

ಲಗ್ನಪತ್ರಿಕೆ ಹಂಚಲು ಹೋದವ ನಾಪತ್ತೆ!

ತೆಲಂಗಾಣದ ಸದಾಶಿವನಗರ ಮಂಡಲದ ಅಡ್ಲೂರು ಎಲ್ಲರೆಡ್ಡಿ ಗ್ರಾಮದ ನಿವಾಸಿ ರಾಜೇಂದರ್ ಎಂಬುವವನಿಗೆ ಕೆಲವು ದಿನಗಳ ಹಿಂದೆ ರಾಂಪುರ ಗ್ರಾಮದ ಯುವತಿಯೊಂದಿಗೆ ಮದುವೆ ನಿಶ್ಚಯವಾಗಿತ್ತು. ಸೆ. 3 ರಂದು ಆತ ಸಂಬಂಧಿಕರಿಗೆ ಲಗ್ನಪತ್ರಿಕೆ ಹಂಚಲು ಹೋಗುತ್ತೇನೆ ಎಂದು ಮನೆಯಿಂದ ಹೊರಟು ಹೋಗಿದ್ದಾನೆ. ಅವತ್ತು ಮನೆಯಿಂದ ಹೊರಗೆ ಹೋದವನು ಮತ್ತೆ ವಾಪಸ್‌ ಬರಲೇ ಇಲ್ಲ. ಆತ ಮನೆಗೆ ಬರದ ಹಿನ್ನೆಲೆ ಕುಟುಂಬಸ್ಥರು ಊರಲ್ಲಿ ಹುಡುಕಾಡಿದ್ದಾರೆ. ಆತನ ಸ್ನೇಹಿತ ಬಳಿ ವಿಚಾರಿಸಿದ್ದಾರೆ. ಎಷ್ಟು ಹುಡುಕಾಡಿದರೂ ಆತ ಪತ್ತೆಯಾಗಿರಲಿಲ್ಲ.

ಇದನ್ನೂ ಓದಿ: ಗಂಡನನ್ನು ಬಿಟ್ಟು ಇಬ್ಬರು ಪುರುಷರ ಜೊತೆ ಆಂಟಿಯ ತುಂಟಾಟ – ಪ್ರೇಯಸಿ ಮತ್ತು ಮಗನನ್ನೇ ಕೊಂದ ಪ್ರಿಯಕರ

ಮದುವೆ ದಿನವೇ ಮೃತ ದೇಹ ಪತ್ತೆ!

ಲಗ್ನಪತ್ರಿಕೆ ಹಂಚಲು ಹೋಗಿ ನಾಪತ್ತೆಯಾದ ವರ ಎಷ್ಟು ಹುಡುಕಿದರೂ ಪತ್ತೆಯಾಗಿರಲಿಲ್ಲ. ಮದುವೆಯ ದಿನವಾದ ನಿನ್ನೆ ಲಿಂಗಂಪೇಟ ಮಂಡಲದ ಬಳಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ರಾಜೇಂದರ್ ಶವವನ್ನು ಸಂಬಂಧಿಕರು ಪತ್ತೆ ಮಾಡಿದ್ದಾರೆ. ಕುಟುಂಬಸ್ಥರ ದೂರಿನ ಮೇರೆಗೆ ಲಿಂಗಂಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಮದುವೆಯ ದಿನವೇ ವರನ ಸಾವಿನಿಂದ ಕುಟುಂಬಸ್ಥರು ಹಾಗೂ ಊರಿನವರು ದುಃಖತಪ್ತರಾಗಿದ್ದರು. ಆತ್ಮಹತ್ಯೆಯ ಹಿಂದಿನ ಕಾರಣಗಳು ಇನ್ನೂ ತಿಳಿದುಬಂದಿಲ್ಲ. ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಲಿಂಗಂಪೇಟ ಠಾಣೆ ಪೊಲೀಸರು ತಿಳಿಸಿದ್ದಾರೆ.

suddiyaana