ಸಾಯಲು ಎರಡು ದಿನ ಡೆಡ್‌ಲೈನ್ ಕೊಟ್ಟ ದೆವ್ವ – ಭೂತ ಹೇಳಿದ ರೀತಿಯಲ್ಲೇ ಜೀವ ಕಳೆದುಕೊಂಡ ಮಹಿಳೆ..!

ಸಾಯಲು ಎರಡು ದಿನ ಡೆಡ್‌ಲೈನ್ ಕೊಟ್ಟ ದೆವ್ವ – ಭೂತ ಹೇಳಿದ ರೀತಿಯಲ್ಲೇ ಜೀವ ಕಳೆದುಕೊಂಡ ಮಹಿಳೆ..!

ಈಗ ಹೇಳಿ ಕೇಳಿ ಡಿಜಿಟಲ್ ಯುಗ. ದೆವ್ವ, ಭೂತ ಎಂದರೆ ಜನ ನಂಬುವುದು ಕಷ್ಟ. ಆದರೂ ದೆವ್ವ ಇದೆ ಅನ್ನೋ ವಾದ ಇನ್ನೂ ಇದೆ. ದೆವ್ವವೋ, ಭೂತವೋ ಅವರವರ ನಂಬಿಕೆಗೆ ಬಿಟ್ಟ ವಿಚಾರ. ಆದರೆ, ದೆವ್ವವೇ ಬಂದು ಜೀವವನ್ನೇ ತೆಗೆಯುತ್ತೆ ಅನ್ನೋದನ್ನು ನಂಬಲು ಸಾಧ್ಯವೇ. ಈಗ ಭೂತವೇ ನಂಗೆ ಡೆಡ್‌ಲೈನ್ ಕೊಟ್ಟಿದೆ. ಇನ್ನೆರೆಡು ದಿನದಲ್ಲಿ ಸಾಯಿಸುತ್ತೆ ಅಂತಾ ಹೇಳುತ್ತಿದ್ದವಳು ಎರಡೇ ದಿನದಲ್ಲಿ ಸಾವಿಗೀಡಾಗಿದ್ದಾಳೆ.

ಇದನ್ನೂ ಓದಿ:  ದೆವ್ವದೊಂದಿಗೆ ಮದುವೆಯಾದ ಗಾಯಕಿ..! – ಭೂತದಿಂದ ಡೈವೋರ್ಸ್ ಬೇಕು ಅಂತಾ ಪತ್ನಿಯಿಂದ ಮನವಿ..!

ಈ ಘಟನೆ ನಡೆದಿರೋದು ಉತ್ತರ ಪ್ರದೇಶದಲ್ಲಿ. ಉತ್ತರ ಪ್ರದೇಶದ ಝಾನ್ಸಿಯ ತೆಹ್ರಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಭಟ್ಟ್ ಪುರ ಗ್ರಾಮದಲ್ಲಿ ಶಿವಾನಿ ಎಂಬಾಕೆ, ಪದೇ ಪದೇ ಮಹಿಳೆಯೊಬ್ಬಳು ನನ್ನನ್ನು ಹಿಂಬಾಲಿಸುತ್ತಾಳೆ ಎಂದು ಮನೆಯವರ ಹತ್ತಿರ ಹೇಳಿಕೊಂಡಿದ್ದಳು. ನನ್ನನ್ನು ಹಿಂಬಾಲಿಸುವ ಮಹಿಳೆ ನನಗೆ ಸಾಯಲು ಎರಡು ದಿನ ಟೈಮ್ ನೀಡಿದ್ದಾಳೆ ಎಂದು ಹೇಳಿದ್ದಾಳೆ. ಆದರೆ, ಮನೆಯವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಶಿವಾನಿ ಯಾವುದೋ ಭ್ರಮೆಯಲ್ಲಿ ಹೀಗೆ ಮಾತಾಡುತ್ತಾಳೆ ಅಂತಾ ನಿರ್ಲಕ್ಷ್ಯ ಮಾಡಿದ್ದಾರೆ. ಕೊನೆಗೆ ಮಂತ್ರವಾದಿಯ ಬಳಿ ಕರೆದುಕೊಂಡು ಹೋಗಿದ್ದರಂತೆ. ಆದರೆ, ಶಿವಾನಿ ಹೇಳಿದ ಅದೇ ಎರಡು ದಿನದಲ್ಲಿ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದಾಳೆ.

ಶಿವಾನಿ ತನ್ನ ಜೀವನದಲ್ಲಿ ಚೆನ್ನಾಗಿಯೇ ಇದ್ದಳು. ಆಕೆಗೆ ಒಂದು ತಿಂಗಳ ಹಿಂದಷ್ಟೆ ಝಾನ್ಸಿಯ ಕಿಶೋರ್ ಎಂಬಾತನ ಜೊತೆ ಮದುವೆಯಾಗಿದೆ. ಮದುವೆಯಾಗಿ ಅತ್ತೆಯ ಮನೆಗೆ ಬಂದ ನಂತರ ಶಿವಾನಿ ವಿಚಿತ್ರವಾಗಿ ವರ್ತಿಸಲು ಶುರು ಮಾಡಿದ್ದಾಳೆ. ಮಹಿಳೆಯೊಬ್ಬಳು ತನ್ನನ್ನು ಹಿಂಬಾಲಿಸುತ್ತಿದ್ದಾಳೆ ಎಂದು ಶಿವಾನಿ ಹೇಳುತ್ತಿದ್ದಳಂತೆ. ಅತ್ತೆ ಮನೆಯಲ್ಲಿ ಶಿವಾನಿಯನ್ನು ಹಿಂಬಾಲಿಸುತ್ತಿದ್ದ ಮಹಿಳೆ ಮೂರು ವರ್ಷದ ಹಿಂದೆಯೇ ಸಾವನ್ನಪ್ಪಿದ್ದಳಂತೆ. ಶಿವಾನಿ ಬಾಯಲ್ಲಿ ಆಕೆ ಹೆಸರು ಕೇಳಿ ಮನೆಯವರು ಕಂಗಾಲಾಗಿದ್ದಾರೆ. ಶಿವಾನಿಯನ್ನು ಭೂತ ಬಿಡಿಸುವ ತಾಂತ್ರಿಕನ ಬಳಿ ಕರೆದೊಯ್ದಿದ್ದಾರೆ. ಶಿವಾನಿ ಪದೇ ಪದೇ ಆ ಮಹಿಳೆಯೊಂದಿಗೆ ಮಾತನಾಡುತ್ತಿದ್ದಳು ಎಂದು ಕುಟುಂಬದವರು ಹೇಳುತ್ತಾರೆ. ಇನ್ನೆರಡು ದಿನ ಗಡುವು ಎಂದಿದ್ದ ಶಿವಾನಿ ಸರಿಯಾಗಿ ಎರಡನೇ ದಿನ ಬೆಂಕಿ ಹಚ್ಚಿಕೊಂಡಿದ್ದಾಳೆ. ಬೆಂಕಿಯಲ್ಲಿ ಸುಡ್ತಿದ್ದ ವೇಳೆಯೂ ಶಿವಾನಿ, ಮಹಿಳೆ ಬೆಂಕಿ ಹಚ್ಚಿಕೊಳ್ಳುವಂತೆ ನನ್ನನ್ನು ಒತ್ತಾಯಿಸಿದ್ದಾಳೆ. ಆಕೆ ಹೇಳಿದಂತೆ ಕೇಳಿದೆ ಎಂದು ಶಿವಾನಿ ಹೇಳಿದ್ದಾಳಂತೆ. ಸ್ಥಳಕ್ಕೆ ಬಂದ ಪೊಲೀಸರು ಹಾಗೂ ವೈದ್ಯರು, ಕುಟುಂಬಸ್ಥರ ಮಾತು ಕೇಳಿ ದಂಗಾಗಿದ್ದಾರೆ. ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.

suddiyaana