ಆಕಾಶದ ಕೆಳಗೆ, ಭೂಮಿ ಮೇಲೆ ಇದ್ದೀನಿ..! – ಕುಡುಕನ ಕ್ವಾಟ್ಲೆಗೆ ಆ್ಯಂಬುಲೆನ್ಸ್ ಸಿಬ್ಬಂದಿ, ಪೊಲೀಸರು ಸುಸ್ತೋ, ಸುಸ್ತು!

ಆಕಾಶದ ಕೆಳಗೆ, ಭೂಮಿ ಮೇಲೆ ಇದ್ದೀನಿ..! – ಕುಡುಕನ ಕ್ವಾಟ್ಲೆಗೆ ಆ್ಯಂಬುಲೆನ್ಸ್ ಸಿಬ್ಬಂದಿ, ಪೊಲೀಸರು ಸುಸ್ತೋ, ಸುಸ್ತು!

ಊಟವಾದ್ರೂ ಬಿಡ್ತೀವಿ, ಆದ್ರೆ ಸಾರಾಯಿ ಕುಡಿಯೋದನ್ನು ಮಾತ್ರ ಬಿಡೋದಿಲ್ಲ ಅನ್ನೋದು ಕುಡುಕರ ಶಪಥ. ಆದ್ರೆ ಕುಡಿದ್ಮೇಲೆ ಮೈಮೇಲೆ ಪ್ರಜ್ಞೆನೇ ಇರಲ್ಲ.. ಅವ್ರು ಮಾಡೋ ಅವಾಂತರ ಒಂದೆರಡಲ್ಲ. ಇದೀಗ ಇಲ್ಲೊಬ್ಬ ಕುಡಿಕ ಕಂಠಪೂರ್ತಿ ಕುಡಿದು ರಂಪಾಟ ಮಾಡಿದ್ದಾನೆ.. ನಾನು ಆಕಾಶದ ಕೆಳಗೆ ಭೂಮಿಯ ಮೇಲೆ ಇದ್ದೀನಿ ಬೇಗ ಬನ್ನಿ ಅಂತಾ ಆ್ಯಂಬುಲೆನ್ಸ್, ಪೊಲೀಸ್‌ ಗೆ ಕಾಲ್‌ ಮಾಡಿದ್ದಾನೆ.

ಇದನ್ನೂ ಓದಿ: ಮಹಿಳಾ ಕ್ರಿಕೆಟರ್ಸ್ ಗೂ PAK ಶಾಕ್ – ನಷ್ಟ ಭರಿಸಲು ಚೀಪ್ ಪ್ಲ್ಯಾನ್ ಬೇಕಿತ್ತಾ?  

ಅಷ್ಟಕ್ಕೂ ಆಗಿದ್ದೇನು?

ಈ ಘಟನೆ ಶೃಂಗೇರಿ ತಾಲೂಕಿನಲ್ಲಿ ನಡೆದಿದೆ. ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಶೃಂಗೇರಿಯಲ್ಲಿ ಗಲಾಟೆಯಾಗಿದೆ. ಈ ಗಲಾಟೆಯಲ್ಲಿ ನನಗೆ ತುಂಬಾ ಪೆಟ್ಟಾಗಿದೆ. ನಾನು ಆಕಾಶದ ಕೆಳಗೆ ಭೂಮಿಯ ಮೇಲೆ ಇದ್ದೀನಿ.. ಬೇಗ ಬನ್ನಿ ಎಂದು ಆಂಬ್ಯುಲೆನ್ಸ್​ಗೆ ಕರೆ ಮಾಡಿ ತಲೆ ತಿಂದಿದ್ದಾನೆ. ಈತನ ಕಾಲ್‌ ಬರ್ತಿದ್ದಂತೆ ಆ್ಯಂಬುಲೆನ್ಸ್ ಸಿಬ್ಬಂದಿ ಬಾಳೆಹೊನ್ನೂರಿನಿಂದ ಶೃಂಗೇರಿಗೆ ಹೊರಟಿದ್ದಾರೆ. ಸುಮಾರು 40 ಕಿ.ಮೀ.‌ದೂರದ ಶೃಂಗೇರಿಗೆ 108 ಆಂಬ್ಯುಲೆನ್ಸ್ ಬಂದಿದೆ. ಆಗ ಆಂಬ್ಯುಲೆನ್ಸ್ ಬರ್ತಿದ್ದಂತೆ ನಂಗೆ ಬೇಡ ಎಂದ ಕೂಗಾಡಿದ್ದಾನೆ. ಮತ್ತೆ ನಿಮಗೆ ತಾಕತ್ತಿದ್ರೆ ನನ್ನ ಹಿಡೀರಿ ನೋಡೋಣ ಎಂದು ಪೊಲೀಸರಿಗೂ ಚಾಲೆಂಜ್​ ಮಾಡಿದ್ದಾನೆ.

ಕೆಲ ಹೊತ್ತು ಕುಡುಕನನ್ನ ಹಿಡಿಯಲು ಪೊಲೀಸರು ಹರಸಾಹಸ ಪಡುವಂತ ಸ್ಥಿತಿ ನಿರ್ಮಾಣಗೊಂಡಿತ್ತು. ಇದಾದ ಬಳಿಕ ಶೃಂಗೇರಿ ಪಟ್ಟಣದ ವೈನ್ ಶಾಪ್​ನಲ್ಲಿ ಅಡಗಿ ಕುಳಿತುಕೊಂಡಿದ್ದ ಆತನನ್ನು ಸ್ಥಳೀಯರು ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ. ಆಗ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡ ಬಳಿಕ ಸರ್ ತಪ್ಪಾಯ್ತು ಬಿಡಿ ಸರ್ ಎಂದು ಕೈಮುಗಿದಿದ್ದಾನೆ.

Shwetha M

Leave a Reply

Your email address will not be published. Required fields are marked *