ಮೋಹದ ಬಲೆ ಬೀಸಿದ ಪ್ರೇಮಿ ಮಾಡಿದ್ದು ಮೋಸ – ಮಾಡೆಲ್ ಸಾವಿನ ರಹಸ್ಯ ಬಯಲು ಮಾಡಿದ ಡೈರಿ..!

ಮೋಹದ ಬಲೆ ಬೀಸಿದ ಪ್ರೇಮಿ ಮಾಡಿದ್ದು ಮೋಸ – ಮಾಡೆಲ್ ಸಾವಿನ ರಹಸ್ಯ ಬಯಲು ಮಾಡಿದ ಡೈರಿ..!

ನೋಡಲು ಚೆಂದದ ಹುಡುಗಿ. ಮಾಡೆಲ್ ಬೇರೆ. ಜೊತೆಗೆ ಸಾಪ್ಟ್‌ವೇರ್ ಉದ್ಯೋಗಿ ಕೂಡಾ. ಈ ಚೆಲುವೆ ಜೀವನದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ, ಯಾವಾಗ ಪ್ರೀತಿಯ ಬಲೆಯಲ್ಲಿ ಬಿದ್ದಳೋ ಅಲ್ಲಿಂದ ಬದುಕು ಬದಲಾಗಿತ್ತು. ಪ್ರೀತಿಯೊಂದೇ ಉಸಿರಾಗಿತ್ತು. ಆದರೆ, ಆತ ನಿಜಕ್ಕೂ ಇವಳ ಸೌಂದರ್ಯಕ್ಕೆ ಮರುಳಾಗಿದ್ದಾ, ಇಲ್ಲ, ಪ್ರಿಯತಮೆಯ ದುಡ್ಡಿಗಾಗಿ ಹಿಂದೆ ಬಿದ್ದಿದ್ದಾ, ಇದೆಲ್ಲಾ ಗೊತ್ತಾಗುವ ಮೊದಲೇ ಪ್ರಿಯತಮನ ಮೋಸದಾಟಕ್ಕೆ ಮುದ್ದಾದ ಹುಡುಗಿ ಈ ಲೋಕವನ್ನೇ ಬಿಟ್ಟು ಹೋಗಿದ್ದಾಳೆ.

ಇದನ್ನೂ ಓದಿ: ನಾಯಿ ಕಚ್ಚಿದ ಮೇಲೆ 50ಕ್ಕೂ ಹೆಚ್ಚು ಜನರಿಗೆ ಕಚ್ಚಿದ ಪುಟ್ಟ ಬಾಲೆ – ಕಂದಮ್ಮ ಸತ್ತ ಮೇಲೆ ಬೆಚ್ಚಿಬಿದ್ದ ಗ್ರಾಮದ ಜನ

ಬೆಂಗಳೂರಿನ 25 ವರ್ಷದ ಮಾಡೆಲ್ ವಿದ್ಯಾಶ್ರೀ ಆತ್ಮಹತ್ಯೆ ಪ್ರಕರಣ ಈಗ ಸಂಚಲನ ಮೂಡಿಸಿದೆ.  ಈ ಕೇಸ್‌ಗೆ ಈ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಮಾಡೆಲ್ ಮನೆಯಲ್ಲಿ ಸಿಕ್ಕ ಡೈರಿ ನೋವಿನ ಕತೆಯನ್ನು ಬಿಚ್ಚಿಟ್ಟಿದೆ. ಜುಲೈ 21ರಂದು ಬೆಂಗಳೂರು ಉತ್ತರ ತಾಲೂಕಿನ ಕೆಂಪಾಪುರದಲ್ಲಿ ವಿದ್ಯಾಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಮಾಡೆಲ್ ವಿದ್ಯಾಶ್ರೀ ಡೈರಿಯಲ್ಲಿ ಸಾವಿಗೆ ಕಾರಣ ಬರೆದಿಟ್ಟಿದ್ದರು. ಡೈರಿಯಲ್ಲಿ ಡೆತ್ ನೋಟ್ ಬರೆದಿಟ್ಟಿದ್ದು, ತನ್ನ ಸಾವಿಗೆ ಪ್ರಿಯಕರ ಅಕ್ಷಯ್ ಕಾರಣ ಎಂದು ಉಲ್ಲೇಖಿಸಿದ್ದಾರೆ.

ಎಂಸಿಎ ಬಳಿಕ ಮಾಡೆಲ್ ಜೊತೆಗೆ ಸಾಫ್ಟ್ವೇರ್ ಉದ್ಯೋಗಿಯಾಗಿದ್ದ ವಿದ್ಯಾಶ್ರೀಗೆ ಫೇಸ್‌ಬುಕ್‌ನಲ್ಲಿ ಅಭಿಮಾನಿಯ ತರ ಜಿಮ್ ಕೋಚ್ ಅಕ್ಷಯ್ ಪರಿಚಯವಾಗಿದ್ದ. ವಿದ್ಯಾಶ್ರೀ, ಮಿಸ್ ಆಂಧ್ರ ಕಾಂಪಿಟೇಷನ್ ನಲ್ಲೂ ವಿಜೇತಳಾಗಿದ್ದಳು. ಬಸವೇಶ್ವರ ನಗರದಲ್ಲಿ ಜೀಮ್ ಟ್ರೈನರ್ ಆಗಿದ್ದ ಅಕ್ಷಯ್ ಜೊತೆ ಪ್ರೀತಿಯಲ್ಲಿದ್ದಳು. ಇಬ್ಬರು ಪರಸ್ಪರ ಪ್ರೀತಿಸಿದ್ದು, ಹಲವೆಡೆ ಜೊತೆ ಜೊತೆಯಾಗಿ ಸುತ್ತಾಡಿದ್ದರು. ಅಲ್ಲದೇ ಅಕ್ಷಯ್ ಮಾಡೆಲ್ ಬಳಿ ಸಾಕಷ್ಟು ಹಣ ಪೀಕಿದ್ದ. ಹುಡುಗಿಯು ಸಿಕ್ಕಾಯ್ತು. ಅವಳ ಬಳಿಯಿದ್ದ ಹಣವನ್ನೂ ದೋಚಿಕೊಂಡಾಯ್ತು. ಕೊಟ್ಟ ಹಣ ಕೇಳಿದಾಗಲೆಲ್ಲಾ ಬಾಯಿಗೆ ಬಂದಂಗೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದನಂತೆ. ಇದಾದ ನಂತರ ಅಕ್ಷಯ್ ಫೋನ್ ಕಾಲ್ ಗೂ ಸಿಗದೆ ನಾಟ್ ರೀಚಬಲ್ ಆಗಿದ್ದಾನೆ. ಇದರಿಂದ ಮಾನಸಿಕವಾಗಿ ನೊಂದ ಮಾಡೆಲ್ ವಿದ್ಯಾಶ್ರೀ ಜುಲೈ 21ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಡೆತ್‌ನೋಟ್‌ ಲ್ಲಿ ವಿದ್ಯಾಶ್ರೀ, ನನ್ನ ಸಾವಿಗೆ ಅಕ್ಷಯ್ ಕಾರಣ, ಅವನು ನನ್ನ ನಾಯಿ ಥರ ಟ್ರೀಟ್ ಮಾಡ್ತಿದ್ದಾನೆ. ನನಗೆ ಕೊಡಬೇಕಾದ 1 ಲಕ್ಷದ 76 ಸಾವಿರ ದುಡ್ಡು ಕೇಳಿದರೆ, ನನಗೆ ಹಾಗೂ ನನ್ನ ಕುಟುಂಬದ ಬಗ್ಗೆ ಕೆಟ್ಟ ಕೆಟ್ಟ ಮಾತಿನಲ್ಲಿ ಬೈದು ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಖಿನ್ನತೆಗೆ ಬದುಕಲು ಆಗುತ್ತಿಲ್ಲ. ದಿನೇ ದಿನೇ ನನಗೆ ತುಂಬಾ ಸ್ಟ್ರೆಸ್ ಆಗ್ತಿದೆ. ಅಮ್ಮ, ಗುರು ಮಾವ ನನ್ನನ್ನು ಕ್ಷಮಿಸಿ, ನನ್ನನ್ನು ಮರೆತುಬಿಡಿ.. ಎಲ್ಲಾ ಹುಡುಗಿಯರಿಗೆ ವಿನಂತಿ ಮಾಡುತ್ತೇನೆ ಯಾರೂ ಪ್ರೀತಿ ಮಾಡಬೇಡಿ. ಗುಡ್ ಬೈ ಟು ದಿಸ್ ವರ್ಲ್ಡ್’ ಅಂತಾ ಮೃತ ವಿದ್ಯಾಶ್ರೀ ಡೆತ್‌ನೋಟ್ ಬರೆದಿದ್ದಾಳೆ.

ಪ್ರಿಯಕರ ಮೋಸ ಮಾಡಿದ್ದಕ್ಕೆ ವಿದ್ಯಾಶ್ರೀಗೆ ಬದುಕೇ ಬೇಡವಾಗಿತ್ತು. ಆದರೆ, ಮಗಳನ್ನು ಕಳೆದುಕೊಂಡ ಹೆತ್ತವರ ಪರಿಸ್ಥಿತಿ ಮಾತ್ರ ನಿಜಕ್ಕೂ ಮನಕಲಕುವಂತೆ ಮಾಡಿದೆ.

suddiyaana