ಮಗಳನ್ನು ಹಿಂಬಾಲಿಸಿದ್ದಕ್ಕೆ ಪೊಲೀಸರಿಗೆ ದೂರು ಕೊಟ್ಟ ತಂದೆ -ಕಂಪ್ಲೇಂಟ್ ಕೊಟ್ಟಿದ್ದಕ್ಕೆ ಹುಡುಗಿ ಮನೆಯೊಳಗೆ ಹಾವು ಬಿಟ್ಟ ಪಾಪಿ..!

ಮಗಳನ್ನು ಹಿಂಬಾಲಿಸಿದ್ದಕ್ಕೆ ಪೊಲೀಸರಿಗೆ ದೂರು ಕೊಟ್ಟ ತಂದೆ -ಕಂಪ್ಲೇಂಟ್ ಕೊಟ್ಟಿದ್ದಕ್ಕೆ ಹುಡುಗಿ ಮನೆಯೊಳಗೆ ಹಾವು ಬಿಟ್ಟ ಪಾಪಿ..!

ಮಗಳನ್ನು ಹಿಂಬಾಲಿಸಬೇಡ ಎಂದರೆ ಆತ ಕೇಳಿರಲಿಲ್ಲ. ಇದರಿಂದ ಬೇಸತ್ತ ಅಪ್ಪ ಪೊಲೀಸರಿಗೆ ದೂರು ನೀಡಿದರು. ಪೊಲೀಸರು ಕೂಡಾ ಹುಡುಗಿಯನ್ನು ಹಿಂಬಾಲಿಸಬೇಡ ಎಂದು ವಾರ್ನಿಂಗ್ ಮಾಡಿದ್ದರು. ಇದೇ ಸಿಟ್ಟಿನಲ್ಲಿದ್ದ ಆತ ಮಾಡಿದ್ದು ಮಾತ್ರ ವಿಷಕಾರುವ ಕೆಲಸ. ವಿಷಕಾರಿ ಹಾವನ್ನೇ ತನ್ನ ದ್ವೇಷ ತೀರಿಸಿಕೊಳ್ಳಲು ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ: ಬೆಳ್ಳಿ, ಬೊಮ್ಮನ್‌ ದಂಪತಿಗೆ ಸಾಕ್ಷ್ಯಚಿತ್ರ ತಂಡದಿಂದಲೇ ಮೋಸ! – 2 ಕೋಟಿ ಪ್ರತಿಫಲ ಕೋರಿ ಮಾವುತ ದಂಪತಿಯಿಂದ ಲೀಗಲ್‌ ನೋಟಿಸ್‌

ಕೇರಳದ ತಿರುವನಂತಪುರಂ ಜಿಲ್ಲೆಯ ಕಟ್ಟಕಡದಲ್ಲಿ ರಾಜೇಂದ್ರನ್ ಎಂಬವರ ಮಗಳನ್ನು 30 ವರ್ಷದ ಕಿಚ್ಚು ಎಂಬಾತ ಹಿಂಬಾಲಿಸುತ್ತಿದ್ದ. ಕಿಚ್ಚುವಿನ ಈ ನಡೆಗೆ ರಾಜೇಂದ್ರನ್ ಕುಟುಂಬ ಬೇಸತ್ತು ಹೋಗಿತ್ತು. ಮಗಳನ್ನು ಹಿಂಬಾಲಿಸಬೇಡ ಎಂದು ರಾಜೇಂದ್ರನ್ ಕೂಡಾ ಸಾಕಷ್ಟು ಬಾರಿ ಹೇಳಿದ್ದರು. ಆದರೆ, ಕಿಚ್ಚುವಿನದ್ದು ಅದೇ ವಿಕೃತ ಮನಸು. ಇದರಿಂದ ಬೇಸತ್ತ ರಾಜೇಂದ್ರನ್ ಕಿಚ್ಚುವಿನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಇದರಿಂದ ಕಿಚ್ಚುವಿನ ದ್ವೇಷ ಇನ್ನಷ್ಟು ಜಾಸ್ತಿಯಾಗಿತ್ತು. ಇದರ ಮಧ್ಯೆ ಪೊಲೀಸರು ಕಿಚ್ಚುವನ್ನು ವಶಕ್ಕೆ ಪಡೆದು ವಾರ್ನಿಂಗ್ ಬೇರೆ ಮಾಡಿದ್ದರು. ಇದಾದ ಮೇಲೆ ಭಾನುವಾರ ರಾತ್ರಿ ರಾಜೇಂದ್ರನ್ ಅವರು ಮಲಗಿರುವಾಗ ಅವರ ಕೈ ಮೇಲೆ ಏನೋ ಬಿದ್ದಂತಾಗಿದೆ. ಗಾಬರಿಗೊಂಡು ಎದ್ದು ನೋಡಿದಾಗ ನೆಲದ ಮೇಲೆ ವಿಷಕಾರಿ ಹಾವೊಂದು ಬಿದ್ದಿರುವುದನ್ನು ನೋಡಿ ಗಾಬರಿಯಾಗಿದ್ದರಾೆ. ತಕ್ಷಣವೇ ಮನೆ ಬಾಗಿಲು ತೆರೆದಾಗ ಬಾಗಿಲ ಬಳಿ ಕಿಚ್ಚು ನಿಂತಿದ್ದಾನೆ. ರಾಜೇಂದ್ರನ್ ನೋಡುತ್ತಿದ್ದಂತೆ ಆತ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ. ಹಾವನ್ನು ಕಂಡ ಮನೆಯವರು ಗಾಬರಿಗೊಂಡು ಅದನ್ನು ಕೊಂದು ಹಾಕಿದ್ದಾರೆ. ಹಾವಿನ ಮೃತದೇಹವನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದ್ದು, ಅದು ವಿಷಕಾರಿಯೇ ಎಂದು ಪರಿಶೀಲಿಸಲಾಗುತ್ತದೆ. ವರದಿಯ ಪ್ರಕಾರ, ಕಿಚ್ಚು ತಾನು ಮಾಡಿದ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಆತನಿಗೆ ಈ ಹಾವು ಹೇಗೆ ಸಿಕ್ಕಿದೆ ಎಂಬುದನ್ನು ಕೂಡ ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಸಿದ್ದಾರೆ.

suddiyaana