ರಾಜ್ಯದ ಜನರಿಗೆ ಬೆಲೆ ಏರಿಕೆಯ ಶಾಕ್‌! – ವಿದ್ಯುತ್‌ ದರ ಏರಿಕೆ ಬೆನ್ನಲ್ಲೇ ನಂದಿನ ಹಾಲಿನ ಬೆಲೆ ಹೆಚ್ಚಳ ನಿರ್ಧಾರ?

ರಾಜ್ಯದ ಜನರಿಗೆ ಬೆಲೆ ಏರಿಕೆಯ ಶಾಕ್‌! – ವಿದ್ಯುತ್‌ ದರ ಏರಿಕೆ ಬೆನ್ನಲ್ಲೇ ನಂದಿನ ಹಾಲಿನ ಬೆಲೆ ಹೆಚ್ಚಳ ನಿರ್ಧಾರ?

ಬೆಂಗಳೂರು: ಕಾಂಗ್ರೆಸ್‌ ಸರ್ಕಾರದ ಫ್ರೀ ಗ್ಯಾರಂಟಿಗಳಿಗೆ ಜನರು ಫುಲ್‌ ಖುಷಿಯಾಗಿದ್ದರು. ಇನ್ನಾದರೂ ನೆಮ್ಮದಿಯಿಂದ ಜೀವನ ನಡೆಸಬಹುದು ಎಂದು ಜನರು ಅಂದುಕೊಳ್ಳುತ್ತಿರುವಾಗಲೇ ಜನರಿಗೆ ದರ ಏರಿಕೆಯ ಶಾಕ್‌ ಎದುರಾಗಿದೆ. ತರಕಾರಿ ಬೆಲೆ ಏರಿಕೆ, ಮಾಂಸಗಳ ಬೆಲೆ ಏರಿಕೆ, ವಿದ್ಯುತ್‌ ದರ ಏರಿಕೆ ಬೆನ್ನಲ್ಲೇ ಇದೀಗ ಹಾಲಿನ ದರವನ್ನು ಹೆಚ್ಚಳ ಮಾಡಲು ಹಾಲು ಒಕ್ಕೂಟಗಳು ನಿರಂತರ ಸರ್ಕಸ್ ಮಾಡುತ್ತಿವೆ.

ಇದನ್ನೂ ಓದಿ: ಇಂದಿರಾ ಕ್ಯಾಂಟೀನ್ ನಲ್ಲಿ ಪೌಷ್ಠಿಕಾಂಶದ ಆಹಾರ ನೀಡಲು ಚಿಂತನೆ – ಇನ್ಮುಂದೆ ಊಟದ ಜೊತೆ ಮೊಟ್ಟೆ

KERC ಎಲ್ಲಾ ಎಸ್ಕಾಂಗಳ ವಿದ್ಯುತ್ ದರ ಏರಿಕೆಗೆ ಅಸ್ತು ಎಂದ ಬೆನ್ನಲ್ಲೇ ಇದೀಗ ಹಾಲು ಒಕ್ಕೂಟಗಳಿಂದ ದರ ಏರಿಕೆಗೆ ಬಿಗಿಪಟ್ಟು ಹಿಡಿದಿವೆ. ವಿದ್ಯುತ್ ದರದಂತೆ ಹಾಲಿನ ದರವನ್ನೂ ಏರಿಸಲು ರಾಜ್ಯದ ಹಾಲು ಒಕ್ಕೂಟಗಳು ಸರ್ಕಾರಕ್ಕೆ ಒತ್ತಾಯಿಸಿವೆ. ರಾಜ್ಯದಲ್ಲಿ ಒಟ್ಟು 14 ಹಾಲು ಒಕ್ಕೂಟಗಳು ಇವೆ. ಹಾಲಿನ ದರ ಏರಿಸಲು ಸರ್ಕಾರದ ಮೇಲಿನ ಒತ್ತಡ ಹೇರಲು ಹೊಸ ಫ್ಲ್ಯಾನ್‌ವೊಂದನ್ನ ಸಿದ್ಧಪಡಿಸಿವೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ಹಾಲು ಒಕ್ಕೂಟಗಳು ಸಿಎಂ ಸಿದ್ದರಾಮಯ್ಯ ಅವರು ಭೇಟಿ ಮಾಡಿ ಹಾಲಿನ ದರ ಏರಿಕೆ ಮಾಡುವ ಬಗ್ಗೆ ಚರ್ಚೆ ನಡೆಸಲು ಪ್ಲ್ಯಾನ್ ಮಾಡಿವೆ. ಈ ವಾರದೊಳಗೆ ಸಿಎಂ ಸಿದ್ದರಾಮಯ್ಯ ಅವರ  ಭೇಟಿ ಮಾಡಲು ನಿರ್ಧರಿಸಿವೆ.  ಈ ಬಗ್ಗೆ KMF ವ್ಯವಸ್ಥಾಪಕ ನಿರ್ದೇಶಕ ಸತೀಶ್ ಜತೆ ಒಕ್ಕೂಟಗಳ ಅಧ್ಯಕ್ಷರು ಚರ್ಚೆ ನಡೆಸಿದ್ದಾರೆ.

ಇನ್ನೆರಡು ದಿನಗಳಲ್ಲಿ ಸಿಎಂ ಜೊತೆಗೆ ಚರ್ಚೆ ಮಾಡುವ ಭರವಸೆ ಸಿಕ್ಕಿದೆ. 14 ಹಾಲು ಒಕ್ಕೂಟಗಳಿಂದ ಪ್ರತಿ ಲೀ.ಗೆ 5 ರೂ. ಏರಿಕೆಗೆ ಮನವಿ ಮಾಡಲಾಗಿದೆ. ಆದ್ರೆ KMF ಸರ್ಕಾರದ ಮುಂದೆ ಇಟ್ಟಿರೊ ಪ್ರಸ್ತಾವನೆ 2 ರಿಂದ 3 ರೂ. ಮಾತ್ರ. ಇದಕ್ಕೆ ಸಿಎಂ ಗ್ರೀನ್ ಸಿಗ್ನಲ್ ನೀಡಿದ್ರೆ ಹಾಲಿನ ದರ ಏರಿಕೆ ಆಗಲಿದೆ ಎಂದು ಸತೀಶ್ ಹೇಳಿದ್ದಾರೆ.

suddiyaana