ರಾಜ್ಯದ ಅರ್ಚಕರಿಗೆ ಬಿಗ್‌ ಶಾಕ್‌! – ಅರ್ಚಕರಿಂದ 10 ವರ್ಷದ ಸಂಬಳ ವಾಪಸ್ ಕೇಳಿದ ಸರ್ಕಾರ!

ರಾಜ್ಯದ ಅರ್ಚಕರಿಗೆ ಬಿಗ್‌ ಶಾಕ್‌! – ಅರ್ಚಕರಿಂದ 10 ವರ್ಷದ ಸಂಬಳ ವಾಪಸ್ ಕೇಳಿದ ಸರ್ಕಾರ!

ರಾಜ್ಯದ ಮುಜರಾಯಿ ಇಲಾಖೆ ದೇವಸ್ಥಾನಗಳ ಅರ್ಚಕರಿಗೆ ಬಿಗ್‌ ಶಾಕ್‌ ನೀಡಿದೆ. ಕಳೆದ ಹತ್ತು ವರ್ಷಗಳಿಂದ ನೀಡಿದ್ದ ಸಂಬಳವನ್ನು ವಾಪಸ್‌ ನೀಡುವಂತೆ ರಾಜ್ಯ ಸರ್ಕಾರ ಎಲ್ಲ ಅರ್ಚಕರಿಗೆ ನೋಟಿಸ್‌ ಜಾರಿ ಮಾಡಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ವಿಶ್ವದೆಲ್ಲೆಡೆ ಶ್ರೀರಾಮನ ಜಪ – ವಿಶ್ವದ  60 ಕ್ಕೂ ಹೆಚ್ಚು ದೇಶಗಳಲ್ಲಿ ರಾಮೋತ್ಸವ

ಹೌದು, ರಾಜ್ಯದಲ್ಲಿ ಮುಜರಾಯಿ ಇಲಾಖೆಯಿಂದ ದೇವಸ್ಥಾನಗಳ ಅರ್ಚಕರಿಗೆ ನೀಡಲಾಗುತ್ತಿದ್ದ 10 ವರ್ಷಗಳ ಸಂಬಳವನ್ನು ವಾಪಸ್ ನೀಡುವಂತೆ ಸರ್ಕಾರದಿಂದ ಎಲ್ಲ ಅರ್ಚಕರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಕನ್ನಡದ ಪಂಡಿತ ಹಿರೇಮಗಳೂರು ಕಣ್ಣನ್ ಸೇರಿದಂತೆ ಹಲವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲಾಡಳಿತದಿಂದ ವೇತನ ತಡೆ ಹಿಡಿದು ನೋಟಿಸ್ ನೀಡಲಾಗಿದೆ. ನಿಮ್ಮ ದೇವಾಲಯದ ಆದಾಯ ಕಡಿಮೆಯಾಗಿದೆ. ಆದರೆ ನಿಮಗೆ ಸರ್ಕಾರದಿಂದ ಸಂಬಳ ಹೆಚ್ಚು ನೀಡಲಾಗಿದೆ. ಆದ್ದರಿಂದ ನೀವು ಮಾಸಿಕ 4,500 ರೂಪಾಯಿಯಂತೆ ಕಳೆದ 10 ವರ್ಷದ ಸಂಬಳದ ಹಣವನ್ನ ವಾಪಸ್ ನೀಡಲು ಸೂಚನೆ ನೀಡಲಾಗಿದೆ.

ಹಿರೇಮಗಳೂರಿನ ಕೋದಂಡ ರಾಮ ದೇವಾಲಯದ ಪ್ರಧಾನ ಅರ್ಚಕರಾಗಿರುವ ಕಣ್ಣನ್ ಅವರಿಗೆ ಸರ್ಕಾರದಿಂದ ಪ್ರತಿ ತಿಂಗಳು  7,500 ಸಂಬಳವನ್ನು ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿತ್ತು. ಆದರೆ ದೇವಾಲಯದ ಆದಾಯ ಕಡಿಮೆ‌ ಇರುವುದರಿಂದ ಸರ್ಕಾರ ನೀಡಿದ ಸಂಬಳ ವಾಪಸ್ ನೀಡಬೇಕಾಗಿದೆ. ನಿಮ್ಮ ವೇತನ ತಡೆ ಹಿಡಿಯಲಾಗಿದ್ದು, ಈ ನೋಟಿಸ್ ತಲುಪಿದ ಕೂಡಲೇ ಹಣ ವಾಪಸ್ ನೀಡುವಂತೆ ತಿಳಿಸಲಾಗಿದೆ. ಮಾಸಿಕ 7500 ರೂಪಾಯಿ ನೀಡಿದ ಸಂಬಳದಲ್ಲಿ 4500 ವಾಪಸ್ ನೀಡಬೇಕು.ಕಳೆದ 10 ವರ್ಷದ 4,74,000 ರೂಪಾಯಿ ವಾಪಸ್ ನೀಡುವಂತೆ ತಿಳಿಸಲಾಗಿದೆ. ರಾಜ್ಯ ಸರ್ಕಾರ ಏಕಾಏಕಿ ನೀಡಿರುವ ನೋಟಿಸ್ ನೋಡಿ ಅರ್ಚಕರು ಆತಂಕಗೊಂಡಿದ್ದಾರೆ.

Shwetha M